ನರಗುಂದ
ನರಗುಂದ
ನರಗುಂದ Naragunda | |
|---|---|
ಪಟ್ಟಣ | |
| ದೇಶ | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ಗದಗ |
| Elevation | 605 m (1,985 ft) |
| ಜನಸಂಖ್ಯೆ (2001) | |
| • ಒಟ್ಟು | ೩೨,೫೪೮ |
| ಭಾಷೆಗಳು | |
| • ಅಧಿಕೃತ | ಕನ್ನಡ |
| ಸಮಯದ ವಲಯ | |
| ಸಮಯ ವಲಯ | ಯುಟಿಸಿ+5:30 (IST) |
| ಜಾಲತಾಣ | www |
ನರಗುಂದವು ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಯ ಒಂದು ತಾಲ್ಲೂಕು; ಈ ತಾಲ್ಲೂಕಿನ ಮುಖ್ಯಸ್ಥಳ. ಭಾರತದ ಸ್ವಾತಂತ್ರ್ಯ ಹೋರಾಟಗಾರ ನರಗುಂದ ಬಾಬಾಸಾಹೇಬರು ಈ ಊರಿನವರು.
೧೮೫೭ರ ನರಗುಂದ ಬಂಡಾಯದಷ್ಟೇ ೧೯೮೦ ರ ರೈತ ಬಂಡಾಯವೂ ಇಲ್ಲಿನ ಪ್ರಮುಖ ಘಟನೆಯಾಗಿದೆ. ನರಗುಂದ ನಗರವು ಹುಬ್ಬಳ್ಳಿ-ಸೊಲ್ಲಾಪೂರ ರಸ್ತೆಯಲ್ಲಿ ಬರುತ್ತದೆ. 2011 ರ ಜನಗಣತಿಯ ಪ್ರಕಾರ 36318 ಜನಸಂಖ್ಯೆಯನ್ನು ಹೊಂದಿದೆ. ಪ್ರಾಚೀನ ಶಾಸನಗಳಲ್ಲಿ ಪಿರಿಯಾ ನರಗುಂದ ಎಂದು ಉಲ್ಲೇಖಿತ ಗೊಂಡಿರುತ್ತದೆ. ಈಗಿನ ಪುರಸಭೆಯ ಕಟ್ಟಡವು ಹಿಂದೆ ರಾಜನ ಅರಮನೆಯಾಗಿತ್ತು. ಇದರ ಒಂದು ಕೊಠಡಿಯಲ್ಲಿ ರಾಜನ ಖಡ್ಗವು ಇದೆ.
ನರಗುಂದ ಗುಡ್ಡವು ನೋಡಲು ಮಲಗಿದ ಸಿಂಹದಂತೆ ಇದೆ. ಗುಡ್ಡದ ಮೇಲೆ ಸಿದ್ದೇಶ್ವರ ದೇವಸ್ಥಾನ ಹಾಗೂ ಇಳಿಜಾರಿನಲ್ಲಿ ಬೃಹತ್ತಾದ ವೆಂಕಟೇಶ್ವರ ದೇವಾಲಯವಿದ್ದು ದ್ರಾವಿಡ ಅವು ಶೈಲಿಯಲ್ಲಿವೆ. ಪುರಸಭೆಯ ಎದುರಿಗೆ 1857 ರ ದಂಗೆಯ ಬಾಬಾಸಾಹೇಬನ ಎದೆಮಟ್ಟದ ಆಧುನಿಕ ಪ್ರತಿಮೆ ಇದೆ.
ಮಲಪ್ರಭಾ ನದಿಯ ನೀರಾವರಿಯಿಂದಾಗಿ ಇಲ್ಲಿನ ರೈತರು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ನರಗುಂದ ತನ್ನ ಹತ್ತಿ ಬೆಳೆಗೆ ಪ್ರಸಿದ್ಧವಾಗಿದೆ.
