ಮಂಗೇರಿರ ಚಿನ್ನಪ್ಪ ಮುತ್ತಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಸಿ. ಮುತ್ತಣ್ಣ

ಶೌರ್ಯ ಚಕ್ರ
ಜನನ೨೧ ಏಪ್ರಿಲ್ ೧೯೬೪
ಚೆಟ್ಟಿಮನಿ, ಭಾಗಮಂಡಲ, ಕೊಡಗು ಜಿಲ್ಲೆ, ಕರ್ನಾಟಕ
ಮರಣ೧೨ ಜನವರಿ ೨೦೦೦ (೩೫ರ ವಯಸ್ಸು)
ಅನಂತ್ನಾಗ್, ಜಮ್ಮು ಮತ್ತು ಕಾಶ್ಮೀರ
ವ್ಯಾಪ್ತಿಪ್ರದೇಶಭಾರತ
ಶಾಖೆಭಾರತೀಯ ಸೇನೆ
ಶ್ರೇಣಿ(ದರ್ಜೆ)ಮೇಜರ್

ಮೇಜರ್ ಮಂಗೇರಿರ ಚಿನ್ನಪ್ಪ ಮುತ್ತಣ್ಣ ಭಾರತದ ಓರ್ವ ಯುದ್ಧ ವೀರ.

ಆರಂಭಿಕ ಜೀವನ[ಬದಲಾಯಿಸಿ]

ಮಂಗೇರಿರ ಚಿನ್ನಪ್ಪ ಮುತ್ತಣ್ಣ ಅವರು ೨೧ ಏಪ್ರಿಲ್ ೧೯೬೪ ರಲ್ಲಿ ಕೊಡಗು ಜಿಲ್ಲೆಯ ( ಭಾಗಮಂಡಲದ ಬಳಿ) ಚೆಟ್ಟಿಮನಿ ಗ್ರಾಮದಲ್ಲಿ ಜನಿಸಿದರು. 

ಸೇನಾ ಸೇವೆ[ಬದಲಾಯಿಸಿ]

ಅವರು ಅಕ್ಟೋಬರ್ ೧೯೮೪ ರಲ್ಲಿ ಚೆನ್ನೈನ ಒಟಿಎಗೆ ಸೇರಿದರು ಮತ್ತು ೨೪ ಅಕ್ಟೋಬರ್ ೧೯೮೫ ರಲ್ಲಿ ೫ ನೇ ಬೆಟಾಲಿಯನ್ ದಿ ಸಿಖ್ ಲೈಟ್ ಇನ್‌ಫಾಂಟ್ರಿಗೆ ನಿಯೋಜಿಸಲ್ಪಟ್ಟರು. ಅವರು ೫ ಸಿಖ್ ಲೈಟ್ ಇನ್‌ಫಾಂಟ್ರಿ-ಎಚ್‌ಕ್ಯೂ - ೧ ಸೆಕ್ಟರ್ ರಾಷ್ಟ್ರೀಯ ರೈಫಲ್ಸ್‌ಗೆ ಸೇವೆ ಸಲ್ಲಿಸಿದರು. ಅವರು ೧೨ ಜನವರಿ ೨೦೦೦ ರಲ್ಲಿ, ತಮ್ಮ ೩೬ ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ ಮೃತರಾದರು.

ಮರಣೋತ್ತರ ಗೌರವ[ಬದಲಾಯಿಸಿ]

ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. [೧] ಅವರ ಸ್ಮರಣಾರ್ಥ ಮಡಿಕೇರಿ ನಗರದ ಪುರಸಭೆಯ (ಸಿಎಂಸಿ) ಮುಂಭಾಗದಲ್ಲಿ ಹುತಾತ್ಮರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು ಮತ್ತು ಟೌನ್ ಹಾಲ್ ಮುಂಭಾಗದ ಪುರಸಭೆಯ ವೃತ್ತಕ್ಕೆ ೯ ಡಿಸೆಂಬರ್ ೨೦೧೦ ಗುರುವಾರದಂದು ಅವರ ಹೆಸರನ್ನು ಇಡಲಾಯಿತು. ಶಿಲ್ಪಿ ಮಂಜುನಾಥ ಆಚಾರ್ಯ ಅವರಿಂದ ೮ ಲಕ್ಷ ರೂ . ವೆಚ್ಚದಲ್ಲಿ ಈ ಮೂರ್ತಿಯನ್ನುಸೋಮವಾರಪೇಟೆಯ ಬೀಟಿಕಟ್ಟೆಯಲ್ಲಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಯಿತು. ಆನಂತರದಲ್ಲಿ, ಯೋಧನನ್ನು ನೇಮಿಸಿದ ಅನಂತನಾಗ್ ಜಿಲ್ಲಾ ಕೇಂದ್ರದ ೧ ಸೆಕ್ಟರ್ ಆರ್‌ಆರ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದ ಪ್ರೌಢಶಾಲೆಯನ್ನು ಮುತ್ತಣ್ಣ ಆರ್ಮಿ ಸದ್ಭಾವನಾ ಶಾಲೆ ಎಂದು ಮುತ್ತಣ್ಣ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಯಿತು.[೨] [೩] [೪]

ಉಲ್ಲೇಖಗಳು[ಬದಲಾಯಿಸಿ]

  1. "School and Road, in memory of a Martyr". Coorg.com. Retrieved 16 April 2014.
  2. "Brave heart's statue to be unveiled on Dec. 9". Coorg.com. Retrieved 16 April 2014.
  3. Dinesh, B C (20 December 2010). "Dedicated to nation's defence". Archived from the original on 17 April 2014. Retrieved 16 April 2014.
  4. Staff Correspondent (22 November 2010). "Statue to be installed for Muthanna". The Hindu. Archived from the original on 17 April 2014. Retrieved 16 April 2014.