ಚೈತನ್ಯ ಭಾಗವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೈತನ್ಯ ಭಾಗವತ ವೃಂದಾವನ ದಾಸ ಠಾಕುರನಿಂದ (ಕ್ರಿ.ಶ. ೧೫೦೭-೧೫೮೯) ಬರೆಯಲ್ಪಟ್ಟ ಪ್ರಸಿದ್ಧ ವೈಷ್ಣವ ಸಂತರಾದ ಚೈತನ್ಯ ಮಹಾಪ್ರಭುರವರ (ಜ.೧೪೮೬) ಒಂದು ಸಂತಚರಿತೆ. ಅದು ಚೈತನ್ಯ ಮಹಾಪ್ರಭುರಿಗೆ ಸಂಬಂಧಿಸಿದ ಬಂಗಾಳಿ ಭಾಷೆಯಲ್ಲಿ ಬರೆಯಲ್ಪಟ್ಟ ಮೊದಲ ಪೂರ್ಣಪ್ರಮಾಣದ ಕೃತಿಯಾಗಿತ್ತು ಮತ್ತು ಅವರ ಆರಂಭಿಕ ಜೀವನ ಹಾಗು ಗೌಡೀಯ ವೈಷ್ಣವ ಸಂಪ್ರದಾಯದ ಸ್ಥಾಪಕರಾಗಿ ಅವರ ಪಾತ್ರವನ್ನು ದಾಖಲಿಸುತ್ತದೆ. ಈ ಪಠ್ಯವು ಅವರ ನಿಕಟ ಸಹವರ್ತಿಗಳು ಮತ್ತು ಅನುಯಾಯಿಗಳ ನಂಬಿಕೆಯಲ್ಲಿ ರಾಧೆ ಹಾಗು ಕೃಷ್ಣನ ಒಂದು ಸಂಯೋಜಿತ ಅವತಾರವಾಗಿ ಚೈತನ್ಯರ ದೇವತಾಶಾಸ್ತ್ರೀಯ ಸ್ಥಾನವನ್ನು ವಿವರಿಸುತ್ತದೆ.