ಕಪೂರ್ಥಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಗ‍ತ್‍ಜೀತ್ ಕ್ಲಬ್, ಕಪೂರ್ಥಲಾ
ಜಲಂಧರ್ ಸಮೀಪಿಸುತ್ತಿರುವ ರಸ್ತೆಯ ಕಡೆಯಿಂದ ಕಪೂರ್ಥಲಾ ನಗರದ ಸುತ್ತಲ ದರ್ಶನ

ಕಪೂರ್ಥಲಾ ಭಾರತದ ಪಂಜಾಬ್ ರಾಜ್ಯದಲ್ಲಿರುವ ಒಂದು ನಗರ. ಇದು ಕಪೂರ್ಥಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಇದು ಬ್ರಿಟೀಷ್ ಭಾರತದಲ್ಲಿ ಒಂದು ಸಂಸ್ಥಾನವಾಗಿದ್ದ ಕಪೂರ್ಥಲಾ ರಾಜ್ಯದ (ಅಹ್ಲುವಾಲಿಯಾ ರಾಜವಂಶದ ಆಡಳಿತ) ರಾಜಧಾನಿಯಾಗಿತ್ತು. ಫ್ರೆಂಚ್ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಆಧರಿಸಿದ ಪ್ರಮುಖ ಕಟ್ಟಡಗಳೊಂದಿಗೆ ನಗರದ ಜಾತ್ಯತೀತ ಮತ್ತು ಸೌಂದರ್ಯ ಮಿಶ್ರಣವು ಅದರ ರಾಜಪ್ರಭುತ್ವದ ಭೂತಕಾಲವನ್ನು ಸ್ವಯಂ ನಿರೂಪಿಸುತ್ತದೆ. ಇದನ್ನು ಅರಮನೆಗಳು ಮತ್ತು ಉದ್ಯಾನಗಳ ನಗರ ಎಂದೂ ಕರೆಯಲಾಗುತ್ತದೆ. 2011 ರ ಜನಗಣತಿಯ ಪ್ರಕಾರ, ಕಪೂರ್ಥಲಾ ಭಾರತದ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ನಗರ.[೧]

ಸ್ಮಾರಕಗಳು ಮತ್ತು ಕಟ್ಟಡಗಳು[ಬದಲಾಯಿಸಿ]

ಸೈನಿಕ್ ಶಾಲೆ, ಕಪೂರ್ಥಲಾ

ಕಪೂರ್ಥಲಾ ನಗರವು ಅದರ ಸ್ಥಳೀಯ ಇತಿಹಾಸದೊಂದಿಗೆ ಸಂಬಂಧ ಹೊಂದಿದ ಅನೇಕ ಕಟ್ಟಡಗಳು ಮತ್ತು ಸ್ಥಳಗಳನ್ನು ಹೊಂದಿದೆ, ಉದಾಹರಣೆಗೆ ಸೈನಿಕ್ ಶಾಲೆ (ಹಿಂದಿನ ಹೆಸರು ಜಗತ್‍ಜೀತ್ ಅರಮನೆ ), ಶಾಲಿಮಾರ್ ಬಾಗ್ (ಉದ್ಯಾನಗಳು), ಜಿಲ್ಲಾ ನ್ಯಾಯಾಲಯಗಳ ಕಟ್ಟಡಗಳು, ಮೂರಿಶ್ ಮಸೀದಿ, ಪಂಚ್ ಮಂದಿರ್ ("ಐದು ದೇವಾಲಯಗಳು"), ಗಡಿಯಾರ ಗೋಪುರ, ರಾಜ್ಯ ಗುರುದ್ವಾರ, ಕಾಂಜ್ಲಿ ಒದ್ದೆನೆಲ, 15,000 ಸಾಮರ್ಥ್ಯದ ಫೀಲ್ಡ್ ಹಾಕಿ ಸ್ಥಳವಾದ ಗುರುನಾನಕ್ ಕ್ರೀಡಾಂಗಣ, ಜಗ್‍ಜೀತ್ ಕ್ಲಬ್ ಮತ್ತು ಎನ್‌ಜೆಎಸ್‌ಎ ಸರ್ಕಾರಿ ಕಾಲೇಜು. ನಗರವು ದೇಶದ ಮೊದಲ ಹವಾಮಾನ ಬದಲಾವಣೆಯ ರಂಗಮಂದಿರವನ್ನೂ ಹೊಂದಿದೆ.

