ಆನಂದಾಶ್ರಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
"Anandashram, Kanhangad" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
( ಯಾವುದೇ ವ್ಯತ್ಯಾಸವಿಲ್ಲ )

೨೩:೫೫, ೧೭ ನವೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ಮೂಲ ಕಟ್ಟಡ

ಆನಂದಾಶ್ರಮ್ ಭಾರತದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ನಗರ ಮತ್ತು ಪುರಸಭೆಯಾದ ಕಾಞ್ಞಂಗಾಡಿನಲ್ಲಿರುವ ಆಧ್ಯಾತ್ಮಿಕ ಆಶ್ರಯಧಾಮವಾಗಿದೆ.[೧] ಆನಂದಾಶ್ರಮವನ್ನು ಸ್ವಾಮಿ ರಾಮದಾಸ್ ಮತ್ತು ತಾಯಿ ಕೃಷ್ಣಾಬಾಯಿಯವರು 1931 ರಲ್ಲಿ ಸ್ಥಾಪಿಸಿದರು.[೨]

ಆನಂದಾಶ್ರಮದ ಒಳಗೆ[ಬದಲಾಯಿಸಿ]

ಕಮಾನಿನ ಕೆಳಗೆ ನಿಂತಿರುವವರು ಸುಮಾರು 250 ಮೀಟರ್ ದೂರದಲ್ಲಿ ಎತ್ತರದ ಬೆಟ್ಟದ ಸ್ಥಳದಲ್ಲಿರುವ ಮುಖ್ಯ ಆಶ್ರಮ ಕಟ್ಟಡವನ್ನು ನೋಡಬಹುದು. ಈ ಮಾರ್ಗವು ದಟ್ಟವಾಗಿ ಬೆಳೆದಿರುವ ಕೋನಿಫೆರಸ್ ಸಸ್ಯಗಳಿಂದ ಸುತ್ತುವರಿಯಲ್ಪಟ್ಟಿದೆ.

ಹಾಜರಿ ಸ್ಥಳ : ಪ್ರವೇಶದ್ವಾರವನ್ನು ಪ್ರವೇಶಿಸುತ್ತಿದ್ದಂತೆ, ಭೇಟಿ ನೀಡುವ ಭಕ್ತರನ್ನು ಸ್ವಾಗತಿಸಲು, ಅವರ ಹೆಸರನ್ನು ನೋಂದಾಯಿಸಲು ಮತ್ತು ವಸತಿಗಳನ್ನು ನೀಡಲು ಸ್ವಾಗತ ಕಚೇರಿ ಬಲಭಾಗದಲ್ಲಿದೆ.

ಧ್ವಜ : ಗೇಟ್‌ನಿಂದ ಕೆಲವು ಮೀಟರ್‌ಗಳಷ್ಟು ಮುಂದೆ ಚಿಕ್ಕದಾದ ವೃತ್ತಾಕಾರದ ಉದ್ಯಾನವನವಿದೆ. ಅದರ ದಕ್ಷಿಣ ಪಾರ್ಶ್ವದಲ್ಲಿ ಧ್ವಜಕಂಬವಿದೆ. ಅದರ ಮೇಲೆ ಆಶ್ರಮದ ಲಾಂಛನ ಬೀಸುತ್ತದೆ. ಅದರ ಮೇಲೆ ಪವಿತ್ರ ರಾಮನಾಮವನ್ನು ಮುದ್ರಿಸಲಾಗಿದೆ.

ಪ್ರಮುಖ ದಿನಗಳಲ್ಲಿ, ಉದಾ: ಜಯಂತಿ ಮತ್ತು ಸಮಾಧಿ ದಿನಗಳಂದು ಮತ್ತು ಪೂಜ್ಯ ತಂದೆಯವರ ಸನ್ಯಾಸ ದಿನದಂದು, ರಾಮ ನಾಮದ ಪಠಣದ ನಡುವೆ ಹೊಸ ಧ್ವಜವನ್ನು ಹಾರಿಸಲಾಗುತ್ತದೆ.

ಮಾಹಿತಿ ಕೇಂದ್ರ : ಉದ್ಯಾನದ ಬಲಕ್ಕೆ ಒಂದು ಸಣ್ಣ ಮನೆಯಿದೆ. ಇದೇ ಮಾಹಿತಿ ಕೇಂದ್ರವಾಗಿದೆ. ಎಲ್ಲಾ ಹೊಸ ಸಂದರ್ಶಕರಿಗೆ ಆಶ್ರಮ ಮತ್ತು ಅದರ ಚಟುವಟಿಕೆಗಳ ಬಗ್ಗೆ ಸಾಮಾನ್ಯ ಕಲ್ಪನೆಯನ್ನು ನೀಡುವ ವೀಡಿಯೊವನ್ನು ತೋರಿಸಲಾಗುತ್ತದೆ.

