ಲೆಸ್ಲಿ ಚಾರ್ಲ್ಸ್ ಕೋಲ್ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1904 ರಲ್ಲಿ ಪದವೀಧರರಾಗಿ ಲೆಸ್ಲಿ ಕೋಲ್ಮನ್

ಲೆಸ್ಲಿ ಚಾರ್ಲ್ಸ್ ಕೋಲ್ಮನ್, ಸಿಐಇ (16 ಜೂನ್ 1878 - 14 ಸೆಪ್ಟೆಂಬರ್ 1954) ಕೆನಡಾ ದೇಶದವರಾಗಿದ್ದಾರೆ. ಇವರು ಪ್ರಖ್ಯಾತ ಕೀಟಶಾಸ್ತ್ರಜ್ಞ, ಸಸ್ಯ ರೋಗಶಾಸ್ತ್ರಜ್ಞ ಹಾಗೂ ಸೂಕ್ಷ್ಮ ರೋಗಾಣು ಶಾಸ್ತ್ರಜ್ಞರಾಗಿದ್ದರು. ಇವರು ದಕ್ಷಿಣ ಭಾರತದ ಮೈಸೂರು ರಾಜ್ಯದಲ್ಲಿ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಈ ಪ್ರದೇಶದಲ್ಲಿ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಕೀಟಗಳು ಮತ್ತು ರೋಗಗಳ ಕುರಿತು ಸಂಶೋಧನೆ ನಡೆಸಿರುತ್ತಾರೆ. ಇವರು ಹೆಬ್ಬಾಳದ ಕೃಷಿ ಶಾಲೆ ಸೇರಿದಂತೆ ಹಲವಾರು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಇವರು ಸ್ಥಾಪಿಸಿದ ಹೆಬ್ಬಾಳದ ಕೃಷಿ ಶಾಲೆ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಇದಲ್ಲದೆ ಬಾಳೆ ಹೊನ್ನೂರಿನಲ್ಲಿ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. ಸಸ್ಯ ಸಂರಕ್ಷಣೆಗೆ ಅವರ ಪ್ರಮುಖ ಕೊಡುಗೆಗಳಲ್ಲಿ ದಕ್ಷಿಣ ಭಾರತದಲ್ಲಿ ಕೊಳೆರೋಗ ಎಂದು ಕರೆಯಲ್ಪಡುವ ಪೆಲಿಕ್ಯುಲೇರಿಯಾ ಕೊಳೆರೊಗ (ಈಗ ಸೆರಾಟೊಬಾಸಿಡಿಯಮ್ ನಾಕ್ಸಿಯಮ್ ) ದಿಂದ ಉಂಟಾಗುವ ಕಾಫಿ ಕೊಳೆ ರೋಗವನ್ನು ನಿಯಂತ್ರಿಸುವ ಕ್ರಮಗಳನ್ನು ಒಳಗೊಂಡಿತ್ತು. ಅಡಿಕೆ ಬೆಳೆಯ ನಾಶಕ್ಕೆ ಕಾರಣವಾದ ಕೊಳೆರೋಗ, ಕೊಳೆತ ಉತ್ಪತಿ ಕಾಯಿಲೆಗಳಿಗೆ ಒಂದು ಸಾರ್ವತ್ರಿಕ ಹೆಸರಾಗಿದೆ. ಬೆಳೆಯುತ್ತಿರುವ ಕಿರೀಟಗಳ ಮೇಲೆ ದುಬಾರಿಯಲ್ಲದ ಬೋರ್ಡೆಕ್ಸ್ ಮಿಶ್ರಣದ ಸ್ಪ್ರೇಗಳು ಫೈಟೊಫ್ಥೊರಾ ಅರೆಕಾ (ಈಗ ಫೈಟೊಫ್ಥೊರಾ ಪಾಲ್ಮಿವೋರಾ ಎಂದು ಪರಿಗಣಿಸಲಾಗಿದೆ) ಮೂಲಕ ಬರುವ ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡಿತು.

ಆರಂಭಿಕ ಜೀವನ[ಬದಲಾಯಿಸಿ]

