ವಚನಕಾರರ ಅಂಕಿತ ನಾಮಗಳು
ಗೋಚರ
೧೨ ನೆಯ ಶತಮಾನದ ಮೂಲ ವಚನಕಾರರಿಂದಿಡಿದು, ೨೦ನೇ ಶತಮಾನದ ವಚನಕಾರರವರೆಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ,ಹಲವಾರು ಅಂಕಿತನಾಮಗಳಿಂದ ಗುರುತಿಸಿಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.
| ಕ್ರಮ ಸಂಖ್ಯೆ | ವಚನಕಾರರ ಹೆಸರು | ಅಂಕಿತನಾಮ |
|---|---|---|
| ೧ | ಜೇಡರ ದಾಸಿಮಯ್ಯ | ರಾಮನಾಥ |
| ೨ | ಅಲ್ಲಮಪ್ರಭು | ಗುಹೇಶ್ವರ |
| ೩ | ಅಕ್ಕಮಹಾದೇವಿ | ಚನ್ನಮಲ್ಲಿಕಾರ್ಜುನ |
| ೪ | ಬಸವಣ್ಣ | ಕೂಡಲ ಸಂಗಮದೇವ |
| ೫ | ಮುಕ್ತಾಯಕ್ಕ | ಅಜಗಣ್ಣ |
| ೬ | ಚೆನ್ನಬಸವಣ್ಣ | ಕೂಡಲ ಚೆನ್ನಸಂಗಯ್ಯ |
| ೭ | ಅಂಬಿಗರ ಚೌಡಯ್ಯ | ಅಂಬಿಗರ ಚೌಡಯ್ಯ |
| ೮ | ಮಡಿವಾಳ ಮಾಚಯ್ಯ | ಕಲಿದೇವರದೇವ |
| ೯ | ಗಂಗಾಂಬಿಕೆ | ಗಂಗಾಪ್ರಿಯ ಕೂಡಲ ಸಂಗಮದೇವ |
| ೧೦ | ನೀಲಾಂಬಿಕೆ/ನೀಲಲೋಚನೆ | ಸಂಗಯ್ಯ |
| ೧೧ | ಆದಯ್ಯ | ಸೌರಾಷ್ಟ್ರ ಸೋಮೇಶ್ವರ |
| ೧೨ | ಡೋಹಾರ ಕಕ್ಕಯ್ಯ | ಅಭಿನವ ಮಲ್ಲಿಕಾರ್ಜುನ |
| ೧೩ | ಮೋಳಿಗೆ ಮಾರಯ್ಯ | ನಿಃಕಳಂಕ ಮಲ್ಲಿಕಾರ್ಜುನ |
| ೧೪ | ಸೊನ್ನಲಿಗೆ ಸಿದ್ದರಾಮ | ಕಪಿಲಸಿದ್ದ ಮಲ್ಲಿಕಾರ್ಜುನ |
| ೧೫ | ಮಧುವಯ್ಯ | ಅರ್ಕೇಶ್ವರಲಿಂಗ |
| ೧೬ | ಅಮುಗೆ ರಾಯಮ್ಮ | ಅಮುಗೇಶ್ವರ |
| ೧೭ | ನೀಲಮ್ಮ | ಬಸವ |
| ೧೮ | ಅಕ್ಕಮ್ಮ | ರಾಮೇಶ್ವರ ಲಿಂಗ |
| ೧೯ | ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ | ಭೀಮೇಶ್ವರಾ |
| ೨೦ | ಸೂಳೆ ಸಂಕವ್ವ | ನಿರ್ಲಜ್ಜೇಶ್ವರ |
| ೨೧ | ಕದಿರ ಕಾಯಕದ ಕಾಳವ್ವೆ | ಗುಮ್ಮೇಶ್ವರ |
| ೨೨ | ರೇಮಮ್ಮೆ | ನಿರಂಗಲಿಂಗ |
