ವಯನಾಡು ಜಿಲ್ಲೆ

Coordinates: 11°36′18″N 76°04′59″E / 11.605°N 76.083°E / 11.605; 76.083
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಯನಾಡು ಇಂದ ಪುನರ್ನಿರ್ದೇಶಿತ)
ವಯನಾಡು ಜಿಲ್ಲೆ
Etymology: ವಯಲ್ ನಾಡು: ಭತ್ತದ ಗದ್ದೆಗಳ ನಾಡು[೧]
Motto: 
"ವೇ ಬಿಯಾಂಡ್"[೨]
Coordinates: 11°36′18″N 76°04′59″E / 11.605°N 76.083°E / 11.605; 76.083
ದೇಶ ಭಾರತ
ರಾಜ್ಯಕೇರಳ
ಜಿಲ್ಲಾ ರಚನೆ1980 ನವೆಂಬರ್ 1; 15842 ದಿನ ಗಳ ಹಿಂದೆ (1-೧೧-1980)
Area
 • Total೨,೧೩೨ km (೮೨೩ sq mi)
Time zoneUTC+05:30 (ಭಾರತದ ನಿರ್ದಿಷ್ಟ ಕಾಲಮಾನ)
Area code(s)4936, 4935
Websitewayanad.gov.in

ವಯನಾಡು(ಮಲಯಾಳಂ: വയനാട്) ಭಾರತದ ರಾಜ್ಯ ಕೇರಳದ ಈಶಾನ್ಯದಲ್ಲಿರುವ ಒಂದು ಜಿಲ್ಲೆಯಾಗಿದ್ದು, ಕಲ್ಪೆಟ್ಟಾ ಪುರಸಭೆಯಲ್ಲಿ ಆಡಳಿತ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ಕೇರಳದ ಏಕೈಕ ಪ್ರಸ್ಥಭೂಮಿಯಾಗಿದೆ. ವಯನಾಡು ಜಿಲ್ಲೆಯ ಅತಿ ಎತ್ತರದ ಪ್ರದೇಶವಾಗಿದೆ. ಜಿಲ್ಲೆಯನ್ನು 1 ನವೆಂಬರ್ 1980 ರಂದು ಕೇರಳದ 12 ನೇ ಜಿಲ್ಲೆಯಾಗಿ ಕಲ್ಲಿಕೋಟೆ ಜಿಲ್ಲೆ ಮತ್ತು ಕಣ್ಣೂರು ಜಿಲ್ಲೆಗಳಿಂದ ಪ್ರದೇಶಗಳನ್ನು ಬೇರ್ಪಡಿಸಿ ರಚಿಸಲಾಯಿತು.ವಯನಾಡ್ನಲ್ಲಿ ಅನೇಕ ಮಸೀದಿಗಳಿವೆ. ವಯನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊಟ್ಟಮೊದಲಿನ ಕೆತ್ತನೆಗಳು ದೊರಕಿವೆ.

ವ್ಯುತ್ಪತ್ತಿ[ಬದಲಾಯಿಸಿ]

'ವಯನಾಡು' ಎಂಬ ಹೆಸರು ಮಲಯಾಳಂ ಭಾಷೆಯ 'ವಯಲ್ ನಾಡೊ' ನಿಂದ ಬಂದಿದೆ, ' ಭತ್ತದ ಹೊಲಗಳ ಭೂಮಿ' ಎಂಬುದು ಇದರ ಕನ್ನಡ ಅನುವಾದವಾಗಿದೆ.[೩]

ಸಸ್ಯ ಮತ್ತು ಪ್ರಾಣಿ[ಬದಲಾಯಿಸಿ]

ವಯನಾಡಿನ ಮಣ್ಣು ಮತ್ತು ಹವಾಮಾನವು ವಾಣಿಜ್ಯ ಆಧಾರದ ಮೇಲೆ ತೋಟಗಾರಿಕೆಗೆ ಸೂಕ್ತವಾಗಿದೆ. ತರಕಾರಿಗಳ ಕೃಷಿಯನ್ನು ಉತ್ತೇಜಿಸಲು ಮತ್ತು ತೋಟಗಳನ್ನು ಸ್ಥಾಪಿಸಲು, ಕೇರಳದ ಕೃಷಿ ವಿಶ್ವವಿದ್ಯಾಲಯವು ಅಂಬಲವಾಯಲ್‌ನಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರವನ್ನು ನಡೆಸುತ್ತಿದೆ.