ಕೋಲ್ಮನ್ ಆಗಮನದ ಸುದ್ದಿ ವರದಿ. ಬಾಂಬೆ ಗೆಜೆಟ್, 27 ಜೂನ್ 1907

ಲೆಸ್ಲಿ ಕೋಲ್ಮನ್ ಕೆನಡಾದ ಒಂಟಾರಿಯೊದ ಡರ್ಹಾಮ್ ಕೌಂಟಿಯಲ್ಲಿ ೧೬ ಜೂನ್ ೧೮೭೮ ರಂದು ಫ್ರಾನ್ಸಿಸ್ ಟಿ.ಕೋಲ್‌ಮನ್ ಮತ್ತು ಎಲಿಜಬೆತ್ ದಂಪತಿಗಳ ಸುಪುತ್ರರಾಗಿ ಜನಿಸಿದರು.ಇವರಿಗೆ ಮೂರು ಮಂದಿ ಸಹೋದರರು ಹಾಗೂ ಇಬ್ಬರು ಸಹೋದರಿಯರು. ಇವರ ಕುಟುಂಬವು ಟೊರೊಂಟೊದಿಂದ ವಾಷಿಂಗ್ಟನ್ ನ ಸ್ಪೊಕೇನ್ಗೆ ಬಂದು ನೆಲೆಸಿದರು. ಬಾಲ್ಯ ವಿದ್ಯಾಭ್ಯಾಸವನ್ನು ಅರ್ಥರ್ ಪ್ರೌಢಶಾಲೆಯಲ್ಲಿ ಹಾಗೂ ಹಾರ್ಬರ್ಡ್ ಕೊಲಿಜಿಯೇಟ್ ಸಂಸ್ಥೆಯಲ್ಲಿ ಕಾಲೇಜು ಅಭ್ಯಾಸವನ್ನು ಪೂರೈಸಿದರು. [೧]ಕೆಲವು ದಿನಗಳ ಕಾಲ ಪ್ರೈಮರಿ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಅವರ ಸಹೋದರ ನಾರ್ಮನ್ ಫ್ರಾಂಕ್ ಕೋಲ್ಮನ್ ಅವರು ರೀಡ್ ಕಾಲೇಜ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. [೨] (ಇನ್ನೊಬ್ಬ ಸಹೋದರ ಹರ್ಬರ್ಟ್ ಸ್ಪೋಕೇನ್ ಹೈಸ್ಕೂಲ್‌ನ ಪ್ರಾಂಶುಪಾಲರಾಗಿದ್ದರು [೩] ). ೧೯೦೦ರಲ್ಲಿ ಟೊರೆಂಟೊ ವಿಶ್ವವಿದ್ಯಾಲಯದಲ್ಲಿ ಗವರ್ನರ್ ಜನರಲ್ಸ್ ಚಿನ್ನದ ಪದಕದೊಂದಿಗೆ ವಿಜ್ಞಾನ ಪದವಿಯನ್ನು ಪಡೆದರು. [೪] ಕೋಲ್ಮನ್ ಅವರು ೧೯೦೪ ರ ಬೇಸಿಗೆ ಹಂಗಾಮಿನಲ್ಲಿ ಮಾಲ್ಪೆಕ್ ಮತ್ತು ಜಾರ್ಜಿಯನ್ ಕೊಲ್ಲಿಯಲ್ಲಿ ಸಮುದ್ರ ಸಂಶೋಧನಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದರು. ಅಲ್ಲಿ ಅವರು ಜಲಚರ ಕೃಷಿಯ ಕುರಿತು ಅಧ್ಯಯನ ಮಾಡಿದರು. [೫] ಅವರು ೧೯೦೫ ರಲ್ಲಿ ಇಂಗ್ಲಿಷ್ ಪ್ರಬಂಧಕ್ಕೆ ಫಾರ್ ಫ್ರೆಡೆರಿಕ್ ವೈಲ್ಡ್ ಪ್ರಶಸ್ತಿ ಪಡೆದರು [೬] ಅವರು ಉನ್ನತ ಅಧ್ಯಯನಕ್ಕಾಗಿ ಜರ್ಮನಿಗೆ ತೆರಳಿದರು. ಜರ್ಮನಿಯಲ್ಲಿ ಅಧ್ಯಯನ ನಡೆಸಿದ ಇವರು ಗೊಟ್ಟಿಗೆರಿನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಇಲ್ಲಿ ಅವರು ಮಣ್ಣಿನ ಬ್ಯಾಕ್ಟೀರಿಯಾದಿಂದ ನೈಟ್ರಿಫಿಕೇಶನ್ ಕುರಿತು ಅಧ್ಯಯನ ಮಾಡಿದರು. [೭] ಅವರು ಹೆನ್ರಿಕ್ ಕ್ಲೆಬಾನ್ ಅವರಲ್ಲಿ ಶಿಲೀಂಧ್ರಶಾಸ್ತ್ರದಲ್ಲಿ ತರಬೇತಿ ಪಡೆದಿದರು. [೮] ೧೯೦೬ ರಿಂದ, ಅವರು ಬರ್ಲಿನ್‌ನಲ್ಲಿರುವ ಕೃಷಿ ಮತ್ತು ಅರಣ್ಯದ ಕೈಸರ್ ವಿಲ್ಹೆಲ್ಮ್ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಅವರು ೧೯೦೮ ರಲ್ಲಿ ಭಾರತಕ್ಕೆ ಬಂದಿದ್ದ ಅವರು ಶಿಲೀಂಧ್ರಶಾಸ್ತ್ರಜ್ಞ ಮತ್ತು ಕೀಟವಿಜ್ಞಾನಿಯಾಗಿ ಐದು ವರ್ಷಗಳ ನೇಮಕಗೊಂಡಿದ್ದರು. [೯] [೧೦]

ಭಾರತ[ಬದಲಾಯಿಸಿ]

