ಚರ್ಚೆಪುಟ:ಭಗವದ್ಗೀತಾ ತಾತ್ಪರ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವದ್ಗೀತಾ ತಾತ್ಪರ್ಯ ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. : Bschandrasgr ೧೭:೪೪, ೧೦ ಜೂನ್ ೨೦೧೨ (UTC)

ಚೆನ್ನಾಗಿದೆ.. ಮುಂದುವರೆಸಿ ~ ಹರೀಶ / ಚರ್ಚೆ / ಕಾಣಿಕೆಗಳು ೧೯:೪೪, ೨೧ ಜೂನ್ ೨೦೧೨ (UTC)

೭-೭-೨೦೧೨.

ಭಗವದ್ಗೀತಾ ತಾತ್ಪರ್ಯ[ಬದಲಾಯಿಸಿ]


ಭಗವದ್ಗೀತಾ ತಾತ್ಪರ್ಯ'ಲೇಖನ ಮುಕ್ತಾಯವಾಗಿದೆ . ೧೮ ನೆಯ ಅಧ್ಯಾಯ ಉದ್ದವಾಯಿತು. ಅನಿವಾರ್ಯ ೭೮ ಶ್ಲೋಕಗಳು. ಸಲಹೆಗಳಿದ್ದರೆ ಕೊಡಿ. :Bschandrasgr ೨೦:೨೯, ೫ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ , ಸದಸ್ಯ:Bschandrasgr/ಪರಿಚಯ ಸಾಗರ ಶಿವಮೊಗ್ಗ ಜಿಲ್ಲೆ .

*ಪ್ರಾಪಂಚಿಕ ಧರ್ಮ[ಬದಲಾಯಿಸಿ]


  • ಕೃಷ್ಣನು ಯುದ್ಧವನ್ನು ಮಾಡಲು ಪ್ರೇರಿಪಿಸುವುದು ನ್ಯಾಯವೇ? ಎಂಬ ಪ್ರಶ್ನೆ ಇದೆ :-
  • ಕೃಷ್ಣನು ಸಂಧಾನಕ್ಕೆ ಕೌರವರ ಸಭೆಗೆ ಬಂದಾಗ ಯುದ್ಧದಿಂದ ಆಗುವ ಪರಿಣಾಮಗಳನ್ನು ವಿವರಿಸಿದ್ದಾನೆ. ಆದರೆ ಕೌರವನು ಶಾಂತಿ ಸಂಧಾನಕ್ಕೆ ಒಪ್ಪಲಿಲ್ಲ. ಯುದ್ಧವನ್ನು ಕೌರವನೇ ಆಯ್ಕೆ ಮಾಡಿಕೊಂಡಿದ್ದು.
  • ೧.ಧರ್ಮ ಮತ್ತು ನ್ಯಾಯವನ್ನು ಎತ್ತಿ ಹಿಡಿಯಲು ತೀರಾ ಅಗತ್ಯವಾದರೆ ಯುದ್ಧ ಮಾಡುವುದು ಕ್ಷತ್ರಿಯರಿಗೆ ಕರ್ತವ್ಯ ಮತ್ತು ಧರ್ಮ; ಪಾಂಡವರು ರಾಜ್ಯಕ್ಕಿಂತ ನ್ಯಾಯಕ್ಕಾಗಿ ಯುದ್ಧ ಮಾಡುತ್ತಿದ್ದಾರೆ. ಐದು ಗ್ರಾಮವನ್ನಾದರೂ ಕೊಡು ಎಂದು ಕೇಳಿದರೂ ಕೊಡಲು ಕೌರವನು ಒಪ್ಪಲಿಲ್ಲ. ಹಾಗಾಗಿ ಯುದ್ಧ ಅನಿವಾರ್ಯವಾಯಿತು.- ಇದನ್ನು ಸೇರಿಸಿದೆ ; Bschandrasgr ೦೮:೫೧, ೨೮ ಜನವರಿ ೨೦೧೩ (UTC) ಬಿ.ಎಸ್ ಚಂದ್ರಶೇಖರ.ಸಾಗರ.-ಸದಸ್ಯ:Bschandrasgr/ಪರಿಚಯಹೆಚ್ಚಿನ ವಿವರಕ್ಕೆ.

ಜಾತಿ ವ್ಯವಸ್ಥೆ ಪ್ರತಿಪಾದಿಸುವ ಭಗವದ್ಗೀತೆ[ಬದಲಾಯಿಸಿ]

  • (ಪ್ರೊ.ಕೆ.ಎಸ್. ಭಗವಾನ್,ಮೈಸೂರು)
  • (Wed, 24/12/2014 ಪ್ರಜಾವಾಣಿ)
ಕೇಂದ್ರ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ‘ಭಗವ­ದ್ಗೀತೆ’ ಭಾರತದ ರಾಷ್ಟ್ರೀಯ ಧರ್ಮಗ್ರಂಥವಾಗ­ಬೇಕು ಎಂದು ಹೇಳಿದ್ದರಿಂದ ಚರ್ಚೆ ಶುರು­ವಾಗಿದೆ. ಸಂಸತ್ತಿನಲ್ಲಿ ಆಡಳಿತೇತರ ಪಕ್ಷಗಳಿಗೆ ಸೇರಿದ ಕೆಲವು ಸಂಸದರು ಈ ಹೇಳಿಕೆ­ಯನ್ನು ಖಂಡಿಸಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಗೀತೆಯಲ್ಲಿ ಏನಿದೆ? ಅದು ಇರುವುದು ಯಾರ ಪರ ಅಥವಾ ವಿರುದ್ಧ? ಎಂಬುದರ ಕಡೆ ಯಾರೂ ಗಮನ ಹರಿಸಿಲ್ಲ.
