ಸದಸ್ಯ:ನಿಧಿ ಪ್ರಸನ್ನ/ನನ್ನ ಪ್ರಯೋಗಪುಟ
ಉದ್ಯಾವರ ಮಾಧವ ಆಚಾರ್ಯ
ಉದ್ಯಾವರ ಮಾಧವ ಆಚಾರ್ಯ ಶ್ರೇಷ್ಠ ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧರು.೨೫-೦೩-೧೯೪೧ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ[೧] ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ 'ರಾಸವಿಲಾಸ'ಎಂಬ ಕೃತಿಯನ್ನು ರಚಿಸಿದ್ದರು.ತಾಯಿ ಯು.ಲಲಿತಾಲಕ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಮಗನ ಕಲಾ ಬದುಕಿಗೆ ಅಚ್ಚಳಿಯದ ಪ್ರಭಾವ ಬೀರಿದವರು. ಅಲ್ಲಿಂದ ಯಕ್ಷಗಾನ,ಕೋಲ,ನಾಗಮಂಡಲ,ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡವರು.
ವಿದ್ಯಾಭ್ಯಾಸ[ಬದಲಾಯಿಸಿ]
ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ,ಬೆಂಗಳೂರು ವಿಶ್ವವಿದ್ಯಾಲಯದಿಂದ[೨] ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ವೃತ್ತಿ ಜೀವನ[ಬದಲಾಯಿಸಿ]
ಕುಂದಾಪುರದ ಭಂಡಾರ್ಕಸ್ ಕಾಲೇಜಿನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಆರಂಭಿಸ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು,ಕುಂದಾಪುರದ [೩] ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಪೂರ್ಣ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ[ಬದಲಾಯಿಸಿ]
ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ್ದರೂ ಸಾಹಿತ್ಯಿಕವಾಗಿ,ಸಾಂಸ್ಕೃತಿಕವಾಗಿ ಆಚಾರ್ಯರು ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಾಧವ ಆಚಾರ್ಯರು ತಮ್ಮನ್ನು ಕಂಡುಕೊಂಡಿದ್ದು ಸಣ್ಣಕಥೆಗಳ ಮೂಲಕ.
ಕಥಾ ಸಂಕಲನಗಳು
- ಬಾಗಿದ ಮರ
- ಭಾಗದೊಡ್ಡಮ್ಮನ ಕಥೆ
- ಅಪರಾಧ ಸಹಸ್ರಾಣಿ ಕಥೆ
ಪ್ರಬಂಧ ಸಂಕಲನಗಳು
- ಬೆಳಕಿನೆಡೆಗೆ
- ಹಾಡಿ
- ನೀಡು ಪಾಥೇಯವನು
- ಸೀಳು ಬಿದಿರಿನ ಸಿಳ್ಳು
- ರಂಗಪ್ರಬಂಧಗಳು
- ನೃತ್ಯ ಪ್ರಬಂಧಗಳು
- ಯಕ್ಷಪ್ರಬಂಧಗಳು
- ಸಾಹಿತ್ಯ ಸ್ಪಂದನ
- ಲಘು ಬಿಗು ಪ್ರಬಂಧಗಳು
ಕವನ ಸಂಕಲನಗಳು
- ರಂಗಸ್ಥಳದ ಕನವರಿಕೆಗಳು
- ಹೂ ಮಿಡಿ ಹಾಡು
ನಾಟಕಗಳು
- ಇದ್ದಕ್ಕಿದ್ದಂತೆ ನಾಟಕ
- ಎದೆಯೊಳಗಣ ದೀಪ
- ಗೋಡೆ
- ಕೃಷ್ಣನ ಸೋಲು
- ರಾಣಿ ಅಬ್ಬಕ್ಕ ದೇವಿ
- ಗಾಂಧಾರಿ
- ರಾಧೆ ಎಂಬ ಗಾಥೆ
- ನೆನಪೆಂಬ ನವಿಲುಗರಿ
ರಂಗಭೂಮಿಯ ಸಾಧನೆ[ಬದಲಾಯಿಸಿ]
ಸಮೂಹ ಎಂಬ ಪರಿಕಲ್ಪನೆಯಲ್ಲಿ ಒಂದು ಲಾಂಛನವನ್ನು ರೂಪಿಸಿ ಸುಮಾರು ೧೯೫೦-೫೧ರಿಂದ ಇದುವರೆಗೆ ಸಂಯೋಜಿಸಿದ, ನಿರ್ದೇಶಿಸಿದ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಇವರದು.