ಬಿಳಿಗಿರಿರಂಗನ ಬೆಟ್ಟಗಳ ಬೆಳ್ಳಾಜಿಯಲ್ಲಿ ಮೇರಿ ಮ್ಯಾಕ್ಡೊನಾಲ್ಡ್ ಅವರ ಸಮಾಧಿ ಗುರುತು

ಜರ್ಮನ್ ಮೂಲದ ಕೆನಡಾದ ರಸಾಯನಶಾಸ್ತ್ರಜ್ಞ ಅಡಾಲ್ಫ್ ಲೆಹ್ಮನ್ ಅವರು ಮೈಸೂರು ರಾಜ್ಯದಲ್ಲಿ ಪ್ರಾರಂಭಿಸಿದ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕೋಲ್ಮನ್ ಅವರು ಕೀಟಶಾಸ್ತ್ರಜ್ಞರಾಗಿ ಸೇರಿಕೊಂಡರು. ಭಾರತದಲ್ಲಿ ಕೃಷಿಯನ್ನು ಸುಧಾರಣೆ ಮಾಡಲು ಡಾ ಜೆ ಎ ವೋಲ್ಕರ್ ನೇತೃತ್ವದ ಸಮಿತಿಯ ಶಿಫಾರಸುಗಳ ಅನುಸಾರವಾಗಿ ರಸಾಯನಶಾಸ್ತ್ರಜ್ಞರಾಗಿ ಲೆಹ್ಮನ್ ನೇಮಕಗೊಂಡರು. ಆಗ ಮಣ್ಣಿನ ಫಲವತ್ತತೆಯ ಮೇಲೆ ಅವರ ಗಮನವನ್ನು ಕೇಂದ್ರೀಕರಿಸಿದಾಗ ಅವರು ಸಸ್ಯ ಸಂರಕ್ಷಣಾ ತಜ್ಞರ ಅಗತ್ಯತೆ ಮನಗಂಡರು. [೧೧] ಲೆಹ್ಮನ್ ನಿವೃತ್ತಿಯ ನಂತರ, ಕೋಲ್ಮನ್ ಅವರು ಮೈಸೂರು ಕೃಷಿ ಇಲಾಖೆಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಜೊತೆಗೆ ಬೆಳೆಗಳ ಕೀಟಗಳು ಮತ್ತು ರೋಗಗಳ ಕುರಿತು ಅಧ್ಯಯನ ಮಾಡಿದರು. ನಂತರದಲ್ಲಿ ೧೯೧೩ ರಲ್ಲಿ ಅವರು ಕೃಷಿ ನಿರ್ದೇಶಕರಾಗಿ ನೇಮಕಗೊಂಡರು. ಇವರು ೧೯೨೫ ಮತ್ತು ೧೯೨೮ ರ ಮಧ್ಯದಲ್ಲಿ ಬಿಡುವು ಮಾಡಿಕೊಂಡಿದ್ದರು. ನಂತರದಲ್ಲಿ ಅವರು ೧೯೩೪ರ ವರೆಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಕೋಲ್ಮನ್ ಅವರು ಜುಲೈ ೧೯೧೩ರಲ್ಲಿ ಹೆಬ್ಬಾಳದ ಕೃಷಿ ಶಾಲೆಯ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಕೃಷಿ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆಚಿಕ್ಕನಹಳ್ಳಿ, ಹಾಸನ ಮತ್ತು ರಾಮಕೃಷ್ಣಾಪುರದಲ್ಲಿ ಮೂರು ಸ್ಥಳೀಯವಾಗಿ ಕೃಷಿ ಶಾಲೆಗಳನ್ನು ಪ್ರಾರಂಭಿಸಿದ್ದರು. [೧೨] ಹೆಬ್ಬಾಳದಲ್ಲಿದ್ದ ಕೃಷಿ ಶಾಲೆಯು ನಂತರದಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೃಷಿ ಕಾಲೇಜು (೧೪ ಜೂನ್ ೧೯೪೬ [೧೩] ) ಆಗಿ ಸ್ಥಾಪನೆಯಾಯಿತು. ಮುಂದೆ ಇದೇ ಕಾಲೇಜು ೧೯೬೪ ರಲ್ಲಿ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಭಾಗವಾಯಿತು. ಇವರ ಮತ್ತೊಂದು ಸಾಧನೆಯೆಂದರೆ ೧೯೧೮ ರಲ್ಲಿ ಮೈಸೂರು ಕೃಷಿ ಮತ್ತು ಪ್ರಾಯೋಗಿಕ ಒಕ್ಕೂಟವನ್ನು ಸ್ಥಾಪಿಸಿದರು. ಈ ಒಕ್ಕೂಟವು ಹೊಸ ವಿಧಾನಗಳ ಪ್ರಯೋಗಗಳು ಮತ್ತು ವೈಜ್ಞಾನಿಕ ಶೋಧನೆಗಳನ್ನು ಕೈಗೊಳ್ಳಲು ಆಸಕ್ತ ಭೂಮಾಲೀಕರನ್ನು ಸಹ ಒಳಗೊಂಡಿತ್ತು. ಸರ್ಕಾರದ ಪ್ರಾಯೋಗಿಕ ಫಾರ್ಮ್‌ಗಳಲ್ಲಿ ಗೊಬ್ಬರ ಮತ್ತು ಬೆಳೆ ಪ್ರಯೋಗಗಳನ್ನು ನಡೆಸಲಾಯಿತು. ಇದರಿಂದ ರೈತರಲ್ಲಿ ಹೊಸ ಆಲೋಚನೆಗಳನ್ನು ಜನಪ್ರಿಯಗೊಳಿಸಲಾಯಿತು. ಇವರು ಮೈಸೂರಿನಲ್ಲಿ ೧೯೧೨ ರ ದಸರಾ ವಸ್ತುಪ್ರದರ್ಶನದಲ್ಲಿ, ಅವರು ಕೀಟ-ಪೀಡೆಗಳ ಪ್ರದರ್ಶನ ಮತ್ತು ಅವುಗಳ ನಿರ್ವಹಣಾ ಕ್ರಮಗಳ ತಂತ್ರಜ್ಞಾನ ಪರಿಚಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. [೧೪] ಅಲ್ಲದೆ ನವೆಂಬರ್‌ನಲ್ಲಿ ವರ್ಷಕ್ಕೊಮ್ಮೆ ಕ್ಷೇತ್ರೋತ್ಸವವನ್ನು ನಡೆಸಿದರು. ಈ ಒಕ್ಕೂಟವು ಒಂಟಾರಿಯೊದಲ್ಲಿ ಸಹ ಇದೇ ರೀತಿಯ ಕಲ್ಪನೆಯನ್ನು ಅನುಸರಿಸಿದ್ದನ್ನು ಇಂಗ್ಲಿಷ್‌ನಲ್ಲಿ ತ್ರೈಮಾಸಿಕ ನಿಯತಕಾಲಿಕದಲ್ಲಿ ಪ್ರಕಟಿಸಿದೆ (ಮೈಸೂರು ಅಗ್ರಿಕಲ್ಚರಲ್ ಎಕ್ಸ್‌ಪೆರಿಮೆಂಟಲ್ ಯೂನಿಯನ್ ಜರ್ನಲ್ ಅನ್ನು ಈಗ ಮೈಸೂರು ಜರ್ನಲ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಎಂದು ಕರೆಯಲಾಗುತ್ತದೆ) ಮತ್ತು ಕರ್ನಾಟಕದಲ್ಲಿ ಕನ್ನಡ ಮಾಸಿಕ ಪತ್ರಿಕೆಯಲ್ಲೂ ಸಹ ಪ್ರಕಟಿಸಲಾಗಿತ್ತು. [೧೫] [೧೬] ೧೯೧೮ ರಲ್ಲಿ, ಕೋಲ್ಮನ್ ಅವರು ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಸಣ್ಣ ರೈತರ ಹಿಡುವಳಿಗಳನ್ನು ಕ್ರೋಢೀಕರಿಸುವ ಸಲುವಾಗಿ ಜಪಾನಿನ ವಿಧಾನವನ್ನು ಕುರಿತು ಮಾತನಾಡಿದರು. ಗಡಿಗಳಿಗಾಗಿ ಭೂಮಿಯನ್ನು ವ್ಯರ್ಥ ಮಾಡುವುದನ್ನು ಕಡಿಮೆ ಮಾಡಲು ಹಾಗೂ ಹಿಂದೂ ಉತ್ತರಾಧಿಕಾರದ ಕಾನೂನುಗಳಿಂದ ಭಾರತದಲ್ಲಿ ಅಂತಹ ಕಲ್ಪನೆಯನ್ನು ಕಾರ್ಯಗತಗೊಳಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದರು. [೧೭] ಜನವರಿ ೧೯೧೯ ರಿಂದ ಜುಲೈ ವರೆಗೆ, ಅವರು ಯಾರ್ಕ್‌ಷೈರ್‌ನ ರಿಪಾನ್‌ನಲ್ಲಿ ತಾತ್ಕಾಲಿಕ ತರಬೇತಿ ಕೇಂದ್ರದಲ್ಲಿ ಮೊದಲ ಮಹಾ ಯುದ್ಧದಿಂದ ಹಿಂದಿರುಗಿದ ಅವರು ಕೆನಡಾದ ಸೇನಾ ಸಿಬ್ಬಂದಿಗೆ ಜೀವಶಾಸ್ತ್ರವನ್ನು ಕಲಿಸಿದರು. ಖಾಕಿ ವಿಶ್ವವಿದ್ಯಾಲಯದಲ್ಲಿ ಈ ಆರು ತಿಂಗಳ ಕೋರ್ಸ್ ವರ್ಕ್ ಒಪ್ಪಿದ್ದನ್ನು ಕೆನಡಾದ ವಿಶ್ವವಿದ್ಯಾಲಯಗಳು ಪೂರ್ಣ ವರ್ಷದ ಕೋರ್ಸ್‌ವರ್ಕ್‌ಗೆ ಸಮಾನವಾಗಿ ಸ್ವೀಕರಿಸಿದ್ದವು. ಮೈಸೂರು ವಿಶ್ವವಿದ್ಯಾಲಯದ ಪ್ರಕಾಶನವೊಂದರಲ್ಲಿ ಕೋಲ್ಮನ್ ಶಿಕ್ಷಣದ ತಮ್ಮ ಅನುಭವವನ್ನು ಪ್ರತಿಬಿಂಬಿಸಿದರು, ಸರಿಯಾದ ಕಟ್ಟಡದ ಕೊರತೆಯು ಶಿಕ್ಷಣವನ್ನು ಒದಗಿಸುವ ಗುರಿಯ ಮೇಲೆ ಹೇಗೆ ಪರಿಣಾಮ ಬೀರಲಿಲ್ಲ ಎಂಬುದನ್ನು ಗಮನಿಸಿದ್ದರು. [೧೮]