ಕ್ರಾಂತಿಕಾರಕ ಬುದ್ಧಧಮ್ಮ ಉಚ್ಛ್ರಾಯ ಸ್ಥಿತಿಗೇರಿ ಆ ಹೊತ್ತಿಗೆ ಇಳಿಮುಖವಾಗುತ್ತಿತ್ತು. ಬುದ್ಧ ಸೈದ್ಧಾಂತಿಕವಾಗಿ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ. ಇದನ್ನು ಸಹಿಸದ ವೈದಿಕ ಮತಾಂಧತೆ ಸಂಘವನ್ನು ನಾಶ ಮಾಡಲು ಸನ್ನಾಹ ನಡೆಸುತ್ತಿತ್ತು. ಪ್ರತಿ ಕ್ರಾಂತಿಗೆ ಪ್ರಣಾ­ಳಿಕೆ­ಯಾಗಿ ಭಗವದ್ಗೀತೆ ಸೃಷ್ಟಿಯಾಯಿತು. ಇದಕ್ಕೆ ಪುರಾವೆಯಾಗಿ ನಿರ್ವಾಣ ಪದ ಗೀತೆಯಲ್ಲಿ ಪದೇ ಪದೇ (೨.೭೨ ಮತ್ತು ೫.೨೪–-೨೬.) ಬಳಕೆ­ಯಾ­ಗಿರುವುದನ್ನು ಕಾಣಬಹುದು. ಗೀತೆಗಿಂತ ಹಿಂದಿನ ಬ್ರಾಹ್ಮಣ ಮತ ಗ್ರಂಥಗಳಲ್ಲಿ ನಿರ್ವಾಣ ಶಬ್ದ ಪ್ರಯೋಗವಾಗಿರುವುದು ಕಾಣುವುದಿಲ್ಲ. (ಈ ವಿಷಯವಾಗಿ ಬಲ್ಲವರು ತಿಳಿಸಿದರೆ ಕೃತಜ್ಞತೆ­ಯಿಂದ ಈ ಅಭಿಪ್ರಾಯ ತಿದ್ದಿಕೊಳ್ಳುತ್ತೇನೆ.) ಬುದ್ಧಧಮ್ಮದಲ್ಲಿ ‘ನಿರ್ವಾಣ’, ಆಧ್ಯಾತ್ಮಿಕ ಅನು­ಭವದ ಅತ್ಯುನ್ನತ ಸ್ಥಿತಿ ಎಂಬುದು ಗೊತ್ತಿರುವ ವಿಚಾರ.
ಭಗವದ್ಗೀತೆ ಹೇಳುವವನು ಕೃಷ್ಣ, ಕೇಳುವವನು ಅರ್ಜುನ, ಬರೆಯುವವನು ವ್ಯಾಸ. - ಮೂವರೂ ಅಬ್ರಾಹ್ಮಣರು. ಕೃಷ್ಣ ಗೊಲ್ಲ (ಯಾದವ), ಅರ್ಜುನ ಕ್ಷತ್ರಿಯ, ವ್ಯಾಸ ಬೆಸ್ತ (ಮೀನು­ಗಾರ್ತಿಯ ಮಗ).
ಮೇಲುನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುವುದು ಸಹಜ. ಆದರೆ ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಏಕೆ ಪ್ರಬಲವಾಗಿ ಪ್ರತಿಪಾದಿ­ಸುತ್ತದೆ ಎಂದರೆ ಅದಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಭಗ­ವ­ದ್ಗೀತೆ ಪ್ರಾರಂಭ­ವಾಗುವುದೇ ಕುಲಕ್ಷಯ (೧.೩೮–-೪೦ ಜಾತಿ ನಾಶ), ವರ್ಣಸಂಕರ (೧.೪೧–-೪೪ ಜಾತಿ ಬೆರಕೆ)ಗಳನ್ನು ತಡೆಗಟ್ಟುವುದ­ಕ್ಕಾಗಿ. ಕುಲಕ್ಷಯ ಮತ್ತು ವರ್ಣ­ಸಂಕರಗಳನ್ನು ತಡೆಯಬೇಕೆಂದು ಅರ್ಜುನ ‘ನಾನು ಯುದ್ಧ ಮಾಡುವುದಿಲ್ಲ’ ಎಂದು ಕೃಷ್ಣನಿಗೆ ಹೇಳಿ ಬಿಲ್ಲು­ಬಾಣಗಳನ್ನು ರಥದಲ್ಲಿ ಹಾಕಿ ಕುಳಿತು­ಕೊಳ್ಳುತ್ತಾನೆ.
ಗೀತೆ ಬಹಳ ಪ್ರಖ್ಯಾತವಾಗಲು ಮಹಾತ್ಮ ಗಾಂಧೀಜಿ ಅವರ ಪ್ರಚಾರ ಕಾರಣ ಎನ್ನಬೇಕು. ‘ಕರ್ಮ ಮಾಡುವುದಕ್ಕೆ ನಿನಗೆ ಅಧಿಕಾರ, ಫಲಾ­ಪೇಕ್ಷೆ ಇಲ್ಲದೆ ಕೆಲಸ ಮಾಡು ’ಎಂದು ಕೃಷ್ಣ ಹೇಳು­ತ್ತಾನೆ. ಆಳು ಜೀತ ಮಾಡುತ್ತಾನೆ, ಲಾಭವೆಲ್ಲ ಯಜ­ಮಾನನಿಗೇ ಹೋಗುತ್ತದೆ. ದುಡಿಮೆ­ಗಾರ­ನಿಗೆ ದುಡಿದದ್ದೇ ಲಾಭ! ಹೀಗಾಗಿ ಕೃಷ್ಣನದು ಜೀತ­ಗಾರಿಕೆ ಮುಂದುವರಿಸುವ ಮಾತು. ಗೀತೆ ಶ್ರಮ­ಜೀವಿಗಳನ್ನು ತುಳಿಯುವ ಸಂದೇಶ ಸಾರುತ್ತಿದೆ.
ಲೋಕದಲ್ಲಿರುವ ಅನ್ಯಾಯ, ಅಸಮಾನತೆ, ಸುಲಿಗೆ, ಶೋಷಣೆ, ದಾಸ್ಯ, ಪಾರತಂತ್ರ್ಯ, ದಬ್ಬಾ­ಳಿಕೆ, ಬಡತನ, ಮೋಸ, ಮೇಲು ಕೀಳು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದವುಗಳನ್ನೆಲ್ಲ ಹೋಗ­ಲಾಡಿಸುವುದು ಹೇಗೆ? ಇದಕ್ಕೆ ಗೀತೆಯಲ್ಲಿ ಉತ್ತರವಿಲ್ಲ.
