ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ, ಯಾದಾದ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb  

ಯಾದಾದ್ರಿ ಗುಡ್ಡ

thumb| ಶ್ರೀ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ, ವೈ.ಭುವನಗಿರಿ ಜಿಲ್ಲೆ, ತೆಲಂಗಾಣ, ಭಾರತ ಸರಳವಾಗಿ ಯಾದಾದ್ರಿ ಅಥವಾ ಯಾದಗಿರಿಗುಟ್ಟ ದೇವಾಲಯ ಎಂದು ಕರೆಯಲ್ಪಡುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು[೧] ಭಾರತದ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಗಿರಿಗುಟ್ಟದ ಒಂದು ಗುಡ್ಡದ ಮೇಲೆ ಸ್ಥಿತವಾಗಿರುವ ಒಂದು ಹಿಂದೂ ದೇವಾಲಯ. ಈ ದೇವಾಲಯವು ವಿಷ್ಣುವಿನ ಅವತಾರವಾದ ನರಸಿಂಹನ ವಾಸಸ್ಥಾನವಾಗಿದೆ.

ದೇವಾಲಯದ ಪುರಾಣ ಕಥೆ[ಬದಲಾಯಿಸಿ]

ಸ್ಕಂದ ಪುರಾಣದ ಪ್ರಕಾರ, ಪೂಜ್ಯ ಮಹರ್ಷಿ ಋಷ್ಯಶೃಂಗನ ಮಗನಾದ ಯಾದ ಮಹರ್ಷಿಯು ಇಲ್ಲಿ ನರಸಿಂಹನ ರೂಪದ ವಿಷ್ಣುವನ್ನು ಕುರಿತು ತಪಸ್ಸು ಮಾಡಿದನು. ಅವನ ತಪಸ್ಸಿನಿಂದ ಸಂತಸಗೊಂಡು ವಿಷ್ಣು ಮುಂದೆ ಕಾಣಿಸಿಕೊಂಡು ಐದು ರೂಪಗಳಲ್ಲಿ ತನ್ನನ್ನು ತಾನು ಪ್ರಕಟಿಸಿಕೊಂಡನು: ಜ್ವಾಲಾ ನರಸಿಂಹ, ಗಂಡಭೇರುಂಡ ನರಸಿಂಹ, ಯೋಗಾನಂದ ನರಸಿಂಹ, ಉಗ್ರ ನರಸಿಂಹ ಮತ್ತು ಲಕ್ಷ್ಮಿ ನರಸಿಂಹ.[೨] ಈ ರೂಪಗಳಲ್ಲಿ ಬೆಟ್ಟದ ಮೇಲೆ ಇರಬೇಕೆಂದು ಯಾದ ಮಹರ್ಷಿಯು ನರಸಿಂಹನನ್ನು ಬೇಡಿಕೊಂಡನು. ಈ ಕಾರಣಕ್ಕಾಗಿ, ಬೆಟ್ಟದ ತುದಿಯಲ್ಲಿರುವ ಲಕ್ಷ್ಮಿ-ನರಸಿಂಹದೇವ ದೇವಸ್ಥಾನವು ಮುಖ್ಯ ಗುಹೆಯಲ್ಲಿನ ಕಲ್ಲಿನಲ್ಲಿ ಹುದುಗಿರುವ ಎಲ್ಲಾ ಐದು ರೂಪಗಳಲ್ಲಿ ನರಸಿಂಹ ದೇವರನ್ನು ಹೊಂದಿದೆ. ಐತಿಹಾಸಿಕವಾಗಿ, ಈ ದೇವಾಲಯವು ದಕ್ಷಿಣ ಭಾರತದಲ್ಲಿ ಅನುಸರಿಸಲಾದ ವೈಷ್ಣವ ಆಗಮ ಶಾಸ್ತ್ರಗಳ ತೆಂಕಲೈ ಸಂಪ್ರದಾಯವನ್ನು ಅನುಸರಿಸಿದೆ.[೩]

ದೇವಾಲಯದಲ್ಲಿನ ದೇವತೆಗಳು[ಬದಲಾಯಿಸಿ]

ಈ ದೇವಾಲಯವು ಸುಮಾರು 12 ಅಡಿ ಎತ್ತರದ 30 ಅಡಿ ಉದ್ದದ ಗುಹೆಯಲ್ಲಿದೆ. ಇಲ್ಲಿ ಇರುವ ದೇವತೆಗಳೆಂದರೆ ಸರ್ಪಾಕಾರದಲ್ಲಿರುವ ಜ್ವಾಲಾ ನರಸಿಂಹ, ಧ್ಯಾನದ ಭಂಗಿಯಲ್ಲಿ ಕುಳಿತಿರುವಂತೆ ತೋರುವ ಯೋಗಾನಂದ ನರಸಿಂಹ, ಲಕ್ಷ್ಮಿ-ನರಸಿಂಹರ ಬೆಳ್ಳಿ ವಿಗ್ರಹಗಳು. ದೇವಾಲಯದ ಮುಖ್ಯ ಬಾಗಿಲಿನ ಬಲಭಾಗದಲ್ಲಿ ಹನುಮಂತನ ದೇವಾಲಯವಿದೆ. ಹನುಮಂತನ ಸ್ವಲ್ಪ ಕೆಳಗೆ ಬಂಡೆಯಲ್ಲಿ ಉದ್ದವಾದ ಅಡ್ಡ ಕಿಂಡಿಯನ್ನು ನೋಡಬಹುದು. ಗಂಡಭೇರುಂಡ ನರಸಿಂಹನು ಅಭಿವ್ಯಕ್ತಗೊಂಡ ಸ್ಥಳ ಇದು ಎಂದು ಹೇಳಲಾಗುತ್ತದೆ. ಇದು ಬಹಳ ಜನಪ್ರಿಯ ದೇವಾಲಯ. ಈ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರಾಮಾಣಿಕ ಭಕ್ತರ ಯಾವುದೇ ಆಸೆ ಈಡೇರುತ್ತದೆ ಎಂದು ಹೇಳಲಾಗುತ್ತದೆ.[೪][೫] ಗರ್ಭಗುಡಿ ಅಥವಾ ಗರ್ಭಗೃಹವು ಒಂದು ಗುಹೆಯಲ್ಲಿ, ಬೃಹತ್ ಸ್ಲೇಟ್ ಬಂಡೆಯ ಕೆಳಗೆ ಇದೆ. ಇದು ಅರ್ಧದಷ್ಟು ವಾಸಸ್ಥಾನವನ್ನು ಆವರಿಸುತ್ತದೆ.

