ಚರ್ಚೆಪುಟ:ವೇದ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾನ್ಯ ವಾಗಿ ವಾಡಿಕೆಯಲ್ಲಿ ಪಂಚಮ ವೇದ ಎನನುತ್ತಾರೆ. ಹಾಗಾದರೆ ಈ ಐದನೇಯ ವೇದ ಯಾವುದು?

ಪ್ರತಿಕ್ರಿಯೆ[ಬದಲಾಯಿಸಿ]

ಪಂಚಮ ವೇದವೆಂದು ವೇದವ್ಯಾಸ ರಚಿತ ಮಹಾಭಾರತಕ್ಕೆ ಹೇಳುತ್ತಾರೆ. ಇತಿಹಾಸಗಳೆಂದು ಕರೆಯಲ್ಪಡುವ ರಾಮಾಯಣ ಮಹಾಭಾರತಗಳೆರಡನ್ನೂ ಸೇರಿಸಿ ಕೆಲವರು ಪಂಚಮವೇದಗಳೆಂದು ಹೇಳುತ್ತಾರೆ. ಕನ್ನಡ ವರ ಕವಿ ಕುಮಾರವ್ಯಾಸನು ಮಹಾಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸುವಾಗ ಪೀಠಿಕೆಯಲ್ಲಿ "ಪಂಚಮ ಶ್ರುತಿಯನೊರೆವೆನು" ಎಂದಿದ್ದಾನೆ. (ಶ್ರುತಿಯನು+ಒರೆವೆನು ;ಶ್ರೀಮತ್ + ಆಗಮ ಕುಲ-ವೇದಗಳು)

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ |
ಹಲವು ಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ||
ನೆಲೆಗೆ=ಭೂಮಿಗೆ ಭೂಮಿಯ ಜನರಿಗೆ
ಶ್ರುತಿ ಎಂದರೆ ವೇದ (ಶೃತಿ ಅಲ್ಲ; ಶೃತಿ ಎಂದರೆ ರಾಗದಲ್ಲಿ ಒಂದು ಮಟ್ಟ ಧ್ವನಿಯ ಎತ್ತರ ಸ, ರಿ ಗ, ಮ, ಇವುಮಟ್ಟ)

Bschandrasgr ೧೮:೪೪, ೩ ಫೆಬ್ರುವರಿ ೨೦೧೪ (UTC) -ಸದಸ್ಯ:Bschandrasgr/ಪರಿಚಯ -ಬಿ.ಎಸ್.ಚಂದ್ರಶೇಖರBschandrasgr

ಮರುತ್- ಮಾರತ[ಬದಲಾಯಿಸಿ]

  • ಮರುತ್ ದೇವತೆ ಮಾರುತ ಮರುತ್‍ನಿಂದ ಹುಟ್ಟಿದ ಗಾಳಿ - ಸಪ್ತ ಮಾರುತಗಳು. ತಿದ್ದಿರುವುದು ತಪ್ಪು - ಮೊದಲಿದನ್ನು ಉಳಿಸಿ. Bschandrasgr (ಚರ್ಚೆ) ೧೪:೧೧, ೮ ನವೆಂಬರ್ ೨೦೧೯ (UTC)