ಬಿ.ಶಿವಮೂರ್ತಿಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಶಿವಮೂರ್ತಿಶಾಸ್ತ್ರಿಗಳು ತುಮಕೂರಿನಲ್ಲಿ ೧೯೦೩ರಲ್ಲಿ ಜನಿಸಿದರು. ಇವರ ತಾಯಿ ನೀಲಮ್ಮ; ತಂದೆ ಬಸವಯ್ಯ ಸ್ವಾಮಿ.


ಶಿವಮೂರ್ತಿಶಾಸ್ತ್ರಿಗಳ ಖ್ಯಾತ ಕೀರ್ತನಕಾರರಾಗಿದ್ದಂತೆ, ಪತಿಕೋದ್ಯಮಿಗಳು ಹಾಗು ಸಾಹಿತಿಯಾಗಿದ್ದರು.


ಪತ್ರಿಕೋದ್ಯಮ[ಬದಲಾಯಿಸಿ]

ಶಿವಮೂರ್ತಿಶಾಸ್ತ್ರಿಗಳು ೧೯೩೮ರಲ್ಲಿ ‘ಶರಣ ಸಾಹಿತ್ಯ’ ಪತ್ರಿಕೆಯನ್ನು ಪ್ರಾರಂಭಿಸಿ, ೧೯೭೨ರವರೆಗೆ ನಡೆಯಿಸಿಕೊಂಡು ಬಂದರು.


೫ ವರ್ಷಗಳ ಕಾಲ ‘ಸ್ವತಂತ್ರ ಕರ್ನಾಟಕ’ ವಾರಪತ್ರಿಕೆಯನ್ನು ನಡೆಯಿಸಿಕೊಂಡು ಬಂದರು. ಇದಲ್ಲದೆ ಇವರು ‘ಕನ್ನಡ ನುಡಿ’ ಹಾಗು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯ ಸಂಪಾದಕರೂ ಆಗಿದ್ದರು.


ಕೃತಿಗಳು[ಬದಲಾಯಿಸಿ]

ಬಿ.ಶಿವಮೂರ್ತಿ ಶಾಸ್ತ್ರಿಗಳ ಕೆಲವು ಕೃತಿಗಳು ಇಂತಿವೆ:

  • ಕೊಂಡಗುಳಿ ಕೇಶಿರಾಜನ ಷಡಕ್ಷರ ಮಂತ್ರ ಮಹಿಮೆ
  • ಗುರುಸಿದ್ಧನ ಮಾದೇಶ್ವರ ಸಾಂಗತ್ಯ
  • ನಿಜಗುಣದ ಪುರಾತನರ ತ್ರಿವಿಧಿ
  • ರಾಘವಾಂಕನ ವೀರೇಶ ಚರಿತೆ

ಸಾಹಿತ್ಯ ಸೇವೆ[ಬದಲಾಯಿಸಿ]

ಬಿ.ಶಿವಮೂರ್ತಿ ಶಾಸ್ತ್ರಿಗಳು ೧೯೫೬ರಿಂದ ೧೯೬೪ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಪುರಸ್ಕಾರ[ಬದಲಾಯಿಸಿ]

೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

ಬಿ.ಶಿವಮೂರ್ತಿ ಶಾಸ್ತ್ರಿಗಳು ೧೯೭೬ರಲ್ಲಿ ನಿಧನರಾದರು.