‘ಮನುಸ್ಮೃತಿ’ಗಿಂತ (ಕ್ರಿ.ಪೂ.೧೮೫) ಭಗ­ವದ್ಗೀತೆ (ಕ್ರಿ.ಶ. ಮೂರನೆಯ ಶತಮಾನ) ಹೆಚ್ಚು ಭಯಂಕರವಾದ ಗ್ರಂಥ. ಮನುಸ್ಮೃತಿ ಒರಟಾ­ಯಿತು ಎಂದೇನೋ ಮೃದು ಮಧುರವಾದ ಸಂಗೀ­ತಮಯ ಕಾವ್ಯಭಾಷೆಯಲ್ಲಿ ಭಗವದ್ಗೀತೆ­ಯನ್ನು ಬರೆಯಲಾಗಿದೆ. ಓದುಗರನ್ನು ಆಕರ್ಷಿ­­ಸಲು ಮಾಡಿರುವ ಉಪಾಯ ಇದು. ಗೀತೆಯದು ಬಹಳ ಸುಂದರವಾದ ಭಾಷೆ. ಆದರೆ ಅದೆಲ್ಲ ಅಪಾ­ಯಕಾರಿಯಾಗಿರುವುದನ್ನು ಅರಿಯ­ಬೇಕಾ­ಗಿದೆ.
ಭಗವದ್ಗೀತೆಯಲ್ಲಿರುವ ‘ವಿಶ್ವರೂಪ ದರ್ಶನ’­­­ದಲ್ಲಿ ನೀಡಿರುವ ವಿವರಗಳು ಭಾರತಕ್ಕೆ ಸೀಮಿತ­ಗೊಂಡಿವೆ. ವಿದೇಶಗಳ ಹೆಸರುಗಳು ಇಲ್ಲಿ ಬಂದಿಲ್ಲ. ಆದ್ದರಿಂದ ಇದನ್ನು ವಿಶ್ವರೂಪ ದರ್ಶನ ಎನ್ನದೆ ‘ಸಂಕ್ಷಿಪ್ತ ಭಾರತ ದರ್ಶನ’ ಎಂದು ಕರೆ­ಯುವುದು ಸೂಕ್ತ. ಗೀತಕಾರನ ಭೌಗೋಳಿಕ ಜ್ಞಾನ­ವೆಲ್ಲ ಕೇವಲ ಭರತಖಂಡಕ್ಕೆ ಸೀಮಿತ­ವಾಗಿದೆ. ಗೀತೆ ರಚನೆಯಾಗುವುದಕ್ಕಿಂತ ಮುನ್ನವೇ ಚಾಲ್ತಿ­ಯಲ್ಲಿ ಇದ್ದ ಎಲ್ಲಾ ತತ್ವ­ಶಾಖೆಗಳ ಪುನರು­ಚ್ಚಾರ ಗೀತೆಯಲ್ಲಿ ಬಂದಿದೆ. ಗೀತೆಯ ಒಂದೊಂದು ಅಧ್ಯಾಯದಲ್ಲಿ ಒಂದೊಂದು ತತ್ವ­ವನ್ನು ಹೇಳಲಾಗಿದೆ. ಒಂದು ಅಧ್ಯಾಯಕ್ಕೂ ಇನ್ನೊಂದು ಅಧ್ಯಾಯಕ್ಕೂ ಸಂಬಂಧವಿಲ್ಲ. ಭಗವ­ದ್ಗೀತೆಯಲ್ಲಿ ಹೊಸ ಬೆಳಕಿಲ್ಲ. ಅದರಲ್ಲಿ ಜಾತಿ­ವ್ಯವಸ್ಥೆಯ ಸಮರ್ಥನೆ ತುಂಬಿದೆ. ಗೀತೆ ಹಿಂದೂ ದರ್ಶನಗಳ ಒಂದು ಕೋಷ್ಟಕ ಅಥವಾ ಅಡಕ ಅಷ್ಟೆ.
ಕೃಷ್ಣ ತಪಸ್ಸು ಮಾಡಿ ನಿಜವಾದ ಆಧ್ಯಾತ್ಮ ಜ್ಞಾನ ಗಳಿಸಿದ್ದ ಎಂಬುದಕ್ಕೆ ಗೀತೆಯಲ್ಲಿ ವಿವರ­ಗಳಿಲ್ಲ. ಬುದ್ಧ ತನ್ನ ‘ಸುತ್ತ’ಗಳಲ್ಲಿ, ಪರಮ­ಹಂಸರ ‘ಶ್ರೀರಾಮಕೃಷ್ಣ ವಚನವೇದ’ದಲ್ಲಿ, ವಿವೇಕಾ­ನಂದರು ತಮ್ಮ ಬರಹಗಳಲ್ಲಿ ಸಾಕ್ಷಾ­ತ್ಕಾರ ಪಡೆಯಲು ನಡೆಸಿದ ಶ್ರಮಗಳನ್ನು ವಿವರಿಸಿ­ದ್ದಾರೆ. ಕೃಷ್ಣನಿಗೆ ಇಂಥ ಅನುಭವ ಆಗಿಲ್ಲ. ಅವನು ಕಿರಿಯವನಾಗಿದ್ದಾಗ ಗೋಪಿಕೆಯರ ಸಂಗಡ­ದಲ್ಲಿದ್ದ. ತಾರುಣ್ಯದಲ್ಲಿ ಅಷ್ಟ ಮಹಿಷಿ­ಯರು ಮತ್ತು ಹದಿನಾರು ಸಾವಿರ ಹೆಂಡತಿಯರ ಜೊತೆಗಿದ್ದ. ಕೊನೆಗೆ ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ರಥ ನಡೆಸಿದ. ಇಂಥವನು ಹೇಗೆ ಅಧ್ಯಾತ್ಮ ಜೀವಿಯಾಗುತ್ತಾನೆ? ಅಧ್ಯಾತ್ಮ ಜೀವನಕ್ಕೆ ಪರಿ­ಶುದ್ಧತೆ, ಕಾಮನಿಗ್ರಹ ಅತ್ಯಂತ ಅವಶ್ಯಕ. ಇದಾವುದೂ ಇಲ್ಲದ ಕೃಷ್ಣ ಜ್ಞಾನಿ ಅಲ್ಲ. ದೇವ­ರಾಗಲು ಕೃಷ್ಣನಿಗೆ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ಕೃಷ್ಣನಿಗೆ ಪಾವಿತ್ರ್ಯವಿಲ್ಲ, ಇಂದ್ರಿಯ ನಿಗ್ರಹ ಇಲ್ಲ, ಪರಮ ಜ್ಞಾನವಿಲ್ಲ.