೧೯೨೦ ರಿಂದ ಕೋಲ್ಮನ್ ಅವರು ರೇಷ್ಮೆ ಕೃಷಿ ಇಲಾಖೆಯೊಂದಿಗೆ ಆಡಳಿತಕ್ಕೆ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ೧೯೨೩ ರಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ನಿರ್ದೇಶಕರ ಅಡಿಯಲ್ಲಿ ವಾಪಸ್ಸು ಮಾಡಲಾಯಿತು. ಸಿವಿಲ್ ಪಶುವೈದ್ಯಕೀಯ ಮತ್ತು ಅಮೃತ್ ಮಹಲ್ ಗಳು ಇವರ ನೇತೃತ್ವದ ಇಲಾಖೆಯ ಆರೈಕೆಯಲ್ಲಿ ಇದ್ದವು. ಕೋಲ್ಮನ್ ಅವರು ೧೯೨೫ ರಲ್ಲಿ ಬಾಳೆಹೊನ್ನೂರಿನಲ್ಲಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯು ಸೇರಿದಂತೆ ಹಲವಾರು ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ನೆರವು ನೀಡಿದರು. ಜೊತೆಗೆ ಸಿಎಸ್ ಕ್ರಾಫೋರ್ಡ್ ಅವರಿಂದ ಗುತ್ತಿಗೆ ಪಡೆದ ಮೂಲ ಹದಿನೆಂಟು ಎಕರೆ ಕಾಫಿ ಜಮೀನು. [೧೯] ೧೯೩೦ ರಲ್ಲಿ ಕೋಲ್ಮನ್ ಸಂಶೋಧನೆಯಲ್ಲಿ ಕಾಫಿ ಬೆಳೆ ತುಕ್ಕುರೋಗ ಹೆಮಿಲಿಯಾ ವಾಸ್ಟಾಟ್ರಿಕ್ಸ್ ಎಂಬ ಅಧ್ಯಯನವನ್ನು ಕೈಗೊಂಡಿದ್ದರು. . [೨೦] ಜೊತೆಗೆ ಈ ರೋಗವು ಅಡಿಕೆ ಬೆಳೆಗೆ ಫೈಟಾಪ್ತೊರಾ ಪಲ್ಮಿವೊರಾ ಉಂಟಾಗುವ ಕೊಳೆರೋಗವನ್ನು ಅಧ್ಯಯನ ಮಾಡಿದ್ದರು. (ಪಿ ಎಂಬ ಅರೇಸಿ ಎಂದು ಕರೆಯಲಾಗುವ). ಅವರು ಶ್ರೀಗಂಧದ ಮೇಲೆ ಪರಿಣಾಮ ಬೀರುವ ಮತ್ತು ಶ್ರೀಗಂಧದ ಹೂಗೊಂಚಲು ರೋಗವನ್ನು ಉಂಟುಮಾಡುವ ಮೈಕೋಪ್ಲಾಸ್ಮಾ ಸೋಂಕನ್ನು ಸಹ ಅಧ್ಯಯನ ಮಾಡಿದ್ದರು. [೯] ಅನಂತರದಲ್ಲಿ ಕೋಲ್ಮನ್ ಅವರನ್ನು ಸಂಶೋಧನಾ ಆಡಳಿತಗಾರರಾಗಿ ನೇಮಿಸಲಾಯಿತು. ಇವರು ಭಾರತೀಯ ಕೀಟಶಾಸ್ತ್ರಜ್ಞ ನೆಚ್ಚಿನ ಕುನ್ಹಿಕಣ್ಣನ್ ಮತ್ತು ಶಿಲೀಂಧ್ರಶಾಸ್ತ್ರಜ್ಞ ಎಂಜೆ ನರಸಿಂಹನ್ ಅವರ ಸಹಾಯಕರಾಗಿ ಕೆಲಸ ಮಾಡಿದ್ದರು. ೧೯೨೧ ಮತ್ತು ೧೯೩೩ ರಲ್ಲಿ ಅವರು ಪರಿಚಯಿಸಿದ ಅಗ್ರೊಮೈಜಿಡ್ ನೊಣ(ಓಫಿಮಿಯಾ ಲಂಟಾನೇ) ಹವಾಯಿಯಿಂದ ನಿಯಂತ್ರಿಸಲು ಯತ್ನಿಸಿದರು.[೧೦]

