ಯಳ್ಳೇಶಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಸನದಿಂದ ೨೯ಕಿ.ವೀ, ತಾಲೂಕು ಕೇಂದ್ರ ಹೊಳೆನರಸೀಪುರದಿಂದ ೬ಕೀ.ವೀ ಅಂತರದಲ್ಲೀರಿವಂತಹ ಯಳ್ಳೇಶಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ. ಒಂದು ದಿನ ಭೂಮಿತಾಯಿಯನ್ನು ನಂಬಿ, ತನ್ನ ಜಮೀನಿಗೆ ಎಳ್ಳು ತುಂಬಿದ ಕುಕ್ಕೆಯನ್ನು ಹೊಲದಲ್ಲಿಟ್ಟು ಎಳ್ಳು ಬಿತ್ತಿ ಬರುವುದರೊಳಗೆ ಭೂಮಿಗೆ ಅಂಟಿ ಕೊಂಡಿರುವುದನ್ನು ನೋಡಿದಾಗ ಆ ಸ್ಥಳದಲ್ಲೇ ಲಿಂಗ ಉದ್ಭವಗೊಂಡಿರುವುದನ್ನು ಕಂಡು ಶ್ರೀ ಎಳ್ಳುಲಿಂಗೇಶ್ವರ ಎಂದು ನಾಮಕರಣ ಮಾಡಿದರಂತೆ ಆಂದಿನಿಂದ ಆ ಸ್ಥಳ್ಳಕ್ಕೆ ಎಳ್ಳು+ಲಿಂಗ+ಈಶ್ವರ=ಎಳ್ಳುಲಿಂಗೇಶ್ವರ>ಎಳ್ಳೇಶ್ವರ>ಎಳ್ಳೇಸ್ಪುರ>ಎಳ್ಳೇಶಪುರ>ಯಳ್ಳೇಶಪುರ ಆಗಿದೆ ಎಂದು ಜನ ಹೇಳುತ್ತಾರೆ. ೧೨ನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಊರಿನ ನಡುವೆ ಇತ್ತು. ಸುಮಾರು ೩೦೦-೩೫೦ ವರ್ಷಗಳಿಗಿಂತಲೂ ಹಿಂದೆ ತಾಯಿ ಹೇಮಾವತಿ ನದಿಯ ನೀರು ಗ್ರಾಮದೊಳಗೆ ಹರಿದು ಬರುತ್ತಿದ್ದರಿಂದ ಈಗಿರುವಾಂತಹ ಸ್ಥಳಕ್ಕೆ ಸ್ಥಳಾಂತರಗೊಂಡಿತ್ತು. ಯಳ್ಳೇಶಪುರದ ಊರಾಚೆಗೆ ಹೇಮಾವತಿ ನದಿಯ ದಂಡೆಯಲ್ಲಿ ಸುತ್ತಲೂ ಹಸಿರುತುಂಬಿದ ಗದ್ದೆಗಳ ನಡುವೆ ಮನಸೆಳೆಯುವ ಎಳ್ಳುಲಿಂಗೇಶ್ವರ ದೇವಾಲಯ ೪ಕೂಟವಗಿದು ಮೋದಲನೆಯ ಕೂಟದಲ್ಲಿ ಒಂದೇ ಕಲ್ಲಿನ ಮೇಲೆ ಸಪ್ತಮಾತ್ರಕೆಯರು ೨ಗಣಪತಿ; ೧ಪದ ಒಂದು ಖಡ್ಗ ಸಹ ಇಲ್ಲಿ ಇದೆ. ೨ನೆಯ ಕೂಟದಲ್ಲಿ ಕುದರೆ ಮೇಲೆ ವೀರಭದ್ರೇಶ್ವರ; ರುದ್ರೇಶ್ವರ ೪ ಕಂಬಗಳ ನಡುವೆ ೨ ನಂದಿ ವಿಗ್ರಹಗಳನ್ನು ತುಂಬ ಸೂಕ್ಷ್ಮ ಕುಸುರಿಯಿಂದ ಕೆತ್ತಲಾಗಿದೆ. ೩ನೆಯ ಕೂಟದಲ್ಲಿ ಯಾವ ವಿಗ್ರಹ ಸಹ ಇಲ್ಲ ೪ನೆಯ ಕೂಟದಲ್ಲಿ ಎಳ್ಳುಲಿಂಗೇಶ್ವರ ದೇವರು ಲಿಂಗದ ರೂಪದಲ್ಲಿ ಇದೆ. ದೇವಾಲಯದ ಮುಂಭಾಗದಲ್ಲಿ ಒಂದು ಮಸ್ತಿಕಲ್ಲು,೨ನಗರ ಕಲ್ಲು ಮತ್ತು ಒಂದು ಗರುಡ ಕಂಬವಿದೆ. ಯಳ್ಳೇಶಪುರದಲ್ಲಿ ಒಟ್ಟು ೬ ಶಾಸನಗಳು ಗೋಚರಿಸುತ್ತವೆಂದು ಎಫಿಗ್ರಾಫಿಯ ಆಫ್ ಕರ್ನಾಟಕದ ಸಂಪುಟ ೮ ರಲ್ಲಿ ತಿಳಿದು ಬರುತ್ತದೇ. ಕ್ರಿ.ಶ.12 ರಿಂದ 15 ನೆಯ ಶತಮಾನದ ನಡುವವಿನ ಭಾಗದಲ್ಲಿ ಇವುಗಾಳ ಇತಿಹಾಸ ಕಂಡುಬರುತ್ತದೆ. ಶಾಸನ ಹೊನ 69 ರಲ್ಲಿ "ಓಂ ನಾಮ ಶಿವಾಯ:" ಹೊನ.70,71 ಈ ಎರಡು ಶಾಸನ ಹೊಯ್ಸಳರ ಸೋಮೆಶ್ವರನ ಶಾಸನವಾಗಿದೆ ಎರಡು ಶಾಸನಗಳ ದಿನಾಂಕ ಒಂದೇ ಕ್ರಿ.ಶ. 1238ರಜನವರಿ 27ಆಗಿದೆ. ಆ ದಿನ ಅರಸ ವಿಜಯರಾಜೇಂದ್ರ ಪಟ್ಟಣದ ನೆಲೆವೀಡಿನಿಂದ ಆಲುತ್ತಿದ್ದ ಆತ ಕಟ್ಟಿಸಿದಂತೆ ತೋರುತ್ತದೆ. ಈ ಎರಡು ಶಾಸನಗಳ ಕುರಿತು ರಂಗ ಪಟ್ಟಣ ಸ್ವಾಮ ಸೋಮಣ್ಣ ೨ನೇ ಯಳ್ಳೇಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿದ ವಿಷಯವನ್ನು ಸಾರುತ್ತದೆ ಈ ದೇವತೆಗೆ ಬಾದಾಮಿಯಲ್ಲಿ ಆಲಯ ಹಾಗೂ ಕೆರೆ ರೂಪುಗೊಂಡಿದೆ. ಊಳಿದ ಶಾಸನಗಳಲ್ಲಿ ಎಳ್ಳುಲಿಂಗೇಶ್ವರ ದೇವಾರಿಗೆ ಭೂದಾನ ಮತ್ತು ಹೊತೋಟದಾನ ಮಾಡಿರುವ ವಿವರಗಳನ್ನು ಸಾರುತ್ತದೆ. ಭಕ್ತರು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿ, ಭಗವಂತನಲ್ಲಿ ತಮ್ಮ ಕಷ್ಟ ನಿವಾರಣೆಗೆ ಮೊರೆಮಾಡಿ ಕೊಳ್ಳುತ್ತಾರೆ. ಪ್ರತಿ ಕಡೆ ಕಾತಿಕ ಅಮಾವಸ್ಯೆಯಂದು ಇಡಿ ರಾತ್ರಿ ಉತ್ಸವ ನಡೆಯುತ್ತದೆ.