ಸದಸ್ಯ:PALLAVI BS

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
PALLAVI B S


ಪಲ್ಲವಿ .ಬಿ ಎಸ್
ಜನನ೨೦/೦೩/೨೦೦೦
ವಿರಾಜಪೇಟೆ ,ಕೊಡಗು, ಭಾರತ.
ವಿದ್ಯಾರ್ಹತೆಕ್ರೈಸ್ಟ್ ಯುನಿವರ್ಸಿಟಿ
ಪೋಷಕರುಶಿವಪ್ಪ ಬಿ ಡಿ, ತಿಲಕಾವತಿ ಬಿ ಎಸ್

ಕುಟುಂಬ

ತಲಕಾವೇರಿಯಾ ಉಗಮವಾದ ಸ್ಥಳ ಕೊಡಗು

ನನ್ನ ಹೆಸರು ಪಲ್ಲವಿ ಬಿ.ಎಸ್.ನಾನು ಮಾರ್ಚ್‌೨೦ ೨೦೦೦ ಇಸವಿಯಲ್ಲಿ ಕೋಡಗು ಜಿಲ್ಲೆಯ, ವಿರಾಜಪೇಟೆ ತಾಲೂಕಿನ ಸರಾಕಾರಿ ಆಸ್ಪತ್ರೆಯಲ್ಲಿ ಜನಿಸಿದೆ.ನನ್ನ ತಂದೆಯ ಹೆಸರು ಶಿವಪ್ಪ ಬಿಡಿ ಹಾಗೂ ಓರೆ ಅಕ್ಷರಗಳುನನ್ನ ತಾಯಿಯ ಹೆಸರು ತಿಲಕವತಿ ಬಿಎಸ್.ನನ್ನ ತಂದೆಯು ಸಿಲಿಕಾನ್ ಫೆಸಿಲಿಟಿ ಮ್ಯಾನೇಜ್ಮೆಂಟ್ ಎಂಬ ಕಂಪನಿಯಲ್ಲಿ ಕಾರ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ತಾಯಿ ಗೃಹಣಿ.ನನಗೆ ಒಬ್ಬಳು ತಂಗಿ ಇದ್ದಾಳೆ. ಅವಳ ಹೆಸರು ಭಿಂಧ್ಯ ಬಿಎಸ್.ಅವಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ.ನಾನು ನನ್ನ ಅಪ್ಪ ಅಮ್ಮನ ಜೊತೆ ವಾಸಿಸುತ್ತಿದ್ದೇನೆ.ನಾವು ಪ್ರಸ್ತುತ ಹಾಲನಾಯಕನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದೇನೆ

ವಿದ್ಯಾಭ್ಯಾಸ

ಹಬ್ಬಗಳನ್ನೂ  ಆಕರ್ಷಿಸುವ ಒಂದು ಕಲೆ

ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ ಓದಿದೆ.ನನ್ನ ಶಾಲೆಯ ದಿನಗಳು ತುಂಬಾ ಚೆನ್ನಾಗಿದ್ದವು.ನಾನು ನನ್ನ ಗೆಳೆಯ ಗೆಳತಿಯರೊಂದಿಗೆ ತುಂಬಾ ಚೆನ್ನಾಗಿ ಬೆರೆತು ಆಟವಾಡುತ್ತಿದೆ.ನನಗೆ ಚಿಕ್ಕಂದಿನಿಂದಲೂ ಭಾಷಣ ನೀಡುವುದೆಂದರೆ ತುಂಬಾ ಇಷ್ಟವಾಗುತ್ತಿತ್ತ.ಈಗಲೂ ಸಹ ನಾನು ಆದಷ್ಟು ಪ್ರಯತ್ನ ಪಟ್ಟು ಭಾಷಣ ನೀಡಲು ಪ್ರಯತ್ನಿಸುತ್ತೇನೆ.ನನಗೆ ನೃತ್ಯದಲ್ಲಿ ಬಹಳ ಆಸಕ್ತಿ ಇದೆ.ನನಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಬಹಳ ಆಸಕ್ತಿ.ನನ್ನ ಕಾಲೇಜಿನ ಜೀವನವೂ ಸಹ ತುಂಬಾ ಚೆನ್ನಾಗಿ ಇದ್ದವು.ನಾನು ನನ್ನ ಪಿಯುಸಿ ಅನ್ನು ಸೇಂಟ್‌ ಫ್ರಾನ್ಸಿಸ್ನು ಪಿಯು ಕಾಲೇಜಿನಲ್ಲಿ ಮುಗಿಸಿದೆ ನಾನು ವಾಣಿಜ್ಯ ವಿಭಾಗವನ್ನು ಆರಿಸಿಕೊಂಡೆಅಲ್ಲಿ ಪ್ರತಿಯೊಬ್ಬರಲ್ಲಿ ಇರುವ ಪ್ರತಿಭೆಯನ್ನು ಹೊರಹಾಕಲು ಇದ್ದ ಏಕೈಕ ವೇದಿಕೆ.ನಾನು ಬೆಂಕಿ ಇಲ್ಲದ ಅಡುಗೆ ,ರಂಗೋಲಿ ,ಗುಂಪಿನ ನೃತ್ಯದಲ್ಲಿಯೂ ಭಾಗವಹಿಸಿದೆ.ನಮ್ಮ ಕಾಲೇಜಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬವು ಸಹ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು.