ಸ್ವಧರ್ಮವನ್ನು ವ್ಯಾಖ್ಯಾನಕಾರರು ಮನಸೋ ಇಚ್ಛೆ ವಿವರಿಸಿದ್ದಾರೆ. ಈ ಪದವನ್ನು ಗೀತೆಯ ಸಂದರ್ಭದಲ್ಲೇ ಅರ್ಥ ಮಾಡಿಕೊಳ್ಳುವುದು ಒಳ್ಳೆ­ಯದು. ಗೀತೆಯ ಚೌಕಟ್ಟಿನಲ್ಲಿ ಸ್ವಧರ್ಮ ಎಂದರೆ ಜಾತಿ ಎಂದೇ ಅರ್ಥ ನಿರ್ಣಯವಾಗುತ್ತದೆ.
‘ಯುದ್ಧವು ಕ್ಷತ್ರಿಯನಿಗೆ ಸ್ವಧರ್ಮ ಎಂದು ತಿಳಿದ ನಂತರವೂ ನೀನು ಯುದ್ಧ ಮಾಡದಿದ್ದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಹಾಳು ಮಾಡಿ­ಕೊಂಡು ಪಾಪವನ್ನು ಪಡೆಯುತ್ತೀಯೆ. ಆದ್ದ­ರಿಂದ ನೀನು ಯುದ್ಧ ಮಾಡು ’ಎಂದು ಅರ್ಜುನ­ನಿಗೆ ಕೃಷ್ಣ ಪುಸಲಾಯಿಸುತ್ತಾನೆ. ಹಾಗಾಗಿ ಸ್ವ­ಧರ್ಮ ಎಂದರೆ ಕ್ಷತ್ರಿಯ ಜಾತಿ, ಮತ್ತು ಪ್ರತಿ­ಯೊಬ್ಬನ ಜಾತಿ ಎಂದು ಅರ್ಥ ಬರುತ್ತದೆ. ಕ್ಷತ್ರಿಯ ಧರ್ಮದ ಪ್ರಕಾರ ಕೊಲ್ಲಲು ಪ್ರೇರೇಪಿ­ಸುವ ಕೃಷ್ಣನನ್ನು ದೇವರು ಮಾಡಲಾಗಿದೆ. ಅಪರಾಧ ಕಾನೂನು ಸಂಹಿತೆ ದೃಷ್ಟಿಯಲ್ಲಿ ದುಷ್ಟ ಕೃತ್ಯ ಪ್ರೇರಕ ಕೃಷ್ಣ ತಪ್ಪಿತಸ್ಥ, ಅಪರಾಧಿ. ಇಂಥ ‘ಭಗ­ವದ್ಗೀತೆ’ಯನ್ನು ರಾಷ್ಟ್ರದ ಧರ್ಮ ಗ್ರಂಥ ಎಂದು ಕೇಂದ್ರ ಸರ್ಕಾರ ಘೋಷಿಸಿದರೆ ಹತ್ಯೆ ಮಾಡುವ ಮನಸ್ಸುಳ್ಳ ಪಕ್ಷ ಮತ್ತು ಸಂಘಟನೆ­ಗಳಿಗೆ ಹಾಗೂ ಜನರಿಗೆ ರಾಜ ರಹದಾರಿ ನೀಡಿ­ದಂತಾಗುತ್ತದೆ. ಯಾವ ದೃಷ್ಟಿಯಿಂದ ನೋಡಿ­ದರೂ ಭಗವ­ದ್ಗೀತೆ ರಾಷ್ಟ್ರೀಯ ಧರ್ಮ ಗ್ರಂಥ­ವಾಗಲು ಲಾಯ­ಕ್ಕಾಗಿಲ್ಲ.
ವಿಜ್ಞಾನ ಚಂದ್ರಲೋಕ, ಮಂಗಳ ಲೋಕಗಳಿಗೆ ಹೋಗಿ ಬಂದಿದೆ. ಧರ್ಮ ಗ್ರಂಥಗಳು ಹೇಳುವ ಸ್ವರ್ಗ, ಕೈಲಾಸ, ವೈಕುಂಠ ಅಲ್ಲಿ ಕಂಡು ಬಂದಿಲ್ಲ. ಮುಕ್ತಿ, ಸದ್ಗತಿ ಮುಂತಾದ ಮಾತುಗಳನ್ನು ಎಲ್ಲಾ ಮತ­ಗ್ರಂಥಗಳು ಹೇಳುತ್ತವೆ. ಗೀತೆಯೂ ಅದನ್ನೇ ಉಚ್ಚರಿಸುತ್ತದೆ. ವಾಸ್ತವವಾಗಿ ಇರುವುದು ಇದೊಂದೇ ಲೋಕ; ಇಲ್ಲಿ ನಾವೆಲ್ಲರೂ ಸುಖ, ಶಾಂತಿ, ಸಾಮರಸ್ಯದಿಂದ ಬದುಕುವುದನ್ನು ರೂಢಿ­ಸಿ­­ಕೊಳ್ಳಬೇಕು ಎಂದು ಭಾವಿಸುವುದು ವಿವೇಕ­ಯುತ.
ಕೃಷ್ಣ ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ­ರಿಂದ ಅವನನ್ನು ದೇವರನ್ನಾಗಿ ಮಾಡಲಾಗಿದೆ. ಇಲ್ಲದಿದ್ದರೆ ಅವನನ್ನೂ ಜಾತಿ­ಯನ್ನು ನಿರಾಕರಿಸಿದ ಬುದ್ಧನನ್ನು ತಿರಸ್ಕರಿಸಿದಂತೆ ತಿರಸ್ಕರಿಸುತ್ತಿದ್ದರು. ಮನುಷ್ಯರೆಲ್ಲ ಒಂದೇ ಎಂದು ಬೋಧಿಸುವ ಧರ್ಮಗ್ರಂಥ ‘ಧಮ್ಮಪದ ’ ಒಂದೇ.
ಭಗವದ್ಗೀತೆ ಪರಿಪೂರ್ಣ ಗ್ರಂಥ ಅಲ್ಲ. ಭಗ­ವದ್ಗೀತೆ ಸಂಪ್ರದಾಯವನ್ನು ಸ್ಥಿರೀಕರಿಸುವ ಪ್ರಗತಿ ವಿರೋಧಿ ಗ್ರಂಥ. ಭಗವದ್ಗೀತೆ ಶೇ. ೯೮ ಮಂದಿಗೆ ಸಂಪೂರ್ಣ ಆಘಾತಕಾರಿಯಾಗಿದೆ. ಉಳಿದ ಶೇ. ೨ರಷ್ಟು ಜನರಿಗೆ ಮಾತ್ರ ಅನುಕೂಲ­ವಾಗಿ-­ರುವುದು. ಇವರು ಪುಣ್ಯಯೋನಿಜರಾದುದರಿಂದ ಏನು ಕೇಡು ಮಾಡಿದರೂ ಅದು ತಪ್ಪಲ್ಲ! ಪಾಪ­ಯೋನಿಜರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಏಳಿಗೆ ಇಲ್ಲ! ಎಂಥ ಭಯಂಕರ ತತ್ವಜ್ಞಾನ ಕೃಷ್ಣನದು! ಇಂಥ ಭಗವದ್ಗೀತೆ ಹೇಗೆ ಪವಿತ್ರ?

