ಸದಸ್ಯ:Kirankumar1810455

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಟುಂಬ[ಬದಲಾಯಿಸಿ]

ಕೋಲಾರವು ಗಂಗರು ಆಳಿರುವಂತಹ ಸ್ಥಳವಿದು ಹಾಗು ಚಿನ್ನದ ಗಣಿಯೆಂದು ಪ್ರಸಿದ್ದವಾಗಿದೆ.

ನನ್ನ ಹೆಸರು ಕಿರಣ್ ಕುಮಾರ್, ನಾನು ಹುಟ್ಟಿದು ೧೭ ಅಕ್ಟೋಬರ್ ೨೦೦೦ದಲ್ಲಿ ಕೋಲಾರ ಜಿಲ್ಲೆಯ, ಶೀನಿವಾಸಪುರ ತಾಲ್ಲೂಕಿನ,ನೀಲಟೂರು ಎಂಬ ಗ್ರಾಮದಲ್ಲಿ ಜನಿಸಿದೆ.ತಂದೆ ವೆಂಕಟರಾಮರೆಡ್ಡಿ,ತಾಯಿ ಶೋಭ.ನನಗೆ ನಮ್ಮ ಅಕ್ಕ ಎಂದರೆ ಇಷ್ಟ.ನಮ್ಮ ಅಕ್ಕ ನನಗೆ ಎಲ್ಲಾ ಕೆಲಸಗಳನ್ನು ಮಾಡಿ ಕೊಡುತ್ತಾಳೆ. ನಮ್ಮ ತಂದೆ ವ್ಯವಸಾಯವನ್ನು ಮಾಡುತಿದ್ದಾರೆ,ನನ್ನ ತಾಯಿ ಗೃಹಿಣಿ,ನನ್ನ ಅಜ್ಜಿ ನನ್ನನ್ನು ಮುದ್ದಾಗಿ ನೋಡಿಕೊಳ್ಳುತ್ತಾರೆ,

ಬಾಲ್ಯದ ಜೀವನ[ಬದಲಾಯಿಸಿ]

ನನಗೆ ಬಾಲ್ಯದಿಂದಲೇ ದೈವಭಕ್ತಿ ಮನಸ್ಸಿನಲ್ಲಿ ಅಚ್ಚೊಚ್ಚಿತು.ತಂದೆ-ತಾಯಿಗಳೇ ಜೀವನ ಎಂದು ತಿಳಿದು ಬೆಳೆದವ ನಾನು.ಅಕ್ಕ ಎಂದರೆ ಅಪಾರವಾದ ಪ್ರೀತಿ. ಚಿಕ್ಕಂದಿನಲ್ಲೇ ಈಜು,ಸೈಕಲ್ ಸವಾರಿ ಕಲಿತೆ.ನಮ್ಮ ತಂದೆಯ ಹೆಸರು ವೆಂಕಟರಾಮರೆಡ್ಡಿ,ತಾಯಿಯ ಹೆಸರು ಶೊಭ,ಅಕ್ಕನ ಕೃತಿಕ ಅವರು ಈಗ ಬಿ.ಕಾಂ ಓದುತ್ತಿದ್ದಾರೆ.ನನಗೆ ನಮ್ಮ ಅಕ್ಕ ಎಂದರೆ ಇಷ್ಟ.ನಮ್ಮ ಅಕ್ಕ ನನಗೆ ಎಲ್ಲಾ ಕೆಲಸಗಳನ್ನು ಮಾಡಿ ಕೊಡುತ್ತಾಳೆ. ನಮ್ಮ ತಂದೆ ವ್ಯವಸಾಯವನ್ನು ಮಾಡುತಿದ್ದಾರೆ,ನನ್ನ ತಾಯಿ ಗೃಹಿಣಿ,ನನ್ನ ಅಜ್ಜಿ ನನ್ನನ್ನು ಮುದ್ದಾಗಿ ನೋಡಿಕೊಳ್ಳುತ್ತಾರೆ,ನಮ್ಮ ತಾತ ನನ್ನ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಕಾಲಜಿಯನ್ನು ತೋರಿಸುತ್ತಾರೆ.

ಮಾದ್ಯಮ ಶಿಕ್ಷಣ[ಬದಲಾಯಿಸಿ]

