ನಾಗರೇಖಾ ಗಾಂವಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಬರಹಗಾರ್ತಿ ನಾಗರೇಖಾ ಗಾಂವಕರ

ನಾಗರೇಖಾ ಗಾಂವಕರ ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಸೃಜನಶೀಲ ಬರಗಾರ್ತಿ, ಅನುವಾದಕಿ ಮತ್ತು ಅಂಕಣಕಾರ್ತಿ. ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಬರಹಗಾರರು.

ಹುಟ್ಟು[ಬದಲಾಯಿಸಿ]

ಉತ್ತರಕನ್ನಡ ಜಿಲ್ಲೆಯ ಅಡ್ಲೂರು ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ ಎ ಪದವಿ. ವೃತ್ತಿಯಿಂದ ಉಪನ್ಯಾಸಕಿಯಾಗಿದ್ದು, ಸರಕಾರಿ ಪದವಿಪೂರ್ವ ಕಾಲೇಜು ದಾಂಡೇಲಿಯಲ್ಲಿ ಕರ್ತವ್ಯ ನಿರ್ವಹಣೆ.

ಪ್ರಕಟಿತ ಕೃತಿಗಳು[ಬದಲಾಯಿಸಿ]

  1. ಏಣ , ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,]
  2. ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ[ಅಂಕಣ ಬರಹ ಕೃತಿ]
  3. ಕವಾಟ- ಪುಸ್ತಕ ಪರಿಚಯ ಕೃತಿ
  4. ಸ್ತ್ರೀ- ಸಮಾನತೆಯ ಸಂಧಿಕಾಲದಲ್ಲಿ- ಮಹಿಳಾ ಅಸ್ಮಿತೆ ಕುರಿತ [ಅಂಕಣ ಬರಹ] ಕೃತಿ.
  5. “ದಿ ಡೈರಿ ಆಫ್ ಎ ಯಂಗ್ ಗರ್ಲ” – ಆನ್ ಫ್ರಾಂಕ್ [ ಅನುವಾದಿತ ಕೃತಿ] ಬಂದಿರುತ್ತದೆ.

ಪ್ರಶಸ್ತಿಗಳು[ಬದಲಾಯಿಸಿ]

  1. “ ಏಣ ” ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಮತಿ ಶಾರದಾರಾಮಲಿಂಗಪ್ಪ ದತ್ತಿ ಪ್ರಶಸ್ತಿ-2015”[೧]
  2. ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿಯ ಅಂಕಣ ಬರಹಗಳ ಗುರುತಿಸಿ ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ಪ್ರತಿವರ್ಷ ನೀಡುವ ಪತ್ರಕರ್ತ ಪುರಸ್ಕಾರ ಕನ್ನಡ ವಿಭಾಗದ ಪ್ರಾ. ಎಸ್‌ಆರ್‌ಜೋಗ್ ಮಹಿಳಾ ಪ್ರಶಸ್ತಿ-2019.
  3. “ಬರ್ಫದ ಬೆಂಕಿ” ಸಂಕಲನಕ್ಕೆ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ ವತಿಯಿಂದ ನೀಡುವ “ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ-2019 ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಾವ್ಯಕ್ಕೆ ನೀಡುವ “ಗೀತಾ ದೇಸಾಯಿ ದತ್ತಿ ಬಹುಮಾನ-2018-19
  4. “ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ”-ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನೀಡುವ ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ-2020[೨]
  5. 2019ರಲ್ಲಿ “ಮೌನದೊಳಗೊಂದು ಅಂತರ್ಧಾನ” ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬೈ ಇವರು ಕೊಡಮಾಡುವ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಪ್ರಶಸ್ತಿ

ಬಾಹ್ಯಕೊಂಡಿ[ಬದಲಾಯಿಸಿ]

  1. ಕೆಂಡಸಂಪಿಗೆಯಲ್ಲಿ ನಾಗರೇಖಾ ಅವರು ಬರೆದ ಬರಹಗಳ ವಿವರ
  2. ವಿಶ್ವಧ್ವನಿಯಲ್ಲಿ ನಾಗರೇಖಾ ಗಾಂವಕರರ ಬರಹಗಳು
  3. ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ
  4. ಚಿಲುಮೆ ಕನ್ನಡ ಸಾಹಿತ್ಯ ತಾಣ

ಉಲ್ಲೇಖ[ಬದಲಾಯಿಸಿ]

  1. "Story and Poem By ನಾಗರೇಖಾ ಗಾಂವಕರ | BookBrahma". www.bookbrahma.com.
  2. https://www.shauryadigital.life/2021/07/2020.html Archived 2021-12-27 ವೇಬ್ಯಾಕ್ ಮೆಷಿನ್ ನಲ್ಲಿ. |website=SHAURYA DIGITAL LIFE