ಜಾತಿ ವ್ಯವಸ್ಥೆ- ಶ್ರೀಕೃಷ್ಣ­[ಬದಲಾಯಿಸಿ]

ಕೆ.ಎಸ್‌. ಭಗವಾನರ ಭಗವದ್ಗೀತೆಯ ಬಗೆಗಿನ ವ್ಯಾಖ್ಯಾನ (ಸಂಗತ, ಡಿ. 24) ಓದಿ ಬೇಸರವಾಯಿತು. ಜಾತಿ ವ್ಯವಸ್ಥೆಗೂ ಶ್ರೀಕೃಷ್ಣ­ನಿಗೂ ಎಲ್ಲಿಯ ಸಂಬಂಧ? ಜಗದ್‌ಯಂತ್ರ ನಡೆಯಬೇಕಾದರೆ ಪ್ರತಿ ಜೀವಿಯೂ ತನ್ನ ತನ್ನ ಪಾಲಿನ ಕೆಲಸಗಳನ್ನು ನಿರ್ವಹಿಸಬೇಕು. ಈ ಜ್ಞಾನವೇ ಭಗವದ್ಗೀತೆಯಲ್ಲಿರುವುದು. ಕೃಷ್ಣ, ರಥ ನಡೆಸುವುದೂ, ಗೊಲ್ಲನಾಗಿರುವುದೂ, ಅದರ ಹಿಂದಿನ ಸಾರ, ಅವರ ಜೀವನದ ದರ್ಶನವೇ ಭಗವಾನರಿಗೆ ಆಗಿಲ್ಲ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ.

ಪೂರ್ವಗ್ರಹವಿಲ್ಲದೇ ಭಗವದ್ಗೀತೆ­ಯನ್ನು ಅಧ್ಯಯನ ಮಾಡಿದರೆ, ಈ ರೀತಿಯ ಅನಿಸಿಕೆಗಳನ್ನು ಮೀರಿದ ವಿಶಾಲ ಅರ್ಥಗಳನ್ನೂ, ಅರಿವನ್ನೂ ಪಡೆಯಬಹುದು. ಸ್ವಾಮಿ ಚಿನ್ಮಯಾ­ನಂದರು ಗೀತಾಜ್ಞಾನ ಯಜ್ಞಗಳನ್ನು ಮಾಡಿ, ಅದರೊಳಗಿನ ಅಮೃತವನ್ನು ಎಲ್ಲೆಡೆ ಹರಡಿ­ದ್ದಾರೆ. ಶ್ರೀಕೃಷ್ಣ ಬೋಧಿಸಿದ ಗೀತೆಗೆ ಜಾತೀಯತೆ, ದಾಸ್ಯ ಹೀಗೆ ಏನೇನೋ ಸಲ್ಲದ ಸಂಗತಿಗಳ ಬಣ್ಣ ಮೆತ್ತಬೇಡಿ. ಬುದ್ಧನ ‘ದಮ್ಮಪದ’ವೂ ನಮಗೆ ಪವಿತ್ರ. ಕ್ರಿಸ್ತನ ಪ್ರೇಮವಾಣಿಯೂ ಪವಿತ್ರ. ಯಾವುದೇ ಧರ್ಮದ ಒಳ್ಳೆಯ ಮಾತುಗಳು ನಮಗೆ ಪ್ರಿಯ.(ಲಕ್ಷ್ಮೀ ಚಂದ್ರಮೋಹನ್‌ಬೆಂಗಳೂರು-Fri, 09/01/2015 ಪ್ರಜಾವಾಣಿ)-

ಸಮತ್ವ ಸಂಬಂಧ ಸಾರುವ ಗೀತೆ[ಬದಲಾಯಿಸಿ]

  • ಸಿ.ಪಿ.ಕೆ.ಮೈಸೂರು
  • (Tue,20/01/2015-ಪ್ರಜಾವಾಣಿ)
  • ಭಗವದ್ಗೀತೆ ಭರತ­ಖಂಡದ (ಏಕೈಕ) ಧರ್ಮ­­ಗ್ರಂಥವಾಗಬೇಕೆಂಬ ಹೇಳಿಕೆ­ಯಲ್ಲಿ ತಪ್ಪೇನಿದೆ? ಹಾಗೆಂ­ದರೆ, ಕುರಾನ್‌, ಬೈಬಲ್‌ ಮುಂತಾದವುಗಳಿಗೂ ಆ ಸ್ಥಾನ ಸಿಗ­ಬೇಕೆಂಬ ವಾದ ಏಳ­ಬಹುದು, ನಿಜ. ಆದರೆ ನಾವು ನೆನ­ಪಿಡಬೇಕು: ಅವು­ಗಳಿಗೆ ಬೇರೆ ಬೇರೆ ದೇಶ­ಗ­ಳಿವೆ, ಗೀತೆಗಿಲ್ಲ! (ಅನ್ಯದೇಶಗಳಿಗೂ ಗೀತಾ ವಿಚಾರ­ಗಳು ಅನುಸರಣೀಯ).
ಆದ್ದ­ರಿಂದ, ಗೀತೆ ಭಾರತಕ್ಕೆ ಅತ್ಯಗತ್ಯವಾದ, ಶ್ರೇಯ­ಸ್ಕರ­ವಾದ ಗ್ರಂಥ; ಹಿಂದೂಧರ್ಮದ–ವೈದಿಕ ಧರ್ಮವಲ್ಲ– ಪ್ರಮಾಣಗ್ರಂಥ. ‘ಸಮಸ್ತ ವೇದಾರ್ಥ ಸಾರ­ಸಂಗ್ರಹ­ಭೂತಂ’ ಎಂಬುದು ಗೀತೆಯನ್ನು ಕುರಿತ ಶಂಕರಭಗವತ್ಪಾದರ ಉಕ್ತಿ; ಅದಕ್ಕೇ ಪೂರಕವಾಗಿ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಉಪನಿಷತ್ತುಗಳ ವ್ಯಾಖ್ಯಾನ ಗೀತೆ; ಉಪನಿಷತ್ತುಗಳು ಭಾರತದ ಬೈಬಲ್‌’.