ನಾನು ಮೊದಲಿಗೆ ನನ್ನ ಶಿಕ್ಷಣ ಪ್ರಾರಂಭಿಸಲು ಶ್ರೀ ಪಾವನ ವಿದ್ಯಾ ಭವನ ಶಾಲೆಗೆ ಸೇರಿಕೊಂಡೆ. ನಾನು ಪಿಯುಸಿ ಓದುತ್ತಿರುವಾಗ ನಮ್ಮ ಮನೆಯ ಕಡೆಯಿಂದ ಹೆಚ್ಚಾಗಿ ನಮ್ಮ ತಾತ ಕಾಲೇಜಿಗೆ ಬಂದು ನಾನು ಯಾವ ರೀತಿ ಓದುತ್ತಿದ್ದೇನು ಎಂದು ಎಲ್ಲಾ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು.ನನ್ನ ಜೀವನದಲ್ಲಿ ತಂದೆ ತಾಯಿಗಿಂತ ನಮ್ಮ ತಾತ ಅಜ್ಜಿ ಮುಖ್ಯ ಪಾತ್ರರಾಗಿದ್ದಾರೆ.ನಾನು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ನನ್ನನ್ನು ನಮ್ಮ ಊರಿನೊಳಗೆ ಕರೆದುಕೊಂಡು ಹೋಗಿ ಅಂಗಡಿಯಲ್ಲಿ ತಿನ್ನಲು ತಿಂಡಿ ಕೋಡಿಸುತ್ತಿದ್ದರು.ನನಗೆ ನಾಲ್ಕುವರ್ಷ ಆದಾಗ ಶಾಲೆಗೆ ಸೇರಿಸಿದರು ನಾನು ಮೊದಲಿಗೆ ಶೀ ಪಾವನ ವಿದ್ಯಾ ಭವನ ಎಂಬ ಶಾಲೆಯಲ್ಲಿ ಎಲ್,ಕೆ,ಜಿ ಯಿಂದ ೭ನೇ ತರಗತಿವರಗೆ ಓದಿದೆ.ಅಲ್ಲಿ ಇದ್ದ ನನ್ನ ಸ್ನೇಹಿತರ ಹೆಸರು ಪವನ್,ಅಕೀಲೆಶ್,ನವೀನ್,ಕುಮಾರ್.ನಾವು ಎಲ್ಲರು ಸೇರಿ ಒಂದು ದೀನ ಬೆಂಗಳೂರು ಮಹಾನಗರಕ್ಕೆ ಹೋಗಿ ಅಲ್ಲಿದ್ದ ಪ್ರಮುಖ ಸ್ಥಳಗಳಲ್ಲಿ ನಾವೆಲ್ಲರೂ ಸೇರಿ ಚೆನ್ನಾಗಿ ಆಟವಾಡಿದೆವು.ನಾನು ೭ನೇ ತರಗತಿಯನ್ನು ಓದುತ್ತಿದ್ದಾಗ ನನ್ನ ಜೀವನದಲ್ಲಿ ಒಂದು ಸಂಘಟನೆ ನಡೆಯಿತು ಅದು ನನ್ನ ತಂದೆ ನನ್ನನ್ನು ತನ್ನ ಕೈಯಲ್ಲಿ ಎತ್ತಿಕೊಂಡರು,ಚಿಕ್ಕಂದಿನಿಂದ ನಮ್ಮ ತಂದೆ ನನ್ನನ್ನು ಎತ್ತಿಕೊಂಡಿಲ್ಲ.ನಾನು ೭ನೇಯ ಉತ್ತೀರ್ಣನಾದೆ ಎಂಟನೇಯ ತರಗತಿಯೂ ನಾನು ಓದುತ್ತಿದ್ದ ಶಾಲೆಯಲ್ಲಿ ಇಲ್ಲದ ಕಾರಣದಿಂದ ನಾನು ಮತ್ತು ನನ್ನ ಸೇಹಿತರಾದ ಪವನ್,ಅಖಿಲೇಶ್,ಕಾವ್ಯ,ಲಕ್ಷ್ಮೀ,ಜಯಂತಿ ಮುಂತಾದ ಸೇಹಿತರು ಶೀನಿವಾಸಪುರದಲ್ಲಿ ಎಸ್,ಎಫ್,ಎಸ್ ಶಾಲೆಗೆ ಸೇರಿದೆವು.ನಾನು ಕನ್ನಡ ಮಾಧ್ಯಮದಿಂದ ಹೋಗಿದ್ದ ಕಾರಣದಿಂದಾಗಿ ಇಂಗ್ಲೀಷ್ ಭಾಷೆ ಕಷ್ಟವಾಯಿತು ಆದರೆ ನಾನು ಕಷ್ಟಪಟ್ಟು ಕಲಿತೆ,ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದರು.ಎಂಟನೇ ತರಗತಿಯಲ್ಲಿ ನಾನು ಶೇಕಡ ೮೭% ತೆಗೆದುಕೊಂಡು ಉತ್ತೀರ್ಣನಾದೆ.

