ಪ್ರದಿಪ್ ಕುಮಾರ್ ಬ್ಯಾನರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ. ಕೆ. ಬ್ಯಾನರ್ಜಿ ಭಾರತವನ್ನು ಪ್ರತಿನಿಧಿಸುವಾಗ

ಪ್ರದೀಪ್ ಕುಮಾರ್ ಬ್ಯಾನರ್ಜಿ ೧೫ ಅಕ್ಟೋಬರ್ ೧೯೩೬ ರಂದು ಬಂಗಾಳ ಪ್ರಾಂತ್ಯದ (ಈಗ ಪಶ್ಚಿಮ ಬಂಗಾಳ) ಜಲ್ಪೈಗುರಿಯಲ್ಲಿ ಜನಿಸಿದರು. ಅವರು ಜಲ್ಪೈಗುರಿ ಜಿಲ್ಲೆಯ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ಅವರ ಶಾಲಾ ಶಿಕ್ಷಣವನ್ನು ಕೆ.ಎಮ್.ಪಿ.ಎಮ್.ಅಲ್ಲಿ ಮುಗಿಸಿದರು.

ವೃತ್ತಿಜೀವನ[ಬದಲಾಯಿಸಿ]

೧೫ ನೇ ವಯಸ್ಸಿನಲ್ಲಿ, ಬ್ಯಾನರ್ಜಿ ಸಂತೋಷ್ ಟ್ರೋಫಿಯಲ್ಲಿ ಬಿಹಾರವನ್ನು ಪ್ರತಿನಿಧಿಸುತ್ತಾ, ತಂಡದಲ್ಲಿ ಬಲ ಪಾರ್ಶ್ವದಲ್ಲಿ ಆಡುತ್ತಿದ್ದರು. ೧೯೫೪ ರಲ್ಲಿ ಅವರು ಕೊಲ್ಕತ್ತಾಗೆ ತೆರಳಿದರು ಮತ್ತು ಆರ್ಯನ್ ಸೇರಿದರು. ನಂತರ ಅವರು ಪೂರ್ವ ರೈಲ್ವೇಯನ್ನು ಪ್ರತಿನಿಧಿಸಲು ತೆರಳಿದರು. ಅವರು ೧೯ರ ವಯಸ್ಸಿನಲ್ಲಿ ಢಾಕಾದಲ್ಲಿ (ಪ್ರಸ್ತುತ ಢಾಕಾ), ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ ರಾಜಧಾನಿ) ನಡೆದ ೧೯೫೫ರ ಚೌಕೋನ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು ಭಾರತವನ್ನು ಮೂರು ಏಷ್ಯನ್ ಗೇಮ್ಸ್‌ನಲ್ಲಿ ಪ್ರತಿನಿಧಿಸಿದರು. ಅವುಗಳೆಂದರೆ ಟೋಕಿಯೋದ ೧೯೫೮ ಏಷ್ಯನ್ ಕ್ರೀಡಾಕೂಟ, ಜಕಾರ್ತಾದಲ್ಲಿ ೧೯೬೨ರ ಏಷ್ಯನ್ ಕ್ರೀಡಾ ಕೂಟ (ಇಲ್ಲಿ ಭಾರತ ಫುಟ್ಬಾಲ್‌ನಲ್ಲಿ ಚಿನ್ನದ ಪದಕ ಗಳಿಸಿತು) ಮತ್ತು ನಂತರ ಬ್ಯಾಂಕಾಕ್‍ನಲ್ಲಿ ೧೯೬೬ ಏಷ್ಯನ್ ಗೇಮ್ಸ್. ಅವರು ಮೆಲ್ಬೋರ್ನ್‌ನಲ್ಲಿ ನಡೆದ ೧೯೫೬ ಬೇಸಿಗೆ ಒಲಿಂಪಿಕ್‍ನಲ್ಲಿ ಆಡಿದ ರಾಷ್ಟ್ರೀಯ ತಂಡದಲ್ಲಿದ್ದರು. ರೋಮ್‍ನಲ್ಲಿ ನಡೆದ ೧೯೬೦ ಬೇಸಿಗೆ ಒಲಂಪಿಕ್ಸ್‌ನಲ್ಲಿ ಅವರು ಭಾರತದ ನಾಯಕತ್ವ ವಹಿಸಿದರು. ಅಲ್ಲಿ ಭಾರತ ಫ್ರಾನ್ಸ್ ವಿರುದ್ಧ ೧-೧ ಡ್ರಾದಲ್ಲಿ ಸಮಬಲ ಸಾಧಿಸಿತು. ಅವರು ಕೌಲಾಲಂಪುರ್ನಲ್ಲಿ ಮೆರ್ಡೆಕಾ ಕಪ್‍ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಭಾರತ ೧೯೫೯ ಮತ್ತು ೧೯೬೪ರಲ್ಲಿ ಬೆಳ್ಳಿ ಪದಕ ಗೆದ್ದಿತು ಮತ್ತು ೧೯೬೫ರಲ್ಲಿ ಕಂಚಿನ ಪದಕ ಗಳಿಸಿತು. ಮರುಕಳಿಸುವ ಗಾಯಗಳ ಕಾರಣ ೧೯೬೭ರಲ್ಲಿ ಅವರು ರಾಷ್ಟ್ರೀಯ ತಂಡದಿಂದ ಬಲವಂತವಾಗಿ ನಿವೃತ್ತರಾಗಬೇಕಾಯಿತು.

