ಸದಸ್ಯ:ಅಮೃತಾ ನಾಯ್ಕ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಣಕಟ್ಟೆ - ಬ್ರಹ್ಮಲಿಂಗೇಶ್ವರ[ಬದಲಾಯಿಸಿ]

ಮಾರಣಕಟ್ಟೆಯು ಕುಂದಾಪುರದಿಂದ ಕೊಲ್ಲೂರು ಮಾರ್ಗದಲ್ಲಿ ಕುಂದಾಪುರದಿಂದ ೧೬ಕಿಮೀ ದೂರದಲ್ಲಿದೆ.ಈ ಗ್ರಾಮವನ್ನು ಕಂಚಿನಕೋಡ್ಲು ಎಂದೂ ಕರೆಯುತ್ತಾರೆ. ಇಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದೆ. ಇದು ಉತ್ತರ ದಿಕ್ಕಿನಲ್ಲಿರುವ ಬ್ರಹ್ಮಕುಂಡ ನದಿಯ ದಡದಲ್ಲಿದೆ. ಇದು ಪೂರ್ವಕ್ಕೆ ಕಡಿದಾದ ತಿರುವು ಪಡೆದು ಇದರ ಸೌದಂರ್ಯವನ್ನು ಹೆಚ್ಚಿಸುತ್ತದೆ.

ಪೂಜೆ[ಬದಲಾಯಿಸಿ]

ಪ್ರತಿ ಮಕರಸಂಕ್ರಾತಿ ಎಂದು ಭಕ್ತಾದಿಗಳು ಬಂದು ಪೂಜೆ ,ಹಣ್ಣುಕಾಯಿ , ಮಂಗಳಾರತಿ ಯನ್ನು ಕೊಡುತ್ತಾರೆ. ರಂಗಪೂಜೆಯು ಈ ದೇವರಿಗೆ ಇಷ್ಟವಾದ ಪೂಜೆ. ಯಕ್ಷಗಾನವು ಕೂಡ ಇ ದೇವರ ಪ್ರೀಯವಾದ ಸೇವೆಯಾಗಿದೆ.

ಜಾತ್ರೆ[ಬದಲಾಯಿಸಿ]

ಪ್ರತಿ ವರ್ಷದ ಜನವರಿ ತಿಂಗಳ ೧೪ ಮತ್ತು ೧೫ ರ ಮಕರ ಸಕ್ರಾಂತಿ ಎಂದು ಇಲ್ಲಿ ಜಾತ‍್ರೆ ನೆಡೆಯುತ್ತೆ. ಇದಕ್ಕೆ ಬೇರೆ ಬೇರೆ ಕಡೆಯಿಂದ ಭಕ‍್ತಾದೀಗಳು ಆಗಮನಿಸುತ್ತಾರೆ.

ದೇವಸ್ಥಾನದ ವಿಶೇಷ ಕಾರ್ಯಕ್ರಮ_ಉತ್ಸವಾದಿಗಳೂ:

  1. ಮಕರಸಂಕ್ರಮಣ(ಜಾತ್ರೆ) ನಂತರ ಎರಡು ದಿನ ಮಂಡಲ ಉತ್ಸವ(ಜನವರಿ)
  2. ಕುಂಭ ಸಂಕ್ರಮಣ(ಕಿರು ಜಾತ್ರೆ)(‍ಫೆಬ್ರವರಿ)
  3. ವರ್ಷದ ಮೂರು ಕಾಲದಲ್ಲಿ ಚರುವಿನಪೂಜೆ(ವೃಷ್ಟಿಕ ಮಾಸ , ಮೇಷ ಮಾಸ, ಸಿಂಹ ಮಾಸ)
  4. ಸೌರಮಾನ ಯುಗಾದಿ
  5. ದೀಪಾವಳಿ

ಉಲ್ಲೇಖಗಳು[ಬದಲಾಯಿಸಿ]