ತಾಲ್ಲೂಕಿನ ಉತ್ತರ ಪಶ್ಚಿಮಗಳಲ್ಲಿ ಅನುಕ್ರಮವಾಗಿ ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳೂ ಪೂರ್ವದಲ್ಲಿ ರೋಣ ತಾಲ್ಲೂಕೂ ದಕ್ಷಿಣದಲ್ಲಿ ನವಲಗುಂದ ತಾಲ್ಲೂಕೂ ಇದೆ. ಈ ತಾಲ್ಲೂಕಿನ ಹೋಬಳಿಗಳು ಕೊಣ್ಣೂರು ಮತ್ತು ನರಗುಂದ. ಇಲ್ಲಿ 35 ಗ್ರಾಮಗಳೂ ನರಗುಂದ ಪಟ್ಟಣವೂ ಇದೆ. ವಿಸ್ತೀರ್ಣ 436 ಚ.ಕಿಮೀ. ಜನಸಂಖ್ಯೆ 92,644 (2001). ನರಗುಂದ ಮತ್ತು ಚಿಕ್ಕ ನರಗುಂದ ಬೆಟ್ಟಗಳನ್ನು ಬಿಟ್ಟರೆ ತಾಲ್ಲೂಕಿನ ಉಳಿದ ಭಾಗ ಸಾಮಾನ್ಯವಾಗಿ ಮೈದಾನ. ತಾಲ್ಲೂಕಿನ ಈಶಾನ್ಯದಲ್ಲಿ ಬಿಜಾಪುರ ಧಾರವಾಡ ಜಿಲ್ಲೆಗಳ ಗಡಿಯಾಗಿ ಮಲಪ್ರಭಾ ನದಿ ಹರಿಯುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 560 ಮಿಮೀ. ಜೋಳ, ಹತ್ತಿ, ಗೋದಿ, ಎಣ್ಣೆಬೀಜಗಳು ಮತ್ತು ಬೇಳೆಕಾಳುಗಳು ಬೆಳೆಯುತ್ತವೆ. ತರಕಾರಿ ಮತ್ತು ತೋಟದ ಬೆಳೆಗಳೂ ಉಂಟು.
ನರಗುಂದ ಪಟ್ಟಣದ ಜನಸಂಖ್ಯೆ 32,548 (2001). ಇದು ತಾಲ್ಲೂಕಿನ ಆಡಳಿತ ಕೇಂದ್ರ, ಧಾರವಾಡ ನಗರಕ್ಕೆ ಈಶಾನ್ಯದಲ್ಲಿ ಸುಮಾರು 50 ಕಿಮೀ. ಮತ್ತು ನವಲಗುಂದದಿಂದ ಉತ್ತರಕ್ಕೆ ಸುಮಾರು 19 ಕಿಮೀ. ದೂರದಲ್ಲಿ ಇದೆ. ಇದು ಹತ್ತಿ, ಸೇಂಗಾ, ಧಾನ್ಯ, ಕಾಳು ಮುಂತಾದವುಗಳ ವ್ಯಾಪಾರಕೇಂದ್ರ. ಸಿರ್ಸಿ, ಹುಬ್ಬಳ್ಳಿ ಮುಂತಾದ ಸ್ಥಳಗಳಿಗೆ ಇಲ್ಲಿಂದ ರಸ್ತೆಗಳಿವೆ.
.
ಇತಿಹಾಸ
[ಬದಲಾಯಿಸಿ]ಮಧ್ಯಕಾಲೀನ ಕಾಲದಲ್ಲಿ ನರಗುಂದವು ದಕ್ಷಿಣಾಪಥದ ಪ್ರಮುಖ ಆಡಳಿತ ಘಟಕವಾದ ಬೆಳ್ವೊಲ-೩೦೦ (Belvola-300) ಪ್ರಾಂತ್ಯದ ಭಾಗವಾಗಿತ್ತು. ಈ ಪ್ರದೇಶವು ತನ್ನ ಫಲವತ್ತಾದ ಭೂಮಿಯಿಂದಾಗಿ ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ನಡುವಿನ ಸಂಘರ್ಷದ ಕೇಂದ್ರವಾಗಿತ್ತು.
