ಗಿರೀಶ್ ಭಾರಧ್ವಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವರನ್ನು ತೂಗುಸೇತುವೆಗಳ ಸರದಾರ ಎಂದೇ ಕರ್ನಾಟಕದ ಜನ ಗುರುತಿಸುತ್ತಾರೆ. ಇವರು ಕರ್ನಾಟಕದ ಹಲವಾರು ಪ್ರದೇಶಗಳನ್ನು ಇವರ ತೂಗುಸೇತುವೆಗಳ ಮೂಲಕ ಬೆಸೆದಿದ್ದಾರೆ. ಅದರಲ್ಲೂ ಸುಳ್ಯಪಯಸ್ವಿನಿ ನದಿಗೆ ಕಟ್ಟಿದ ರೋಟರಿ-ಇನ್ಫೋಸಿಸ್ ಸೇತುವೆ ಜನಾಕರ್ಷಣೆಯ ಕೇಂದ್ರವಾಗಿದ್ದು ಪ್ರೇಕ್ಷಣೀಯ ಸ್ಥಳವು ಆಗಿದೆ. ಇದು ಸುಳ್ಯ ನಗರವನ್ನು ದೋಡ್ಡೇರಿ ಎಂಬ ಗ್ರಾಮಕ್ಕೆ ಸಂಪರ್ಕಿಸುತ್ತದೆ. ಇವರು ಇದು ಮಾತ್ರವಲ್ಲದೆ ಇನ್ನೂ ಹಲವಾರು ಸ್ಥಳಗಳಲ್ಲಿ ಸೇತುಬಂಧ ಮಾಡಿದ್ದಾರೆ. ಸುಳ್ಯದಲ್ಲಿ ಇರುವ ಕರಾಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಇವರು ಸಮುದಾಯದ ಹೆಮ್ಮೆಯ ಭಾರದ್ವಾಜ ಕುಟುಂಬಕ್ಕೆ ಸೇರಿದವರು. ಸುಳ್ಯದ ಹಲವಾರು ಸ್ಥಳಗಳಲ್ಲಿ ಇವರ ತೂಗುಸೇತುವೆಗಳಿದ್ದು ಇತ್ತೀಚೆಗೆ ಇವರ ಸಹಪಾಠಿ ಕರ್ನಾಟಕದ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಊರನ್ನು ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಬೆಸೆದಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ಗಿರೀಶ್ ಭಾರದ್ವಾಜ್ ಇತ್ತೀಚೆಗೆ ಸಿಎನ್ಎನ್-ಐಬಿಎನ್ ಹಿರಿಯ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೨೦೧೭ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[೧]

ಪದ್ಮಶ್ರೀ
*1975 ರಲ್ಲಿ ಎಂಜಿನಿಯರಿಂಗ್ ಪದವಿದಾರೆ ಗಿರೀಶ್ ಭಾರದ್ವಾಜ್ ಸುಳ್ಯದ ಒಂದು ಚಿಕ್ಕ ಕಾರ್ಯಗಾರವನ್ನು ನಡೆಸಿದರು. ತನ್ನ ಜೀವನದಲ್ಲಿ ಮೊದಲ ಬಾರಿಗೆ, ಗಿರೀಶ್ ಸೇತುವೆಗಳ ಅಧ್ಯಯನ ಆರಂಭಿಸಿದರು.
  • ಗಿರೀಶ್‌ ಭಾರದ್ವಾಜ್‌: ಅರಂಬೂರಿನ ಗಿರೀಶ್ ಭಾರದ್ವಾಜ್, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಅಪ್ಪನ ಆಣತಿಯಂತೆ ಸುಳ್ಯದಲ್ಲಿ ಸಣ್ಣದೊಂದು ವರ್ಕ್‌ಶಾಪ್ ಶುರು ಮಾಡಿದರು. 1986ರಲ್ಲಿ ತಮ್ಮದೇ ಊರಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದರು. 40 ಸ್ವಯಂ ಸೇವಕರ ತಂಡದೊಂದಿಗೆ ಕೆಲಸ ಶುರು ಮಾಡಿದ ಗಿರೀಶ್, ಕೆಲವೇ ದಿನಗಳಲ್ಲಿ ಸೇತುವೆ ಕಟ್ಟಿದರು. 30 ವರ್ಷಗಳ ನಂತರವೂ ಆ ಸೇತುವೆ ಜನರ ಸಂಪರ್ಕ ಕೊಂಡಿಯಾಗಿದೆ.
  • ಇದುವರೆಗೂ 127 ತೂಗು ಸೇತುವೆಗಳನ್ನು ಗಿರೀಶ್ ನಿರ್ಮಿಸಿದ್ದಾರೆ. ಜಮ್ಮು ಕಾಶ್ಮೀರದ ಪೂಂಛ್ ಬಳಿ ತೂಗು ಸೇತುವೆ ನಿರ್ಮಿಸಿಕೊಡುವಂತೆ ಸೇನಾಧಿಕಾರಿಗಳು ಅವರಿಗೆ ಪತ್ರ ಬರೆದಿದ್ದಾರೆ. [೨]

ಉಲ್ಲೇಖಗಳು[ಬದಲಾಯಿಸಿ]

  1. "Padma Awards 2017 announced".
  2. ನಿಸ್ವಾರ್ಥ ಸೇವೆಗೆ ಪುರಸ್ಕಾರ: ಎಲೆಮರೆ ಕಾಯಿಗಳ ಅರಸಿ ಬಂದ ಗೌರವ;ಪಿಟಿಐ;27 Jan, 2017