ಕೊರತೆ ಧನವಿನಿಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨][೩]

ಕೊರತೆ ಹಣಕಾಸು(ಕೊರತೆ ಧನವಿನಿಯೋಗ)[ಬದಲಾಯಿಸಿ]

ಆಧುನಿಕ ಸಕಾ೯ರಗಳು ಆಥಿ೯ಕಾಭಿವೃದ್ದಿಯ ಸಾಧನೆ ಮತ್ತು ಕಲ್ಯಾಣ ರಾಜ್ಯದ ಸ್ಥಾಪನೆಗಾಗಿ ಬೃಹತ್ ಪ್ರಮಾಣದ ಸಂಪನ್ಮೂಲಗಳನ್ನುನ ಸಂಗ್ರಹಿಸಬೇಕಾಗುತ್ತದೆ. ತಾನು ಸಾವ೯ಜನಿಕರಿಂದ ತೆರಿಗೆಯ ರೂಪದಲ್ಲಿ ಸಂಗ್ರಹಿಸುವ ವರಮಾನಕ್ಕಿಂತಲೂ ಹೆಚ್ಚಾಗಿ ಅವರ' ಕಲ್ಯಾಣ ಸಾಧನೆ'ಗೆ ಸಕಾ೯ರವು ಸಾವ೯ಜನಿಕ ವೆಚ್ಚ ಕೈಗೊಳ್ಳಬೇಕೆಂದು ಕಲ್ಯಾಣ ರಾಜ್ಯದ ಪ್ರಮುಖ ನೀತಿಯಾಗಿದೆ. ಕಲ್ಯಾಣ ರಾಜ್ಯದ ಆಚರಣೆಗೆ ಶ್ರಮಿಸಿದಾಗಲೇ 'ಕೊರತೆ ಹಣಕಾಸಿನ' ಅವಶ್ಯಕತೆ ಉದ್ಭವಿಸುವುದು. ತೆರಿಗೆ ಆದಾಯ, ಸಾವ೯ಜನಿಕ ಸಾಲಗಳು, ವಿದೇಶಿ ಬಂಡವಾಳ ಮೊದಲಾದ ಮೂಲಗಳಿಂದ ದೊರೆಯುವ ಸಂಪನ್ಮೂಲಗಳಿಗೂ, ಅಭಿವೃದ್ದಿ ಕ್ರಿಯೆಯ ವೆಚ್ಚಕ್ಕೂ ಕಡಿಮೆಯೆನಿಸಿದಾಗ ಅನಿವಾಯ೯ವಾಗಿ ಕೊರತೆ ಹಣಕಾಸನ್ನು ಅವಲ೦ಬಿಸಬೇಕಾಗುತ್ತದೆ. ಸಕಾ೯ರವು ತಾನು ವಿವಿಧ ಮೂಲಗಳಿಂದ ಸಂಗ್ರಹಿಸುವ ಸಾವ೯ಜನಿಕ ವರಮಾನವನ್ನು ಮೀರಿ ಕೈಗೊಳ್ಳುವ ಸಾವ೯ಜನಿಕ ವೆಚ್ಚಕ್ಕೆ 'ಕೊರತೆ ಹಣಕಾಸು' ಎಂದು ಕರೆಯಲಾಗುತ್ತದೆ. ಸಕಾ೯ರದ ಆದಾಯ ಮತ್ತು ಸಕಾ೯ರದ ವೆಚ್ಚದ ನಡುವಿನ ಅಂರರವೇ ಹಣಕಾಸಿನ ಕೊರತೆಯಾಗಿದೆ. ಈ ಕೊರತೆಯನ್ನು ತುಂಬಲು ಒಂದು ವಿಶಿಷ್ಟವಾದ ಮೂಲದಿಂದ ಸಂಪನ್ಮೂಲವನ್ನು ಕಂಡುಕೊಳ್ಳಲಾಗಿದೆ. ಇದನ್ನೇ ಕೊರತೆ ಹಣಕಾಸು ಅಥವ ಕೊರತೆ ಧನವಿನಿಯೋಗ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಕೊರತೆ ಧನವಿನಿಯೋಗ[ಬದಲಾಯಿಸಿ]