- ಶೈಕ್ಷಣಿಕ ಕೇಂದ್ರ (ಅಗ್ರಹಾರ): ಚಾಲುಕ್ಯರ ಕಾಲದಲ್ಲಿ ನರಗುಂದವು ಕೇವಲ ಕೋಟೆಯಾಗಿರದೆ, ಉನ್ನತ ಶಿಕ್ಷಣದ ಕೇಂದ್ರವಾದ ಅಗ್ರಹಾರವಾಗಿತ್ತು. ಇಲ್ಲಿನ ೨೨೦ ಮಹಾಜನರು ವೇದ, ಶಾಸ್ತ್ರ ಮತ್ತು ಕಲೆಗಳ ಪೋಷಕರಾಗಿದ್ದರು. ಶಾಸನಗಳ ಪ್ರಕಾರ, ಈ ಮಹಾಜನರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವ ಸ್ವಾಯತ್ತ ಅಧಿಕಾರ ಹೊಂದಿದ್ದರು.[೧]
- ವಾಸ್ತುಶಿಲ್ಪ: ನರಗುಂದದ ಶಂಕರಲಿಂಗ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನಗಳು ಚಾಲುಕ್ಯರ ವಾಸ್ತುಶಿಲ್ಪ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಇವು ೧೧ನೇ ಶತಮಾನದ ಸಾಂಸ್ಕೃತಿಕ ಉತ್ತುಂಗದ ಸಾಕ್ಷಿಗಳಾಗಿವೆ.
- ವಿಜಯನಗರ ಮತ್ತು ಆದಿಲ್ ಶಾಹಿ ಕಾಲ: ಚಾಲುಕ್ಯರ ನಂತರ, ಈ ಪ್ರದೇಶವು ವಿಜಯನಗರ ಸಾಮ್ರಾಜ್ಯ ಮತ್ತು ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಅಧೀನಕ್ಕೆ ಬಂದಿತು. ಈ ಕಾಲದಲ್ಲಿ ನರಗುಂದದ ಕೋಟೆಯು ರಕ್ಷಣಾತ್ಮಕವಾಗಿ ಮತ್ತಷ್ಟು ಬಲಗೊಂಡಿತು.[೨]
- ಮರಾಠರ ಪ್ರಭಾವ: ೧೬೭೪ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಈ ಕೋಟೆಯನ್ನು ವಶಪಡಿಸಿಕೊಂಡು ಪುನರ್ನಿರ್ಮಿಸಿದರು. ಇದು ಅವರ 'ಸ್ವರಾಜ್ಯ'ದ ದಕ್ಷಿಣದ ಗಡಿಗಳನ್ನು ರಕ್ಷಿಸುವ ಪ್ರಮುಖ ಆಯಕಟ್ಟಿನ ಸ್ಥಳವಾಗಿತ್ತು.[೩]
- ನರಗುಂದದ ಮುತ್ತಿಗೆ (೧೭೮೫): ಟಿಪ್ಪು ಸುಲ್ತಾನನು ನರಗುಂದವನ್ನು ಮುತ್ತಿಗೆ ಹಾಕಿದಾಗ ನಡೆದ ಸಂಘರ್ಷವು ಮರಾಠರಿಗೂ ಮತ್ತು ಮೈಸೂರಿಗೂ ನಡುವೆ ದೊಡ್ಡ ಯುದ್ಧಕ್ಕೆ ಕಾರಣವಾಯಿತು. ಭಾವೆ ಮನೆತನದವರ ಮೇಲಿನ ಟಿಪ್ಪುವಿನ ದೌರ್ಜನ್ಯವು ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ದಾಖಲಾಗಿದೆ.[೪]
- ಬಾಬಾಸಾಹೇಬ ಮತ್ತು ೧೮೫೭: ನರಗುಂದದ ಕೊನೆಯ ಸಂಸ್ಥಾನಿಕ ಬಾಬಾಸಾಹೇಬ (ಭಾಸ್ಕರರಾವ್ ಭಾವೆ), ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ (Doctrine of Lapse) ನೀತಿಯನ್ನು ವಿರೋಧಿಸಿ ಬಂಡೆದ್ದರು. ಅವರು ಬ್ರಿಟಿಷ್ ಅಧಿಕಾರಿ 'ಮಾನ್ಸನ್'ನನ್ನು ಹತ್ಯೆಗೈದು ಶೌರ್ಯ ಮೆರೆದರು. ೧೮೫೮ರಲ್ಲಿ ಬ್ರಿಟಿಷರು ಬಾಬಾಸಾಹೇಬನನ್ನು ಮಣಿಸಿ ಕೋಟೆಯನ್ನು ಕೆಡವಿದರು.[೫]
ಕೊಣ್ಣೂರು
[ಬದಲಾಯಿಸಿ]ಇದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿದೇ ನರಗುಂದದಿಂದ 20 km ದೂರದಲ್ಲಿದೆ ಹುಬ್ಬಳ್ಳಿಯಿಂದ ಬಾಗಲಕೋಟಗೆ ಹೋಗುವ ಊರುಗಳಲ್ಲಿ ಇದು ಒಂದಾಗಿದೆ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ.