ಕೋಲ್ಮನ್ ಅವರು ಜಾವಾದಲ್ಲಿನ ಕ್ಲಟೆನ್ ಪ್ರಾಯೋಗಿಕ ಕೇಂದ್ರದಲ್ಲಿ ತಂಬಾಕಿನ ಮೇಲೆ ಇದೇ ರೀತಿಯ ಪ್ರಯತ್ನಗಳ ಹಾಗೂ ಅವಲೋಕನಗಳ ಆಧಾರದ ಮೇಲೆ ಹೊಸ ಕಬ್ಬಿನ ತಳಿಗಳನ್ನು ಅಭಿವೃದ್ಧಿಪಡಿಸಲು ಎಕ್ಸ್-ರೇ ಪ್ರೇರಿತ ರೂಪಾಂತರದ ಪ್ರಯೋಗಗಳನ್ನು ಸೂಚಿಸಿದ್ದರು. ಈ ರೂಪಾಂತರ ಪ್ರಯೋಗಗಳನ್ನು ನಂತರ ವೆಂಕಟರಾವ್ ಕೆ. ಬಾದಾಮಿ ಅವರು ಮುಂದುವರೆಸಿದರು. [೨೧] ಕೋಲ್ಮನ್ ಅವರು ರೋಗಗಳು ಮತ್ತು ಕೀಟಗಳ ಕಾಯಿದೆಯನ್ನು ರೂಪಿಸಿ (೧೯೧೭) ಅದನ್ನು ಅಂಗೀಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದು ಕಾನೂನಿನ ಮೂಲಕ ಕೀಟಗಳನ್ನು ನಿರ್ವಹಿಸುವಲ್ಲಿ ಭಾರತದ ಮೊದಲ ಪ್ರಯತ್ನವಾಗಿತ್ತು. ಮೈಸೂರಿನಿಂದ ರಫ್ತು ಮಾಡುವ ಪ್ರಮುಖ ಸರಕು ಕಾಫಿ ಬೆಳೆಯಲ್ಲಿ ಬಿಳಿ ಕಾಂಡ ಕೊರೆಯುವಿಕೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದ್ದರು. [೨೨] ಈ ಕಾಯಿದೆಯು ಕಾಫಿ ಕಾಂಡ ಕೊರೆಯುವ ಹುಳುಗಳನ್ನು ನಿಯಂತ್ರಿಸಲು ತೋಟದ ಬೆಳೆಗಾರರು ಇಂತಹ ಕ್ರಮಗಳನ್ನು ಕೈಗೊಳ್ಳುವುದನ್ನು ಕಡ್ಡಾಯಗೊಳಿಸಿತು. [೯] ಕೀಟಗಳ ನಿಯಂತ್ರಣಕ್ಕಾಗಿ ಕಂಬಳಿ ಮರಿಹುಳುಗಳನ್ನು ಸಂಗ್ರಹಿಸಲು ಶಾಲಾ ಮಕ್ಕಳನ್ನು ಒಳಗೊಂಡ ಸಾಮೂಹಿಕ ಅಭಿಯಾನಗಳನ್ನು ಏರ್ಪಡಿಸಿದ್ದು ಸಹ ನವೀನ ಮಾದರಿಯಾಗಿತ್ತು. [೨೩] ಕೋಲ್ಮನ್ ಅವರು ಅಮೇರಿಕಾದಿಂದ ಕೋಲಾರ್ ಮಿಷನ್ ಇನ್‌ಸ್ಟಿಟ್ಯೂಟ್‌ ಗೆ ಆಮದು ಮಾಡಿಕೊಂಡ ಹೋಲ್ಡರ್ ನ್ಯಾಪ್‌ಸಾಕ್ ಸ್ಪ್ರೇಯರ್ ಹಾಗೂ ಕೋಲಾರ ಮಿಷನ್ ಸಿದ್ಧಪಡಿಸಿದ ನೇಗಿಲು ಸೇರಿದಂತೆ ಸುಧಾರಿತ ಕೃಷಿ ಉಪಕರಣಗಳನ್ನು ಪರಿಚಯಿಸಲು ಇವರು ನೆರವು ನೀಡಿದರು. ಅನಂತರದಲ್ಲಿ ಇದನ್ನು ಮಾರ್ಪಡಿಸಿ ಸ್ಥಳೀಯವಾಗಿ ಮೈಸೂರು ನೇಗಿಲು ಎಂದು ಜನಪ್ರಿಯವಾಯಿತು. [೨೩]

ಕೋಲ್ಮನ್ ಅವರು ಮೈಸೂರು ರಾಜ್ಯದಲ್ಲಿ ಹಾಗೂ ಬ್ರಿಟಿಷ್ ಇಂಡಿಯಾ ಸರ್ಕಾರದ ನಿಯೋಜನೆಯ ಮೇಲೆ ಅನೇಕ ಸರ್ಕಾರಿ ಸಂಸ್ಥೆಗಳಿಗೆ ಆರ್ಥಿಕ ನೀತಿಗಳನ್ನು ಪರಿಶೀಲಿಸುವ ಸಲಹೆಗಾರರಾಗಿದ್ದರು. ೧೯೩೩ ರಲ್ಲಿ, ಮೈಸೂರು ಸಕ್ಕರೆ ಕಂಪನಿ (ಅಥವಾ ಮೈಶುಗರ್)ಯ, ಹೆಚ್ಚಿನ ಪಾಲುದಾರಿಕೆಯನ್ನು ಸರ್ಕಾರದ ಮೊದಲ ಕೂಡು ಬಂಡವಾಳದ ಹಾಗೂ ಖಾಸಗಿ ಕಂಪನಿಯಾಗಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲಾಯಿತು(೧೫ ಜನವರಿ ೧೯೩೪). [೨೪] ) ಕಾಲುವೆ ನೀರಾವರಿ ಪ್ರದೇಶದಲ್ಲಿ ಮಂಡ್ಯದ ರೈತರು ಕಬ್ಬು ಬೆಳೆಯ ತೊಡಗಿದರು. (ಆಗ ಇರ್ವಿನ್ ಕಾಲುವೆ ಎಂದು ಕರೆಯಲಾಗುತ್ತಿತ್ತು, ಈಗ ವಿಶ್ವೇಶ್ವರಯ್ಯ). ರೈತರು ತಮ್ಮ ಕಬ್ಬಿನ ಬೆಳೆಯನ್ನು ಮಾರಾಟ ಮಾಡಲು ಸಕ್ಕರೆ ಕಂಪೆನಿಯೊಂದಿಗೆ ಒಪ್ಪಿಗೆ ಮಾಡಿಕೊಂಡಿದ್ದರು (ಕನ್ನಡದಲ್ಲಿ ಒಪ್ಪಂದ ಅಥವಾ ಒಪ್ಪಂದಕ್ಕೆ, ಕೈಗಾರಿಕಾ "ಗುತ್ತಿಗೆ ಕೃಷಿ" ಯ ಬಹಳ ಹಿಂದಿನ ಕಾಲದ ಉದಾಹರಣೆಗಳಲ್ಲಿ ಒಂದಾಗಿದೆ). ೧೯೩೩ ರಲ್ಲಿ ಪ್ರಾರಂಭವಾದ ಸಂಶೋಧನೆಯ ನಂತರ ಕಬ್ಬಿನ ಕಾಂಡ ಕೊರೆಯುವ ಕೀಟವನ್ನು ನಿಯಂತ್ರಿಸಲು ಸಹಾಯ ಮಾಡಲು ಪರಾವಲಂಬಿ ಕೀಟಗಳನ್ನು ಸಂತಾನೋತ್ಪತ್ತಿ ಮಾಡುವ ಮೊದಲ ಪ್ರಯೋಗಾಲಯವನ್ನು ಮಂಡ್ಯದಲ್ಲಿ ಇವರ ನೇತೃತ್ವದಲ್ಲಿ ೧೯೩೫-೩೬ರಲ್ಲಿ ಸ್ಥಾಪಿಸಲಾಯಿತು. [೨೫] [೨೬] [೨೭]

ಮೈಸೂರಿನ ಕೃಷಿ ವಿಜ್ಞಾನಿಗಳಾದ ೧೯೨೮ ಲೆಸ್ಲಿ ಸಿ. ಕೋಲ್ಮನ್ ಅವರು ಎಡದಿಂದ ಆರನೇ ಸ್ಥಾನದಲ್ಲಿ ನಿಂತಿದ್ದಾರೆ, ಕೆ. ಕುನ್ಹಿಕಣ್ಣನ್, ಎಡದಿಂದ ಮೂರನೇ ಮತ್ತು ವಿಕೆ ಬಾದಾಮಿ, ಕುಳಿತಿರುವವರಲ್ಲಿ ಎಡದಿಂದ ನಾಲ್ಕನೆಯವರು.