ಸೈನಿಕ್ ಶಾಲೆ (ಜಗತ್‍ಜೀತ್ ಅರಮನೆ)[ಬದಲಾಯಿಸಿ]

ಚಿತ್ರ:Jagatjit Palace, Kapurthala.jpg
ಜಗತ್‍ಜೀತ್ ಅರಮನೆ, ಕಪೂರ್ಥಲಾ

ಹಿಂದೆ ಜಗತ್‍ಜೀತ್ ಅರಮನೆ ಎಂದು ಕರೆಯಲ್ಪಡುತ್ತಿದ್ದ ಸೈನಿಕ್ ಶಾಲೆಯು ಹಿಂದಿನ ಕಪೂರ್ಥಲಾ ರಾಜ್ಯದ ಮಹಾರಾಜ ಜಗತ್‍ಜೀತ್ ಸಿಂಗ್ ಅವರ ಅರಮನೆಯಾಗಿದ್ದ ಸ್ಥಳದಲ್ಲಿದೆ. ಅರಮನೆ ಕಟ್ಟಡದ ವಾಸ್ತುಶಿಲ್ಪವು ವರ್ಸಾಯಿಲ್ಸ್ ಅರಮನೆ ಮತ್ತು ಫಾಂಟೇನ್‌ಬ್ಲೂವನ್ನು ಆಧರಿಸಿದೆ  ಮತ್ತು ಇದು ಒಟ್ಟು 200 acres (0.81 km2) ಪ್ರದೇಶದಲ್ಲಿ ಹರಡಿಕೊಂಡಿದೆ.

ಎಲಿಸೀ ಅರಮನೆ[ಬದಲಾಯಿಸಿ]

ಎಲಿಸೀ ಅರಮನೆಯ ನಿರ್ಮಾಣಕ್ಕೆ ಕನ್ವರ್ ಬಿಕ್ರಮ ಸಿಂಗ್ ಆದೇಶ ನೀಡಿದರು ಮತ್ತು 1862 ರಲ್ಲಿ ಇದು ಪೂರ್ಣಗೊಂಡಿತು.

ಮೂರಿಶ್ ಮಸೀದಿ[ಬದಲಾಯಿಸಿ]

ಕಪೂರ್ಥಲಾದ ಮೂರಿಶ್ ಮಸೀದಿ

ಕಪೂರ್ಥಲಾದ ಜಾತ್ಯತೀತ ಇತಿಹಾಸದ ಉದಾಹರಣೆಯಾಗಿದೆ ಮೂರಿಶ್ ಮಸೀದಿ. ಇದು ಮರಕೇಶ್, ಮೊರೊಕ್ಕೊದ ಬೃಹತ್ ಮಸೀದಿಯ ಪ್ರತಿರೂಪವಾಗಿದೆ. ಇದನ್ನು ಫ್ರೆಂಚ್ ವಾಸ್ತುಶಿಲ್ಪಿ, ಮಾನ್ಸಿಯೇರ್ ಎಂ ಮ್ಯಾಂಟೋಕ್ಸ್ ನಿರ್ಮಿಸಿದರು.

ಜಗತ್‍ಜೀತ್ ಕ್ಲಬ್[ಬದಲಾಯಿಸಿ]

ಜಗತ್‍ಜೀತ್ ಕ್ಲಬ್ ಗ್ರೀಕ್ ರೋಮನ್ ಶೈಲಿಯ ವಾಸ್ತುಶಿಲ್ಪದ ಮೇಲೆ ಆಧಾರಿತವಾದ ನಗರದ ಹೃದಯಭಾಗದಲ್ಲಿರುವ ಒಂದು ಸೊಗಸಾದ ಕಟ್ಟಡವಾಗಿದೆ. ಇದರ ವಿನ್ಯಾಸವು ಅಥೆನ್ಸ್‌ನ ಅಕ್ರೊಪೊಲಿಸ್‌ ಮೇಲಿರುವ ಪಾರ್ಥೆನಾನ್ ಅನ್ನು ಸಡಿಲವಾಗಿ ಹೋಲುತ್ತದೆ.

ಶಾಲಿಮಾರ್ ಉದ್ಯಾನಗಳು[ಬದಲಾಯಿಸಿ]

ಶಾಲಿಮಾರ್ ಉದ್ಯಾನಗಳು ಸರಿಸುಮಾರು ನಗರದ ಮಧ್ಯಭಾಗದಲ್ಲಿವೆ ಮತ್ತು ನಗರದ ನೂಕುನುಗ್ಗಲು ಗದ್ದಲದಿಂದ ಬಿಡುಗಡೆಯನ್ನು ನೀಡುತ್ತದೆ. ಶಾಲಿಮಾರ್ ಉದ್ಯಾನದಲ್ಲಿನ ಶಾಹಿ ಸಮಾಧ್ಸ್ (ರಾಜರ ಸ್ಮಾರಕಗಳು) ಅದರ ಆಳುತ್ತಿದ್ದ ರಾಜವಂಶದ ಸಂಪ್ರದಾಯಗಳನ್ನು ಒತ್ತಿಹೇಳುತ್ತದೆ.

ಪಂಚ್ ಮಂದಿರ್ (ಐದು ದೇವಾಲಯಗಳು)[ಬದಲಾಯಿಸಿ]

ಕಪೂರ್ಥಲಾದ ಪಂಚ್ ಮಂದಿರವು ಎಲ್ಲಾ ಧರ್ಮಗಳಿಗೆ ಪೂಜ್ಯ ಸ್ಥಳವಾಗಿದೆ. ದೇವಾಲಯದ ಸಂಕೀರ್ಣವು ಐದು ಸಣ್ಣ ದೇವಾಲಯಗಳಿಗೆ ನೆಲೆಯಾಗಿದೆ. ಸರ್ದಾರ್ ಫತೇಹ್ ಸಿಂಗ್ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯದ ಅಸಾಧಾರಣ ಲಕ್ಷಣವೆಂದರೆ ಪ್ರವೇಶ ದ್ವಾರದಿಂದ ಒಬ್ಬರು ಎಲ್ಲಾ ಐದು ವಿಗ್ರಹಗಳನ್ನು ವೀಕ್ಷಿಸಬಹುದು ಮತ್ತು ಎಲ್ಲವಕ್ಕೂ ನಮಸ್ಕರಿಸಬಹುದು.

ರಾಜ್ಯ ಗುರುದ್ವಾರಾ[ಬದಲಾಯಿಸಿ]

ರಾಜ್ಯ ಗುರುದ್ವಾರಾದ ದೊಡ್ಡ ಮತ್ತು ಭವ್ಯವಾದ ಕೆಂಪು ಮರಳುಗಲ್ಲಿನ ಕಟ್ಟಡವನ್ನು (ಈಗ ಬಿಳಿ ಬಣ್ಣವನ್ನು ಬಳಿಯಲಾಗಿದೆ) 1915 ರಲ್ಲಿ ರಿವೈಲ್ ಸಿಂಗ್ ಅವರ ಉಸ್ತುವಾರಿಯಲ್ಲಿ ಸಮರ್ಪಿಸಲಾಯಿತು. ಇಂಡೋ-ಸಾರಾಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿರುವ ಇದು ನೂರಾರು ಭಕ್ತರ ಪಾದಗಳಿಂದ ಆವೃತವಾದ ಅಮೃತಶಿಲೆಯ ವಿಸ್ತಾರವನ್ನು ಹೊಂದಿದೆ.

ಬ್ರಹ್ಮಕುಂಡ್ ಮಂದಿರ್[ಬದಲಾಯಿಸಿ]

ಮುಖಿ ಶಿವ ಲಿಂಗ್ ಬ್ರಹ್ಮಕುಂಡ್ ದೇವಾಲಯವು ದಿವಾನ್ ಬನ್ನಾ ಮಲ್ ಗೌತಮ್ (ಮಿಸ್ರ್) ಅವರ ಗೌತಮ್ ಬ್ರಾಹ್ಮಣ ಕುಟುಂಬದ ಜಾಥೇರಾ ಆಗಿದೆ.

ಗುರುದ್ವಾರಾ ಬೇರ್ ಸಾಹಿಬ್[ಬದಲಾಯಿಸಿ]

ಗುರುದ್ವಾರಾ ಬೇರ್ ಸಾಹಿಬ್ ಸುಲ್ತಾನ್‍ಪುರ್ ಲೋಧಿಯಲ್ಲಿದೆ. ಇದು ಕಪೂರ್ಥಲಾದ ನಾಲ್ಕು ಉಪವಿಭಾಗಗಳಲ್ಲಿ (ತಹಸಿಲ್) ಒಂದಾಗಿದೆ. ಈ ಐತಿಹಾಸಿಕ ತಾಣವು ಸಿಖ್ ಧರ್ಮಕ್ಕೆ ಬಹಳ ಮಹತ್ವದ್ದಾಗಿದೆ, ಏಕೆಂದರೆ ಸಿಖ್ಖರ ಮೊದಲ ಗುರು ಗುರುನಾನಕ್ ಅವರು ತಮ್ಮ ಜೀವನದ 14 ವರ್ಷಗಳನ್ನು (14 ವರ್ಷ 9 ತಿಂಗಳು 13 ದಿನಗಳು) ಕಳೆದ ಸ್ಥಳ ಇದೆಂದು ಹೇಳಲಾಗುತ್ತದೆ.

ಕಾಂಜ್ಲಿ ಒದ್ದೆನೆಲ[ಬದಲಾಯಿಸಿ]

ನಗರದ ಹೊರವಲಯದಲ್ಲಿರುವ ಪಶ್ಚಿಮ ಬೇಯ್ನ್ ನದಿಯ ಮೇಲಿರುವ ಕಾಂಜ್ಲಿ ಒದ್ದೆನೆಲವನ್ನು ರಾಮ್‌ಸರ್ ಒಡಂಬಡಿಕೆ ಅಡಿಯಲ್ಲಿ ಸೇರಿಸಲಾಗಿದೆ. ಪಕ್ಷಿ ವೀಕ್ಷಣೆ ಮತ್ತು ದೋಣಿ ವಿಹಾರಕ್ಕೆ ಇದು ಸಾಮಾನ್ಯ ತಾಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Top 10 Least Populated Cities of India - Census.co.in".

ಹೊರಗಿನ ಕೊಂಡಿಗಳು[ಬದಲಾಯಿಸಿ]