ಭಾಸ್ಕರ ಅನಂದ ಸಾಲೆತ್ತೂರು
ಭಾಸ್ಕರ ಆನಂದ ಸಾಲೆತೊರೆ ಇವರು ಕರ್ನಾಟಕದ ಪ್ರಸಿದ್ಧ ಪ್ರಾಚ್ಯ ಸಂಶೋಧಕರು. ಇವರ ಜನನ ೧೯೦೨ನೆಯ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯಿತು.
ಶಿಕ್ಷಣ[ಬದಲಾಯಿಸಿ]
ಆರಂಭದ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ ಸಾಲೆತೊರೆಯವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿಯನ್ನು ಹಾಗೂ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದರು. ೧೯೩೧ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಯನವನ್ನು ಮಾಡಿದರು. ೧೯೩೩ರಲ್ಲಿ ಜರ್ಮನಿಯ ಗೈಸೆನ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರವನ್ನು ಅಭ್ಯಸಿಸಿದರು.
ಸಂಶೋಧನೆ[ಬದಲಾಯಿಸಿ]
ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಇದು ಲಂಡನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿ.ಎಚ್.ಡಿ ಪದವಿಗಾಗಿ ಸಾಲೆತೊರೆಯವರು ಬರೆದ ಮಹಾಪ್ರಬಂಧ. ವಿಜಯನಗರ ಸ್ಥಾಪಕರಾದ ಸಂಗಮ ವಂಶದವರ ಮೂಲವನ್ನು ಈ ಹೊತ್ತಿಗೆಯಲ್ಲಿ ಸಂಶೋಧಿಸಲಾಗಿದೆ; ಹಾಗೂ ವಿಜಯನಗರ ಸಾಮ್ರಾಜ್ಯ ನಿಸ್ಸಂಶಯವಾಗಿಯೂ ಕನ್ನಡ ಸಾಮ್ರಾಜ್ಯವೆಂದು ಪ್ರಮಾಣಪೂರ್ವಕವಾಗಿ ಸಾಧಿಸಿ ತೋರಿಸಲಾಗಿದೆ.
ಸಂಶೋಧನಾ ಕೃತಿಗಳು[ಬದಲಾಯಿಸಿ]
- ವಿಜಯ ನಗರ ಸಾಮ್ರಾಜ್ಯದ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನ
- ಪುರಾತನ ಕರ್ನಾಟಕ---ತುಳುವರ ಇತಿಹಾಸ
- ಮಧ್ಯಯುಗೀನ ಜೈನಧರ್ಮ (ವಿಶೇಷತ: ವಿಜಯನಗರ ಸಾಮ್ರಾಜ್ಯದ ಸಂಬಂಧಗಳು)
- ಕರ್ನಾಟಕದ ಸಾಗರೋತ್ತರ ಸಂಪರ್ಕಗಳು
- ಗುಜರಾಥ ಇತಿಹಾಸದಲ್ಲಿಯ ಪ್ರಮುಖ ವಾಹಿನಿಗಳು
- ಪೂರ್ವದೊಡನೆ ಭಾರತದ ರಾಜಕೀಯ ಸಂಬಂಧಗಳು
ಭಾಸ್ಕರ ಆನಂದ ಸಾಲೆತೊರೆಯವರು ೧೯೬೩ರಲ್ಲಿ ನಿಧನರಾದರು.