ಗೀತೆಯ ಬಗೆಗಿನ ಕೆಲವು ಆರೋಪಗಳನ್ನು ಗಮನಿಸಬಹುದು: ಅದು ಯುದ್ಧವನ್ನು– ಹಿಂಸೆ­ಯನ್ನು– ಬೋಧಿಸುತ್ತದೆ ಎಂಬುದೊಂದು. ವಾಸ್ತವ­ವಾಗಿ, ಯುದ್ಧ ವಿರೋಧಿ ನೆಲೆಯಲ್ಲೆ ಗೀತೆಯ ಅಸ್ತಿತ್ವ; ಪ್ರಥಮಾಧ್ಯಾಯವನ್ನು ಬಿಟ್ಟರೆ ಗೀತೆ­ಯಲ್ಲಿ ಮತ್ತೆಲ್ಲಿಯೂ ಯುದ್ಧ ಪ್ರಸಕ್ತಿಯಿಲ್ಲ! ಗೀತಾ ಪ್ರಾರಂಭವೆ ಕುತೂಹಲಕರ: ‘ಧರ್ಮ­ಕ್ಷೇತ್ರೇ ಕುರುಕ್ಷೇತ್ರೇ...’ ಮಹಾಭಾರತ ಮಧ್ಯ­ದಲ್ಲಿ, ‘ಧರ್ಮಕ್ಷೇತ್ರ’ವೂ ಆದ ‘ಕುರು’ಕ್ಷೇತ್ರದಲ್ಲಿ ಕರ್ತವ್ಯ­ಬೋಧೆ ಮಾಡುವುದು ಗೀತೆಯ ಮುಖ್ಯೋದ್ದೇಶ (‘ಗೀತಾ ಸುಗೀತಾ ಕರ್ತವ್ಯಾ’). ಕುರುಕ್ಷೇತ್ರವೊಂದು ಪ್ರತಿಮೆ; ಯುದ್ಧ, ಜೀವನಸಂಗ್ರಾಮದ ಸಂಕೇತ.
ರಣರಂಗ ಹೊರಗಿ­ನದು ಮಾತ್ರವಲ್ಲ, ಒಳಗಿ­ನದೂ ಹೌದು: ಅಂತರಂಗ ವೈರಿಗಳನ್ನು ಇಂದ್ರಿಯಗಳನ್ನು ನಿರ್ದಯವಾಗಿ ದಮನ ಮಾಡ­ಬೇಕು ಎಂತಲೇ, ‘ಯುದ್ಧಾಯ ಯುಜ್ಯಸ್ವ’ (ಯುದ್ಧಕ್ಕೆ ಸಿದ್ಧ­ನಾಗು), ‘ಜಹಿಶತ್ರುಂ’ (ಶತ್ರುವನ್ನು ಕೊಲ್ಲು) ಎನ್ನುತ್ತಾನೆ ಕೃಷ್ಣ, ಅರ್ಜುನ­ನಿಗೆ. ಮತ್ತೊಂದು ಮುಖ್ಯಾಂಶ: ‘ಕೌರವ­ರನ್ನು ನಾನಾ­ಗಲೆ ಕೊಂದಿ­ದ್ದೇನೆ; ನೀನು ನೆಪ ಮಾತ್ರವಾಗಿರು’ (ನಿಮಿತ್ತ ಮಾತ್ರಂ ಭವ ಸವ್ಯ­ಸಾಚಿನ್‌) ಎಂಬುದೂ ಕೃಷ್ಣನ ಮಾತು. ಎಂದಮೇಲೆ, ಕೊಲೆಯ ಪ್ರಶ್ನೆ ಎಲ್ಲಿ ಬಂತು?
ತನಗೆ ಪ್ರಿಯರಾದವರ ಬಗೆಗೆ ಹೇಳುವಾಗ ಕೃಷ್ಣನ ಬಾಯಲ್ಲಿ ಬರುತ್ತದೆ, ಈ ಕಲ್ಯಾಣ ಗುಣಗಳ ಪಟ್ಟಿ:
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ
ನಿರ್ಮಮೋ ನಿರಹಂಕಾರಃ ಸಮದುಃಖ ಸುಖಃ ಕ್ಷಮೀ...(12
13)
(ಯಾವ ಜೀವಿಗಳನ್ನೂ ದ್ವೇಷಿಸದವನು, ಮಿತ್ರಭಾವದಿಂದ ಕೂಡಿರುವವನು, ಕರುಣೆ­ಯು­ಳ್ಳವನು, ಮಮಕಾರ ಅಹಂಕಾರ­ಗಳಿಲ್ಲದವನು, ಸುಖ­ದುಃಖಗಳಲ್ಲಿ ಸಮಾನನಾಗಿರುವವನು, ಕ್ಷಮಾಶೀಲನು....). ಈ ಗುಣಗಳು ಯಾರಿಗೆ ಬೇಡ? ಎಲ್ಲ ಧರ್ಮಗಳ ತಿರುಳೂ ಇದೇ ತಾನೆ?
ಇನ್ನು, ವರ್ಣವ್ಯವಸ್ಥೆಯನ್ನು ಕುರಿತ ಗೀತೆಯ ವಿಚಾರ­ಗಳು ಬಹುಮುಖ್ಯ. ಗೀತೆ ಜಾತಿ ವ್ಯವಸ್ಥೆ­ಯನ್ನು ಸಮರ್ಥಿಸುತ್ತದೆ ಎಂಬುದು ದೊಡ್ಡ ಆರೋಪ.
ನಿಜವೆ? ‘ವರ್ಣ’ ಬೇರೆ, ಈಗ ಹುಟ್ಟಿ­ನಿಂದ ನಿರ್ಧರಿತವಾಗುವ ‘ಜಾತಿ’ ಬೇರೆ ಎಂಬು­ದನ್ನು ಲಕ್ಷಿಸಬೇಕು. ಗೀತೆಯ ಈ ಉಕ್ತಿ ಪ್ರಸಿದ್ಧ ಮತ್ತು ಬಹುಚರ್ಚಿತ: ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ (ಗುಣ, ಕರ್ಮ–ವೃತ್ತಿ–ಗಳಿಗೆ ಅನುಗುಣವಾಗಿ ನಾನು ನಾಲ್ಕು ವರ್ಣಗಳನ್ನು ಸೃಜಿಸಿದೆ). ‘ಜಗ­ದ್ಗುರು’ ಕೃಷ್ಣನ ‘ವರ್ಣ’ ವ್ಯವಸ್ಥೆ ಇಡೀ ಜಗತ್ತಿಗೆ ಅನ್ವಯಿಸು­ವಂಥದು; ಕೇವಲ ಭಾರತ­ಕ್ಕಲ್ಲ ಎಂಬುದನ್ನು ಗಮ­ನಿಸ­ಬೇಕು.