ಸಾಧನೆ

ನಾನು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ.ನಾನು ಬಹಳಷ್ಟು ಸಾರಿ ಬಹುಮಾನವನ್ನು ಗೆದ್ದಿದ್ದೇನೆ.ನಾನು ತ್ರೋಬಾಲ್ ಕೊಕ್ಕೋ ಆಟದಲ್ಲಿಯೂ ಸಹ ಭಾಗವಹಿಸಿದ್ದೇನೆ.ಕೊಕ್ಕೋ ಕ್ರೀಡೆಯಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿದ್ದೇವೆ.ನಾನು ನನ್ನ ಶಾಲೆಯ ದಿನಗಳಲ್ಲಿ 10 ನೇ ತರಗತಿಯನ್ನು ತುಂಬಾ ಇಷ್ಟ ಪಟ್ಟು ಹಾಗೂ ಬಹಳಷ್ಟು ಮೋಜು-ಮಸ್ತಿ ನಿಂದ ಕಳೆದಿದ್ದೇವೆ.ಆ ದಿನಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ..ನನಗೆ ಹತ್ತನೇ ತರಗತಿಯಲ್ಲಿ 92% ಫಲಿತಾಂಶವಾಗಿತ್ತು.ನನ್ನೆಲ್ಲಾ ಸ್ನೇಹಿತರು ಚೆನ್ನಾಗಿ ಅಂಕಗಳನ್ನು ಪಡೆದಿದ್ದರು.ನಾನು ೧೦ನೇ ತರಗತಿಯಲ್ಲಿ ನಾನು ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಪ್ರಬಂಧ ಬರೆದಿದ್ದಕ್ಕೆ ೧೦೦೦ ರುಪಾಯಿ ಬಹುಮಾನ ದೊರೆಯಿತು.

.


