ಬಿ. ಪಿ. ಅದಿತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
೨೬ ನೇ ಸಾಲು: | ೨೬ ನೇ ಸಾಲು: | ||
==ಉಲ್ಲೇಖಗಳು== |
==ಉಲ್ಲೇಖಗಳು== |
||
< References |
< References /> |
||
'''ಬಾಹ್ಯ ಸಂಪರ್ಕಗಳು :''' |
'''ಬಾಹ್ಯ ಸಂಪರ್ಕಗಳು :''' |
||
# [http://www.youtube.com/watch?v=zqVntpbjoRk 'ಕುಮಾರಿ ಅದಿತಿಯ ಹಾಡಿನ ವಿಡಿಯೋ'] |
|||
೧೭:೦೦, ೩೦ ಮೇ ೨೦೧೬ ನಂತೆ ಪರಿಷ್ಕರಣೆ
ಅದಿತಿ ಪ್ರಹ್ಲಾದ್,'ಬೆಂಗಳೂರಿನ ಬಾಲ ಕಲಾವಿದೆ', ಸುಮಾರು ೯ ವರ್ಷದ ಎಳೆಯ ಪ್ರಾಯದಲ್ಲೇ 'ಶಾಸ್ತ್ರೀಯಸಂಗೀತ'ವನ್ನು ತನ್ನ ಆಯ್ಕೆಯಾಗಿ ಮಾಡಿಕೊಂತ್ತಿದ್ದಾಳೆ. [೧] . ಬೆಂಗಳೂರಿನ ಜಯನಗರದ ೩ ನೇ ಬಡಾವಣೆಯಲ್ಲಿ ವಾಸಿಸುತ್ತಿರುವ ಅವಳ ತಂದೆ-ತಾಯಿಗಳು : ತಂದೆ, ಬಿ.ಎನ್.ಪ್ರಹ್ಲಾದ್ ರವರು. ತಾಯಿ, ಎಸ್. ಅನ್ನಪೂರ್ಣರವರು. 'ಅದಿತಿ' ೨೦೦೧ ರ ಜೂನ್ ತಿಂಗಳ ೭ ನೇ ತಾರೀಖು ಜನಿಸಿದಳು. ಈಗ 'ಜಯನಗರದ ಸರಸ್ವತೀ ವಿದ್ಯಾಮಂದಿರ ಶಾಲೆ'ಯಲ್ಲಿ ೪ ನೇ ತರಗತಿಯಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾಳೆ.
ಸಂಗೀತಾಭ್ಯಾಸ
'ಕರ್ನಾಟಕ ಶಾಸ್ತ್ರೀಯ ಸಂಗೀತ'ದ ಪ್ರಾರಂಭವನ್ನು ವಿದ್ವಾನ್, ಕಮಲ್ ಕುಮಾರ್ ರವರ ಗುರುತ್ವದಲ್ಲಿ ಮಾಡಿದಳು. (ಕಮಲ್ ಕುಮಾರ್ ರವರು, ವಿದ್ವಾನ್ ಆರ್. ಕೆ. ಶ್ರೀಕಂಠನ್ ರವರ ಶಿಷ್ಯರು) ಬಾಲ್ಯಾವಸ್ತೆಯಲ್ಲೇ ಅಂದರೆ ೫ ನೇ ವರ್ಷದ ಪ್ರಾಯದಲ್ಲಿ(೩ ರಿಂದ ೫ ನೇ ವಯಸ್ಸಿನಲ್ಲಿ) ಶ್ರೀ ನರಹರಿ ದೀಕ್ಷಿತ್ ರವರ ನೇತೃತ್ವದಲ್ಲಿ ಸುಮಾರು ೫೦ ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಎಲ್ಲದರಲ್ಲೂ ಬಹುಮಾನವನ್ನು ಗಳಿಸಿರುತ್ತಾಳೆ.