ಇಲ್ಲಿನ ನಾಲ್ಕು ‘ವರ್ಣ’­ಗಳಿಗೆ ಸಂವಾದಿ­ಯಾದ ನಾಲ್ಕು ಸಮು­ದಾಯ­ಗಳು ಪ್ರಪಂಚ­ದಲ್ಲಿ ಎಲ್ಲೆಡೆ ಉಂಟ­ಲ್ಲವೆ? (ಹಾಗೆ ಕೃಷ್ಣನ ಏರ್ಪಾಟು ಭಾರತಕ್ಕೆ ಸೀಮಿತ­ವಾಗಿದ್ದಲ್ಲಿ, ಅವನು, ಕುವೆಂಪು ಒಮ್ಮೆ ನನ್ನೊಡನೆ ಮಾತ­ನಾ­ಡುತ್ತ ಹೇಳಿದಂತೆ, ವಿಶ್ವಮಾನವ­ನಾ­ಗದೆ ಒಬ್ಬ ಕ್ಷುದ್ರ ಜಾತಿ ಮಾನವನಾಗುತ್ತಾನೆ. ವಸ್ತುತಃ ಅವ­ನದು ‘ವಿಶ್ವರೂಪ!’ ಅಂತೂ ಜನ್ಮ ಮೂಲ­ವಾದ ಜಾತಿಪದ್ಧತಿ ಗೀತೆಯ ಆಶಯಕ್ಕೆ ಹೊರಗು!
‘ಸ್ವಧರ್ಮೇ ನಿಧನಂ ಶ್ರೇಯಃ....’ ಎಂಬ ಗೀತೋಕ್ತಿ­­ಯಲ್ಲಿ ಬರುವ ‘ಸ್ವಧರ್ಮ’ ಎಂಬು­ದನ್ನು ‘ಜಾತಿ’ ಎಂದು ಹಲವರು ಅರ್ಥೈಸಿ­ರು­ವುದು ಅನುಚಿತ. ‘ಸ್ವಧರ್ಮ’ ಎಂಬುದು ಆಯಾ ವ್ಯಕ್ತಿಯ ಮನೋಧರ್ಮಕ್ಕೆ, ಸಹಜ ಪ್ರವೃ­ತ್ತಿಗೆ ಸಂಬಂಧಿಸಿದ್ದು. (ನಿದರ್ಶನಕ್ಕೆ, ಬರ­ವಣಿಗೆ ಸಾಹಿತಿಯ ಸ್ವಧರ್ಮ. ಅದನ್ನವನು ಬಿಟ್ಟು, ತರಕಾರಿ ಮಾರಾಟಕ್ಕೆ ಹೊರಟರೆ, ಇತ್ತ ಬರವಣಿಗೆಯೂ ಹಾಳು, ಅತ್ತ ಮಾರಾಟವೂ ಅಧ್ವಾನ!).
‘ಕರ್ಮಣ್ಯೇವಾಧಿಕಾರಸ್ತೆ, ಮಾಫಲೇಷು ಕದಾಚನ’ (ಕರ್ಮದಲ್ಲಿ ನಿನಗೆ ಅಧಿಕಾರ ಎಂದರೆ ಕರ್ತವ್ಯ, ಫಲದಲ್ಲಲ್ಲ) ಎಂಬ ಗೀತಾಬೋಧೆಗೂ ವಿಪ­ರೀತಾರ್ಥ ಕಲ್ಪಿಸಲಾಗಿದೆ. ವ್ಯಕ್ತಿ ನಿರ್ಲಿಪ್ತ­ವಾಗಿ, ಸಮರ್ಪಕವಾಗಿ ಕರ್ಮ­ವೆಸಗಿದರೆ ಫಲ ಸಿಕ್ಕಿಯೇ ಸಿಗುತ್ತದೆ; ಫಲವನ್ನು ದೃಷ್ಟಿಯಲ್ಲಿಟ್ಟು­ಕೊಂಡೆ ಕೆಲಸ ಮಾಡಿದರೆ, ಕೆಲಸವೂ ಕೆಡಬಹುದು, ಫಲವೂ ಸಿಗದಿರಬಹುದು! ‘ಸಮದರ್ಶನ’ (ಸಮರ ದರ್ಶನವಲ್ಲ!) ಗೀತೋ­ಪದೇಶದ ಒಂದು ಮಹಾವೈಶಿಷ್ಟ್ಯ; ಪ್ರಜಾ­­­ಪ್ರಭುತ್ವದ ಒಂದು ಪ್ರಶಸ್ತ ತತ್ತ್ವವಾದ ಸಮಾ­ನತೆ ಇಲ್ಲಿ ಉಕ್ತವಾಗಿರುವುದು ಬಹು ಗಮನಾರ್ಹ:
ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನೀ,
ಶುನಿ ಚೈವ ಶ್ವಪಾಕೇ ಚ ಪಂಡಿತಾಸ್ಸಮದರ್ಶಿನಃ (5
18)
(ವಿದ್ಯಾ ವಿನಯಗಳಿಂದ ಕೂಡಿದವನು, ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿಮಾಂಸವನ್ನು ತಿನ್ನುವ ಚಂಡಾಲ– ಇವರೆ­ಲ್ಲರಲ್ಲಿಯೂ ಜ್ಞಾನಿಗಳು ಸಮದರ್ಶಿಗಳಾಗಿ­ರು­ವರು) ಇಲ್ಲಿ ಅದ್ವೈತದ ನಿಲುವಿದೆ ಮಾತ್ರವಲ್ಲ, ವರ್ಣತಾರತಮ್ಯರಹಿತವಾದ ಸಾಮಾಜಿಕ ಸಮಾನತೆಯ ಪ್ರತಿಪಾದನೆಯೂ ಇದೆ.
