ಲಂಚಾವತಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಂಚಾವತಾರ - ಮಾಸ್ಟರ್ ಹಿರಣ್ಣಯ್ಯನವರ ಈ ನಾಟಕದ ಮೂಲ ಹೆಸರು " ಗುಮಾಸ್ತ". ಈ ನಾಟಕದಲ್ಲಿ ಗುಮಾಸ್ತನಾದ ಸತ್ಯಮೂರ್ತಿ ಮತ್ತು ವಿಶ್ವ ಗೆಳೆಯರು.ಒಂದು ಸಲ ಈ ಗುಮಾಸ್ತ ಯಾವುದೋ ಕೆಲಸ ಮಾಡಿ ಕೊಡಲು ತನ್ನ ಗೆಳೆಯನ ಹತ್ತಿರವೇ ಲಂಚ ಪಡೆಯುತ್ತಾನೆ.ಅಲ್ಲಿಯವರೆಗೂ ಸತ್ಯಮೂರ್ತಿಯನ್ನು ಸರ್ ಎನ್ನುತ್ತಿದ್ದ ಸ್ನೇಹಿತ ವಿಶ್ವ ಕೂಡಲೇ ಏಕವಚನದಿಂದ ಕರೆಯಲು ಶುರು ಮಾಡುತ್ತಾನೆ.ಆತ್ಮಗೌರವ ಕಳೆದುಕೊಂಡರೆ ಏನಾಗುತ್ತದೆ ಎಂಬುದನ್ನು ತಿಳಿಸಿಕೊಡುವ ಈ ನಾಟಕ ಇಲ್ಲಿಯವರೆಗೆ ಹನ್ನೊಂದು ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಕಂಡಿದೆ.ಅಮೇರಿಕ,ಇಂಗ್ಲೆಂಡ್,ನ್ಯೂಜಿಲಂಡ್,ಬಹರೇನ್,ದುಬೈ,ಕುವೈತ್ ಮುಂತಾದ ದೇಶಗಳಲ್ಲಿ ಜನ ಒತ್ತಾಯಿಸಿ ಈ ನಾಟಕ ಪ್ರದರ್ಶನ ಮಾಡಿಸಿದ್ದಾರೆ.