ಪ್ರಾರ್ಥನಾಗೀತೆಗಳು/ಸಂಗೀತ ಕಚೇರಿಗಳು
ಇದುವರೆವಿಗೆ ೧೪೮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, 'ಶಾಸ್ತ್ರೀಯ ಸಂಗೀತ', ಹಾಗೂ 'ಸುಗಮ ಸಂಗೀತ ಕ್ಷೇತ್ರ',ಗಳಲ್ಲಿ ತನ್ನ ಯೋಗದಾನ ಮಾಡಿದ್ದಾಳೆ. ಬೆಂಗಳೂರಿನ ಉಪನಗರ, ಕೋರಮಂಗಲದಲ್ಲಿ ಹಮ್ಮಿಕೊಂಡ 'ವಾರ್ಷಿಕ ರಾಮೋತ್ಸವ ಕಾರ್ಯಕ್ರಮ'ಗಳಲ್ಲಿ ಪಾಲ್ಗೊಂಡು ತನ್ನ ೧೨೩ ನೇ ಕಾರ್ಯಕ್ರಮದಲ್ಲಿ ಸತತ ೨ ಗಂಟೆಗಳ ಕಾಲ ಹಾಡಿರುತ್ತಾಳೆ. ತಿರುಪತಿಯ, 'ತಿರುಮಲ ವೆಂಕಟೇಶ್ವರ ಸ್ವಾಮಿ'ಯ ಸನ್ನಿಧಿಯಲ್ಲಿ ಕೊಟ್ಟ ಕಾರ್ಯಕ್ರಮ, ೧೩೭ ನೆಯದಾಗಿತ್ತು. ಯಾವುದೇ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಪ್ರಕ್ರಿಯೆಯಲ್ಲಿ ಅದಿತಿ ಸುಮಾರು ೯೨ ಅವಕಾಶಗಳಲ್ಲಿ ಹಾಡಿದ್ದಾಳೆ. ಬೆಂಗಳೂರಿನ ಬಸವನಗುಡಿ ಉಪನಗರದಲ್ಲಿ ಸ್ಥಾಪಿಸಲಾಗಿರುವ ಡಾ. ಹೆಚ್.ಎನ್. ಸಭಾಗೃಹದಲ್ಲಿ ಬಿ.ಜೆ.ಪಿ. ಪಕ್ಷ ನಡೆಸಿದ Friends' of BJP ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿದಾಗ, ಅದು ಅವಳ ೯೧ ನೇ ಪ್ರಾರ್ಥನಾ ಗೀತೆ'ಯಾಗಿತ್ತು.
- ೨೦೦೮ ರಲ್ಲಿ, ಕರ್ನಾಟಕ ಸರಕಾರ ಆಯೋಜಿಸಿದ್ದ ಮೈಸೂರು ದಸರಾ ವಿಶೇಷ ಕಾರ್ಯಕ್ರಮದಲ್ಲಿ ಒಂದು ಗಂಟೆಯ ಕಾಲ, ಶಾಸ್ತ್ರೀಯ ಸಂಗೀತ, ಮತ್ತು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿರುತ್ತಾಳೆ.
- ೨೦೦೮ ರಲ್ಲಿ, 'ಬೆಂಗಳೂರಿನ ಇಸ್ಕಾನ್ ದೇವಾಲಯ'ದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ೯೦ ನಿಮಿಷಗಳ ಕಾಲ ಹಾಡಿದಳು.
- ಸನ್, ೨೦೦೮ ರಲ್ಲಿ, 'ಬೆಂಗಳೂರಿನ ಶೃಂಗೇರಿ ಶಂಕರಮಠದ ಸಭಾಗೃಹ'ದಲ್ಲಿ ೯೦ ನಿಮಿಷಗಳ ಕಾಲ ಹಾಡಿದ ಹೆಗ್ಗಳಿಕೆಯನ್ನು ಗಳಿಸಿರುತ್ತಾಳೆ.
- ಸನ್, ೨೦೧೧ ರ ಫೆಬ್ರವರಿ ತಿಂಗಳ, ೧೩ ನೇ, ರವಿವಾರದಂದು, ಮಹಾರಾಷ್ಟ್ರದ ದೊಂಬಿವಿಲಿಯಲ್ಲಿರುವ, 'ಮೈಸೂರು ಸಂಗೀತ ವಿದ್ಯಾಲಯ' ಆಯೋಜಿಸಿದ, 'ಪುರುಂದರದಾಸ, ಮತ್ತು ತ್ಯಾಗರಾಜರ ಆರಾಧನಾ ಸಂಗೀತ ಕಾರ್ಯಕ್ರಮ'ದಲ್ಲಿ ಸುಮಾರು ೩ ಗಂಟೆಗಳಕಾಲ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಂಗೀತವನ್ನು ಹಾಡಿ ಎಲ್ಲಾ ಸಂಗೀತ ರಸಿಕರ ಮೆಚ್ಚುಗೆಯನ್ನು ಗಳಿಸಿದಳು.
