ಧೌಲಿ
ಧೌಲಿ ಒಡಿಶಾ ರಾಜ್ಯದ ಭುವನೇಶ್ವರದ ೮ ಕಿ.ಮಿ. ದಕ್ಷಿಣಕ್ಕೆ ದಯಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದು ಒಂದು ಗುಡ್ಡವಾಗಿದ್ದು ಪಕ್ಕದಲ್ಲಿ ವಿಶಾಲವಾದ ತೆರೆದ ಸ್ಥಳವಿದೆ. ಇದು ಒಂದು ಶಿಲಾರಾಶಿಯ ಮೇಲೆ ಕೆತ್ತಲಾದ ಸಾಮ್ರಾಟ್ ಅಶೋಕನ ಪ್ರಧಾನವಾದ ಶಾಸನಗಳನ್ನು ಹೊಂದಿದೆ. ಈ ಶಾಸನಗಳು ಗುಡ್ಡದ ಶಿಖರಕ್ಕೆ ಕರೆದೊಯ್ಯುವ ರಸ್ತೆಯ ಪಕ್ಕದಲ್ಲಿ ಇವೆ.
ಮಹತ್ವ[ಬದಲಾಯಿಸಿ]
ಧೌಲಿ ಗುಡ್ಡವು ಕಳಿಂಗ ಯುದ್ಧವು ನಡೆದ ಪ್ರದೇಶವೆಂದು ಭಾವಿಸಲಾಗಿದೆ.[೧]
ಇಲ್ಲಿ ಕಂಡುಬಂದಿರುವ ಶಿಲಾಶಾಸನಗಳಲ್ಲಿ ಸಂ. ೧-೯, ೧೪ ಮತ್ತು ಎರಡು ಪ್ರತ್ಯೇಕ ಕಲಿಂಗ ಶಾಸನಗಳು ಸೇರಿವೆ.[೨] ಕಲಿಂಗದ ಶಾಸನ ೬ರಲ್ಲಿ, ಅವನು "ಇಡೀ ವಿಶ್ವದ ಕಲ್ಯಾಣ"ಕ್ಕಾಗಿ ತನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತಾನೆ. ಶಾಸನಗಳ ಮೇಲಿರುವ ಬಂಡೆಯಲ್ಲಿ ಕೊರೆದ ಆನೆಯು ಒಡಿಶಾದ ಅತ್ಯಂತ ಮುಂಚಿನ ಬೌದ್ಧ ಶಿಲ್ಪವಾಗಿದೆ. ಈ ಕಲ್ಲಿನ ಆನೆಯು ಕೇವಲ ಪ್ರಾಣಿಯ ಮುಂಭಾಗಗಳನ್ನು ತೋರಿಸುತ್ತದೆ, ಆದರೆ ಇದಕ್ಕೆ ರೂಪ ಮತ್ತು ಚಲನೆಯ ಸೂಕ್ಷ್ಮವಾದ ಭಾವವಿದೆ.[೩] ಇದು ಮೌರ್ಯರ ಕಲೆಯ ಕೆಲವೇ ಅವಶೇಷಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.
ಛಾಯಾಂಕಣ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "Kalinga War and its impact on Ashoks". India Video. Retrieved 2 April 2011.
- ↑ Lahiri, Nayanjot (2015). Ashoka in Ancient India (in ಇಂಗ್ಲಿಷ್). Harvard University Press. p. 425. ISBN 9780674915251.
- ↑ Singh, Upinder (2008). A History of Ancient and Early Medieval India: From the Stone Age to the 12th Century (in ಇಂಗ್ಲಿಷ್). Pearson Education India. p. 361. ISBN 9788131711200.