ವಾಸುದೇವಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ವಾಸುದೇವಮೂರ್ತಿ ಅವರು ಪ್ರಸ್ತುತವಾಗಿ ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪರಿಚಯ[ಬದಲಾಯಿಸಿ]

ಡಾ.ವಾಸುದೇವಮೂರ್ತಿ ೧೯೬೪ರಲ್ಲಿ ಮೈಸೂರಿನ ಅಶೋಕಪುರಂನಲ್ಲಿ ಜನಿಸಿದರು. ತಾಯಿ ಮರಮಾದಮ್ಮ(ಈರಮ್ಮ), ತಂದೆ ಕೃಷ್ಣಯ್ಯ. ಇವರು ಬಹುಮುಖ ಪ್ರತಿಭಾವಂತರು. ಅಧ್ಯಾಪನ, ಸಾಹಿತ್ಯಸೇವೆ, ಸಂಶೋಧನೆ, ಕಲೆ, ಕ್ರೀಡೆ, ಬೆರಳಚ್ಚು, ಗಣಕ ಯಂತ್ರ ಮುಂತಾದ ಪ್ರಕಾರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಇವರ ಬೋದನಾ ಅನುಭವ ೮ ವರ್ಷ, ಸಂಶೋಧನ ಅನುಭವ ೬ ವರ್ಷ, ಸಂಶೋಧನ ಸಹಾಯಕ ಅನುಭವ ೧೫ ವರ್ಷ. ಇವರು ಕಬ್ಬಡ್ಡಿ, ಪುಟ್ಬಾಲ್ ಕ್ರೀಡೆಗಳ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ, ಪ್ರಥಮ ಬಹುಮಾನ ಪಡೆದಿದ್ದಾರೆ. ಜಾಗತಿಕ ಸಂತರ ಸಂದೇಶ ಸಂವತ್ಸರ ಕಾರ್ಯಕ್ರಮದಲ್ಲಿ 'ಓಶೋ ರಜನೀಶ'ರ ಬಗ್ಗೆ ಉಪನ್ಯಾಸವನ್ನು ಕೊಟ್ಟಿದ್ದಾರೆ. ಪ್ರಸ್ತುತ ಇವರು ಮೈಸೂರು ವಿಶ್ವ ವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾ ಅರ್ಹತೆ[ಬದಲಾಯಿಸಿ]

ಪಿಎಚ್ ಡಿ(ಜಾನಪದ), ಎಂಎ(ಜಾನಪದ), ಭಾಷಾ ವಿಜ್ಞಾನ, ಭಾರತೀಯ ಸಾಹಿತ್ಯ, ಜೈನಶಾಸ್ತ್ರ, ಶಾಸನಶಾಸ್ತ್ರಗಳಲ್ಲಿ ಡಿಪ್ಲೊವೊ ಪದವಿ ಪಡೆದಿದ್ದಾರೆ.

ಪ್ರಕಟಿತ ಲೇಖನಗಳು[ಬದಲಾಯಿಸಿ]

  1. ನವಯುಗದ ಹರಿಕಾರ -ಓಶೋ ರಜನೀಶ್-ಪ್ರೊ.ದೇಜಗೌ ಅಭಿನಂದನ ಗ್ರಂಥ
  2. ಕನ್ನಡ ಸಂತ -ಪ್ರೊ.ರಾಗೌ ಅಭಿನಂದನ ಗ್ರಂಥ
  3. ಚಾರ್ಲ್ಸ್ ಫ್ರಾನ್ಸಿಸ್ ಪಾಟರ್ -ಕನ್ನಡ ಜಾನಪದ ವಿಷಯ ವಿಶ್ವಕೋಶ-೨೦೦೬
  4. ಗೋದಾನ -ಕನ್ನಡ ವಿಷಯ ವಿಶ್ವಕೋಶ
  5. ಮಳವಳ್ಳಿ ರಾಚಯ್ಯ -ಕನ್ನಡ ಜಾನಪದ ವಿಷಯ ವಿಶ್ವಕೋಶ -೨೦೦೬
  6. ಜಾನಪದ ಜಾದೂಗಾರ -ಪ್ರೊ.ಪಿ.ಕೆ.ರಾಜಶೇಖರ-ಅಭಿನಂದನ ಗ್ರಂಥ-೨೦೦೮
  7. ಕಾಯಕ ಯೋಗಿ -ಜಿ.ಎಸ್.ಭಟ್ಟರ ಅಭಿನಂದನ ಗ್ರಂಥ-೨೦೦೯
  8. ವರ್ಣರಂಜಿತ ಅರಮನೆ -ಡಾ.ಎಂ.ಪಿ.ಮಂಜಪ್ಪ ಶೆಟ್ಟಿ ಅಭಿನಂದನ ಗ್ರಂಥ
  9. ಅಂಚೆಯಿಂದ ಬಂದದ್ದು -ಬಿ.ಶಾಮಸುಂದರ ಅಭಿನಂದನ ಗ್ರಂಥ
  10. ಪೂಜಾಕುಣಿತ, ಕರಪಾಲ ಮೇಳ, ಕೊರಗರು, ಹೆಳವರು -ದಕ್ಷಿಣ ಭಾರತೀಯ ಜಾನಪದ ವಿಶ್ವಕೋಶ-೨೦೦೧ ಮುಂತಾದುವು.

