ವಿಷಯಕ್ಕೆ ಹೋಗು

ಪನಬಾಕಾ ಲಕ್ಷ್ಮೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಪನಬಾಕಾ ಲಕ್ಷ್ಮೀ
ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರು
In office
೨೦೦೯–೨೦೧೪
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು
In office
೨೦೦೪–೨೦೦೯
Succeeded byದಿನೇಶ್ ತ್ರಿವೇದಿ
ಸಂಸತ್ ಸದಸ್ಯ, ಲೋಕಸಭೆ
In office
೨೦೦೯–೨೦೧೪
Preceded byದಗ್ಗುಬಾಟಿ ಪುರಂದರೇಶ್ವರಿ
Succeeded byಮಾಲ್ಯಾದ್ರಿ ಶ್ರೀರಾಮ್
Constituencyಬಾಪಟ್ಲ
ಸಂಸತ್ ಸದಸ್ಯ, ಲೋಕಸಭೆ
In office
೧೯೯೬–೧೯೯೮
Preceded byಪದ್ಮಶ್ರೀ ಕುಡುಮುಲ
In office
೧೯೯೮–೧೯೯೯
Succeeded byವುಕ್ಕಲ ರಾಜೇಶ್ವರಮ್ಮ
In office
೨೦೦೪–೨೦೦೯
Preceded byವುಕ್ಕಲ ರಾಜೇಶ್ವರಮ್ಮ
Succeeded byಮೇಕಪತಿ ರಾಜಮೋಹನ್ ರೆಡ್ಡಿ
Constituencyನೆಲ್ಲೂರು
Personal details
Born (1958-10-06) 6 October 1958 (ವಯಸ್ಸು 66)
ಕವಲಿ, ಆಂಧ್ರ ಪ್ರದೇಶ
Political partyತೆಲುಗು ದೇಶಂ ಪಕ್ಷ (೨೦೧೯ ರಿಂದ)
Other political
affiliations
Spouseಪನಬಾಕಾ ಕೃಷ್ಣಯ್ಯ
Children೨ ಹೆಣ್ಣು ಮಕ್ಕಳು
Residenceನೆಲ್ಲೂರು
Source: [೧]

ಡಾ. ಪನಬಾಕಾ ಲಕ್ಷ್ಮೀ (ಜನನ ೬ ಅಕ್ಟೋಬರ್ ೧೯೫೮) ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಮಾಜಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ (೨೦೦೪-೨೦೦೯) ಮತ್ತು ಕೇಂದ್ರ ಜವಳಿ ರಾಜ್ಯ ಸಚಿವೆ (೨೦೦೯-೨೦೧೪) ಆಗಿದ್ದರು.ಇವರು ಆಂಧ್ರಪ್ರದೇಶದ ಬಾಪಟ್ಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಸಂಯೋಜಿತ ಆಂಧ್ರಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ಈಗ ಇವರು ತೆಲುಗು ದೇಶಂ ಪಕ್ಷದ (ಟಿಡಿಪಿ)ದಲ್ಲಿ ಭಾಗಿಯಾಗಿದ್ದಾರೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಡಾ. ಪನಬಾಕಾ ಲಕ್ಷ್ಮೀ ಅವರು ಕಾವಲಿಯ ನೆಲ್ಲೂರಿ(ಆಂಧ್ರ ಪ್ರದೇಶ)ನಲ್ಲಿ ಜನಿಸಿದರು. ಡಾ. ಪಿ. ಕೃಷ್ಣಯ್ಯ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಎಂ.ಎ ಮುಗಿಸಿದರು.[]

ವೃತ್ತಿ

[ಬದಲಾಯಿಸಿ]

ಇವರು ನೆಲ್ಲೂರಿನಿಂದ ೧೧, ೧೨, ಮತ್ತು ೧೪ ನೇ ಲೋಕಸಭೆಗೆ ಮತ್ತು ಬಾಪಟ್ಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಯು.ಪಿ.ಎ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (೨೦೦೪-೨೦೦೯), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಜವಳಿ ಸಚಿವಾಲಯ (೨೦೧೪) ರಾಜ್ಯ ಸಚಿವೆಯಾಗಿದ್ದರು.[]

ಇವರು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ವೈ.ಎಸ್‌.ಆರ್‌.ಸಿ.ಪಿ.ಯ ಬಲ್ಲಿ ದುರ್ಗಾ ಪ್ರಸಾದ್ ರಾವ್ ವಿರುದ್ಧ ಟಿ.ಡಿ.ಪಿ ಯ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸಿ ವಿಫಲರಾದರು.[] ೨೦೨೧ ರಲ್ಲಿ, ಹಾಲಿ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದ ನಂತರ ತೆರವಾಗಿರುವ ಅದೇ ತಿರುಪತಿ ಕ್ಷೇತ್ರದಿಂದ ಅವರು ಲೋಕಸಭಾ ಉಪಚುನಾವಣೆಯಲ್ಲಿ ವಿಫಲರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. Samdani MN (Mar 14, 2019). "Panabaka Lakshmi in TDP: Congress leaders Panabaka Lakshmi, Harsha Kumar join TDP | Vijayawada News - Times of India". The Times of India (in ಇಂಗ್ಲಿಷ್). Retrieved 2021-04-20.
  2. "Detailed Profile: Smt. Lakshmi Panabaka". Archived from the original on 16 Jan 2019.
  3. "Minister of State". Ministry of Petroleum and Natural Gas. Archived from the original on 28 September 2013. Retrieved 17 September 2013.
  4. "Tirupati Election Results 2019: YSRCP's Balli Durga Prasad Rao has won with 228376 votes". www.timesnownews.com (in ಇಂಗ್ಲಿಷ್). Retrieved 2021-04-20.
  5. Murali, S. (2021-04-06). "Panabaka Lakshmi blames YSRCP, BJP for rise in prices of essential commodities". The Hindu (in Indian English). ISSN 0971-751X. Retrieved 2021-04-20.