Fiscal Compliance 2014 - structural deficit

ಮುಂಗಡ ಪತ್ರದಲ್ಲಿನ ಕೊರತೆಯನ್ನು ತುಂಬುವಲ್ಲಿ ಕೊರತೆ ಹಣಕಾಸು ವಿಧಾನ ಆಧುನಿಕ ಯುಗದ ಒಂದು ಮಹತ್ವದ ಸಾಧನವಾಗಿದೆ. ಸಕಾ೯ರವು ತನ್ನ ಪ್ರಸಕ್ತ ವರಮಾನಕ್ಕಿಂತಲೂ ಹೆಚ್ಚು ವೆಚ್ಚ ಮಾಡಿದರೆ ಭಾರತದಲ್ಲಿ 'ಕೊರತೆ ಧನವಿನಿಯೋಗ' ಎಂದು ಕರೆಯಲಾಗುತ್ತದೆ. ಭಾರತ ಯೋಜನ ಆಯೋಗದ ಪ್ರಕಾರ ಹಣಕಾಸು ಎಂದರೆ "ಸಕಾ೯ರದ ಆಯ-ವ್ಯಯಪತ್ರದ ಕಾಯಾ೯ವಚರಣೆಯ ಮೂಲಕ ಆಥಿ೯ಕತೆಯ ನಿವ್ವಳ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ಸರಳವಾಗಿ ಹೇಳುವುದಾದರೆ, ಸಕಾ೯ರ ತನ್ನ ಆದಾಯಕ್ಕಿಂತಲೂ ಹೆಚ್ಚು ವೆಚ್ಚ ಮಾಡುವುದು ಕೊರತೆ ಹಣಕಾಸು ಪದ್ಧತಿಯಾಗಿದೆ. ಇತೀಚಿನ ದಿನಗಳಲ್ಲಿ ಸಕಾ೯ರಗಳು ಮಾಡುವ ವೆಚ್ಚಗಳು ಸಕಾ೯ರಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯಕ್ಕಿಂತಲೂ ಹೆಚ್ಚಿವೆ. ಈ ಸಕಾ೯ರದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರವನ್ನು ಕೊರತೆಯ ಹಣಕಾಸಿನ ಮೂಲಕ ತುಂಬಲಾಗುತ್ತದೆ. ಇದನ್ನೆ ಕೊರತೆ ಹಣಕಾಸು ಎನ್ನಲಾಗುತ್ತದೆ.

ಭಾರತದ ಕೊರತೆ ಹಣಕಾಸಿನ ವಿವಿಧ ಪರಿಭಾವನೆಗಳು[ಬದಲಾಯಿಸಿ]

Structural & Cyclical Components of Budget, jjron, 21.05.2013

ಭಾರತದ ಕೊರತೆ ಹಣಕಾಸು ಪ್ರಮುಖವಾಗಿ ನಾಲ್ಕು ರೀತಿಯ ಪರಿಭಾವನೆಗಳನ್ನು ಹೊಂದಿದೆ. ಅವುಗಳೆಂದರೆ

Deficits vs. Debt Increases - 2008

೧. ರಾಜಸ್ವ ಕೊರತೆ ಪರಿಭಾವನೆ

     ರಾಜಸ್ವ ಕೊರತೆ ಪರಿಭಾವನೆಯಲ್ಲಿ ಪ್ರಸಕ್ತ ರಾಜಸ್ವ ವೆಚ್ಚವು ಪ್ರಸಕ್ತ ರಾಜಸ್ವ ವರಮಾನವನ್ನು ಮೀರಿದಾಗ ರಾಜಸ್ವ ಕೊರತೆ(ಕಂದಾಯ ಕೊರತೆ) ಸಂಭವಿಸುತ್ತದೆ.
     ರಾಜಸ್ವ ಕೊರತೆ = ರಾಹಸ್ವ ಕೊರತೆ - ರಾಜಸ್ವ ವೆಚ್ಚ

