ವಿಷಯಕ್ಕೆ ಹೋಗು

ಮುನ್ಶಿ ಪ್ರೇಮಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುನ್ಶಿ ಪ್ರೇಮಚಂದ್

ಜನನ: (೧೮೮೦-೦೭-೩೧)೩೧ ಜುಲೈ ೧೮೮೦
ಜನನ ಸ್ಥಳ: ಲಮಾಹಿ, ವಾರಣಾಸಿ,  ಭಾರತ ಭಾರತ
ನಿಧನ:೮ ಅಕ್ಟೋಬರ್ ೧೯೩೬ (ವಯಸ್ಸು ೫೬)
ವಾರಣಾಸಿ,  ಭಾರತ ಭಾರತ
ವೃತ್ತಿ: ಕಾದಂಬರಿಕಾರ, ಕವಿ

ಮುನ್ಶಿ ಪ್ರೇಮಚಂದ್ರರು (ಜುಲೈ೩೧,೧೮೮೦-ಅಕ್ಟೋಬರ್ ೮,೧೯೩೬) ಆಧುನಿಕ ಹಿಂದಿ ಸಾಹಿತ್ಯದ ಗಮನಾರ್ಹ ಸಾಹಿತಿಯೆಂದು ಗುರುತಿಸಲ್ಪಡುತ್ತಾರೆ. ಹಳ್ಳಿ ಜಗತ್ತಿನ ಕೆಳಮಧ್ಯಮ ವರ್ಗದವರ ತುಡಿತಗಳನ್ನು ಅತ್ಯಂತ ಸರಳಭಾಷೆಯಲ್ಲಿ ಕಟ್ಟಿಕೊಟ್ಟ ಹಿರಿಮೆ ಇವರದು. ಪ್ರೇಮಚಂದ್ರರು ಸುಮಾರು ೩೦೦ ಕತೆಗಳನ್ನು, ಅನೇಕ ಕಾದಂಬರಿ ಮತ್ತು ನಾಟಕಗಳನ್ನೂ ರಚಿಸಿದ್ದಾರೆ. ಪಾಂಚ್ ಪರಮೇಶ್ವರ್, ಮಂತ್ರ, ನಶಾ, ಆತ್ಮಾರಾಮ್, ಬಡೇ ಭಾಯಿಸಾಬ್, ಕಫನ್, ಪ್ರೇಮ್ ಪೂರ್ಣಿಮ ಮುಂತಾದವುಗಳು ಪ್ರೇಮಚಂದ್ರರ ಸುಪ್ರಸಿದ್ಧ ಕಥೆಗಳಾಗಿವೆ.