ಭಾರತದಲ್ಲಿ ಕೃಷಿ ಮಂಡಳಿಯ ಸದಸ್ಯರಾಗಿ, ಕೋಲ್ಮನ್ ಅವರು ವಿವಿಧ ಸಲಹಾ ಸಮಿತಿಗಳ ನೇತೃತ್ವ ವಹಿಸಿದ್ದರು. ಇಂಪೀರಿಯಲ್ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಮೀಸಲಾಗಿದ್ದ ಅಂಕಿಅಂಶಗಳ ಘಟಕದ ಸ್ಥಾಪನೆಗೆ ಅನುಮೋದಿಸುವ ಜವಾಬ್ದಾರಿಯನ್ನು ಸಹ ಇವರು ಹೊಂದಿದ್ದರು. [೨೮]

ಒಂದು ಮಿಡತೆ ಮೂಲ, ಕೋಲ್ಮೇನಿಯಾ [೨೯] ಮತ್ತು ಇನ್ನೊಂದು ಜಾತಿಯ ಪ್ಯಾರಾಹಿರೋಗ್ಲಿಫಸ್ ಕೋಲ್ಮನಿ ಇಗ್ನಾಸಿಯೊ ಬೊಲಿವರ್ ಎಂಬುವುಗಳನ್ನು ಇವರ ಹೆಸರಿನಿಂದ ಕರೆಯಲಾಗುತ್ತಿದೆ. ಕೋಲ್ಮನ್ ಅವರು ಕೊಲ್ಮೇನಿಯಾ ಸ್ಪೆನರಿಯೊಯಿಡ್ಸ್ ಬಗ್ಗೆ ವ್ಯಾಪಕವಾದ ಅಧ್ಯಯನವನ್ನು ಮಾಡಿದ್ದರು. ಇದು ಕೆಲವು ಪ್ರದೇಶಗಳಲ್ಲಿನ ಕೀಟವು ಜೋಳ ಬೆಳೆಯನ್ನು ಬಾಧಿಸುತಿದ್ದವು. [೩೦] ೧೯೧೮ರಲ್ಲಿ ಕಾಫಿ ಬೆಳೆ ಮೇಲೆ ಕಂಡು ಹಿಡಿದ ಶಲ್ಕ ಕೀಟಕ್ಕೆ ಅವರ ಸಹಾಯಕ ಕೀಟಶಾಸ್ತ್ರಜ್ಞ ಕುನ್ಹಿ ಕಣ್ಣನ್ ರಿಂದ ಕೊಕಸ್ ಕೋಲ್ಮನಿ ಎಂದು ಹೆಸರಿಸಲಾಯಿತು. [೩೧] ಕೀಟಗಳ ನಿಯಂತ್ರಣಕ್ಕಾಗಿ ನೈಸರ್ಗಿಕ ಪರಾವಲಂಬಿಗಳು ಮತ್ತು ಪರಭಕ್ಷಕಗಳ ಕೀಟಗಳನ್ನು ಬಳಸುವಲ್ಲಿ ಕೋಲ್ಮನ್ ಅವರು ಆಸಕ್ತಿ ಹೊಂದಿದ್ದರು. ಕೋಲಾರ ಜಿಲ್ಲೆಯಲ್ಲಿನ ಚಪ್ಪಟೆ ಕಳ್ಳಿಯನ್ನು ನಿಯಂತ್ರಿಸಲು ಅವರು ಕೈಯಾರೆ ತೆಗೆಯುವುದು, ಅದನ್ನು ಹಸಿರು ಗೊಬ್ಬರವಾಗಿ ಪರಿವರ್ತಿಸುವುದು ಮತ್ತು ಅವುಗಳ ನಿಯಂತ್ರಣದಲ್ಲಿ ಕೊಚಿನಿಯಲ್ ಕೀಟಗಳ ಬಳಕೆಯನ್ನು ಒಳಗೊಂಡ ಕ್ರಮಗಳನ್ನು ಕೈಗೊಂಡಿದ್ದರು. [೩೨] ಅವರು ಅನೇಕ ಜಾತಿಯ ಪರಾವಲಂಬಿ ಕೀಟಗಳ ಕುರಿತು ಅಧ್ಯಯನ ಮಾಡಿದರು. ಟೆಲಿನೋಮಸ್ ಕೋಲ್ಮನಿ, ಅನಾಸ್ಟಾಟಸ್ ಕೋಲ್ಮನಿ ಮತ್ತು ಟೆಟ್ರಾಸ್ಟಿಕಸ್ ಕೋಲ್ಮನಿ ಅವರ ಹೆಸರನ್ನು ಇಡಲಾಗಿದೆ. [೩೩]