೨. ಮುಂಗಡ ಪತ್ರದಲ್ಲಿ ಕೊರತೆ ಪರಿಭಾವನೆ

     ಸಕಾ೯ರದ ವರಮಾನಕ್ಕಿಂತಲೂ, ಸಕಾ೯ರದ ವೆಚ್ಚವು ಅಧಿಕವಾದಾಗ ಮುಂಗಡ ಪತ್ರದಲ್ಲಿ ಕೊರತೆ ಸಂಭವಿಸುತ್ತದೆ.
     ಮುಂಗಡ ಪತ್ರದಲ್ಲಿ ಕೊರತೆ = ಒಟ್ಟು ವರಮಾನ - ಒಟ್ಟು ವೆಚ್ಚ

೩. ಕೋಶೀಯ ಕೊರತೆ ಪರಿಭಾವನೆ

     ಮುಂಗಡ ಪತ್ರದಲ್ಲಿನ ಕೊರತೆಗೆ ಸಕಾ೯ರದ ಸಾಲಗಳನ್ನು ಸೇರಿಸಿದಾಗ ಅದು ಕೋಶೀಯ ಕೊರತೆ ಎನಿಸಿಕೊಳ್ಳುತ್ತದೆ.

೪. ಪ್ರಾಥಮಿಕ ಕೊರತೆಯ ಪರಿಭಾವನೆ

     ಕೋಶೀಯ ಕೊರತೆಯಲ್ಲಿ ಬಡ್ತಿ ಪಾವತಿಗಳನ್ನು ಕಳೆದಾಗ ಪ್ರಾಥಮಿಕ ಕೊರತೆ ಉಂಟಾಗುತ್ತದೆ. ಅಂದರೆ ಒಟ್ಟು  ಕೋಶೀಯ ಕೊರತೆ ಮತ್ತು ಬಡ್ಡಿ ಪಾವತಿಗಳ ನಡುವಿನ ವ್ಯತ್ಯಾಸಗಳನ್ನು ಪ್ರಾಥಮಿಕ ಕೊರತೆ
     ಎನ್ನಲಾಗುತ್ತ್ದೆ.
     ಪ್ರಾಥಮಿಕ ಕೊರತೆ = ಕೋಶೀಯ ಕೊರತೆ  - ನಿವ್ವಳ ಬಡ್ಡಿ ಪಾವತಿಗಳು

ಭಾರತದ ಕೊರತೆ ಹಣಕಾಸಿನ ವಿಧಾನಗಳು[ಬದಲಾಯಿಸಿ]

ಸಕಾ೯ರಕ್ಕೆ ತೆರಿಗೆಗಳು, ಶುಲ್ಕಗಳು, ಸಾವ೯ಜನಿಕ ಉದ್ಯಮಗಳಿಂದ ಬರುವ ಲಾಭಗಳು, ಸಾವ೯ಜನಿಕರಿಂದ ಎತ್ತಿದ ಸಾಲ ಮುಂತಾದ ಮೂಲಗಳಿಂದ ಬರುವ ಆದಾಯಕ್ಕಿಂತಲೂ ಅದರ ವೆಚ್ಚಗಳು ಅಧಿಕವಾದಾಗ ಕೊರತೆ ಸಂಭವಿಸುತ್ತದೆ. ಈ ಕೊರತೆಯನ್ನು ತುಂಬಲು ಸಕಾ೯ರ ಹಣಕಾಸು ಪದ್ದತಿಯನ್ನು ಅನುಸರಿಸುತ್ತದೆ. ಅನುಸರಿಸುವ ವಿಧಾನ ಮಾತ್ರ ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಭಾರತ ಸಕಾ೯ರವು ತನ್ನ ಮುಂಗಡ ಪತ್ರದ ಕೊರತೆಯನ್ನು ತುಂಬಲು ಸಾಮಾನ್ಯವಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಲಾಗುತ್ತದೆ ೧. ರಿಜರ್ವ್ ಬ್ಯಾಂಕಿಗೆ ತನ್ನ ಖಜಾನೆ ಹುಂಡಿಗಳ ಮಾರಾಟ ಮಾದುವುದರ ಮೂಲಕ. ೨. ರಿಜರ್ವ್ ಬ್ಯಾಂಕಿನಲ್ಲಿದ್ದ ತನ್ನ ನಗದು ಶುಲ್ಕವನ್ನು ಹಿಂದಕ್ಕೆ ಪಡೆಯುವುದರ ಮೂಲಕ. ೩. ರಿಜರ್ವ್ ಬ್ಯಾಂಕಿನಿಂದ ಸಾಲ ಪಡೆಯುವುದು ರಿಜರ್ವ್ ಬ್ಯಾಂಕು ಹೊಸದಾಗಿ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದು ಸರ್ಕಾರಕ್ಕೆ ಸಾಲ ನೀಡುತ್ತದೆ. ಅಥವಾ ತನ್ನ ಬಳಿ ಇರುವ ನಗದಿನಿಂದ ಸಾಲ ನೀಡುತ್ತದೆ. ೪. ವಾಣೀಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವುದು.

ಹೀಗೆ ಭಾರತದಲ್ಲಿ ಕೊರತೆ ಹಣಕಾಸನ್ನು ಸರ್ಕಾರ ತನ್ನ ಹಿಂದಿನ ಸಂಗ್ರಹವಾದ ನಗದನ್ನು ಹಿಂಪಡೆಯುವುದು, ಕೇಂದ್ರ ಬ್ಯಾಂಕಿನಿಂದ ಸಾಲ ಪದೆಯುವುದು ಮತ್ತು ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವುದರ ಮೂಲಕ ಜಾರಿಗೊಳಿಸುತ್ತದೆ.

ರಾಜ್ಯಗಳು ತಮ್ಮ ಮುಂಗಡ ಪತ್ರದ ಕೊರತೆಯನ್ನು ಈ ವಿಧಾನಗಳಿಂದ ತುಂಬಿಕೊಳ್ಳಬಹುದು. ೧. ರಿಜರ್ವ್ ಬ್ಯಾಂಕಿನಲ್ಲಿದ್ದ ತಮ್ಮ ನಗದು ಶುಲ್ಕವನ್ನು ಹಿಂದಕ್ಕೆ ಪಡೆಯುವುದರ ಮೂಲಕ. ೨. ಮಾರುಕಟ್ಟೆಯಲ್ಲಿ ಬಂಡವಾಳ ಪತ್ರಗಳನ್ನು ಮಾರಾಟ ಮಾಡುವುದರ ಮೂಲಕ. ೩. ರಿಜರ್ವ್ ಬ್ಯಾಂಕಿನಿಂದ ತಾತ್ಪೂರ್ತಿಕ ಸಾಲ(ಓವರ್ ಡ್ರಾಫ್ಟ್) ಗಳನ್ನು ಪಡೆಯುವುದರ ಮೂಲಕ.

ಕೊರತೆ ಹಣಕಾಸಿನ ಬಳಕೆಯ ಮಾರ್ಗದರ್ಶಿ ಸೂತ್ರಗಳು[ಬದಲಾಯಿಸಿ]

ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೊರತೆ ಹಣಕಾಸನ್ನು ಬಳಸುವಾಗ ಅತಿಪ್ರಸರಣಕ್ಕೆ ಅವಕಾಶ ನೀಡದಂತೆ, ಪ್ರಗತಿಗೆ ಅಡ್ಡಿಯಾಗದಂತೆ ಬಳಸಿಕೊಳ್ಳಲು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದು ಸೂಕ್ತವೆನಿಸಿದೆ. ಅಂತಹ ಸೂತ್ರಗಳೆಂದರೆ;

