ಕ್ಯಾಂಡಿಯ ದಂತ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಗೌತಮ ಬುದ್ಧನ 'ದಂತ'ವನ್ನು ದೇವಾಲಯದ ಗರ್ಭಗೃಹದಲ್ಲಿ ಕರಿಡಿಕೆಯೊಂದರಲ್ಲಿ ಜೋಪಾನವಾಗೀಡಲಾಗಿದೆ. ಇದು ಮುತ್ತು, ರತ್ನ ಹಾಗೂ ವಜ್ರಗಳಿಂದ ಅಲಂಕೃತಗೊಂಡಿದ್ದು ಗಮನ ಸೆಳೆಯುತ್ತಿದೆ. ದಲದಾ ಮಾಲಿಗಾವಾ. ಅಂದರೆ ದಂತ ದೇವಾಲಯ ಎಂದು ಅರ್ಥ. ಗೌತಮ ಬುದ್ಧನ ಪವಿತ್ರ ದಂತ ಇರುವ ಈ ದೇವಾಲಯ ಇಂದು ಜಗತ್ತಿನಾದ್ಯಂತ ಭಿಕ್ಕುಗಳನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶ್ರಿಲಂಕಾದ ಕ್ಯಾಂಡಿ ಸರೋವರದ ಬಳಿಯಲ್ಲಿ ನಡೇದು ಬೃಹದಾಕಾರದ ಕಟ್ಟದಗಳಿರುವ ಸಮುಚ್ಛಯವನ್ನು ತಲುಪಿದಾಗ ಮಾರ್ಗದರ್ಶಿಯೊಬ್ಬರು ದಿಢೀರನೆ ಪ್ರತ್ಯಕ್ಷನಾಗಿ 'ಇದೇ ದಲದ ಮಾಲಿಗಾವಾ' ಎಂದು ಶ್ವೇತ ಭವನವೊಂದರತ್ತ ಕೈ ತೋರಿಸಿದ. ಹೊರನೋಟಕ್ಕೆ ಇದು ಯಾವುದೇ ತೋಟ ಇರಬೇಕು ಎಂದು ಅನ್ನಿಸಿದ್ದು ಸುಳ್ಳಲ್ಲ. ಒಳಗೆ ಹೋದ ಬಳಿಕವೇ ಈ ಬೌದ್ಧ ಮಂದಿರದ ಮಹತ್ವ ಗೊತ್ತಾಗುತ್ತದೆ. ಹಿನ್ನೆಲೆ: ಈ ದಂತದ ಕಥೆಯೂ 'ದಂತ ಕಥೆ' ಯಂತೆಯೆ ಇದೆ! ಗೌತಮ ಬುದ್ಧ ಕುಸಿನಾರದಲ್ಲಿ (ಉತ್ತರ ಪ್ರದೇಶದ ಕುಶಾನಗರ) ತನ್ನ ದೇಹತ್ಯಾಗ ಮಾಡಿದ ನಂತರ, ಆತನ ಇಚ್ಛೆಯಂತೆ ಎಡಬದಿಯ ದವಡೆ ಹಲ್ಲನ್ನು ಅಂದಿನ ಕಳಿಂಗ ಚಕ್ರವರ್ತಿಗೆ ಕೊಡುಗೆಯಾಗಿ ನೀಡಲಾಯಿತಂತೆ. ಅದನ್ನು ಪ್ರೀತಿ, ಗೌರವದಿಂದ ಸ್ವೀಕರಿಸಿದ ಚಕ್ರವರ್ತಿ ಆ ದಂತಕಾಗಿ ಹೊಸದೊಂದು ದೇವಾಲಯವನ್ನೆ ನಿರ್ಮಿಸಿದನಂತೆ. 'ಥಿಘನಿಖಿಯಾ' ಎಂಬ ಗ್ರಂಥದಲ್ಲಿ ಈ ಬಗ್ಗೆ ಉಲ್ಲೇಖವಿದೆ ಎನ್ನಲಾಗುತ್ತದೆ. ಉಲೇಖದ ಪ್ರಕಾರ, ಕ್ರಿ.ಶ.೩೦೧-೩೨೮ ಅವದಿಯಲ್ಲಿ ಕಳಿಂಗ ಸಂಸ್ಥಾನವನು ಆಳುತ್ತಿದ್ದ ಚಕ್ರವರ್ತಿ ಗುಹಸೈವನ ಮಗಳು ಹೀಮಾಮಾಲಿ ಹಾಗೂ ಆಕೆಯ ಪತಿ, ಗೌತಮ ಬುದ್ದನ ದಂತವನ್ನು ಮೋದಿಂದ ಸಮುದ್ರ ಮಾರ್ಗಾವಾಗಿ ಸಾಗಿಸಿ 'ಸೆಂಕಿದಾಗಲ'ಕ್ಕೆ ಕೊಂಡೊಯ್ದೂ ಚಕ್ರವವರ್ತಿ ಕೀರ್ತಿಶ್ರೀ ಮೇಘಗಿರಿ ವಿಹಾರದಲ್ಲಿ ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇದು ಸಿಂಹಳೀಯರ ಪವತ್ರ ಪೂಜನೀಯ ವಸ್ತುವಾಗಿ ಉಳಿದಿದೆ.