ಪ್ರಮುಖ ಪ್ರವಾಸಿ ತಾಣಗಳು[ಬದಲಾಯಿಸಿ]

ಎಡಕಲ್ಲು ಗುಹೆಯ ಒಳಗೆ ಕಂಡು ಬರುವ ಶಿಲಾ ಮಾನವನ ಬರಹ-೨
ಎಡಕಲ್ಲು ಗುಹೆಯ ಒಳಗೆ ಕಂಡು ಬರುವ ಶಿಲಾ ಮಾನವನ ಬರಹ-೧
ಬಾಣಾಸುರ ಅಣೆಕಟ್ಟಿನಿಂದ ಕಾಣುವ ಒಂದು ನೋಟ
ಮೀನ್ ಮುಟ್ಟಿ ಜಲಪಾತ
  • ಚೆಂಬ್ರ ಶಿಖರ - ಚಾರಣಕ್ಕೆ ಸೂಕ್ತವಾದದ್ದು.
  • ಎಡಕಲ್ಲು ಗುಡ್ಡ ಅಥವಾ ಎಡಕಲ್ಲು ಗುಹೆ - ಇಲ್ಲಿ ೧೦೦೦ ಮೀಟರ್ ಎತ್ತರದ ಗುಡ್ಡದ ಮೇಲೆ ಮೂರು ಗುಹೆಗಳು ಒಟ್ಟಾಗಿವೆ. ಮಧ್ಯಪ್ರಾಚೀನ ಶಿಲಾಯುಗದ ನಾಗರೀಕತೆಯ ಕುರುಹಾಗಿ ಈ ಗುಹೆಗಳ ಗೋಡೆಗಳ ಮೇಲೆ ಅನೇಕ ಕೆತ್ತನೆಗಳನ್ನು ಕಾಣಬಹುದು. ಇದನ್ನು ತಲುಪಲು ೧ ಕಿ.ಮೀ ಎತ್ತರದ ಗುಡ್ಡ ಹತ್ತಬೇಕಾಗುತ್ತದೆ.
  • ಸುಲ್ತಾನ್ ಬತೇರಿ - ಟಿಪ್ಪುವಿನ ಕೋಟೆ ಎಂದೂ ಪ್ರಸಿದ್ಢ . ಇಲ್ಲಿ ಒಂದು ಹಳೆಯ ಜೈನ ದೇವಾಲಯವಿದೆ. ಟಿಪ್ಪು ಸುಲ್ತಾನನು ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ.
  • ಮೀನುಮುಟ್ಟಿ ಜಲಪಾತ - ಇದನ್ನು ೨ ಕಿ.ಮೀ ಚಾರಣ ಹಾದಿಯ ಮೂಲಕ ತಲುಪಬೇಕು. ಇದು ವಯನಾಡ್ ಜಿಲ್ಲೆಯ ಅತಿ ದೊಡ್ಡ ಜಲಪಾತವಾಗಿದ್ದು, ೩೦೦ ಮೀಟರ್ ಎತ್ತರದಿಂದ ಮೂರು ಹಂತಗಳಲ್ಲಿ ಬೀಳುತ್ತದೆ.
  • ಬಾಣಾಸುರಸಾಗರ ಅಣೆಕಟ್ಟು - ಬಾಣಾಸುರಸಾಗರದಲ್ಲಿರುವ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ.
  • ಪೂಕೋಟೆ ಅಥವಾ ಪೂಕೊಡೆ ಸರೋವರ - ಇದೊಂದು ಪ್ರಾಕೃತಿಕ ಸಿಹಿನೀರಿನ ಸರೋವರ. ವನಭೋಜನಕ್ಕೆ (ಪಿಕ್ನಿಕ್) ಗೆ ಹೇಳಿ ಮಾಡಿಸಿದ ತಾಣ.

ಉಲ್ಲೇಖಗಳು[ಬದಲಾಯಿಸಿ]

  1. "About District Wayanad". wayanad.gov.in.
  2. "ABOUT WAYANAD". wayanadtourism.org. Archived from the original on 2019-08-17. Retrieved 2023-04-01.
  3. ಉಲ್ಲೇಖ ದೋಷ: Invalid <ref> tag; no text was provided for refs named auto

ಬಾಹ್ಯ ಕೊಂಡಿಗಳು[ಬದಲಾಯಿಸಿ]

ವಿಕಿಟ್ರಾವೆಲ್ ನಲ್ಲಿ ವಯನಾಡು ಜಿಲ್ಲೆ ಪ್ರವಾಸ ಕೈಪಿಡಿ (ಆಂಗ್ಲ)