ಮೈಸೂರಿನ ಕೃಷಿ ಸಂಸ್ಥೆಗಳ ನಕ್ಷೆ, 1926

೧೯೨೫ ರಲ್ಲಿ ಕೋಲ್ಮನ್ ಅವರು ಟೊರೊಂಟೊ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಹುದ್ದೆಯನ್ನು ಪಡೆಯಲು ಪ್ರಯತ್ನಿಸಿದ್ದು, ಅನಾರೋಗ್ಯದ ಕಾರಣದಿಂದಾಗಿ ಶೀಘ್ರವಾಗಿ ಕೆನಡಾಕ್ಕೆ ಮರಳಿದರು. [೩೪] ೧೯೨೭ ರಲ್ಲಿ ಒಂಟಾರಿಯೊದಲ್ಲಿ ಇವರಿಗಾಗಿ ಸಸ್ಯ ರೋಗಶಾಸ್ತ್ರಜ್ಞರ ಅರೆಕಾಲಿಕ ಹುದ್ದೆಯನ್ನು ಸೃಜಿಸಲಾಯಿತು. ಅವರು ಕ್ರಿಪ್ಟೋಸ್ಪೊರೆಲ್ಲಾ ವಿಟಿಕೋಲಾದಿಂದ ಉಂಟಾದ ದ್ರಾಕ್ಷಿಯ ಸತ್ತ ಬಳ್ಳಿಗಳ ಮೇಲೆ ಕೆಲಕಾಲ ಅಧ್ಯಯನ ಮಾಡಿದರು. [೩೫] ಅದರೂ ಕೋಲ್ಮನ್ ಅವರು ಹೆಚ್ಚು ಕಾಲ ಅಲ್ಲಿ ಮುಂದುವರಿಯಲಿಲ್ಲ. ಪುನಃ ಭಾರತಕ್ಕೆ ಮರಳಲು ರಾಜೀನಾಮೆ ನೀಡಿದರು. [೩೬] [೩೭] ೧೯೨೯ ರಲ್ಲಿ ಅವರು ಮೈಸೂರಿನಲ್ಲಿ ಮಾಡಿದ ಕೆಲಸಕಾರ್ಯಗಳ ಬಗ್ಗೆ ವರದಿಯನ್ನು ಪ್ರಕಟಿಸಿದರು. ಇದನ್ನು ರಾಯಲ್ ಕಮಿಷನ್ ಆನ್ ಅಗ್ರಿಕಲ್ಚರ್ ಇನ್ ಇಂಡಿಯಾ ಮಾಡಿದ ಶಿಫಾರಸುಗಳೊಂದಿಗೆ ಇದನ್ನು ಸಹ ಹೋಲಿಸಲಾಗುತ್ತದೆ. [೩೮] ೧೯೩೧ರಲ್ಲಿ ಭಾರತ ಸಾಮ್ರಾಜ್ಯದ ಕೋಲ್ಮನ್ ಕಂಪ್ಯಾನಿಯನ್ ಎಂದು ಆದೇಶ ಮಾಡಲಾಯಿತು. [೩೯] ಮೈಸೂರಿನಲ್ಲಿ ಮತ್ತೆ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ಕೋಲ್ಮನ್ ಅವರು ೧೯೩೪ ರಲ್ಲಿ ಕೃಷಿ ನಿರ್ದೇಶಕರಾಗಿ ನಿವೃತ್ತರಾದರು. ನಂತರ ಅವರು ಸಸ್ಯ ತಳಿ ಅಭಿವೃದ್ಧಿಶಾಸ್ತ್ರದಲ್ಲಿ ಬೋಧನೆ ಮತ್ತು ಸಂಶೋಧನೆ ಮಾಡಲು ಭಾರತದಿಂದ ಟೊರೆಂಟೊ ವಿಶ್ವವಿದ್ಯಾಲಯಕ್ಕೆ ತೆರಳಿದರು. [೪೦] ೧೯೩೬ ರಲ್ಲಿ ಗ್ಯಾಸ್ಟೇರಿಯಾ ಮತ್ತು ಅಲಿಯಂ ಆಫ್ ಕೋಶಶಾಸ್ತ್ರದಲ್ಲಿ ಅವರು ಕೆಲಸ ಮಾಡಿದರು. [೪೧] ೧೯೪೮ ರಲ್ಲಿ ಅವರು ಮಿಡತೆಯ ಕೋಶಶಾಸ್ತ್ರವನ್ನು ಅಧ್ಯಯನ ಮಾಡಿದರು. [೪೨]

ಕೋಲ್ಮನ್ ಅವರು ಎರಡು ಬಾರಿ ವಿವಾಹವಾಗಿದ್ದರು. ಅವರ ಮೊದಲ ಪತ್ನಿ ಮೇರಿ ಮ್ಯಾಕ್‌ಡೊನಾಲ್ಡ್ ಉರ್ಕ್ವಾರ್ಟ್ (ಜನನ ಅಕ್ಟೋಬರ್ 19, 1882) ಮಧುಮೇಹದಿಂದ ಬಿಳಿಗಿರಿರಂಗನ ಬೆಟ್ಟಗಳಲ್ಲಿ ಮೇ 10, 1918 ರಂದು ಅಸುನೀಗಿದರು. ಅವರನ್ನು ಆರ್‌ಸಿ ಮೋರಿಸ್‌ನ ಹೊನ್ನಮೆಟ್ಟಿ ಎಸ್ಟೇಟ್‌ನಲ್ಲಿ ಸಮಾಧಿ ಮಾಡಲಾಯಿತು. [೪೩] ಅವರಿಗೆ ಜಾನ್ ಉರ್ಕ್ವಾರ್ಟ್ ಕೋಲ್ಮನ್ ಎಂಬ ಮಗನಿದ್ದನು. [೪೪] ಕೋಲ್ಮನ್ ಅವರು ವಿಲ್ಲೀಸ್ ಎಚ್ ರೋಪ್ಸ್ ಅವರ ಮಗಳಾದ ಫೆಬೆ ರೋಪ್ಸ್ (೧೮೯೦ ಜನನ), ಅವರನ್ನು ಮೇ ೧೯೨೩, ೨೩ ರಂದು ವಿವಾಹವಾದರು. [೪೫] ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಜನಿಸಿದರು. ೧೯೫೩ ರ ಅಂತ್ಯದ ವೇಳೆಗೆ ಕೋಲ್ಮನ್ ಅವರು ಕರ್ನಾಟಕಕ್ಕೆ ಖಾಸಗಿಯಾಗಿ ಭೇಟಿ ನೀಡಿದ್ದರು. ಆದರೆ ಅವರ ಭೇಟಿಯ ಬಗ್ಗೆ ಕೇಳಿದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ನಮ್ಮ ರಾಜ್ಯ ಅತಿಥಿ ಎಂದು ಘೋಷಿಸಿದರು. ಅಂದಿನ ಕೃಷಿ ಸ್ಥಿತಿಯನ್ನು ಪರೀಕ್ಷಿಸಲು ಮತ್ತು ಅವರು ಕೆಲಸ ಮಾಡಿದ ಸ್ಥಳಗಳಿಗೆ ಭೇಟಿ ನೀಡಲು ಕರ್ನಾಟಕ ಪ್ರವಾಸವನ್ನು ಏರ್ಪಡಿಸಿದ್ದರು. ೧೯೫೪ ರಲ್ಲಿ ಕೆನಡಾಕ್ಕೆ ಹಿಂದಿರುಗಿದ ಕೆಲಕಾಲದ ನಂತರ, ದಟ್ಟವಾದ ಮಂಜು ಆವರಿಸಿದ್ದ ಸಮಯದಲ್ಲಿ ಸಾನಿಚ್ಟನ್‌ನಲ್ಲಿರುವ ಅವರ ಲ್ಯಾಬ್‌ಗೆ ಕಾರು ಚಾಲನೆ ಮಾಡುವಾಗ, ಅವರ ಕಾರು ಅಡ್ಡಗಾಲುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟರು. [೯] [೪೬]

