ಕೇಳಿ ಕಥೆಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೇಳಿ ಕಥೆಯ
Purpose"ಕಾರ್ಯದಿಂದ ಬರುವ 100% ಲಾಭವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ"
ಪ್ರದೇಶ
Worldwide
Key people
  • ಮುಕುಂದ್ ಸೆಟ್ಲೂರ್
  • ಕಿರಣ್ ಮಂಜುನಾಥ್
  • ನಿತೇಶ್ ಕುಂಟಾಡಿ
  • ಸತೀಶ್ ಗೌಡ
  • ಹರೀಶ್ ಮಲ್ಯ
  • ಪ್ರಮೋದ್ ಪಟಗಾರ್
  • ಮಾನಸ ಭಾರದ್ವಾಜ್
ಅಧಿಕೃತ ಜಾಲತಾಣhttp://www.kelikatheya.com/

ಕೇಳಿ ಕಥೆಯ', ಹಿರಿಯರು ಮತ್ತು ಮಕ್ಕಳಿಗಾಗಿ ಕನ್ನಡದ ಆರು ಸಣ್ಣ ಕಥೆಗಳ ಕಥಾಗುಚ್ಛ

ಕನ್ನಡ ಚಿತ್ರರಂಗ, ನಾಟಕರಂಗ ಮತ್ತು ಸಂಗೀತ ಲೋಕದ ಪ್ರಖ್ಯಾತರು ಈ ಅನನ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಸಣ್ಣ ಕಥೆಗಳಿಗೆ ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ನಾಗಾಭರಣ, ರಕ್ಷಿತ್ ಶೆಟ್ಟಿ, ಪಲ್ಲವಿ ಅರುಣ್ ಮತ್ತು ಕಿಶೋರ್ ದನಿಯಾಗಿದ್ದಾರೆ.

Celebrities recording for Keli Katheya Audio Book

ಮಾಹಿತಿಗಳ ಮಹಾಪೂರ ಹರಿದು ಬರುತ್ತಿರುವ ಈ ಕಾಲದಲ್ಲಿ, ‘ಕೇಳಿ ಕಥೆಯ’ ಆಡಿಯೋ ಪುಸ್ತಕವು ಕನ್ನಡದ ಸಣ್ಣ ಕಥೆಗಳ ಪ್ರಾಮುಖ್ಯತೆ ಮತ್ತು ಸರಳವಾಗಿ ಕಥೆ ಹೇಳುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಮಾಹಿತಿ ತಂತ್ರಜ್ಞಾನ ಕಾಲದ ಪೀಳಿಗೆಯವರ ಜೀವನಶೈಲಿಗೆ ಅನುಕೂಲವಾಗುವಂತೆ ಈ ಕಥೆಗಳನ್ನು ಆಡಿಯೋ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತಿದೆ.

ಎಲ್ಲ ಲೇಖಕರು ಮತ್ತು ಕಥೆಗಳಿಗೆ ದನಿ ನೀಡಿರುವ ಪ್ರಖ್ಯಾತರು ತಮ್ಮ ಸಮಯ ಮತ್ತು ಪರಿಶ್ರಮವನ್ನು ತೊಡಗಿಸಿ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಈ ಕಾರ್ಯದಿಂದ ಬರುವ 100% ಲಾಭವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಾನ ಮನಸ್ಕ ಉದ್ಯೋಗಿಗಳ ಕನಸಿನ ಕೂಸು ಇದು

ಬಾಹ್ಯ ಸಂಪರ್ಕ[ಬದಲಾಯಿಸಿ]

  1. ಕೇಳಿ ಕಥೆಯ ವೆಬ್ಸೈಟ್