‘ಸಮ್ಮೋಹಂ ಸರ್ವಭೂತೇಷು’ (ಎಲ್ಲ ಜೀವಿ­ಗ­ಳಲ್ಲೂ ನಾನು ಸಮದೃಷ್ಟಿಯುಳ್ಳವನು) ಎಂದೂ ಹೇಳುತ್ತಾನೆ, ಗೀತಾಚಾರ್ಯ. ಸಮತ್ವ­ಸಂಬಂಧ­ವಾದ ಇನ್ನೂ ಅನೇಕ ಶ್ಲೋಕಗಳಿವೆ, ಗೀತೆಯಲ್ಲಿ. ಕೃಷ್ಣ ಸ್ತ್ರೀಯರ ಬಗೆಗೆ ಗೀತೆಯಲ್ಲಿ ನೇರವಾಗಿ ಏನನ್ನೂ ಹೇಳದಿದ್ದರೂ, ವೈಯಕ್ತಿಕ ಜೀವನದಲ್ಲಿ ಅವನೊಬ್ಬ ಸ್ತ್ರೀವಾದಿ (ಸ್ತ್ರೀಲೋಲ ಎಂಬುದು ಅಪಪ್ರಥೆ!). ಅವನು ದ್ರೌಪದಿಯ ಮಾನ ಕಾಪಾಡಿ­ದವನು; ನರಕಾಸುರನನ್ನು ವಧಿಸಿ, ಅವನ ಸೆರೆಯಿಂದ ಸಾವಿರಾರು ಸ್ತ್ರೀಯರನ್ನು ಪಾರುಮಾಡಿದವನು.
ಆಧುನಿಕ ಯುಗದಲ್ಲಿ ವಿದ್ಯೆ, ಜ್ಞಾನಗಳು ಎಲ್ಲ­ರಿಗೂ ಅಮೂಲ್ಯ, ಅನಿವಾರ್ಯ. ಅದನ್ನು ಕುರಿತ ಗೀತೋಕ್ತಿ ಸುಪರಿಚಿತ: ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ (ಜ್ಞಾನದಷ್ಟು ಪವಿತ್ರ­ವಾದುದು ಲೋಕದಲ್ಲಿ ಯಾವುದೂ ಇಲ್ಲ). ಪ್ರಣಿಪಾತ (ನಮಸ್ಕಾರ), ಸೇವೆಗಳ ಜೊತೆಗೆ ‘ಪರಿಪ್ರಶ್ನೆ’ಯನ್ನೂ ವಿಧಿಸಿದೆ, ಗೀತೆ. ಪರಿಪ್ರಶ್ನೆ­ಯಿಂದ ಜ್ಞಾನ ಲಭಿಸುತ್ತದೆ ಮತ್ತು ಬೆಳೆಯು­ತ್ತದೆ. ಇಲ್ಲಿ ವೈಚಾರಿಕತೆಗೆ, ‘ನಿರಂಕುಶಮತಿ’ಗೆ ಗೀತೆ ಕೊಟ್ಟಿರುವ ಪ್ರಾಧಾನ್ಯ ಸುಸ್ಪಷ್ಟ.
ವಿಚಾರ ಸ್ವಾತಂತ್ರ್ಯ, ಕಾರ್ಯಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳು; ಅವು ಕೃಷ್ಣನ ಈ ಕಡೆಯ ಮಾತಿನಲ್ಲಿ ಸುವಿದಿತ: ‘ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ, ಹೇಗೆ ಇಚ್ಛಿಸುವೆಯೋ ಹಾಗೆ ಮಾಡು’. (ನಾವಿಂದು ಗೌರವಿಸುವ ಕುವೆಂಪು ಕೂಡ ಒಂದೆಡೆ ಹೇಳುವುದು ಇದಕ್ಕೇ ಪೂರಕವಾಗಿದೆ: ‘ತಾಳ್ಮೆ­ಯಿಂದ ಆಲಿಸಿ, ವಿವೇಕದಿಂದ ಭಾವಿಸಿ, ವಿಮರ್ಶ ಬುದ್ಧಿಯಿಂದ ಪರೀಕ್ಷಿಸಿ, ಒಪ್ಪಿಗೆ­ಯಾದನ್ನು ಸ್ವೀಕರಿಸಿ...’). ಇದನ್ನೆಲ್ಲ ‘ವಿಚಾರ­ವಾದಿ’ ಗಳೆನಿಸಿದ ‘ಸಂಶಯಾತ್ಮ’ರು ಮನಗಾಣ ಬೇಕಲ್ಲವೆ?
ಪ್ರಪಂಚದ ಮತ್ತಾವ ಧರ್ಮಗ್ರಂಥದಲ್ಲೂ ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಎಲ್ಲಿಯೂ ಬಲಾತ್ಕಾರ ಸಲ್ಲದು; ಅದು ಭಯೋತ್ಪಾದನೆಯ ಚಿಹ್ನೆ! ಕೃಷ್ಣ ‘ಭಯಂಕರ’ನಲ್ಲ; ದಯಾಕರ. ಹೀಗೆ ಗೀತೋಪದೇಶ ಅನೇಕ ಮುಖಗಳಲ್ಲಿ ಈ ಹೊತ್ತಿಗೂ ಅತ್ಯಂತ ಪ್ರಸ್ತುತವಾಗಿದೆ; ಗ್ರಾಹ್ಯ ಮತ್ತು ತಾರಕವಾಗಿದೆ. ಕಣ್ತೆರೆದು­ನೋಡ­ಬೇಕು; ಕೂದಲು ಸೀಳುವುದು ನಿರರ್ಥಕ. ಗೀತಾ ಸಂದೇಶ­ವನ್ನು ಒಪ್ಪುವುದು ಅಥವಾ ಹಟ ಹಿಡಿದು, ಬಿಡುವುದು ಅವರವರಿಗೆ ಸೇರಿದ್ದು: ಕೃಷ್ಣನ ಆಕ್ಷೇಪವಿಲ್ಲ! ‘ನ ಮೇ ಭಕ್ತಃ ಪ್ರಣಶ್ಯತಿ’ (ನನ್ನ ಭಕ್ತನಿಗೆ ನಾಶವಿಲ್ಲ) ಎಂಬುದು ಭಗವದ್ಗೀತೆಯ ಭರವಸೆ; ಯುಗಯಾತ್ರಿಯಾಗಿ ಮೊಳಗಿರತಕ್ಕದ್ದು.
‘ಕೃಷ್ಣಂ ವಂದೇ ಜಗದ್ಗುರುಂ’.

(Bschandrasgr ೧೫:೩೮, ೨೦ ಜನವರಿ ೨೦೧೫ (UTC)/ಸದಸ್ಯ:Bschandrasgrಚರ್ಚೆ