ಪುಸ್ತಕ ಮಳಿಗೆ : ಉದ್ಯಾನದ ಎಡಭಾಗದಲ್ಲಿ ಪುಸ್ತಕ ಮಳಿಗೆ ಇದೆ. ಇಲ್ಲಿ ಭೇಟಿಕಾರರು ಆಶ್ರಮದಿಂದ ಪ್ರಕಟಿಸಲಾದ ಎಲ್ಲ ಪುಸ್ತಕಗಳನ್ನು ಪಡೆಯಬಹುದು.

ಸತ್ಸಂಗ ಸಭಾಂಗಣ : ಪುಸ್ತಕ ಮಳಿಗೆಯ ಪಕ್ಕದಲ್ಲಿ ಸತ್ಸಂಗ ಸಭಾಂಗಣವಿದೆ. ಇಲ್ಲಿ ಪ್ರೀತಿಯ ತಂದೆ ಮತ್ತು ಇತರ ಸಂತರ ಪುಸ್ತಕಗಳನ್ನು ಪ್ರತಿದಿನ ಮಧ್ಯಾಹ್ನ 3:30 ರಿಂದ 4:30ರ ನಡುವೆ ಓದಲಾಗುತ್ತದೆ.

ಪಂಚವಟಿ : ಉದ್ಯಾನದಿಂದ ಕೆಲವು ಮೆಟ್ಟಿಲು ಹತ್ತಿದರೆ ಪಂಚವಟಿಗೆ ಬರುವೆವು. ಈ ಹೆಸರು 1931 ರಲ್ಲಿ ಪ್ರೀತಿಯ ತಂದೆಯವರು ನೆಟ್ಟ ಐದು ಮರಗಳನ್ನು ಸೂಚಿಸುತ್ತದೆ.

ಭಜನಾ ಮಂದಿರ : ಕೆಲವು ಹೆಜ್ಜೆ ಮುಂದೆ ಭಜನಾ ಮಂದಿರವಿದೆ.

ಮುಂಭಾಗದಲ್ಲಿ ಧ್ವಜಸ್ತಂಭದೊಂದಿಗೆ ಭಜನಾ ಮಂದಿರ

ಭಜನಾ ಮಂದಿರದ ದಕ್ಷಿಣ ತುದಿಯಲ್ಲಿ ಒಂದು ಚಿಕ್ಕ ಕೋಣೆ ಇದೆ. ಈ ಚಿಕ್ಕ ಕೋಣೆಯೇ 1931ರಲ್ಲಿ ಪ್ರೀತಿಯ ತಂದೆಯವರು ಆರಂಭಿಸಿದ "ಆನಂದಾಶ್ರಮ".

ಶತಮಾನೋತ್ಸವ ಭವನ : ಭಜನಾ ಮಂದಿರದ ಬಲಭಾಗದಲ್ಲಿ ಶತಮಾನೋತ್ಸವ ಭವನವಿದೆ.

ಸಮಾಧಿ ಮಂದಿರಗಳು : ಮೂರು ಸಮಾಧಿ ಮಂದಿರಗಳಿವೆ - ಪ್ರೀತಿಯ ತಂದೆಯವರದು, ಪೂಜ್ಯ ತಾಯಿಯವರದು ಮತ್ತು ಸ್ವಾಮಿ ಸಚ್ಚಿದಾನಂದರದು. ಇವುಗಳು ಮುಖ್ಯ ದ್ವಾರದ ಎಡಭಾಗದಲ್ಲಿವೆ.

ಗೋಶಾಲೆ :

ಗೋಶಾಲೆ

ಆಶ್ರಮದಲ್ಲಿ ಒಂದು ಗೋಶಾಲೆಯಿದೆ. ಇಲ್ಲಿ ೫೦ಕ್ಕಿಂತ ಹೆಚ್ಚು ದನಗಳಿವೆ. ಹಾಲಿನ ಇಳುವರಿಯನ್ನು ಆಶ್ರಮ ಭೋಜನ ಶಾಲೆ (ಕ್ಯಾಂಟೀನ್) ಗೆ ರವಾನಿಸಲಾಗುತ್ತದೆ.


ಗ್ರಂಥಾಲಯ ಮತ್ತು ರಾಮನಾಮ ಬ್ಯಾಂಕ್ : ಆಶ್ರಮದಲ್ಲಿರುವ ಸುಸಜ್ಜಿತ ಗ್ರಂಥಾಲಯವು ಭೇಟಿ ನೀಡುವ ಭಕ್ತರಿಗೆ ವಿವಿಧ ಭಾಷೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಆಧ್ಯಾತ್ಮಿಕ ಮತ್ತು ಧಾರ್ಮಿಕ ಪುಸ್ತಕಗಳ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ.

ಚಿತ್ರಸಂಪುಟ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 

  1. "TOURISM IN KASARGOD". Archived from the original on 2012-04-14. Retrieved 2012-05-20.
  2. "Archived copy". Archived from the original on 9 May 2010. Retrieved 23 February 2010.{{cite web}}: CS1 maint: archived copy as title (link)