ಕ್ರಿ.ಶ. ೧೨೫೯೫ ರಲ್ಲಿ ಸೆಂಖದಾಗಲವನ್ನು ಆಳುತ್ತಿದ್ದ ಸಿಂಹಳ ವಂಶಸ್ಥರ ಕೊನೆಯ ದೊರೆ ವಿಮಲಧರ್ಮ ಸೂರಿಯು ಈ ದಂತದ ಪವಿತ್ರ್ಯ, ಹಾಗೂ ಮಹತ್ವವನ್ನು ಅರಿತು ಬೆಟ್ಟಗುಡ್ಡಗಳಿಂದ ಸುತ್ತುವರೆದ 'ಸಂಖದಾಗಲ'ದ ಹೃದಯ ಭಾಗದಲ್ಲಿಯೇ ಮಂದಿರವೊಂದನ್ನು ನಿರ್ಮಿಸಿದ. ದೇವೇಂದ್ರ ಮಾಲಚೂರಿನ್ ಎಂಬ ಕಲಾಕಾರನ ಕಲಾವಂತಿಕೆಯಿಂದ ನಿರ್ಮಾಣವಾದ ಈ ಮಂದಿರ ಅಮೋಘ ಕಾಲ ವಿನ್ಯಾಸದಿಂದ ಕೂಡಿದ್ದು ಕೋಟೆಯಂತೆಯೇ ಭದ್ರವಾದ ದೇಗುಲವಾಗಿದೆ. ಶ್ರೀಲಂಕಾ ಸರ್ಕಾರ ದೇಗುಲವನ್ನು ಸುರಕ್ಷಿತ ಸ್ಮಾರಕ ಎಂದು ಘೋಷಿಸಿತು. ಎರಡು ಬಾರಿ ಕ್ರಿ.ಶ.೧೯೮೯ಹಾಗೂ ೧೯೯೮ ರಲ್ಲಿ ಎಲ್ ಟಿ ಟಿ ಇ ಉಗ್ರಗಾಮಿಗಳ ಆಕ್ರಮಣದಿಂದ ಈ ದೇವಾಲಯ ಭಗ್ನಗೊಂಡಿತು. ಈಗ ಜೀರ್ಣೊಧ್ಹಾರಗೊಂಡಿದೆ.

ಮನಮೋಹಕ ಕೆತ್ತನೆ

ನಾವು ಪ್ರವೇಶ ಶುಲ್ಕ ತೆತ್ತು ಪಾವಟಿಗೆಗಳನ್ನು ಏರಿ ಸೇತುವೆ ಮೇಲೆ ನಡೆದು ಮಹಾದ್ವಾರದ ಮೂಲಕ ಮಂದಿರ ಪ್ರವೇಶಿಸಿದೆವು. ದ್ವಾರದ ಇಕ್ಕೆಲಗಳಲ್ಲಿ ಇರುವ ಗಜರಾಜನ ಕೆತ್ತನೆಗಳು ಮನಮೋಹಕವಾಗಿದ್ದು ಇದನ್ನು ಮಕರ ತೋರಣ ಎಂದು ಕರೆಯುತ್ತಾರೆ. ಶ್ವೇತವಸ್ತ್ರ ಧರಿಸಿದ ಭಕ್ತಾಧಿಗಳ ಸಾಲು ನಮ್ಮ ನಡಿಗೆಯನ್ನು ನಿಯಂತ್ರಿಸುತ್ತಿತ್ತು. ನೇರಳೆ ಬಣ್ಣದ ಕಮಲದ ಹೂವು ಹಾಗೂ ದೇವಗಣಗಳು ಹೂವಿನ ಬುಟ್ಟಿಗಳು ಆಕರ್ಷಕವಾಗಿ ಕಂಡವು. ಗೋಡೆಯ ಮೇಲಿನ ಹಾಗೂ ಮೇಲ್ಛಾವಣಿಯಲ್ಲಿನ ಆನೆ, ಕುದುರೆ, ಸಿಂಹ, ಒಂಟೆ ಹಾಗೂ ಕಾಳಾಲುಗಳ ಚಿತ್ರಗಳು ಗಮನ ಸೆಳೆದವು . ಪಾವಟಿಕೆಗಳನ್ನು ಏರಿ ಹಾಗೆಯೇ ನಡೆದು ದೇವಾಲಯದ ಮುಖ ಮಂಟಪ ಪಿಲ್ಲೆ ಮಾಲೀವಾ ತಲುಪಿದೆವು. ಇದನ್ನು ಡಚ್ಚರು ಕ್ರಿ.ಶ.೧೭೬೫ ರಲ್ಲಿ ವಿನ್ಯಾಸ ಮಾಡಿದ್ದರು ಎನ್ನುತ್ತಾರೆ.