ಹೊಸ ಯಾದಾದ್ರಿ ದೇವಸ್ಥಾನ[ಬದಲಾಯಿಸಿ]

ಹಳೆಯ ದೇವಾಲಯದ ಸ್ಥಳದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಹೊಸ ದೇವಾಲಯ ಪೂರ್ಣಗೊಳ್ಳುವವರೆಗೆ ಬಳಕೆಗಾಗಿ, ತಾತ್ಕಾಲಿಕ ದೇವಾಲಯವಾದ ಬಾಲಾಲಯವನ್ನು ನಿರ್ಮಿಸಲಾಯಿತು.

ವಿಭಾಗಗಳು[ಬದಲಾಯಿಸಿ]

ದೇವಾಲಯದ ವಿಭಾಗಗಳಲ್ಲಿ ಮುಖ್ಯ ದೇವಾಲಯ, ಮುಖ ಮಂಟಪ, ಮರದ ಚಾವಣಿಗಳುಳ್ಳ ಏಳು ಗೋಪುರಗಳು, ವ್ರತ ಪೀಠ, ಸ್ವಾಮಿ ವಾರಿ ಉದಯನ ವನಮ್, ಕಲ್ಯಾಣ ಮಂಟಪ, ಸತ್ರಂ ಇತ್ಯಾದಿಗಳು ಸೇರಿವೆ. ಮುಖ್ಯ ದೇವಾಲಯದಲ್ಲಿರುವ 12 ಆಳ್ವಾರರ ಕಂಬಗಳು ಒಂದು ಗಮನಾರ್ಹ ಲಕ್ಷಣವಾಗಿದೆ.[೬]

ವಿನ್ಯಾಸ[ಬದಲಾಯಿಸಿ]

ಇದರ ವಿನ್ಯಾಸವು ಶಿಲ್ಪ ಮತ್ತು ಆಗಮ ತತ್ವಗಳನ್ನು ಆಧರಿಸಿದ ಪ್ರಾಚೀನ ವಿನ್ಯಾಸಗಳನ್ನು ಬಳಸುತ್ತದೆ. ಇಡೀ ದೇವಾಲಯವನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದೆ.

ಶಿಲ್ಪಗಳು[ಬದಲಾಯಿಸಿ]

ದೇವಾಲಯಕ್ಕೆ ಮೂರು ಬಗೆಯ ಕಲ್ಲುಗಳನ್ನು ಬಳಸಲಾಗುತ್ತಿದೆ, ಗರ್ಭಗೃಹದಲ್ಲಿನ ದೇವತೆಗಳಿಗೆ ಕೃಷ್ಣ ಶಿಲೆ ; ಸ್ತ್ರೀ ದೇವತೆಗಳಿಗೆ ಸ್ತ್ರೀ ಶಿಲೆ; ಮತ್ತು ನೆಲಹಾಸು, ಗೋಡೆಗಳು ಇತ್ಯಾದಿಗಳಿಗೆ ನಪುಂಸಕ ಶಿಲೆ ಯನ್ನು ಬಳಸಲಾಗುತ್ತಿದೆ. ತೆಲಂಗಾಣದ ಕಾಕತೀಯ ರಾಜವಂಶದ ದೇವಾಲಯದ ವಾಸ್ತುಶಿಲ್ಪದ ಆಧಾರದ ಮೇಲೆ ಕಪ್ಪು ಗ್ರಾನೈಟ್ ಕಲ್ಲನ್ನು ಸಹ ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

 

  1. "Yadagirigutta is now renamed as Yadadri". 6 March 2015.
  2. "Yadadri Development in Bangaru Telangana". The Hans India.
  3. Sri Vaishnava Divya Desams (108 Tiruppathis Sung by Azhwars): Along with a Selected List of Some Abhimana Sthalams in India. Sri Visishtadvaitha Pracharini Sabha. 1972. p. 132.
  4. Knapp, Stephen (1 January 2009). Spiritual India Handbook. Jaico Publishing House. ISBN 9788184950243 – via Google Books.
  5. "History of the Cult of Narasimha in Telangana, Andhra Pradesh: From Ancient to the Modern Period". Radha & Sons. 21 June 1989.
  6. "Yadadri temple works in Telangana at brisk pace". Archived from the original on 2018-06-29. Retrieved 2021-07-29.

ಹೊರಗಿನ ಕೊಂಡಿಗಳು[ಬದಲಾಯಿಸಿ]