ಉಲ್ಲೇಖಗಳು[ಬದಲಾಯಿಸಿ]

  1. "Once a Spokane Student". Spokane Daily Chronicle. 10 April 1905. p. 10.
  2. Presidents of Reed
  3. "Teachers' mother called by death. Mrs. F.T. Coleman reared sons widely known as educators". Spokane Daily Chronicle. January 13, 1930. p. 10.
  4. Torontonensis. 1904. p. 35.
  5. President's report of the University of Toronto for the year ending June 30th, 1904. 1905. pp. 287–288.
  6. University of Toronto Monthly. Volume V. 1905. p. 236.
  7. Coleman, L.C. (1908). Investigation in Nitrification. Bacteriological Institute, University of Gottingen, Centr. Bakt. Parasitink, 2nd abt. 20:401–420, 485–513.
  8. Thirumalachar, M.J. (1970). "Prof. M.J. Narasimhan" (PDF). Sydowia, Annal. Mycolo. 2. 24: 17–20.
  9. ೯.೦ ೯.೧ ೯.೨ ೯.೩ Maramorosch, K. (2006). "Peeping into the past: Pioneers in Plant Protection. Leslie C. Coleman (1878-1954)". Indian Journal of Plant Protection. 34: 145–146.
  10. ೧೦.೦ ೧೦.೧ Puttarudriah, M. (1956). "Dr L.C. Coleman, M.A., Ph.D. An Appreciation". The Mysore Agricultural Journal. 31 (1): 3–4.
  11. Anon. (1939). Report on the progress of agriculture in Mysore (2 ed.). Department of Agriculture, Mysore State. pp. 27–29.
  12. Report on the Progress of Agriculture in Mysore. Bangalore: Government of Mysore. 1939. pp. 28–29.
  13. Anon. (1972) Agricultural College, Hebbal. 1946-1972. Silver Jubilee Souvenir. University of Agricultural Sciences, Bangalore. pp. 1-2.
  14. "Mysore Exhibition". The Times Of India. 17 October 1912. p. 7.
  15. Report on the progress of agriculture in Mysore. Mysore Government. 1939. p. 30.
  16. Gundappa, D.V., ed. (1931). All About Mysore. Bangalore: Karnataka Publishing House. p. 137.
  17. "Selections. Consolidation of Holdings. The Example of Japan". Servant of India. 1 (33): 395. 3 October 1918.
  18. Coleman, Leslie C. (1919). "The Canadian Khaki University". The Mysore University Magazine: 244–247.
  19. Coleman, Leslie C. (1930). Report of work on the coffee experiment station. Balehonnur for the years 1925-30. Government of Mysore. p. 2.
  20. Coleman, L.C. (1932) Report of work on the Coffee Experiment Station, Balehonnur, for the years 1930 and 1931. Mysore, Coffee Experiment Station. Bulletin No. 8.
  21. Russell, John (1937). Report on the work of the Imperial Council of Agricultural Research in applying science to Crop Production in India. Simla: Government of India. p. 197.
  22. "Plant protection work in Mysore State". Mysore Information Bulletin. Volume 17. Number 12. 1954. pp. 385–387.
  23. ೨೩.೦ ೨೩.೧ "Plant protection work in Mysore State". Mysore Information Bulletin. Volume 17. Number 12. 1954. pp. 385–387.
  24. Rao, M. Shama (1936). Modern Mysore. Higgonbothams. pp. 404–405.
  25. Report of the Mysore Agricultural Department for the Year Ending 30th June 1933 with the Government Review Thereon. Bangalore: Government Press. 1934. p. 7.
  26. Khot, S.M.; Kamala, G.V. (1966). "The role of agricultural processing industries in economic development: a case study" (PDF). Indian Journal of Agricultural Economics. 21 (4): 54–59.
  27. Gopalaswamy, S. (1955). "The Krishnarajasagara Irrigation hydro-electric scheme in Mysore State India: its socio-economic benefits". Civilisations. 5 (2): 193–201. ISSN 0009-8140. JSTOR 41230024.
  28. Proceedings of the Board of Agriculture in India. Held at Pusa on the 9th December, 1929 and following days. Calcutta: Government of India. 1931. pp. 23–29.
  29. Bolivar, Ignacio (1910). "Nueve Locustido de la India, perjudicial a la Agricultura (Colemania sphenarioides Bol.)". Boletin de la Sociedad Espanola de Historia Natural. 10: 318–321.
  30. Coleman, Leslie C. (1911). The Jola or Deccan grasshopper (Colemania sphenarioides). Entomological Series- Bulletin No. 2. Department of Agriculture, Mysore State.
  31. Coleman, L.C & K. Kunhi Kannan (1918). Some scale insect pests of coffee in south India. Bangalore: Government Press. p. 2.
  32. Johnston, T.H.; Tryon, Henry (1914). Report of the prickly-pear travelling commission. Brisbane: Government of Australia. pp. 12-13, 26.
  33. Crawford, J.C. (1912). "Descriptions of new Hymenoptera. No. 4-No. 1880". Proceedings of the United States National Museum. 42 (1880): 1–10. doi:10.5479/si.00963801.42-1880.1.
  34. "Dr. Coleman states condition of India is being improved". The Varsity. The Undergraduate Newspaper. 45 (10): 1. 13 October 1925.
  35. President's report for the year ending 30th June 1927. University of Toronto. 1927. p. 33.
  36. Dustan, G.G. & R.S.Willison (1968). A history of the entomology and plant pathology laboratories on the Niagara peninsula 1911-1960. Canada Department of Agriculture. p. 24.
  37. Estey, Ralph H. (1994). Essays on the Early History of Plant Pathology and Mycology in Canada. McGill Queen's Press. p. 182.
  38. Coleman, Leslie C. (1929). Note on the Report of the Royal Commission on Agriculture in India. Bangalore: The Mysore Agricultural and Experimental Union.
  39. London Gazette, 3 June 1931 p, 3628.
  40. Torontonensis. Volume 48. 1946. p. 249.
  41. University of Toronto. Report of the Board of Governors for the Year ended 30th June 1936. Toronto, Printer to the Queen. 1937. p. 57.
  42. Coleman, L.C. (1948). "The cytology of some western species of Trimerotropis (Acrididae)". Genetics. 33 (6): 519–528. doi:10.1093/genetics/33.6.519. PMC 1209425. PMID 17247294.
  43. Genealogy
  44. "Society conducted by Mrs. Edmund Phillips". The Toronto World. 19 December 1915. p. 7.
  45. "Miss Ropes marries East Indian Official". Brooklyn Life. May 26, 1923. p. 13.
  46. "News and Announcements". The Indian Journal of Entomology. 16 (4): 306. 1954.