ಸದಸ್ಯರ ಚರ್ಚೆಪುಟ:Suragimath
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
ಪಾಲಗಿರಿ (talk) ೦೨:೪೮, ೧೫ ಜೂನ್ ೨೦೧೩ (UTC)
ಮಳೆ ಬೆಳೆ ವ್ಯಾಪಾರ ಫಲ ೨೦೧೩
ಈ ವರ್ಷದಲ್ಲಿ ಮಳೆ ಸಾಧಾರಣವಾಗಿದ್ದು ಕೆಲ ಕಡೆ ಉತ್ತಮ ಮಳೆ ಆಗುವುದು. ಖಂಡ ವೃಷ್ಟಿ ಮಳೆ ಕಂಡುಬರುವುದು. ಹಿಂಗಾರು ಬೆಳೆ ಉತ್ತಮವಾಗಲಿದೆ. ನೆಲ್ಲು,ಕಡ್ಲೆ, ಅಗಸಿ, ಕುಸುಬೆ, ತೊಗರೆ, ಬಿಳಿಜೋಳ, ಗೋದಿ ಉತ್ತಮ ಫಸಲಾಗುತ್ತದೆ. ಪುನರ್ವಸು, ಆಶ್ಲೇಷ, ಮಘ ಉತ್ತಮ ಮಳೆ ಆಗುವುದು. ಬಿಹಾರ್ ಕಡೆ ಬರವಿದೆ, ರಾಜಸ್ತಾನಕ್ಕೆ ಅನಿಷ್ಟವಿದೆ. ಆಡು, ಕುರಿಗಳಿಗೆ ಪೀಡೆ ಇದೆ. ಧಾನ್ಯಗಳ ಬೆಲೆಗಳು ಗಗನಕ್ಕೆರುವವು. ಅಗ್ನಿ ಅನಾಹುತ ಕಂಡುಬರುವುದು . ಬೆಳೆ ಗಳಿಗೆ ಕೀಠಭಾದೆ ಇದೆ. ಮಾನ್ಸೂನ್ಸ
ಮಯಕ್ಕೆ ಸರಿಯಾಗಿ ಬಂದರು ಬಿರುಗಾಳಿಗೆ ಸಿಲುಕಿ ಕೆಲ ಪ್ರದೇಶಕ್ಕೆ ಹೆಚ್ಚಾಗಿ ಮಳೆಯಾಗಿ, ಪ್ರವಾಹದ ಹಾವಳಿ ಕಂಡುಬರುವುದು. ಕೆಲಕಡೆ ಮಳೆ ಇಲ್ಲದೆ ಬರದ ಛಾಯೆ ಕವಿಯುವುದು. ಮೃಗಶೀರ: ದಿನಾಂಕ ೮ ಜೂನ್ ೨೦೧೩ ಬೆಳೆಗ್ಗೆ ೫:೩೫ಕ್ಕೆ ಪ್ರವೇಶವಿದ್ದು ವೃಷಭ ಲಗ್ನ ಇಂದ್ರ ಮಂಡಲ ಯೋಗವಿದೆ. ೯ ರಿಂದ ೧೫ ಉತ್ತಮ ಮಳೆ, ದಿನಾಂಕ ೨೧ ಮಳೆ ಇದೆ. ಆರಿದ್ರ: ದಿನಾಂಕ ೨೨ ಜೂನ್ ೨೦೧೩ ಬೆಳೆಗ್ಗೆ ೪:೩೩ ಪ್ರವೇಶವಿದ್ದು ವೃಷಭ ಲಗ್ನ ಇಂದ್ರ ಮಂಡಲ ಯೋಗವಿದೆ. ದಿನಾಂಕ ೨೨ ರಿಂದ ೨೬ ಮಳೆ ಸಂಭವ. ದಿನಾಂಕ ೩,೪ ಮಳೆ ಉಂಟು.
ಪುನರ್ವಸು: ದಿನಾಂಕ ೬ ಜುಲೈ ೨೦೧೩ ಬೆಳೆಗ್ಗೆ ೪:೦೮ ನಿಮಿಷಕ್ಕೆ ಪ್ರವೇಶವಿದ್ದು ವೃಷಭ ಲಗ್ನ ವಾಯುಮಂಡಲವಿದೆ. ದಿನಾಂಕ ೬ ರಿಂದ ೧೦ ಮಳೆ ಸಂಭವವಿದೆ. ದಿನಾಂಕ ೧೬ ರಿಂದ ೧೮ ಉತ್ತಮ ಮಳೆಯಾಗಿ ಸಂತಸವಾಗುವುದು.
