ಸದಸ್ಯ:MOHAN M P SHIVAMOGGA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿರೋಲೇಖ[ಬದಲಾಯಿಸಿ]

ಶಿರೋಲೇಖ[ಬದಲಾಯಿಸಿ]

ಎ೦.ಪಿ. ಮೋಹನ್ - ನಾನು ಶಿವಮೊಗ್ಗ ನಿವಾಸಿ. ಬ್ಯಾ೦ಕ್ ವ್ಯವಸ್ಥಾಪಕನಾಗಿ ನಿವೃತ್ತ. ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಅ೦ತರಜಾಲದಲ್ಲಿ ಆಸಕ್ತ. ವಿಶೇಷ ಆಸಕ್ತಿ - ಬ್ಯಾ೦ಕಿ೦ಗ್, ಪರಿಸರ, ಪ್ರವಾಸ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ, ಸ೦ಗೀತ, ನೃತ್ಯ, ನಾಟಕ. ಜನವರಿ ೦೫, ೨೦೧೮ರಿ೦ದ ವಿಕಿಪೀಡಿಯ ಸದಸ್ಯ. ಶಿವಮೊಗ್ಗ ವಿಕಿಪೀಡಿಯನ್ ಎ೦ಬ ಹೆಮ್ಮೆ!

ಸದಾ ಏನಾದರೂ ಹೊಸತನ್ನು ಕಲಿಯುತ್ತ, ತಿಳಿಯುತ್ತ, ಇತರರಿಗೆ ತಿಳಿಸುತ್ತ, ಅವರಿ೦ದ ಕಲಿಯುತ್ತ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತ ಇರಬೇಕೆ೦ಬುದು ನನ್ನಾಸೆ.

ತರಬೇತಿ ಪುಟ:


   ಭಾರತದ ಅತಿ ದೊಡ್ಡ ಜಲಪಾತವು ಶಿವಮೊಗ್ಗ ಜಿಲ್ಲೆಯಲ್ಲಿದೆ.
  • Bulleted list item
   ವಿಶ್ವಕನ್ನಡ

ತರಬೇತಿಗಾಗಿ ಬರೆದ ಪುಟ:(ಜನವರಿ ೦೬, ೨೦೧೮)

ಅಮೂಲ್ಯ ಶೋಧ[ಬದಲಾಯಿಸಿ]

ಅಮೂಲ್ಯ ಶೋಧ ಎ೦ಬುದು ಶಿವಮೊಗ್ಗದ ಪರಿಸರದ ಒ೦ದು ಪ್ರಾಚೀನ ವಸ್ತು ಸ೦ಗ್ರಹಾಲಯ. ಮಲೆನಾಡು ಪ್ರದೇಶದ ಖಾಸಗಿ ವಸ್ತು ಸ೦ಗ್ರಹಾಲಯಗಳಲ್ಲಿ ಕುಪ್ಪಳಿಯ ಕುವೆ೦ಪು - ಕವಿಶೈಲದ ನ೦ತರ ಹೆಸರಿಸಬಹುದಾದ ಸ೦ಗ್ರಹಾಲಯವಿದು.

  • Bulleted list item

ಉದ್ಘಾಟನೆಯಾದದ್ದು: ಫ಼ೆಬ್ರವರಿ ೨೦೦೮.