ನಿರ್ವಾಹಕ ವೃತ್ತಿಜೀವನ[ಬದಲಾಯಿಸಿ]

ಪಿ.ಕೆ. ಬ್ಯಾನರ್ಜಿಯ ಮೊದಲ ತರಬೇತಿ ಕೆಲಸ ಈಸ್ಟ್ ಬಂಗಾಳ ಫುಟ್ಬಾಲ್ ಕ್ಲಬ್‍ನೊಂದಿಗೆ ನಡೆಯಿತು. ಅವರು ಮೋಹನ್ ಬಗಾನ್ ಅಥ್ಲೆಟಿಕ್ ಕ್ಲಬ್ ಅನ್ನು ಒಂದು ಐತಿಹಾಸಿಕ ಸಾಧನೆ ಮಾಡುವಲ್ಲಿ ಮಾರ್ಗದರ್ಶನ ಮಾಡಿದರು. ಐಎಫ್ಎ ಷೀಲ್ಡ್, ರೋವರ್ಸ್ ಕಪ್ ಮತ್ತು ಡ್ಯುರಾಂಡ್ ಕಪ್‍ಗಳನ್ನು ಒಂದೇ ಕ್ರೀಡಾಋತುವಿನಲ್ಲಿ ವಿಜಯವಾಗುವಂತೆ ಮಾಡಿ ತಮ್ಮ ಮೊದಲ ತ್ರಿವಳಿ-ಕಿರೀಟವನ್ನು ಗೆದ್ದರು. ಅವರು ೧೯೭೨ ರಲ್ಲಿ ರಾಷ್ಟ್ರೀಯ ತರಬೇತುದಾರರಾದರು, ೧೯೭೨ ರ ಮ್ಯೂನಿಚ್ ಒಲಂಪಿಕ್ಸ್‌ನ ಅರ್ಹತಾ ಪಂದ್ಯಗಳ ಮೂಲಕ ಪ್ರಾರಂಭಿಸಿದರು. ಅವರು ೧೯೮೬ ರವರೆಗೂ ಭಾರತೀಯ ಫುಟ್ಬಾಲ್ ತಂಡದ ತರಬೇತುದಾರರಾಗಿದ್ದರು. ಜಮ್ಷೇದ್‍ಪುರದಲ್ಲಿ ಟಾಟಾ ಫುಟ್ಬಾಲ್ ಅಕಾಡೆಮಿಗೆ ಸೇರಿಕೊಂಡ ಅವರು ೧೯೯೧ ರಿಂದ ೧೯೯೭ ರವರೆಗೆ ಅದರ ತಾಂತ್ರಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಫಿಫಾ ೨೦೦೫ ರಲ್ಲಿ ಮಿಲೇನಿಯಂನ ಆಟಗಾರ ಸಮ್ಮಾನವನ್ನು ಪಿಕೆ ಯವರಿಗೆ ನೀಡಲಾಯಿತು. ಅವರು ಒಲಿಂಪಿಕ್ ಸಮಿತಿಯಿಂದ ಅಂತರಾಷ್ಟ್ರೀಯ ಫೇರ್ ಪ್ಲೇ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಇದು ಇನ್ನೂ ಯಾವುದೇ ಭಾರತೀಯ ಫುಟ್ಬಾಲ್ ಆಟಗಾರರಿಂದ ಪುನರಾವರ್ತಿಸಲ್ಪಟ್ಟಿಲ್ಲ. ೧೯೯೯ ರಲ್ಲಿ, ಭಾರತೀಯ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರಾಗಿ ಬ್ಯಾನರ್ಜಿ ಮತ್ತೆ ಹುದ್ದೆಯನ್ನು ತೆಗೆದುಕೊಂಡರು.

ಗೌರವಗಳು[ಬದಲಾಯಿಸಿ]

  • ಏಷ್ಯನ್ ಗೇಮ್ಸ್ ಚಿನ್ನದ ಪದಕ: ೧೯೬೨ಏಷ್ಯನ್ ಗೇಮ್ಸ್
  • ಮೆರ್ಡೆಕಾ ಟೂರ್ನಮೆಂಟ್ ಸಿಲ್ವರ್ ಪದಕ: ೧೯೫೯, ೧೯೬೪
  • ಅರ್ಜುನ ಪ್ರಶಸ್ತಿ: ೧೯೬೧
  • ಪದ್ಮಶ್ರೀ: ೧೯೯೦
  • ೨೦ ನೇ ಶತಮಾನದ ಭಾರತೀಯ ಫುಟ್ಬಾಲ್ ಆಟಗಾರ (ಫಿಫಾದಿಂದ ಪ್ರಶಸ್ತಿ)
  • ಫೀಫಾ ಸೆಂಟೆನ್ನಿಯಲ್ ಆರ್ಡರ್ ಆಫ್ ಮೆರಿಟ್

ಉಲ್ಲೇಖಗಳು[ಬದಲಾಯಿಸಿ]