೧. ಅಧಿಕ ಉತ್ಪಾದಕ ಚಟುವಟಿಕೆಗಳಲ್ಲಿ ಹೂಡಿಕೆ : ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಉತ್ಪಾದನೆಯನ್ನು ಅಧಿಕಗೊಳಿಸುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಸುವಂತಹ ಚಟುವಟಿಕೆಗಳ ಮೇಲೆ ಮಾತ್ರ ಕೊರತೆ ಹಣಕಾಸಿನ ಕೋರಿಕೆಯನ್ನು ಕೈಗೊಳ್ಳುವುದು ಸೂಕ್ತವೆನಿಸುತ್ತದೆ. ಕೊರತೆ ಹಣಕಾಸು ಅಧಿಕವಾದಂತೆಲ್ಲಾ ಉಧ್ಯಮ ಚಟುವಟಿಕೆಗಳು ಬೆಳೆಯುವುದು ಮತ್ತು ಸರಕುಗಳ ಉತ್ಪಾದನೆ ಅಧಿಕಗೊಳ್ಳೂವುದರಿಂದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ೨. ಅವಶ್ಯಕತೆ ಹೂಡಿಕೆ: ಕೊರತೆ ಹಣಕಾಸನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಅವಶ್ಯಕವಾದವುಗಳ ಮೇಲೆ ಹೂಡಿಕೆ ಮಾಡಬೇಕು.ಕೊರತೆ ಹಣಕಾಸು ಹಣಬಾಹುಳ್ಯ ಮತ್ತು ಬೆಲೆ ಏರಿಕೆಗೆ ಅವಕಾಶ ಕಲ್ಪಿಸುವುದಾದರೂ ಕೂಡಾ ಅದನ್ನು ಸುರಕ್ಷಿತ ಮಿತಿಯಲ್ಲಿಟ್ಟರೆ ಹಾನಿಯಂತಾಗುವುದಿಲ್ಲ.ಅವಶ್ಯಕವಾದ ಹೂಡಿಕೆಗೆ ಮಾತ್ರ ಅದನ್ನು ಬಳಸಿಕೊಳ್ಳುವ ನೀತಿಯನ್ನು ಅನುಸರಿಸುವುದು ಸೂಕ್ತ. ೩. ಅಲ್ಪ ಗರ್ಭಾವಧಿಯ ಉದ್ಯಮಗಳ ಮೇಲೆ ಹೂಡಿಕೆ: ಕೊರತೆ ಹಣಕಾಸನ್ನು ಸಾಧ್ಯವಾದಷ್ಟು ಅಲ್ಪ ಗರ್ಭಾವಧಿಯ ಉದ್ಯಮಗಳ ಮತ್ತು ಸ್ಥಾವರಗಳ ಮೇಲೆ ಕೊರತೆ ಧನವಿನಿಯೋಗವನ್ನು ಕೈಗೊಳ್ಳುವುದು ಹಿತಕರ. ಇಂತಹುಗಳಿಂದ ಶೀಘ್ರವಾಗಿ ಉತ್ಪಾದನೆ ಪ್ರಾರಂಭವಾಗಿ, ಉತ್ಪನ್ನ ದೊರೆಯುವುದರಿಂದ ಬೆಲೆ ಏರಿಕೆಗೆ ಆಸ್ಪದ ದೊರಕುವುದಿಲ್ಲ. ೪. ಅನುಭೋಗಿ ವಸ್ತುಗಳ ಸಮರ್ಪಕ ಪೂರೈಕೆ: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನುಭೋಗಿ ವಸ್ತುಗಳ ಯಥೋಚಿತ ಪೂರೈಕೆ ಇರಬೇಕು.ಸರಕುಗಳ ಕೃತಕ ಅಭಾವ, ಸಟ್ಟಾ ವ್ಯಾಪಾರ ಮತ್ತು ಕಾಳ ಸಂತೆಯ ಅನಿಷ್ಟಗಳನ್ನು ಸರ್ಕಾರ ದಕ್ಷವಾಗಿ ನಿಯಂತ್ರಿಸುವಂತಿರಬೇಕು. ಆಮದುಗಳನ್ನು ಕಡಿಮೆ ಮಾಡಬೇಕು. ಕನಿಷ್ಟ ಅವಶ್ಯಕ ವಸ್ತುಗಳ ಸಮರ್ಪಕ ವಿತರನೆ ಪಡಿತರ ಪದ್ದತಿಯನ್ನು ಜಾರಿಗೆ ತರಬೇಕಾಗುತ್ತದೆ. ಕೊಳ್ಳುವ ಶಕ್ತಿಯನ್ನು ತಗ್ಗಿಸುವ ಸಲುವಾಗಿ ಹೆಚ್ಚು ತೆರಿಗೆಗಳನ್ನು ವಿಧಿಸಲು ಮತ್ತು ಬ್ಯಾಂಕು ಸಾಲಗಳನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ಕೋಶೀಯ ನೀತಿ ಮತ್ತು ಹಣ ಸಂಬಂಧಿ ನೀತಿ ಅನುಷ್ಠಾನದ ಅವಶ್ಯಕತೆ ಇದೆ. ಆಗ ಮುಂಗಡ ಪತ್ರದ ಕೊರತೆಯು ಆರ್ಥಿಕ ಅಭಿವೃದ್ಧಿಗೆ ವರವಾಗಿ ಪರಿಣಮಿಸುವುದೇ ಹೊರತು ಶಾಪವಾಗುವುದಿಲ್ಲ. ೫. ವೇತನ ನಿಯಂತ್ರಣ ನೀತಿ: ಹಣಬಾಹುಳ್ಯದ ಸಂದಭ೯ಗಳಲ್ಲಿ ವೇತನಗಳ ಹೆಚ್ಚಳವು ಬೆಲೆ ಏರಿಕೆಗೆ ಮತ್ತು ಬೆಲೆ ಏರಿಕೆಯು ವೇತನಗಳ ಹೆಚ್ಚಳಕ್ಕೆ ಕಾರಣವಾಗದ೦ತೆ ನಿಗಾ ವಹಿಸಬೇಕಾಗುತ್ತದೆ. ಆದ್ದರಿಂದ ವೇತನ ನಿಯಂತ್ರಣ ನೀತಿಯ ಅಗತ್ಯವಾಗುತ್ತದೆ. ಅಭಿವೃದ್ದಿಶೀಲ ರಾಷ್ಟ್ರವೊಂದು ಕೊರತೆ ಹಣಕಾಸಿನ ಗುಣಾವಗುಣಗಳೆರಡನ್ನು ವಿವೇಚನಾಯುತವಾಗಿ ಅಂದಾಜು ಮಾಡಿ ಮುಂಗಡ ಪತ್ರ ಕೊರತೆಯನ್ನು ಸೃಷ್ಟಿಸಬೇಕಾಗುತ್ತದೆ. ಅಭಿವೃದ್ದಿ ರಾಷ್ಟ್ರಗಳ ಉದಾಹರಣೆಯ ಆಧಾರದಲ್ಲಿ ಅಭಿವೃದ್ದಿ ದೇಶಗಳಲ್ಲಿ ಕೊರತೆ ಧನವಿನಿಯೋಗವನ್ನು ಕೈಗೊಂಡರೆ ಅನೇಕ ಸಮಸ್ಯೆಗಳು ಉದ್ಭವಿಸುವುದರಲ್ಲಿ ಆಶ್ಚಯ೯ವಿಲ್ಲ. ಏಕೆಂದರೆ ಈ ಎರಡು ಗುಂಪಿನ ದೇಶಗಳ ನಡುವೆ ಮೂಲ ಆಥಿ೯ಕ ಲಕ್ಷಣಗಳಲ್ಲಿಯೇ ಭಿನ್ನತೆಗಳಿವೆ. ಹಿಂದುಳಿದ ದೇಶಗಳಲ್ಲಿ ಕೊರತೆ ಹಣಕಾಸು ಪ್ರಗತಿಗೆ ನೆರವಾಗುವಂತೆ ಆಥಿ೯ಕ ರೋಗಗಳಿಗೂ ನಾಂದಿಯಾಗುವುದೆಂದು ಅನೇಕ ಅನಭಿವೃದ್ದಿ ರಾಷ್ಟಗಳ ಅನುಭವದಿಂದ ಸ್ಥಿರಪಟ್ಟಿದೆ. ಆದ್ದರಿಂದ ಕೊರತೆ ಧನವಿನಿಯೋಗ ಆಥಿ೯ಕಾಭಿವೃದ್ದಿಯ ಕಾಯ೯ವಿಧಾನಕ್ಕೆ ಅನಿವಾಯ೯. ಆದರೆ ಅದರ ಬಳಕೆಯಲ್ಲಿ ಎಚ್ಚರಿಕೆ ಅತ್ಯಗತ್ಯ.ಭಾರತದ೦ತಹ ಹಿಂದುಳಿದ ರಾಷ್ಟವು ತೀವ್ರಗತಿಯಲ್ಲಿ ಆಥಿ೯ಕಾಭಿವೃದ್ದಿಯನ್ನು ಸಾಧಿಸಬೇಕಾದರೆ ಕೊರತೆ ಧನವಿನಿಯೋಗವು ಅತ್ಯವಶ್ಯಕವಾಗಿದೆಯೆಂದು ಬಹುಶಃ ಎಲ್ಲ ಅಥ೯ಶಾಸ್ತ್ರಜ್ಗ್ನರೂ ಒಪ್ಪಿಕೊಳ್ಳುತ್ತಾರೆ. ಆದರೆ ಇದನ್ನು ಬಹಳ ಎಚ್ಚರಿಕೆಯಿಂದ ಮತ್ತು ಒಂದು ಮಿತಿಯಲ್ಲಿ ಉಪಯೋಗಿಸಿದರೆ, ಅದು ದುಷ್ಪರಿಣಾಗಳ ಮೂಲವಾಗದೆ,ಆಥಿ೯ಕಾಭಿವೃದ್ದಿಯ ಮೂಲವಾಗುತ್ತದೆ. ಕೊರತೆ ಹಣವು ಬೆಂಕಿಯಿದ್ದಂತೆ, ಅದು ಒಳ್ಳೆಯ ಸೇವಕನಾಗುವಂತೆ ಅದನ್ನು ಉಪಯೋಗಿಸಬೇಕು.ಆದ್ದರಿಂದ ಅದನ್ನು ಬಹಳ ಎಚ್ಚರಿಕೆಯಿಂದ ಅದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕೆಂಬುದು ಅಥ೯ಶಾಸ್ತ್ರಜ್ಗ್ನರ ಅಭಿಪ್ರಾಯವಾಗಿದೆ.