ಪುಷ್ಯ: ದಿನಾಂಕ ೧೯ ಜುಲೈ ೨೦೧೩ ಉತ್ತರ ರಾತ್ರಿ ೩:೩೬ ಕ್ಕೆ ಪ್ರವೇಶವಿದ್ದು ಮಿಥುನ ಲಗ್ನ ವಾಯುಮಂಡಲ ಯೋಗವಿದೆ. ದಿನಾಂಕ ೨೨ ರಿಂದ ೨೪ ಮತ್ತು ೨೯,೩೦ ಮಳೆ ಸಂಭವವಿದೆ. ಆಶ್ಲೇಷ: ದಿನಾಂಕ ೨ ಆಗಸ್ಟ್ ೨೦೧೩ ಉತ್ತರ ರಾತ್ರಿ ೨:೩೨ ನಿಮಿಷಕ್ಕೆ ವೃಷಭ ಲಗ್ನ ವಾಯು ಮಂಡಲದಲ್ಲಿ ಉದಿತವಿದ್ದು, ದಿನಾಂಕ ೨ ರಿಂದ ೯ ಉತ್ತಮ ಮಳೆಯಾಗುವುದು. ರಾಜಕೀಯ ಕಲಹದ ಗಾಳಿ ಬೀಸುವುದು. ಪ್ರಜರಿಗೆ ಪೀಡೆ ಇದೆ, ದಿನಾಂಕ ೧೧,೧೨ ಉತ್ತಮ ಮಳೆ. ಮಘಾ: ದಿನಾಂಕ ೧೬ ಆಗಸ್ಟ್ ೨೦೧೩ ರಾತ್ರಿ ೧೨:೦೭ ಕ್ಕೆ ವೃಷಭ ಲಗ್ನ ಅಗ್ನಿಮಂಡಲ ಯೋಗವಿದೆ ಗುರು, ಶುಕ್ರನ ನಡುವೆ ಮಂಗಳ ನಿರಲು ಮಳೆ ಇಲ್ಲ. ದಿನಾಂಕ ೧೬ ರಿಂದ ೧೮ ಮಳೆ ಸಂಭವ, ದಿನಾಂಕ ೨೦ ರಿಂದ ೨೨ ಮಳೆ ಇದೆ. ಪುಬ್ಬ: ದಿನಾಂಕ ೩೦ ಆಗಸ್ಟ್ ೨೦೧೩ ರಾತ್ರಿ ೮ ಕ್ಕೆ ಮೀನ ಲಗ್ನ ವರುಣಮಂಡಲದಲ್ಲಿ ಪ್ರವೇಶವಿದ್ದು, ದಿನಾಂಕ ೩೧ ಅಗುಸ್ಟ್, ಸೆಪ್ಟೆಂಬರ್ ೧,೨ ಮಳೆ ಸಂಭವ ದಿನಾಂಕ ೫ ರಿಂದ ೯ ಮಳೆ ಯುಂಟು. ಉತ್ತರ ದಿನಾಂಕ ೧೩ ಸೆಪ್ಟೆಂಬರ್ ೨೦೧೩ ಮಧ್ಯಾಹ್ನ ೧:೫೫ ಧನು ಲಗ್ನ ವರುಣಮಂಡಲ ಪ್ರವೇಶವಿದ್ದು, ದಿನಾಂಕ ೧೬,೧೮,೨೨ ಮಳೆ ಸಂಭವ. ದಿನಾಂಕ ೨೪-೨೬ ಉತ್ತಮ ಮಳೆ ಇದೆ. ಹಸ್ತ: ದಿನಾಂಕ ೨೭ ಸೆಪ್ಟೆಂಬರ್ ೨೦೧೩ ಬೆಳಗ್ಗೆ ೫:೩೦ ಕ್ಕೆ ಸಿಂಹ ಲಗ್ನ ವಾಯುಮಂಡಲ ಯೋಗವಿದೆ. ದಿನಾಂಕ ೧ ರಿಂದ ೮ ಉತ್ತಮ ಮಳೆ ಯಾಗುವುದು. ಚಿತ್ತಾ ೧೦ ಅಕ್ಟೋಬರ್ ೨೦೧೩ ಸಾಯಂಕಾಲ ೬:೨೫ ಕ್ಕೆ ವರುಣಮಂಡಲ ಮೀನ ಲಗ್ನವಿದೆ. ದಿನಾಂಕ ೧೬ ರಿಂದ ೧೮ ಮಳೆ ಸಂಭವವಿದೆ. ಸ್ವಾತಿ ದಿನಾಂಕ ೨೪ ಅಕ್ಟೋಬರ್ ೨೦೧೩ ಬೆಳೆಗ್ಗೆ ೫ ಘಂಟೆ ಕನ್ಯಾ ಲಗ್ನವಿದ್ದು, ದಿನಾಂಕ ೨೫,೨೬ ಮತ್ತು ನವೆಂಬರ್ ೩ ಮತ್ತು ೮ ಮಳೆ ಯುಂಟು. ಜೇಷ್ಟ ಮಾಸದಿಂದ ಆಷಾಢ ಮಾಸದವರೆಗೆ ಬೆಳ್ಳಿ, ಬಂಗಾರ, ಬೆಲ್ಲ, ಎಣ್ಣಿ, ಧಾನ್ಯಗಳ ಬೆಲೆಗಳು ತೇಜಿಯಾಗುವುದು. ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ದವಸಧಾನ್ಯಗಳ ಬೆಲೆಯಲ್ಲಿ ಮಂದಿಯಗುವುದು. ಷೇರು ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಕಂಪನಿ ಷೇರು ಮಂದಿಯಾಗುವುದು. ಆಶ್ವಿಜ ಮಾಸದ ಪಕ್ಷಗ್ರಹಣ ಪ್ರಭೆ ಇಂದ ರಾಜಕೀಯ ಮುತ್ಸದ್ದಿಗೆ ಪೀಡೆಇದೆ. ಪುಷ್ಯ ಮಾಸದಿಂದ ಫಾಲ್ಗುಣ ಮಾಸದವರೆಗೆ ಬೆಳ್ಳಿ, ಬಂಗಾರ ,ಎಣ್ಣಿ ಷೇರು ದರಗಳು ಬೆಲ್ಲ , ತಾಮ್ರ, ಮೆಣಸಿನಕಾಯಿ ದರಗಳು ಗಗನಚುಂಬಿ ದರ ಕಾಣುವಿರಿ . ಪರೀಕ್ಷಿಸಿ !