ವಲ್ಲಭಾಚಾರ್ಯ
ಗೋಚರ
![](http://upload.wikimedia.org/wikipedia/commons/thumb/0/02/Shri_mahaprabhuji.jpg/220px-Shri_mahaprabhuji.jpg)
ವಲ್ಲಭಾಚಾರ್ಯ (ಕ್ರಿ.ಶ. ೧೪೭೯-೧೫೩೧) ಭಾರತದಲ್ಲಿ ಶುದ್ಧ ಅದ್ವೈತದ ತತ್ವಶಾಸ್ತ್ರವನ್ನು ಅನುಸರಿಸುವ ಪುಷ್ಟಿ ಪಂಥವನ್ನು ಸ್ಥಾಪಿಸಿದ ಒಬ್ಬ ಭಕ್ತಿ ತತ್ವಶಾಸ್ತ್ರಜ್ಞನಾಗಿದ್ದನು. ವಲ್ಲಭಾಚಾರ್ಯನು ಅವನ ಮುಂಚೆ ಕೊನೆಯ ವಿಷ್ಣುಸ್ವಾಮಿ ಸಂಪ್ರದಾಯ ಆಚಾರ್ಯರಾದ ಬಿಲ್ವಮಂಗಳ ಆಚಾರ್ಯರ ಕೋರಿಕೆಯ ಮೇಲೆ ವಿಷ್ಣುಸ್ವಾಮಿ ಸಂಪ್ರದಾಯದ (ರುದ್ರ ಸಂಪ್ರದಾಯ) 'ಆಚಾರ್ಯ' ಅಂಕಿತವನ್ನು ಸ್ವೀಕರಿಸಿದನು. ಇದು ವಲ್ಲಭಾಚಾರ್ಯನು ವಿಜಯನಗರ ಸಾಮ್ರಾಜ್ಯದ ಸಾಮ್ರಾಟ್ ಕೃಷ್ಣದೇವರಾಯನ ಅಂಗಳದಲ್ಲಿ ಶಂಕರರ ಮೇಲೆ ಪ್ರಸಿದ್ಧ ಬ್ರಹ್ಮವಾದ ಚರ್ಚೆಯನ್ನು ಜಯಿಸಿದ ನಂತರವಾಗಿತ್ತು.