ರಜೆ ದಿನಗಳು 
ಮನಸಿಗ್ಗೆ ಶಾಂತಿ ದೊರೆಯುವ ಸ್ಥಳ
ಎಲ್ಲರ ಮನ ಸೆಳೆಯುವ ಸ್ಥಳ
ನಾನು ಹೇಗೆ ನನ್ನ ಸಮಯವನ್ನು ಶಾಲೆ ಹಾಗೂ ಕಾಲೇಜಿನಲ್ಲಿ ಕಳೆಯುತ್ತೇನೆ ಹಾಗೆ ನನ್ನ ಪರಿವಾರದೊಡನೆಯು ಸಹ ಸಂತೋಷವಾಗಿ ಕಾಲ  ಕಳೆಯುತ್ತೇನೆ.ನಾನು ಹುಟ್ಟಿದ್ದು ಕರ್ನಾಟಕ ರಾಜ್ಯದಲ್ಲಿರುವ,ಒಂದು ಪುಟ್ಟ ಜಿಲ್ಲೆಯ ,ಅದುವೇ ಕೊಡಗು.ಈ ಜಿಲ್ಲೆ "ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ" ಎಂದೆ ಪ್ರಸಿದ್ಧವಾಗಿದೆ.ನನ್ನ ಅಜ್ಜಿಯ ಮನೆ ಇರುವುದು ಮಡಿಕೇರಿ ಜಿಲ್ಲೆಯ ಚೇರಂಬಾಣೆ ಎಂಬ ಒಂದು ಪುಟ್ಟ ಗ್ರಾಮದಲ್ಲಿ.ನನಗೆ ನನ್ನ ಊರಿಗೆ ಹೋಗುವುದೆಂದರೆ ಬಹಳ ಖುಷಿಯಾಗುತ್ತದೆ ಆದರೆ ಬೇಸರದ ವಿಷಯವೆಂದರೆ ನಾವು ವರ್ಷದಲ್ಲಿ ಒಂದು ಬಾರಿ ಹೋಗುತ್ತೇವೆ.ನಮ್ಮ ಅಜ್ಜಿ ತಾತ ನಮ್ಮನ್ನು ತುಂಬಾ ಚೆನ್ನಾಗಿ ಹಾಗೂ ಮುದ್ದಾಗಿ ನೋಡಿಕೊಳ್ಳುತ್ತಾರೆ.ಕೊಡಗು ಕಾಫಿ ಬೆಳೆಯುವ ಹಾಗೂ ಕಿತ್ತಳೆ ಹಣ್ಣಿಗೆ ಪ್ರಸಿದ್ಧವಾಗಿದೆ.ನಾವು ನಮ್ಮ ಪರಿವಾರದವರು ಎಲ್ಲ ಸೇರಿ ವರ್ಷದಲ್ಲಿ ಒಂದು ಬಾರಿ ತಲಕಾವೇರಿಗೆ ಹೋಗುತ್ತೇವೆ.ಅದು ಜೀವನಾಳವಾದ ಕಾವೇರಿ ನದಿ ಉಗಮವಾದ ಸ್ಥಳ.ಅಲ್ಲಿನ ವಾತಾವರಣವನ್ನು ವರ್ಣಿಸಲು ಪದಗಳು ಸಾಲದು ನೋಡಲು ಎರಡು ಕಣ್ಣುಗಳು ಸಾಲದು.ದಟ್ಟ ಕಾಡು ಮಂಜಿನಿಂದ ಕೂಡಿದ ಪ್ರದೇಶವಾಗಿರುತ್ತದೆ ಅಲ್ಲಿ ಬ್ರಹ್ಮಗಿರಿ ಬೆಟ್ಟ ಸಹ ಪ್ರಸಿದ್ಧವಾಗಿರುವುದು.ಕೊಡಗಿನಲ್ಲಿ ತುಂಬಾ ಪ್ರವಾಸೋದ್ಯಮ ಸ್ಥಳಗಳು ಇದೆ.ರಾಜ ಸೀಟ್ ,ಇರ್ಪು ಫಾಲ್ಸ್, ಗೋಲ್ಡನ್ ಟೆಂಪಲ್ ,ಮುತ್ತಪ್ಪ ದೇವಸ್ಥಾನ ,ಅಬ್ಬಿಫಾಲ್ಸ್ ,ತಲಕಾವೇರಿ,ಇತ್ಯಾದಿ ಸ್ಥಳಗಳಿವೆ.ಇದು ನನ್ನ ಊರಿನ ಪುಟ್ಟ ಪರಿಚಯ.
ಪ್ರಸ್ತುತ 
        ನಾನು ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿ ಬಿಕಾಂ ಪದವಿಯನ್ನು ಓದುತ್ತಿದ್ದೇನೆ.ಮೊದಲನೇ ಬಾರಿ ಕಾಲೇಜಿಗೆ ಬಂದಾಗ ನನಗೆ ಎಲ್ಲವೂ ಹೊಸತು ಎನಿಸುತ್ತಿತ್ತು,ಹೊಂದಿಕೊಂಡು ಹೋಗಲು ಕಷ್ಟವಾಗುತ್ತಿತ್ತು. ಆದರೆ ಈಗ ಅಭ್ಯಾಸವಾಗಿಬಿಟ್ಟಿದೆ.ರಮ್ಯಾ, ಭವ್ಯಾ ,ತೇಜಸ್ವಿನಿ ,ಸುಪ್ರಿಯಾ, ವರ್ಷಿತಾ, ಗೌರಿ ,ಬ್ಯೂಲಾ ,ಸಂಜನಾ, ಇವರೆಲ್ಲರೂ ನನ್ನ ಗೆಳತಿಯರು.ಇವರೊಡನೆ ಆಟವಾಡಿಕೊಂಡು ಮೋಜು ಮಸ್ತಿ ನಿಂದ ಸಂತೋಷವಾಗಿ ಹೊಂದಿಕೊಂಡು ಹೋಗುತ್ತಿದ್ದೇನೆ.ಅರುಣ ಮಾಂ ತರಗತಿಯ ಶಿಕ್ಷಕರು.ಇವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಯನ್ನು,ಬೆಂಬಲಿಸುತ್ತಾರೆ.ಇಲ್ಲಿ ದಿನವು ಒಂದೊಂದು ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ .ನಮಗೆ ಯಾವುದನ್ನು ಆರಿಸಿಕೊಳ್ಳಬೇಕು ಯಾವುದನ್ನು ಬಿಡಬೇಕು ಎಂಬ ಆಯ್ಕೆಯೆ ಇರುವುದಿಲ್ಲ.ನಾನು ನನ್ನ ಚಟುವಟಿಕೆಗಳು ಹಾಗೆ ಓದಿನ ಕಡೆಯು ಸಮತೋಲನವಾಗಿ ಮುಂದುವರಿಯುತ್ತಿದ್ದೇನೆ.
    ಇದು ನನ್ನ ಬಗ್ಗೆ ಹಾಗೂ ನನ್ನ ಬಾಲ್ಯದ ದಿನಗಳು ಹೇಗಿದ್ದವು ಎಂಬುವ ಒಂದು ಸಣ್ಣ ಕಥೆಯಾಗಿದೆ.ಧನ್ಯವಾದಗಳು.