ವಿಷಯಕ್ಕೆ ಹೋಗು

ವೆಂಕಯ್ಯ ನಾಯ್ಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೆಂಕಯ್ಯ ನಾಯ್ಡು
Assumed office
೧೧ ಆಗಷ್ಟ್ ೨೦೧೭
Presidentರಾಮ್ ನಾಥ್ ಕೋವಿಂದ್
Preceded byಮೊಹ್ಮದ್ ಹಮೀದ್ ಹನ್ಸಾರಿ
Preceded byಅರುಣ್ ಜೆಟ್ಲಿ
Succeeded byಸ್ಮೃತಿ ಇರಾನಿ
In office
೨೬ ಮೇ ೨೦೧೪ – ೧೭ ಜುಲೈ ೨೦೧೭
Preceded byಕಮಲ್ ನಾಥ್ (Urban Development)
ಗಿರಿಜ ವ್ಯಾಸ್ (Housing and Urban Poverty Alleviation)
Succeeded byNarendra Singh Tomar
In office
26 May 2014 – 5 July 2016
Preceded byKamal Nath
Succeeded byAnanth Kumar
In office
1 July 2002 – 5 October 2004
Preceded byJana Krishnamurthi
Succeeded byL. K. Advani
Personal details
Born೧ ಜುಲೈ ೧೯೪೯ (ವಯಸ್ಸು ೬೮)
ಚವತಪಲೆಮ್, ಆಂಧ್ರಪ್ರದೇಶ
Political partyಭಾರತೀಯ ಜನತಾ ಪಕ್ಷ
Spouse

M. Usha (ವಿವಾಹ:14 April 1971)

Signatureಚಿತ್ರ:Signature of Venkaiah Naidu.svg

ಮುಪ್ಪವರಾಪು ವೆಂಕಯ್ಯ ನಾಯ್ಡು (ಜುಲೈ ೧, ೧೯೪೯ ರಂದು ಜನನ) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಭಾರತದ ಪ್ರಸಕ್ತ ಉಪಾಧ್ಯಕ್ಷರಾಗಿದ್ದಾರೆ, ಅವರು ೧೧ ಆಗಸ್ಟ್ ೨೦೧೭ ರಿಂದ ಅಧಿಕಾರದಲ್ಲಿರುತ್ತಾರೆ. ಹಿಂದೆ ಅವರು ಮೋದಿ ಕ್ಯಾಬಿನೆಟ್ ನಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ, ನಗರ ಅಭಿವೃದ್ಧಿ ಮತ್ತು ಮಾಹಿತಿ ಮತ್ತು ಪ್ರಸಾರದ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೦೨ ರಿಂದ ೨೦೦೪ ರವರೆಗೆ ತಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರಾಗಿದ್ದರು.

ರಾಜಕೀಯ ವೃತ್ತಿ ಜೀವನ

[ಬದಲಾಯಿಸಿ]

ವಿದ್ಯಾರ್ಥಿಗಳ ನಾಯಕನಾಗಿ ಮತ್ತು ರಾಜಕೀಯ ವ್ಯಕ್ತಿಯಾಗಿ, ನಾಯ್ಡು ಒಂದು ಅದ್ಭುತ ವಾಗ್ಮಿಯಾಗಿ ಪ್ರಾಮುಖ್ಯತೆಯನ್ನು ಪಡೆದರು, ಅವರು ಹುರುಪಿನಿಂದ ರೈತರು ಮತ್ತು ಹಿಂದುಳಿದ ಪ್ರದೇಶಗಳ ಬೆಳವಣಿಗೆಗೆ ಕಾರಣರಾದರು. ಅವರ ಭಾಷಣ ಕೌಶಲಗಳು ಮತ್ತು ರಾಜಕೀಯ ಚಟುವಟಿಕೆಗಳು ಅವರ ರಾಜಕೀಯ ವೃತ್ತಿಜೀವನವನ್ನು ಉನ್ನತಿಗೊಳೀಸಿತು ಮತ್ತು ೧೯೭೮ ಮತ್ತು ೧೯೮೩ ರಲ್ಲಿ ನೆಲ್ಲೂರು ಜಿಲ್ಲೆಯ ಉದಯಗಿರಿ ಕ್ಷೇತ್ರದಿಂದ ಎರಡು ಬಾರಿ ಆಂಧ್ರಪ್ರದೇಶ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ಅವರು ಆಂಧ್ರದಲ್ಲಿ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾದರು.

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ವಿವಿಧ ಸಾಂಸ್ಥಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಂತರ ೧೯೯೮ ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಕರ್ನಾಟಕದಲ್ಲಿ ಆಯ್ಕೆಯಾದರು. ೨೦೦೪ ರಿಂದ ೨೦೧೦ ರವರೆಗೆ ಅವರು ಕರ್ನಾಟಕದಿಂದ ಎರಡು ಬಾರಿ ಆಯ್ಕೆಯಾದರು. ಅವರು ೧೯೯೬ ರಿಂದ ೨೦೦೦ ರವರೆಗೂ ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದರು.

ಉಲ್ಲೇಖಗಳು

[ಬದಲಾಯಿಸಿ]