- ೨೦೧೩ ರಲ್ಲಿ ಒಂದು ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಳು.[೨]
ಪ್ರಶಸ್ತಿ ಹಾಗೂ ಪಾರಿತೋಷಕಗಳು
- 'ಬಾಲ ಕಲಾವಿದೆ ಅದಿತಿ', ಒಟ್ಟಾರೆ ಗಳಿಸಿದ ಬಹುಮಾನಗಳ ಸಂಖ್ಯೆ, ೨೬೧
- ಅವಳು, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಸಂಖ್ಯೆ, ೧೩
ಟೆಲೆವಿಶನ್ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ
ದೂರದರ್ಶನದ ಚಂದನ ವಾಹಿನಿ, ಉದಯ ಕನ್ನಡ, ಝೀಕನ್ನಡ, ಸುವರ್ಣ ಕನ್ನಡ, ಟಿ.ವಿ. ೯ ಕನ್ನಡ, ಹಾಗೂ ಶಂಕರದಲ್ಲಿ ಪ್ರಸ್ತುತಪಡಿಸಿರುತ್ತಾಳೆ.
ಪುರಸ್ಕಾರಗಳು
- ಸನ್, ೨೦೦೮ ರಲ್ಲಿ ಕರ್ನಾಟಕ ಸರಕಾರದ ಮಹಿಳಾ ಅಭಿವೃದ್ಧಿ ಇಲಾಖೆ, 'ಅದಿತಿ'ಯನ್ನು ಅಸಾಧಾರಣ ಬಾಲ ಪ್ರತಿಭೆಯೆಂದು ಗುರುತಿಸಿದೆ.
- ಸನ್, ೨೦೦೯ ಬೆಂಗಳೂರು ಆಕಾಶವಾಣಿ, ಬಾಲಕಲಾವಿದೆಯೆಂದು ಗುರುತಿಸಿ, ಪುರಸ್ಕರಿಸಿದೆ.
- ಸನ್, ೨೦೧೦ ರಲ್ಲಿ ಪ್ರತಿ ಎರಡುವರ್ಷಕ್ಕೊಮ್ಮೆ ಆಯೋಜಿಸಲಾಗುವ, 'ಅಮೆರಿಕ ಸಂಯುಕ್ತಸಂಸ್ಥಾನ'ದ, ನ್ಯೂಜರ್ಸಿ ನಗರದ 'ಎಡಿಸನ್' ನಲ್ಲಿ, ಸೆಪ್ಟೆಂಬರ್ ತಿಂಗಳ,೩-೪ ನೇ ತಾರೀಖು, ಜರುಗಿದ, ೬ ನೇ ಅಕ್ಕ ವಿಶ್ವ ಸಮ್ಮೇಳನ [೩] ದಲ್ಲಿ ಭಾಗವಹಿಸಿ, '೩೦ ನಿಮಿಷಗಳ ಸಂಗೀತ ಕಾರ್ಯಕ್ರಮ' ಕೊಟ್ಟಿದ್ದಲ್ಲದೆ, ಆ ಸಮಯದಲ್ಲಿ ಪರಿಚಿತರಾದ ಇಬ್ಬರು ವ್ಯಕ್ತಿಗಳ ಆಹ್ವಾನದ ಮೇರೆಗೆ, ಅವರ ಮನೆಗಳಿಗೆ ಹೋಗಿ, 'ಸಂಗೀತ ಕಾರ್ಯಕ್ರಮ' ನೀಡಿದ್ದಾಳೆ.
- ಸನ್, ೨೦೧೦ ರ ’ಮಕ್ಕಳ ರಾಜ್ಯ ಪ್ರಶಸ್ತಿ ಪುರಸ್ಕೃತಳಾಗಿದ್ದಾಳೆ.
- 'ಅದಿತಿ'ಯ ೧೩೦ ನೆ ಕಾರ್ಯಕ್ರಮ ಶೃಂಗೇರಿಯ ಶಾರದ ಪೀಠದಲ್ಲಿ ೨೦೧೦ ರ ಅಕ್ಟೋಬರ್, ೮ ರಂದು ಜರುಗಿತು.
- ಸನ್, ೨೦೧೦ ರ ನವೆಂಬರ್ ತಿಂಗಳಿನಲ್ಲಿ ತುಮಕೂರಿನ ಪ್ರತಿಶ್ಠಿತ, ಶ್ರೀ. ಸಿದ್ಧಗಂಗಾ ಮಠದಲ್ಲಿ 'ಸಂಗೀತ-ಕಾರ್ಯಕ್ರಮ'ವನ್ನು ನೀಡಿರುತ್ತಾಳೆ.
ಉಲ್ಲೇಖಗಳು
< References />
ಬಾಹ್ಯ ಸಂಪರ್ಕಗಳು :