ಸದಸ್ಯರ ಚರ್ಚೆಪುಟ:Veenavadivya

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Veenavadivya


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೬:೩೦, ೯ ಅಕ್ಟೋಬರ್ ೨೦೧೮ (UTC)

ಹಾನುಬಾಳು ಗ್ರಾಮದ ವಿಶೇಷತೆ[ಬದಲಾಯಿಸಿ]

          ಮಲೆನಾಡಿನ  ಮಡಿಲಲ್ಲಿ ಸಕಲ ಐಶ್ವರ್ಯಾಗಳಿಂದ  ಕೂಡಿದ ಹೇಮಾವತಿ ನದಿಯ ದಡದಲ್ಲಿರುವುದೇ  ನಮ್ಮ ಸಕಲೇಶಪುರ .ಸಕಲೇಶಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಹೋಬಳಿ ಗ್ರಾಮವೇ ಹಾನುಬಾಳು.ಹಾನುಬಾಳು ಹಚ್ಚ ಹಸಿರಿನ ವನ ಸಿರಿಯನ್ನು ಹೊಂದಿರುವ ಗ್ರಾಮವಾಗಿದೆ. ಪ್ರವಾಸಿಗರನ್ನು ವಾರದ ಅಂತ್ಯದಲ್ಲಿ & ರಜ ದಿನಗಳಲ್ಲಿ ಪ್ರವಾಸಿಗರನ್ನು ತನ್ನತ್ತಾ ಕೈ ಬೀಸಿ ಕರೆಯುತ್ತದೆ.
      ಗ್ರಾಮವು ಬಹು ಸಂಸ್ಕೃತಿಯನ್ನು  ಹೊಂದಿರುವ ಗ್ರಾಮವಾಗಿದೆ.ಇಲ್ಲಿ  ಹಲವಾರು ಹಬ್ಬಗಳ ಆಚರಣೆಯನ್ನು  ಕಾಣಬಹುದಾಗಿದೆ.ನಮ್ಮ ಗ್ರಾಮದಲ್ಲಿ  ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯು  ಪ್ರಮುಖವಾಗಿದ್ದು, ಈ ಸಂಧರ್ಭದಲ್ಲಿ  ಜಾತ್ರಾ ಮಹೋತ್ಸವ ನಡೆಯುವುದನ್ನು ಕಾಣಬಹುದಾಗಿದೆ. ಈ ಜಾತ್ರೆಯನ್ನು ಗುಂಡು ಬ್ರಹ್ಮ ಜಾತ್ರಾ ಮಹೋತ್ಸವವೆಂದು ಕರೆಯುತ್ತೇವೆ. ಈ ಜಾತ್ರೆಯು ಉದ್ದಿ ಗುಡ್ಡ ಎಂಬ ಜಾಗದಲ್ಲಿ ನಡೆಯುತ್ತದೆ. ಈ ಸ್ಥಳದಲ್ಲಿ ಮೂರು ಗ್ರಾಮದ ದೇವರ ಮೂರ್ತಿಗಳು ಸೇರುತ್ತವೆ. ಮಕ್ಕಿಹಳ್ಳಿ, ಅಗನಿ & ಹಾನುಬಾಳು ಗ್ರಾಮದ ದೇವರುಗಳು ಸೇರುತ್ತವೆ. ಈ ಜಾತ್ರೆಯಲ್ಲಿ ಬಿದಿರಿನಿಂದ ಮಾಡಿದ "ಸತ್ತಿಗೆ" ಎಂಬುದು ವಿಶೇಷವಾಗಿದೆ.
     ಹಾನುಬಾಳು  ಗ್ರಾಮದಲ್ಲಿರುವ ಸರ್ಕಾರಿ  ಪ್ರಾಥಮಿಕ ಶಾಲೆಯು ತನ್ನ  ಶತಮಾನೋತ್ಸವವನ್ನು ಆಚರಿಸಿದೆ.ಹಳೆಯ  ಕಟ್ಟಡವು ಉತ್ತಮವಾಗಿಲ್ಲದೆ  ಇರುವುದರಿಂದ ನೂತನ ಕಟ್ಟಡದ  ಕಾರ್ಯರಂಭದಲ್ಲಿ ಸಾಗುತ್ತಿದೆ. ಈ ಕಟ್ಟಡದ ಕಾರ್ಯರಂಭದಲ್ಲಿ  ಗ್ರಾಮಸ್ಥರು ,ದಾನಿಗಳು, ಹಳೆ  ವಿದ್ಯಾರ್ಥಿಗಳ ಸಂಘದ ಕೊಡುಗೆಯಾಗಿದೆ. ಈ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜು ಕಲಾ & ವಾಣಿಜ್ಯ ವಿಭಾಗವನ್ನು ಹೊಂದಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆ ಕೊಡುಗೆ ನೀಡಿದ್ದಾರೆ. ಈ ಕಾಲೇಜಿನ ದ್ವಿತೀಯ ಪಿ.ಯು.ಸಿ.ಪಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ೯೮% ಮತ್ತು ವಾಣಿಜ್ಯ ವಿಭಾಗದಲ್ಲಿ ೧೦೦%  ಫಲತಾಂಶ ನೀಡಿದೆ. ಈ ಕಾಲೇಜು ಉತ್ತಮ ಕ್ರೀಡಾಪಟುಗಳನ್ನು ಹೊಂದ್ಧಿದ್ದು,ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸತತವಾಗಿ ಎರಡು ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗವನ್ನು ಕಾಣಬಹುದಾಗಿದೆ