| ೨೩ | ಗುಡ್ಡವ್ವೆ | ನಿಂಬೇಶ್ವರಾ |
| ೨೪ | ವೀರಮ್ಮ | ಶಾಂತೇಶ್ವರ ಪ್ರಭುವೇ |
| ೨೫ | ಬಾಚಿಕಾಯಕದ ಕಾಳವ್ವೆ | ಕರ್ಮಹರ ಕಾಳೇಶ್ವರಾ |
| ೨೬ | ಕೇತಲದೇವಿ | ಕುಂಬೇಶ್ವರ |
| ೨೭ | ರೇಚವ್ವೆ | ನಿಜಶಾಂತೇಶ್ವರ |
| ೨೮ | ಕಾಮಮ್ಮ | ನಿರ್ಭೀತಿ ನಿಜಲಿಂಗದಲ್ಲಿ |
| ೨೯ | ಲಕ್ಷ್ಮಮ್ಮ | ಅಗಜೇಶ್ವರಲಿಂಗವು |
| ೩೦ | ಗಂಗಮ್ಮ | ಗಂಗೇಶ್ವರಲಿಂಗದಲ್ಲಿ |
| ೩೧ | ಮಸಣಮ್ಮ | ನಿಜಗುಣೇಶ್ವರಲಿಂಗದಲ್ಲಿ |
| ೩೨ | ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ | ಉರಿಲಿಂಗ ಪೆದ್ದಿಗಳರಸ |
| ೩೩ | ರೇಕಮ್ಮ | ಶ್ರೀ ಗುರು ಸಿದ್ದೇಶ್ವರ |
| ೩೪ | ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ | ಮಸಣಯ್ಯಪ್ರಿಯ ಗಜೇಶ್ವರಾ |
| ೩೫ | ಕದಿರ ರೆಮ್ಮವ್ವೆ | ರೆಮ್ಮಿಯೊಡೆಯ ಗುಮ್ಮೇಶ್ವರಾ |
| ೩೬ | ಗೊಗ್ಗವ್ವೆ | ನಾಸ್ತಿನಾಥ |
| ೩೭ | ಅಕ್ಕನಾಗಮ್ಮ | ಸಂಗನ ಬಸವಣ್ಣ |
| ೩೮ | ಸತ್ಯಕ್ಕ | ಶಂಭುಜಕೇಶ್ವರಾ |
| ೩೯ | ಮೋಳಿಗೆ ಮಹಾದೇವಿ | ನಿಃಕಳಂಕ ಮಲ್ಲಿಕಾರ್ಜುನಲಿಂಗ |
| ೪೦ | ಲಿಂಗಮ್ಮ | ಅಪ್ಪಣ್ಣ ಪ್ರಿಯ ಚನ್ನಬಸವಣ್ಣ |
| ೪೧ | ನಿಜಗುಣ ಶಿವಯೋಗಿ | ಶಂಭುಲಿಂಗ |
| ೪೨ | ಶ್ರೀಜಯಚಾಮರಾಜೇಂದ್ರ ಒಡೆಯರ್ | ಶ್ರೀ ವಿದ್ಯಾ |
| ೪೩ | ಡಾ.ಪುಟ್ಟರಾಜ ಕವಿ ಗವಾಯಿಗಳು | ಗುರು ಕುಮಾರ ಪಂಚಾಕ್ಷರೇಶ್ವರ |
| ೪೪ | ಶ್ರಿ ಆದಿತ್ಯ ಪಾಳೇಗಾರ | ಆತ್ಮಲಿಂಗ |
.
ಗ್ರಂಥ ಋಣ
[ಬದಲಾಯಿಸಿ]- ಶಿವಶರಣೆಯರ ವಚನಗಳು ಸಮಗ್ರ ಸಂಪುಟ - ಡಾ.ಆರ್.ಸಿ. ಹಿರೇಮಠ್
- ಸ್ಪರ್ಧಾ ಚೈತ್ರ - ಪ್ರಧಾನ ಸಂಪಾದಕರು-ಬಿ.ಎಸ್. ವಸಂತಕುಮಾರ್