ನೃತ್ಯರೂಪಕಗಳು ಮತ್ತು ನಾಟಕಗಳು[ಬದಲಾಯಿಸಿ]
- ಅಂಧಯುಗ
- ಬ್ರಹ್ಮಕಪಾಲ
- ಅರುಂಧತಿ
- ಹಂಸ ದಮಯಂತಿ
- ಶಬರಿ
- ಅಶ್ವತ್ಥಾಮನ್
- ಹೆಬ್ಬೆರಳು
- ಸತ್ಯಾಯನ ಹರಿಶ್ಚಂದ್ರ
- ಅಹಲ್ಯೆ
- ಶ್ರೀಹರಿಚರಿತೆ
- ಹರಿಣಾಭಿಸರಣ
- ಕುಚೇಲ ಕೃಷ್ಣ
- ಸೀತಾಪಹರಣ
- ಚಿತ್ರಾಂಗದೆ
- ವೃಂದಾವನ
- ಹರಿದಾಸ ವಿಜಯ
- ಅವತಾರ ವೈಭವ
- ಶ್ರೀ ಮನೋಹರ ಬಿಲ್ಲಹಬ್ಬ
- ಆನಂದ ಮುಕುಂದ
- ಭಗವದ್ಗೀತಾ ನೃತ್ಯ ವೈಭವ
- ನವನೀತ ಲಹರಿ
- ಸಾಕ್ಷಾತ್ಕಾರ
- ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ
- ಅರಗಿನ ಬೆಟ್ಟ
- ಋತುಗೀತೆ
- ಮುಕ್ತದ್ವಾರ
- ಶ್ವಮೇಧ
- ಮಾದ್ರಿಯ ಚಿತೆ
- ಹೊನ್ನಿಯ ಮದುವೆ
- ಹಿಡಿಂಬೆ
- ಮಹಾಯೋಗಿ
- ಮತ್ತೆ ರಾಮನ ಕತೆ
- ರುಕ್ಮಿಣೀಶ ವಿಜಯ
- ನಾರದ ಕೊರವಂಜಿ
- ಕೀಚಕ ವಧೆ ರೂಪಕ
- ಉಪನಿಷದುದ್ಯಾನಂ
- ವಲ್ಮೀಕ ನಿನಾನದ
- ತಿರುನೀಲಕಂಠ
- ನೆನಪಾದಳು ಶಕುಂತಲೆ
- ಕುವರ ಭಸ್ಮಾಸುರ
- ಪಾಂಚಾಲಿ
- ಭೀಷ್ಮ ಸತ್ಯವ್ರತನಾದದ್ದು
- ಅಂಬೆ
- ಜ್ವಾಲೆ
ವಿಶೇಷ ಸಾಧನೆಗಳು[ಬದಲಾಯಿಸಿ]
ಮಂಗಳೂರು[೪] ಆಕಾಶವಾಣಿಯ ಕಲಾವಿದರಾಗಿರುವ ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅಲ್ಲದೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು ಅವುಗಳಲ್ಲಿ ಗುಡ್ಡದ ಭೂತ ಧಾರವಾಹಿಯಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ.
ಗೌರವಗಳು[ಬದಲಾಯಿಸಿ]
- ೧೯೯೭ರಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
- ರಂಗಭೂಮಿ ಕಲಾಸಂಸ್ಥೆಯಿಂದ 'ರಂಗವಿಶಾರದ' ಬಿರುದು
- ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೫]
- ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ,ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.