ಪ್ರವಾಸ[ಬದಲಾಯಿಸಿ]

ಒಂಬತ್ತನೇಯ  ,ತರಗತಿಯಲ್ಲಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಉಡುಪಿ,ಕೇರಳ ನಂತರ ಸುಮಾರು ಐದು ಬಾರಿ ತಮಿಳುನಾಡಿನ ಪ್ರಸಿದ್ಧವಾದ ದೇವಸ್ಥಾನ ಭೇಟಿ ನೀಡಿದೆ. ಕರ್ನಾಟಕದಲ್ಲಿ ಪ್ರಸಿದ್ಧವಾದ ಮೈಸೂರು ಅರಮನೆಗೆ,  ಶೃಂಗೇರಿ, ಮಂಗಳೂರು ಮುಂತಾದ ಸ್ಧಳಗಳಿಗೆ ಹೋಗ್ಗಿದೆ ಮತ್ತು ಇತರೆ ಕೆಲವು ಪ್ ರದೇಶಗಳಿಗೆ ಹೋಗಿ ತುಂಬಾ ಸಂತಸದಿಂದ ಸಮಯ ಕಳೆದೆವು.
ಮಕ್ಕಳಿಗೂ ಹಾಗೂ ಎಲ್ಲರಿಗೂ ಸಂತೋಷವನ್ನು ನೀಡುವ ಸ್ಥಳವಾಗಿದೆ.

ಹತ್ತನೇಯ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯಿಂದ ನಮ್ಮನ್ನು ವಂಡರ್ಲಾ ಗೆ ಕರೆದುಕೊಂಡು ಹೋದರು ಅಲ್ಲಿ ನಾವು ತುಂಬಾ ಸಂತಸದಿಂದ ಕುಣಿದೆವು.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಬಹಳ ‌ಕಷ್ಟಪಟ್ಟದು ಹತ್ತನೆಯ ತರಗತಿಯಲ್ಲಿ ಬೆಳ್ಳಗೆ ಎದು ಆರು ಗಂಟೆಗೆ ಶಾಲೆಗೆ ಹೋಗಬೇಕಾಗಿತ್ತು.ದಿನ ಪೂರ್ತಿ ಶಾಲೆಯಲ್ಲಿ ಓದ ಬೇಕಾಗಿತ್ತು ಮತ್ತು ರಾತ್ರಿ ಏಳು ಗಂಟೆ ಅವಧಿಯ ಸಮಯದಲ್ಲಿ ಮನೆಗೆ ಹೋಗಬೇಕಾಗಿತ್ತು.ಕೊನೆಗೆ ನಾನು ಹತ್ತನೇಯ ತರಗತಿಯಲ್ಲಿ ಶೇಕಡಾ ೯೧% ತೆಗೆದುಕೊಂಡು ಉತ್ತೀರ್ಣನಾದೆ.ನನ್ನನ್ನು ವಿಜ್ಞಾನ ವಿಭಾಗಕ್ಕೆ ಸೇರುವಂತೆ ನಮ್ಮ ತಂದೆ ತಾಯಿ ,ಊರಿನ ಜನರು ಮತ್ತು ಅನೇಕ ಪ್ರಮುಖ ವ್ಯಕ್ತಿಗಳು ಹೇಳಿದರು ಆದರೆ ಅವರು ಹೇಳಿದಂತೆ ನಾನು ಮಾಡಲಿಲ್ಲ ಏಕೆಂದರೆ ನನಗೆ‌‌‌ ವಿಜ್ಞಾನದ ವಿಭಾಗದಲ್ಲಿ ಆಸಕ್ತಿ ಇರಲಿಲ್ಲ, ನಾನು ನನ್ನ ಓದು ಮುಂದುವರಿಸುವುದಕ್ಕೆ ಗಂಗೋತ್ರಿ ಪದವಿ ಪೂರ್ವ ಕಾಲೇಜ್‌ನಲ್ಲಿ ವಾಣಿಜ್ಯವಿಭಾಗಕ್ಕೆ ಸೇರಿಕೊಂಡೆ.ನನಗೆ ತುಂಬಾ ಹೆಚ್ಚು ಸ್ನೇಹಿತರು ಪರಿಚಯರಾದರು.ಅಲ್ಲಿದ್ದ ಶಿಕ್ಷಕರು ನನ್ನನ್ನು ಚೆನ್ನಾಗಿ ಪ್ರೋತ್ಸಾಹ ನೀಡಿದರು. ನಾನು ಅಲ್ಲಿ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿದೆ.ಅದೇ ರೀತಿಯಲ್ಲಿ ನಾನು ದ್ವಿತೀಯ ಪಿಯುಸಿನಲ್ಲಿ ಉತ್ತಮ ರೀತಿಯಲ್ಲಿ ಅಂಕಗಳನ್ನು ಗಳಿಸಿದೆ.ನಂತರ ನಾನು ಮುಂದಿನ ಓದನ್ನು ಎಲ್ಲಿ ಮಾಡಬೇಕೆಂದು ಗೊತ್ತಿರಲಿಲ್ಲ. ನಂತರ ತುಂಬಾ ಕಾಲೇಜುಗಳಲ್ಲಿ ಪ್ರಯತ್ನ ಮಾಡಿದೆನು.ಕೊನೆಗೆ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡೆನು.