ಸದಸ್ಯ:Nihaal Aaron Dsouza/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೈತರ ಮೂಲ ಕಸಬು ವ್ಯವಸಾಯ,ಇವರು ಬೆಳೆಗಳನ್ನು ಬೆಳೆಸುತ್ತಾರೆ. ತಮ್ಮ ಜೀವನಕ್ಕೆ ಬೇಕಾಗುವ ಬೇಳೆ,ಕಾಳು ಮತ್ತು ಇತರ ದವಸ ಧಾನ್ಯ ಗಳನ್ನು ತಮ್ಮ ಭೂಮಿ ಯಲ್ಲಿ ಬೆಳಸುತ್ತಾರೆ. ಇವರನ್ನು ಕೃಷಿಕರೆಂದು ಕರೆಯುತ್ತಾರೆ.ರೈತರು ಇದರ ಜೊತೆ ಕೋಳಿಸಾಕಾಣೆ,ಜೇನು ತಯಾರಿಕೆಯಲ್ಲೂ ತೊಡಗಿದ್ದಾರೆ.ರೈತರಲ್ಲಿ ಕೆಲವರು ಸ್ವಂತ ಜಮೀನಿನ್ನಲ್ಲಿ ವ್ಯವಸಾಯ ಮಾಡುತ್ತಾರೆ ಆದರೆ ಇನ್ನು ಕೆಲ ರೈತರು ತಮಗೆ ಸ್ವಂತ ಭೂಮಿಯಿಲ್ಲದೆ ಬೇರೆ ಜಮಿನ್ದಾರರ ಕೆಳಗೆ ಒಕ್ಕಲುತನ ಮಾಡುತ್ತಾರೆ ಅವರಿಗೆ ಗೇಣಿಯ ರೂಪದಲ್ಲಿ ಕೂಲಿ ಸಿಗುತ್ತದೆ.

ರೈತ

ಇತಿಹಾಸ[ಬದಲಾಯಿಸಿ]

ರೈತರು ನಮ್ಮದೇಶದ ಬೆನ್ನೆಲಬು, ಸಕಾ೯ರ ರೈತರಿಗೆ ಕೆಲವು ಸೌಲಭ್ಯಗಳನ್ನು ಕೊಡುತ್ತಾ ಬಂದಿದೆ, ರೈತರ ಸಂಫ ಸಂಸ್ಟೆಗಳು ಮೊದಲಿನಿಂದ ಬಂದಿವೆ. ವಿದ್ಯಾವಂತ ರೈತರು ಈ ಸೌಲಭ್ಯವನ್ನು ಉಪಯೋಗಿಸಿಕೊಂಡಿದ್ದಾರೆ.ಬೀಜಗಳನ್ನು ಬಿತ್ತುವುದು ಉತ್ತುವುದು ಬಡಿಯುವುದು ಎಲ್ಲಾ ಹೊಸಹೊಸ ಆಧುನಿಕ ತಂತ್ರ ಜ್ಯಾನ ಬಳಸಿಕೊಂಡು ಮಾಡುತ್ತಾರೆ .ಇದರಿಂದ ಹಲವು ರೈತರಿಗೆ ಶ್ರಮಕಡಿಮ ಯಾಗಿ ಸಮಯದ ಉಳಿತಾಯ ಜೊತೆ ಆದಾಯ ಹೆಚ್ಚಿವೆ.[೧]

ರೀತಿಯ[ಬದಲಾಯಿಸಿ]

ಕೃಷಿಯಲ್ಲಿ ಮುಖ್ಯವಾಗಿ ನಾಲ್ಕು ರೀತಿಗಳಿವೆ. ೧.ಜೀವನಾಧಾರದ ಕೃಷಿ ೨.ಪ್ಲಾಂಟೇಶನ್ ಕೃಷಿ ೩.ಕೃಷಿ ಬದಲಾವಣೆ ೪.ಮಿಶ್ರ ಕೃಷಿ ರೈತರ ಪರಿಶ್ರಮದಿಂದ ನಮಗೆಲ್ಲಾ ಆಹಾರ ದೊರೆಯುತ್ತದೆ. ರೈತರಿಗೆ ವ್ಯವಸಾಯ ಮಾಡಲು ಉತ್ತಮ ಹಾವಾಮಾನ ಇರಬೇಕು. ಸಮಯಕ್ಕೆ ಸರಿಯಾದ ಮಳೆ ಬರಬೇಕು, ಉತ್ತಮ ವಾದ ಬೀಜ ದೊರೆಯ ಬೇಕು ಹಾಗೂ ಗಿಡ-ಮರಗಳಿಗೆ ಉತ್ತಮವಾದ ರಸ ಗೊಬ್ಬರ ಹಾಕಬೇಕು,ಕೆಲವೂಮ್ಮೆ ರೈತರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮಳೆ ಸರಿಯಾಗಿ ಬರದೇಇದ್ದರೆ ಅಥವಾ ಅತೀ ಮಳೆಯಿಂದಾಗಿ ಬೆಳೆ ನಾಶವಾಗುತ್ತದ್ದೆ ಆಗ ರೈತ ನಷ್ಟವನ್ನು ಎದುರಿಸುತ್ತಾನೆ, ಕೆಲವು ರೈತರು ಕಂಗಾಲಾಗುತ್ತಾರೆ ಸಾಲ ಜಾಸ್ತಿ ಆಗುತ್ತದ್ದೆ ಬಡ್ದಿ ಕಟ್ಟಲಾಗದೆ ಚಡಪಡಿ ಸುತ್ತಾರೆ, ಸಕಾ೯ರದವರು ಇತ್ತೀಚೆಗೆ ರೈತರಿಗೆ ಹಲವು ಬಾರಿ ಸಾಲವನ್ನು ಬ್ಯಾಂಕ್ನಮೂಲಕ ಕೊಟ್ಟಿದ್ದಾರೆ.

ಕೃಷಿ ಸಂಸ್ಥೆಗಳು[ಬದಲಾಯಿಸಿ]

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ , ಮುಂಬಯಿ (ಮಹಾರಾಷ್ಟ್ರ) ಪ್ರಧಾನ ಕಾರ್ಯಾಲಯಗಳು ಹೊಂದಿರುವ ಭಾರತದಲ್ಲಿ ಒಂದು ತುದಿ ಅಭಿವೃದ್ಧಿ ಬ್ಯಾಂಕ್ ಮತ್ತು ಇತರ ಶಾಖೆಗಳನ್ನು ದೇಶಾದ್ಯಂತ ಆಗಿದೆ. ಸಮಿತಿಯ ಶ್ರೀ ಬಿ ಶಿವರಾಮನ್ ಅಧ್ಯಕ್ಷತೆಯಲ್ಲಿ ಭಾರತ (ಆರ್ಬಿಐ) ರಿಸರ್ವ್ ಬ್ಯಾಂಕ್ ಸ್ಥಾಪಿಸಲು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳು ಕ್ರೆಡಿಟ್, ವ್ಯವಸ್ಥೆ ಪರಿಶೀಲನೆಯ ಕಲ್ಪಿಸಲಾಯಿತು ಮತ್ತು ಕೃಷಿ ಮತ್ತು ಗ್ರಾಮೀಣ ರಾಷ್ಟ್ರೀಯ ಬ್ಯಾಂಕ್ ಸ್ಥಾಪನೆ ಶಿಫಾರಸು ಅಭಿವೃದ್ಧಿ (ನಬಾರ್ಡ್). ಇದು ಸಂಸತ್ತು ವಿಶೇಷ ಕಾಯಿದೆ ಪ್ರಕಾರ 12 ಜುಲೈ 1982 ರಂದು ಸ್ಥಾಪಿಸಲಾಯಿತು ಮತ್ತು ಅದರ ಮುಖ್ಯ ಗುರಿಯು ಕೃಷಿ & ಗ್ರಾಮೀಣ ಅಲ್ಲದ ಕೃಷಿ ಕ್ಷೇತ್ರದ ಎತ್ತರಕ್ಕೆ ಸಾಲ ವಿತರಣೆಯ ಹೆಚ್ಚಿಸಿ ಗ್ರಾಮೀಣ ಉದ್ಧಾರ ಮತ್ತು ಜುಲೈ 2007 12 ರಂದು ತನ್ನ 25 ವರ್ಷಗಳನ್ನು ಪೂರೈಸಿದೆ ಇದು "ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಇತರ ಆರ್ಥಿಕ ಚಟುವಟಿಕೆಗಳ ಕ್ರೆಡಿಟ್ ಕ್ಷೇತ್ರದಲ್ಲಿ ನೀತಿ, ಯೋಜನೆ ಮತ್ತು ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ" ಜೊತೆ ಮಾನ್ಯತೆ ಮಾಡಲಾಗಿದೆ. ಆರ್ಬಿಐ ಈಗ 99% ನಷ್ಟು ಪಾಲನ್ನು ಹೊಂದಿದೆ ಭಾರತದ ಸರ್ಕಾರಕ್ಕೆ ನಬಾರ್ಡ್ ನಲ್ಲಿದ್ದ ತನ್ನ ಪಾಲನ್ನು ಮಾರಿತು.ನಬಾರ್ಡ್ ಆರ್ಥಿಕ ಸೇರ್ಪಡೆ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಸಕ್ರಿಯವಾಗಿದೆ ಮತ್ತು ಹಣಕಾಸು ಸೇರ್ಪಡೆ ಅಲೈಯನ್ಸ್ ನ ಸದಸ್ಯನಾಗಿದೆ

ಆದಾಯ[ಬದಲಾಯಿಸಿ]

ರೈತರು ಬೆಳೆದ ಬೆಳೆಗಳಿಗೆ ಕೆಲವೂಮ್ಮೆ ಸರಿಯಾದ ಬೆಲೆಸಿಗುವುದಿಲ್ಲ ಮಾರುಕಟ್ಟೆಯದರವನ್ನು ಮಧ್ಯವತಿ೯ಗಳ ಹಾವಳಿ ಜಾಸ್ತಿ ಇದ್ದು ಅವರೇ ಲಾಭ ಮಾಡುತ್ತಾರೆ ಈ ಮಧ್ಯ ವತಿ೯ಗಳನ್ನು ತೆಗೆದು ಹಾಕಬೇಕು ಮುಕ್ತ ಮಾರುಕಟ್ಟೆಮಾಡಬೇಕು ಆಗ ರೈತರಿಗೂ ಗ್ರಾಹಕರಿಗೂ ಉತ್ತಮ ಬೆಲೆ ಹಾಗೂ ಗ್ರಾಹಕರಿಗೂ ಒಳ್ಳೆದಾಗುತ್ತದೆ ಕೆಲವು ಕಡೆ ಇಂತಹ ಮುಕ್ತ ಮಾರುಕಟ್ಟೆ ಯನ್ನು ಕಾಣುತ್ತೇವೆ,ಇತ್ತೀಚಿಗೆ ಬೆಳೆಯುವವರಕ್ಕಿಂತ ತಿನ್ನುವರ ಸಂಖ್ಯೆ ಜಾಸ್ತಿಯಾಗಿದೆ. ನಗರಗಳ ಹೊರವಲಯದಲ್ಲಿರುವ ಹೊಲಗದ್ದೆಗಳು ಮಾಯಾವಾಗಿ ಅಲ್ಲಲ್ಲಿ ಕಟ್ಟಡಗಳು ಮೇಲೇಳುತ್ತಿದೆ ಇದರ ಕಾರಣದಿಂದ ಬೆಳೆಗಳು ಕಡಿಮಯಾಗಿ ಧವಸದಾನ್ಯದ ಬೆಲೆ ಗಗನ ಕ್ಕೇರಿದೆ ಆಹಾರ ಉತ್ಪತ್ತಿ ಕಡಿಮಯಾಗಿದೆ ಬಡವರಿಗೆ ಜಾಸ್ತಿ ಬೆಲೆ ಕೊಟ್ಟು ದವಸಧಾನ್ಯ ಖರೀದಿಸಲು ಕಷ್ಟವಾಗಿದೆ, ರೈತರಿಗೆ ಬೆಂಬಲ ಬೆಲೆ ಅವರ ಉತ್ಪನಕ್ಕೆ ದೊರೆಯಬೇಕು ಆಗ ರೈತರು ಉತ್ಸಾಹಿಗಳಾಗುತ್ತಾರೆ, ಹೆಚ್ಚು ಹೆಚ್ಚು ಬೆಳೆ ಬೆಳೆಸುತ್ತಾರೆ ರೈತರಿಗೆ ಮೂಲ ಸೌಕಯೆ೯ ಎಲ್ಲಾವೂ ಸಕಾ೯ರದಿಂದಲೂ ಸಿಗಬೇಕು ಅವರು ನಮ್ಮ ಅನ್ನಧಾತರು ಅವರ ಶ್ರಮ,ಅವರ ಬೆವರ ಫಲದಿಂದ ಜನ ಸಾಮಾನ್ಯರಾದ ನಾವುಗಳು ಇಂದು ನೆಮ್ಮದಿಯಿಂದ ಇದ್ದೇವೆ ಪ್ರತಿಯೊಬ್ಬ ರೈತರೂ ವಿಧ್ಯಾವಂತರಾಗುವಂತೆ ಸಕಾ೯ರವು ದಾರಿಮಾಡಬೇಕು ಆಗ ಹೊಸ ಹೊಸ ತಂತ್ರಜ್ಞಾನದಿಂದ ಬೆಳೆಗಳನ್ನು ಬೆಳಸಿ ತಮ್ಮ ಭೂಮಿಯಿಂದ ಹೆಚ್ಚಿನ ಆದಾಯಗಳಿಸಬಹುದು ಹಾಗೂ ನಷ್ಟವನ್ನು ತಪ್ಪಿಸಬಹುದು ಹಲವು ರೈತರು ತಮಗೆ ನಷ್ಟವಾಗಿದೆಯೆಂದು ಪ್ರಾಣ ಕಳೆದು ಕೊಳ್ಳಬಾರದು ಎಲ್ಲದಕ್ಕೂ ಒಂದು ಮಾಗ೯ವಿದೆ ಅದನ್ನು ಇತರರೊಂದಿಗೆ ರೈತ ಭಾಂದವರು ಒಗ್ಗಟ್ಟಾಗಿ ಚಚಿ೯ಸಬೇಕು ಅಲ್ಲಲ್ಲಿ ಸಂಘು ಸಂಸ್ಥೆಗಳಿವೆ ಕೊನೆಯದಾಗಿ ರೈತರು ದೇಶದ ಬೆನ್ನೆಲುಬು ಅವರಿಂದಲೇ ನಾವುಗಳುಯಂದು ಅವರನ್ನು ಸದಾ ಸ್ಮರಿಸಬೇಕು.[೨]

ಉಲ್ಲೇಖಗಳು[ಬದಲಾಯಿಸಿ]