ಜಯಂತ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಂತ ಭಟ್ಟ
ಜನನest. 9th Century CE
ಮರಣunknown
ತತ್ವಶಾಸ್ತ್ರಭಾರತೀಯ ತತ್ವಶಾಸ್ತ್ರನ್ಯಾಯ ಚಿಂತನೆ

ಜಯಂತ ಭಟ್ಟ (ಸುಮಾರು ಕ್ರಿ.ಶ. ೯ನೇ ಶತಮಾನ) ಒಬ್ಬ ಕಾಶ್ಮೀರಿ ಕವಿ ಮತ್ತು ಭಾರತೀಯ ತತ್ವಶಾಸ್ತ್ರನ್ಯಾಯ ಪರಂಪರೆಯ ತತ್ವಶಾಸ್ತ್ರಜ್ಞನಾಗಿದ್ದನು. ತನ್ನ ತತ್ವಶಾಸ್ತ್ರೀಯ ಗ್ರಂಥ ನ್ಯಾಯಮಂಜರಿ ಮತ್ತು ಆಗಮಾಡಂಬರ ನಾಟಕದಲ್ಲಿ, ರಾಜ ಶಂಕರವರ್ಮನ್‍ನನ್ನು (ಕ್ರಿ.ಶ. ೮೮೩-೯೦೨) ಜಯಂತನು ತನ್ನ ಸಮಕಾಲೀನನೆಂದು ಪ್ರಸ್ತಾಪಿಸುತ್ತಾನೆ. ಅವನ ಮಗ ಅಭಿನಂದನು ತನ್ನ ಕಾದಂಬರಿ-ಕಥಾಸಾರದಲ್ಲಿ, ಜಯಂತನ ಮುತ್ತಜ್ಜನು ಕ್ರಿ.ಶ. ೮ನೇ ಶತಮಾನದ ರಾಜ ಲಲಿತಾದಿತ್ಯನ ಮಂತ್ರಿಯಾಗಿದ್ದನು ಎಂದೂ ಪ್ರಸ್ತಾಪಿಸಿದ್ದಾನೆ.