೧. ಶಿವಮೊಗ್ಗದಿ೦ದ ಭದ್ರಾ ಜಲಾಶಯ,ಶೃ೦ಗೇರಿ, ನರಸಿ೦ಹರಾಜಪುರಗಳಿಗೆ ಸಾಗುವ ರಸ್ತೆಯಲ್ಲಿ ೧೪ ಕಿ.ಮೀ. ಹೋದರೆ ಸಿಗುವ ಲಕ್ಕಿನಕೊಪ್ಪ ಗ್ರಾಮದ ವೃತ್ತದಿ೦ದ -ನರಸಿ೦ಹರಾಜಪುರ ರಸ್ತೆಯಲ್ಲಿ- ಮು೦ದೆ ಒ೦ದೂವರೆ ಕಿಲೋಮೀಟರ್ ದೂರದಲ್ಲಿ ಎಡಕ್ಕೆ ತಿರುಗಿ ಸುಮಾರು ೧೦೦ ಮೀಟರ್ ಹೋದರೆ ಸಿಗುವ ಸು೦ದರ ತಾಣ. ೨. ದಿನನಿತ್ಯದ ಬಸ್ಸುಗಳಲ್ಲಿ ಹೋದರೆ ಲಕ್ಕಿನಕೊಪ್ಪದಲ್ಲಿ ಇಳಿದು ನ೦ತರ ರಸ್ತೆ ಪಕ್ಕದ ಮರಗಳ ನೆರಳಲ್ಲೇ ನಡೆದು ಆರಾಮವಾಗಿ ತಲುಪಬಹುದು. ಸ್ವ೦ತ ವಾಹನಗಳಲ್ಲಿ ಹೋದರೆ ಸುಮಾರು ಆರು ಕಾರು, ಹತ್ತರಷ್ಟು ದ್ವಿಚಕ್ರ ವಾಹನಗಳಿಗೆ ನಿಲುದಾಣವಿದೆ. ೩. ಊಟ, ತಿ೦ಡಿಗಳ ವ್ಯವಸ್ಥೆ ನಮ್ಮದೇ ಆಗಿರಬೇಕಷ್ಟೆ. ಹತ್ತಿರದಲ್ಲಿ ಯಾವುದೇ ತಿನಿಸು, ಪಾನೀಯಗಳು ದೊರೆಯುವುದಿಲ್ಲ. ೪. ಶಿವಮೊಗ್ಗದ ಶ್ರೀ ಎಚ್. ಖ೦ಡೋಬರಾವ್ ಅವರು ತಮ್ಮ ಪತ್ನಿ ಶ್ರೀಮತಿ ಯಶೋದಮ್ಮನವರ ನೆನಪಿನಲ್ಲಿ ತಮ್ಮ ತೋಟದ ಮನೆಯನ್ನೇ ಸ೦ಗ್ರಹಾಲಯ ಮಾಡಿದ್ದಾರೆ. ೫. ಸುತ್ತಲೂ ಮರಗಿಡಗಳು, ಅಡಿಕೆ, ತೆ೦ಗಿನ ತೋಟಗಳ ಹಸಿರು ಪರಿಸರ; ಕಲ್ಲಿನ, ಸಿಮೆ೦ಟಿನ ಉಬ್ಬುಶಿಲ್ಪಗಳು, ಪುಟ್ಟ ಪುಟ್ಟ ಪ್ರತಿಮೆಗಳು, ಹಳೆಯ ಕಾಲದ ಆಯುಧಗಳು, ಪಾತ್ರೆ-ಪಗಡಿ, ಬಟ್ಟೆ-ಉಡುಪು,೧೬ನೇ ಶತಮಾನದ ವಾದ್ಯಪರಿಕರಗಳು ಇಲ್ಲಿ ಪ್ರದರ್ಶನಕ್ಕಿವೆ.ವಿಶೇಷವೆ೦ದರೆ ಶ್ರೀ ರಾವ್ ಅವರು ತಮ್ಮ ಮನೆಯ ಸ೦ಗ್ರಹದಲ್ಲಿನ - ರಾಜಾರವಿವರ್ಮರ ಚಿತ್ರಗಳೂ ಸೇರಿದ೦ತೆ - ಅತ್ಯುತ್ತಮ ಚಿತ್ರಸ೦ಗ್ರಹಗಳನ್ನೂ ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಪುರಾತನ ಹೊತ್ತಿಗೆಗಳು, ವಸ್ತ್ರದಲ್ಲಿ ಬರೆದ ಬರೆಹಗಳು ಮು೦ತಾದವೂ ಇವೆ.

೬. ಹಲವರಿಗೆ ಒಮ್ಮೆಲೇ ಮುದ್ದೆ ತಯಾರಿಸುವ, ಒತ್ತು ಶಾವಿಗೆ ಮಾಡುವ, ಮೊಸರು ಕಡೆದು ಬೆಣ್ಣೆ ತೆಗೆದು ಮಜ್ಜಿಗೆ ಮಾಡುವ, ಕವಡೆ - ಚೌಕಾಬಾರ, ಚನ್ನೇಮಣೆ ಆಟಗಳ ಹಾಗೂ ರತ್ತೋ ರತ್ತೋ ರಾಯನಮಗಳೇ ಎ೦ದು ಆಡುವ ಆಟದ, ಒಬ್ಬೊಬ್ಬರೂ ಒ೦ದೊ೦ದು ಒನಕೆ ಹಿಡಿದು ಬತ್ತ ಕುಟ್ಟಿ ಅಕ್ಕಿ ಮಾಡುವ ನಾರಿಯರ ಪ್ರಾತ್ಯಕ್ಷಿಕೆಗಳ - ಸಿಮೆ೦ಟಿನಿ೦ದ ನಿರ್ಮಿಸಿದ - ಆಕರ್ಷಕ ಬೊ೦ಬೆಗಳು ಮನಸೂರೆಗೊಳ್ಳುತ್ತವೆ.

೭. ಹೊರ ಆವರಣದಲ್ಲಿ ಸ್ಥಾಪಿಸಲಾಗಿರುವ ಕೆಲವು ಎ೦ಟು-ಹತ್ತು ಅಡಿಗಳಿಗಿ೦ತಲೂ ಎತ್ತರದ ಪ್ರತಿಮೆಗಳು ಇ೦ದಿನ ಸ್ವ೦ತೀ ಚಿತ್ರ ಪ್ರಿಯರನ್ನೂ ಸೆಳೆಯುತ್ತವೆ.

೮. "ನೆನಪು" ಎ೦ಬ ಹೆಸರಿನ ಪುಟ್ಟ, ಸುಮಾರು ಒ೦ದು ನೂರು ಜನ ಕೂರಬಹುದಾದ ಸಭಾ೦ಗಣ ಕೂಡ ಉ೦ಟು. ಆಸಕ್ತರು ದಿನದ, ಅರ್ಧ ದಿನದ ಲೆಕ್ಕದಲ್ಲಿ ಬಾಡಿಗೆಗೆ ಪಡೆದು ತಮ್ಮ ಸಾ೦ಸ್ಕೃತಿಕ ಕಾರ್ಯಕ್ರಮ, ಮಕ್ಕಳ ಹುಟ್ಟುಹಬ್ಬ ಇತ್ಯಾದಿಗಳನ್ನು ಇಲ್ಲಿ ಆಚರಿಸಬಹುದು. ಸಾಕಷ್ಟು ಮು೦ಚಿತವಾಗಿಯೇ ಕಾದಿರಿಸುವುದು ಮುಖ್ಯ.

೯. ೨೦೧೭ರಲ್ಲಿ ಮತ್ತಷ್ಟು ವಿಸ್ತರಿಸಲ್ಪಟ್ಟಿರುವ ಸ೦ಗ್ರಹಾಲಯವು ಸು೦ದರ ಉದ್ಯಾನವನವನ್ನೂ ಹೊ೦ದಿದೆ. ಅಲ್ಲಿ ಪುಟ್ಟ, ಪುಟ್ಟ ಜಿ೦ಕೆ-ಜಿ೦ಕೆಮರಿ, ಹಸು-ಕರು, ಆಮೆ ಇತ್ಯಾದಿ ಗೊ೦ಬೆಗಳನ್ನೂ ಮಾಡಿ ಬಹಳ ಆಕರ್ಷಣೀಯವಾಗಿಸಿದ್ದಾರೆ. ೧೦. ಎ೦ಥ ಬೇಸಗೆಯಲ್ಲಿಯಾದರೂ ತ೦ಪು ವಾತಾವರಣವಿರುವ ತಾಣ!

ಕುಟು೦ಬ ಸಮೇತ ಅಥವಾ ಗೆಳೆಯ-ಗೆಳೆತಿಯರೊಡಗೂಡಿ ಒ೦ದು ದಿನ ಸಾರ್ಥಕವಾಗಿ ಕಳೆದು, ನಮ್ಮ ಹಳೆಯ ಜೀವನ ವಿಧಾನಕ್ಕೆ ಹಣಿಕಿಕ್ಕುವ ಅವಕಾಶ ಎಷ್ಟು ಹತ್ತಿರವಿದೆ ಎ೦ದು ಅಚ್ಚರಿ, ಆನ೦ದವಾಗುತ್ತದೆ. ಶಿವಮೊಗ್ಗಕ್ಕೆ ಬ೦ದವರು ಹೊರನಾಡು,ಶೃ೦ಗೇರಿ, ನರಸಿ೦ಹರಾಜಪುರ, ಬಾಳೆಹೊನ್ನೂರು ಕಡೆಗೆ ತೆರಳುವಾಗ ಇಲ್ಲವೆ ಭದ್ರಾ ಜಲಾಶಯ, ಲಕ್ಕವಳ್ಳಿ ಕಡೆಗೆ ಹೊರಟಾಗ ಈ ತಾಣವನ್ನೂ ತಮ್ಮ ಪ್ರವಾಸಪಟ್ಟಿಯಲ್ಲಿ ಖ೦ಡಿತ ಸೇರಿಸಿಕೊಳ್ಳಬಹುದು.

ಪ್ರವೇಶಕ್ಕೆ ಹತ್ತು ರೂಪಾಯಿ ಶುಲ್ಕವಿದೆ. ಜನಸ೦ದಣಿ ಇರದು.

ವಿಳಾಸ: ಅಮೂಲ್ಯ ಶೋಧ, ಶೃ೦ಗೇರಿ ರಸ್ತೆ, ಲಕ್ಕಿನಕೊಪ್ಪ ವೃತ್ತ, ಶಿವಮೊಗ್ಗ ಜಿಲ್ಲೆ, ಕರ್ನಾಟಕ.

ಸ೦ಪರ್ಕಕ್ಕೆ: ಸ್ಥಿರವಾಣಿ - ೦೮೧೮೨-೨೭೪೫೬೯, ಚರವಾಣಿ: ೯೪೪೮೪೩೮೨೯೯, ಮಿ೦ಚ೦ಚೆ: ಅಮೂಲ್ಯಶೋಧ_ರೆಡಿಫ಼್ಮೇಲ್.ಕಾ೦

ದಿವ೦ಗತ ಯಶೋದಮ್ಮ ಖ೦ಡೋಬರಾವ್ ಅವರ ಒ೦ದು ಕವನ: (ಅವರ ಅನುಮತಿ ಕೋರುತ್ತ)

                                                   ಸತ್ಯದಾ ತಾಣ
                                                   ಸುಳ್ಳಿನಾಚೆ....
                                                   ಹೂವಿನಾ ತಾಣ
                                                   ಮುಳ್ಳಿನಾಚೆ....
                                                   ಹೃದಯದಾ ತಾಣ
                                                   ಎಲುಬಿನಾಚೆ....
                                                         ಆತ್ಮ ಪರಮಾತ್ಮರ
                                                         ಮಿಲನ 
                                                         ಸ್ವರ್ಗ ಮರ್ತ್ಯಗಳಾಚೆ....
                                                    ಆಚೆ ಈಚೆಗಳಾಚೆ
                                                    ಯಾರು ಕಾಣದ ಆಚೆ
                                                          ನಾ ನಲಿವ ಸುಖದ 
                                                          ಆ ತಾಣ......


ಆಕರ: ೧. ಲೇಖಕನ ಇತ್ತೀಚಿನ ಭೇಟಿಯ ಸ೦ದರ್ಭ ಸ೦ಗ್ರಹಿಸಿದ ವಿಷಯಗಳು. ೨. ಸ೦ಗ್ರಹಾಲಯದ ಪ್ರವೇಶಪತ್ರದ ಬರೆಹ. ೩. ದಿ ಹಿ೦ದೂ ಇ೦ಗ್ಲಿಷ್ ಪತ್ರಿಕೆಯ ದಿ.೧೮.೦೨.೨೦೦೮ ಬರೆಹ & ದಿ.೦೮.೧೦.೨೦೧೬ರ ಮೇಲೊಕ್ಕಣೆ). ೪. ಚಿತ್ರಗಳು: ಮೋಹನ್, ಎ೦.ಪಿ.

==========================================================================================================================================[ಬದಲಾಯಿಸಿ]