ಧರ್ಮಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧರ್ಮಶ್ರೀ ಎಸ್ ಎಲ್ ಭೈರಪ್ಪನವರ ಕೃತಿ.


ಚಿತ್ರಣ[ಬದಲಾಯಿಸಿ]

ಬಡಕುಟುಂಬದಲ್ಲಿ ಹುಟ್ಟಿ ತನ್ನೂರು, ಮಾವನೂರು ಕೊನೆಗೆ ಮೈಸೂರು, ಹೀಗೆ ಎಲ್ಲೆಲ್ಲೊ ಓದಿ ದೊಡ್ಡವನಾಗಿ, ಹಿಂದೂ ದರ್ಮದ ಬಗ್ಗೆ ಅಪಾರ ಅಭಿಮಾನ ಹೊಂದಿದ ಒಬ್ಬ ಯುವಕ, ಆತ ಬೆಳೆಯುವ ರೀತಿ, ಆತನ ಶಿಕ್ಷಣ, ಇವೆಲ್ಲವು ನಮ್ಮನ್ನು ಗಾಢವಾಗಿ ಆವರಿಸಿ ಬಿಡುತ್ತವೆ. ಕೊನೆಗೆ ಅಷ್ಟೊಂದು ನಂಬಿಕೆ ಇಟ್ಟ ಧರ್ಮವನ್ನೆ ತ್ಯಜಿಸಿ ಪ್ರೀತಿಗಾಗಿ ಅನ್ಯಧರ್ಮೀಯ (ಕ್ರೈಸ್ತ) ಹುಡುಗಿಯನ್ನು ಮದುವೆಯಾಗಿ ತನ್ನವರನ್ನೆಲ್ಲ ತೊರೆದು, ಏಕಾಂಗಿ ಬದುಕು ನಡೆಸುತ್ತಾನೆ. ಅಲ್ಲಿ ನಡೆಯುವ ಅವಮಾನಗಳ ಸರಮಾಲೆಯನ್ನೆ ಹೊತ್ತು, ಬೇಸತ್ತು ಅವರು ಕೊಟ್ಟ ಅಧಿಕಾರ, ನೌಕರಿ, ಐಶ್ವರ್ಯವನ್ನು ತ್ಯಜಿಸಿ ಮತ್ತೆ ಹಿಂದೂ ಧರ್ಮವನ್ನು ಆರಿಸಿ, ಹೆಂಡತಿಯನ್ನೂ ಇದೇ ಧರ್ಮಕ್ಕೆ ಬದಲಾಯಿಸಿ ಕರೆತರುವ ಮದ್ಯವಯಸ್ಕನ ಕಥೆಯಿದು.