ಇದು ಮಲಪ್ರಭಾ ನದಿಯ ದಡದಲ್ಲಿದೆ ಮಲಪ್ರಭಾ ನದಿ ಇಲ್ಲಿನ ಜನರ ಜೀವ ನದಿಯಾಗಿದೆ ಇಲ್ಲಿನ ಭೌಗೋಳಿಕತೆ ನೋಡಿದಾಗ ಇದು ಉತ್ತರ ಕರ್ನಾಟಕ ಭಾಗವಾಗಿದೆ ಇದು ಬಯಲು ಸೀಮೆ ಪ್ರದೇಶವಾಗಿದೆ ಇಲ್ಲಿ ಫಲವತ್ತಾದ ಕಪ್ಪು ಮಣ್ಣು ಭೂಮಿಯನ್ನು ಕಾಣಬಹುದು ಆದ್ದರಿಂದ ಇಲ್ಲಿನ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ ಇಲ್ಲಿನ ಪ್ರಮುಖ ಬೆಳೆ ಎಂದರೆ ಹತ್ತಿ ಗೋಧಿ ಸೂರ್ಯಕಾಂತಿ ಜೋಳ ಪ್ರಮುಖವಾಗಿವೆ.
ಕೊಣ್ಣೂರಿನಲ್ಲಿ ರಾಷ್ಟ್ರಕೂಟರ ಕಾಲದಲ್ಲಿನ ಪರಮೇಶ್ವರ್ ದೇವಾಲಯ ಪ್ರಸಿದ್ಧವಾಗಿದೆ ಮತ್ತು ಪೆರು ಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ ಎಲ್ಲಿಂದ ವಿವಿಧ ಜಿಲ್ಲೆ ರಾಜ್ಯಗಳಿಗೆ ರವಾನೆಯಾಗುತ್ತವೆ ಶೈಕ್ಷಣಿಕವಾಗಿ ಮುಂದುವರೆದ ಊರಾಗಿದೆ ಇಲ್ಲಿ 4 ಪ್ರಾಥಮಿಕ 2 ಹೈಸ್ಕೂಲ್ ಮತ್ತು 1 PU ಕಾಲೇಜು 1 ITI ಕಾಲೇಜ್ ಇದೆ.
ಸುತ್ತಮುತ್ತಲಿನ ಊರುಗಳೆಂದರೆ ರಾಮದುರ್ಗ ನರಗುಂದ ಶಿರೋಳ ಕುಳಗೇರಿ ಊರುಗಳನ್ನು ಕಾಣಬಹುದು, ಈ ರೀತಿಯಾಗಿ ನರಗುಂದ ತಾಲ್ಲೂಕುನಲ್ಲಿ ತನ್ನದೆಯಾದ ವೈವಿಧ್ಯತೆಯಿಂದ ಹೆಸರುವಾಸಿಯಾಗಿದೆ
ದೇವಸ್ಥಾನಗಳು
[ಬದಲಾಯಿಸಿ]ನರಗುಂದದಲ್ಲಿ ಶಂಕರಲಿಂಗ, ಮಹಾಬಲೇಶ್ವರ ಮತ್ತು ಹನುಮಂತ ದೇವಾಲಯಗಳಿವೆ.
ನರಗುಂದ ಬೆಟ್ಟ ಸುಮಾರು 215 ಮೀ. ಎತ್ತರವಾಗಿದೆ. ಸುಮಾರು 5 ಕಿಮೀ. ಉತ್ತರಕ್ಕಿರುವ ಚಿಕ್ಕನರಗುಂದ ಬೆಟ್ಟ ಸುಮಾರು 61 ಮೀ. ಎತ್ತರವಾಗಿದೆ. ನರಗುಂದ ಬೆಟ್ಟದ ಮೇಲೆ ಜೀರ್ಣವಾದ ಕೋಟೆಯೊಂದಿದೆ.