ಕೃತಿಗಳು[ಬದಲಾಯಿಸಿ]

ಸಂಶೋಧನ ಗ್ರಂಥ[ಬದಲಾಯಿಸಿ]

  1. ಮೈಸೂರು ನಗರದ ಅಶೋಕಪುರಂ ಒಂದು ಜಾನಪದೀಯ ಅಧ್ಯಯನ-೨೦೦೩

ಇತರೆ ಕೃತಿಗಳು[ಬದಲಾಯಿಸಿ]

  1. ನಮ್ಮ ಊರಿನ ಹಬ್ಬ ಮತ್ತು ಉತ್ಸವಗಳು-೧೯೯೯
  2. ಬಂಗಾಳಿ ಸಾಹಿತ್ಯ-೨೦೧೨
  3. ಯೆದುಗಿರಿ ಮಹಾತ್ಮೆ-೨೦೧೩
  4. ಮೊಳಿಗೈಯನ ಪುರಾಣ-೨೦೧೩.

ನಿರ್ವಹಿಸಿರುವ/ನಿರ್ವಹಿಸುತ್ತಿರುವ ಕರ್ತವ್ಯಗಳು[ಬದಲಾಯಿಸಿ]

  1. ಅಧ್ಯಾಪನ ವೃತ್ತಿ-ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು-೨ವರ್ಷ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ -೬ವರ್ಷ
  2. ಸಂಶೋಧನ ಸಹಾಯಕ-ಕನ್ನಡ ಜಾನಪದ ವಿಷಯ ವಿಶ್ವಕೋಶ-೨೦೦೬, ಸಂಪಾದನಾ ವಿಭಾಗ-ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-೨೦೦೭/೦೮, ಮೈಸೂರು ವಿಶ್ವವಿದ್ಯಾ ನಿಲಯದ ಜಾನಪದ ವಸ್ತು ಸಂಗ್ರಹಾಲಯ-೨೦೧೦ರಿಂದ...
  3. ಕರಡು ಪರಿಶೀಲಕ-ಕನ್ನಡ ವಿಷಯ ವಿಶ್ವಕೋಶ(ಪರಿಷ್ಕರಣೆ)ಭಾಗ-೧, ವಿಶ್ವಕೋಶ ೧೪ ನೇ ಸಂಪುಟ
  4. ಮುಖ್ಯಸ್ಥರು-ದಸರಾ ಮಹೋತ್ಸವ-ಯುವ ದಸರಾ-ಊಟೋಪಚಾರ ಸಮಿತಿ-೨೦೦೫/೦೬
  5. ಗೌರವ ಸಂಚಾಲಕ-ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ.ಚಂದ್ರಶೇಖರಕಂಬಾರರ ಸಾಹಿತ್ಯ-ರಾಷ್ಟೃಮಟ್ಟದ ವಿಚಾರ ಸಂಕಿರಣ ಮತ್ತು ಗಂಗೋತ್ರಿ ಕವಿಗೋಷ್ಠಿ-೨೦೧೦
  6. ಸಂಪಾದಕ ಮಂಡಳಿ ಸದಸ್ಯ- ಕುವೆಂಪು ಕೃತಿ ವಿಮರ್ಶೆ-೨೦೦೬, 'ಶಾಮಸಂಪದ'-ಬಿ.ಶಾಮಸುಂದರ -ಅಭಿನಂದನ ಗ್ರಂಥ-೨೦೧೦
  7. ತೀರ್ಪುಗಾರರು-ಜಿಲ್ಲಾ ಮಟ್ಟದ ಯುವಜನೋತ್ಸವ ಮಂಡ್ಯ-೨೦೦೯, ಮೈಸೂರು ಜಿಲ್ಲಾ ಮಟ್ಟದ ಯುವಜನ ಮೇಳ-೨೦೧೦, ಮೈಸೂರು ನಗರ ವಿಭಾಗ ಮಟ್ಟದ ಯುವ ಜನ ಮೇಳ-೨೦೧೦
  8. ವಿಷಯ ತಜ್ಞರು-ನೀಲಗಾರರ ಕಲೆ/ಪ್ರದರ್ಶನ-ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ವತಿಯಿಂದ, ಕಿನ್ನರಿ ಜೋಗಿಮೇಳ/ಕಲಾ ಪ್ರದರ್ಶನ -ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ವತಿಯಿಂದ, ಹೊಸ ಸಹಸ್ರಮಾನದಲ್ಲಿ ಜಾನಪದ ವಿಚಾರ ವಿನಿಮಯ-೧೯೯೯, ಜಾನಪದ ಕಾವ್ಯಗಳು-ರಾಜ್ಯ ಮಟ್ಟದ ದೇಸಿ ಸಮ್ಮೇಳನ-೨೦೦೯.

ಭಾಗವಹಿಸಿದ ಸಮ್ಮೇಳನ/ವಿಚಾರ ಸಂಕಿರಣಗಳು[ಬದಲಾಯಿಸಿ]

  1. ಪ್ರತಿನಿಧಿಯಾಗಿ ರಾಷ್ಟೀಯ ವಿಚಾರ ಸಂಕಿರಣ-ಮೈಸೂರು-೨೦೦೮
  2. ಅನ್ವಯಿಕ ಸಂಶೋಧನ ಕಮ್ಮಟ-ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-ಮೈಸೂರು-೨೦೦೮
  3. ಕಲಾಪ್ರದರ್ಶನ ಸಂವಾದ ಗೋಷ್ಠಿ-ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ -ಮೈಸೂರು-೨೦೦೩, ೪.ಅಖಿಲ ಭಾರತ ಜಾನಪದ ಸಮ್ಮೇಳನ-ಮಂಡ್ಯ-೨೦೦೬.
  4. ಸುವರ್ಣ ಕರ್ನಾಟಕ ಲೇಖಕರ ಸಮಾವೇಶ- ಮೈಸೂರು-೨೦೦೬
  5. ಭಾರತೀಯ ಬೌದ್ಧ ಮಹಾಸಭಾ ಮುಂಬಯಿ ಹಾಗೂ ಮೈಸೂರು ಸಹಯೋಗ-ವಿಚಾರ ಸಂಕಿರಣ-ಮೈಸೂರು-೨೦೦೯
  6. ವಿಶೇಷ ಆಹ್ವಾನಿತರಾಗಿ-ರಾಜ್ಯ ಜಾನಪದ ವಿಚಾರ ಸಂಕಿರಣ-ಚಿಂತಾಮಣಿ-೧೯೯೯ ಮುಂತಾದುವು.

ಇತರ ಕಾರ್ಯಚಟುವಟಿಕೆಗಳು[ಬದಲಾಯಿಸಿ]

ಕಲಾವಿದರಾಗಿ ಅಭಿನಯಿಸಿರುವ ನಾಟಕಗಳು[ಬದಲಾಯಿಸಿ]

  1. ಯಕ್ಷಗಾನ-ಮೋಹಿನಿ/ಭಸ್ಮಾಸುರ - ಭಸ್ಮಾಸುರ ಪಾತ್ರ - ೧೯೯೭
  2. ಏಳು ಸಮುದ್ರದಾಚೆ - ಐತಿಹಾಸಿಕ ನಾಟಕ - ರಾಕ್ಷಸ ಪಾತ್ರ -೨೦೦೬
  3. ಆಷಾಢಭೂತಿ - ಸಾಮಾಜಿಕ ನಾಟಕ - ಇನ್ಸ್ಸ್ಪಪೆಕ್ಟರ್ ಪಾತ್ರ -೨೦೦೯
  4. ಕಳ್ಳಭಟ್ಟಿ - ಸಾಮಾಜಿಕ ನಗೆ ನಾಟಕ-ಕಳ್ಳನ ಪಾತ್ರ-೨೦೦೬, ಇತ್ಯಾದಿ.

ಪೂರಕ ನೆರವು[ಬದಲಾಯಿಸಿ]

  • ೧.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-ಮೈಸೂರು-ನೌಕರರ ದಾಖಲಾತಿ ಪುಸ್ತಕ
  • ೨.ಮೈಸೂರು ನಗರದ ಅಶೋಕಪುರಂ ಒಂದು ಜಾನಪದೀಯ ಅಧ್ಯಯನ ಕೃತಿ.