ನರಗುಂದದಲ್ಲಿ ಮೊದಲಿದ್ದ ಮಣ್ಣಿನ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜ 1674 ವಶಪಡಿಸಿಕೊಂಡು `ಮಹಿಫತ್ ಗಡ' ಎಂಬ ಕಲ್ಲಿನ ಕೋಟೆ ಕಟ್ಟಿಸಿದ. ಅಲ್ಲಿ ಅಂಬಾಭವಾನಿಯ ದೇವಾಲಯ ನಿರ್ಮಿಸಿದ. ಶಿವಾಜಿಯ ಗುರು ಸಮರ್ಥ ರಾಮದಾಸರು ಇಲ್ಲಿ ರಾಮಮಂದಿರ, ಹನುಮ ಮಂದಿರ ಸ್ಥಾಪಿಸಿದರು. 1720ರಲ್ಲಿ ತಿರುಪತಿ ಮಾದರಿಯ ವೆಂಕಟೇಶ್ವರನ ದೇವಾಲಯ ನಿರ್ಮಿಸಿ ಜಾತ್ರೆ, ಉತ್ಸವ ಪ್ರಾರಂಭಿಸಿದರು. ಈಗಲೂ ಜಾತಿ, ಧರ್ಮ, ಪಂಥಗಳ ಭೇದವನ್ನು ಮೀರಿ ಇಲ್ಲಿ ಉತ್ಸವ ಜರಗುತ್ತದೆ
೧೯೮೦ ರ ರೈತ ಬಂಡಾಯ
[ಬದಲಾಯಿಸಿ]೧೯೮೦ ರ ಜುಲೈ ೨೧ ರಂದು ನರಗುಂದದ ತಹಸಿಲ್ದಾರರ ಕಚೇರಿಯನ್ನು ಪ್ರವೇಶಿಸಲು ಎಂಟರಿಂದ ಹತ್ತು ಸಾವಿರ ಸಂಖ್ಯೆಯಲ್ಲಿದ್ದ ರೈತರು ಪ್ರಯತ್ನಿಸಿದರು. ಆಗ ಆದ ಲಾಠೀಚಾರ್ಜ್ ಮತ್ತು ಗೋಲಿಬಾರ್ ನಲ್ಲಿ ಮೂವರು ರೈತರು ಬಲಿಯಾದರು. ರೊಚ್ಚಿಗೆದ್ದ ರೈತ ಸಮೂಹವು ಮೂರು ಜನ ಪೋಲೀಸರನ್ನು ಸಾಯಿಸಿತು. ನಂತರದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಜನ ರೈತರು ಪ್ರಾಣ ಕಳೆದುಕೊಂಡರು. ಸಾವಿರಾರು ಜನ ಗಾಯಗೊಂಡರು. ಪರಿಣಾಮವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಆಡಳಿತಕ್ಕೆ ಬಂದಿತು. [೬][೭]
ಹೊರಗಿನ ಕೊಂಡಿಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
- ↑ Campbell, James M., ed. (1884). Gazetteer of the Bombay Presidency: Dharwar. Vol. 22. Bombay: Government Central Press. pp. 773–775.
- ↑ Kamath, Suryanath U. (2001). A Concise History of Karnataka: From Pre-historic Times to the Present. Bangalore: Jupiter books. pp. 150–152.
- ↑ Sardesai, Govind Sakharam (1946). New History of the Marathas: Shivaji and his line (1600-1707). Vol. 1. Bombay: Phoenix Publications. p. 245.
- ↑ Hasan, Mohibbul (2005). History of Tipu Sultan. Aakar Books. pp. 98–101. ISBN 978-8187879572.
- ↑ Kamath, Suryanath U. (2001). A Concise History of Karnataka: From Pre-historic Times to the Present. Bangalore: Jupiter books. pp. 278–279.
- ↑ "ನರಗುಂದ ಬಂಡಾಯ, ರೈತಸಂಘದ ಉದಯ (Naragunda Rebellion, Rise of Raitha Sangha)". Vartha Bharati. 20 July 2023.
- ↑ "When Protesting Farmers Brought Down a Government". The Citizen. 6 January 2021.