ಭಾರತದಲ್ಲಿ ಕೊರತೆ ಹಣಕಾಸನ್ನು ನಿಯಂತ್ರಣದಲ್ಲಿಡಲು ಸಲಹೆಗಳು[ಬದಲಾಯಿಸಿ]

ಭಾರತದ೦ತಹ ಅಭಿವೃದ್ದಿಶೀಲ ರಾಷ್ಟಗಳ ಕೊರತೆ ಧನವಿನಿಯೋಗ ಒಂದು ರೀತಿಯ ವರದಾನವಾದರೂ ಅದರಿಂದ ಆಥಿ೯ಕತೆಯ ಮೇಲೆ ಕೆಲವು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.ಆದ್ದರಿಂದ ಕೊರತೆ ಹಣಕಾಸನ್ನು ಹಿತಕರವಾಗಿ ಮಿತವಾಗಿ ಬಳಸುವುದು ಕ್ಷೇಮ. ಭಾರತದಲ್ಲಿ ಕೊರತೆ ಹಣಕಾಸನ್ನು ನಿಯಂತ್ರಣದಲ್ಲಿಡಲು ಈ ಕೆಳಕ೦ಡ ಸಲಹೆಗಳನ್ನು ಪರಿಗಣಿಸುವುದು ಸೂಕ್ತವೆನಿಸುತ್ತದೆ. ೧. ಸಾವ೯ಜನಿಕ ವೆಚ್ಚವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುವುದು. ೨. ರಸಗೊಬ್ಬರಗಳ ಮೇಲೆ ನೀಡುತ್ತಿರುವ ಸಹಾಯಧನಗಳನ್ನು ಕಡಿಮೆಗೊಳಿಸುವುದು. ೩. ಆಹಾರದ ಮೇಲೆ ಸಹಾಯಧನವನ್ನು ವೈಜ್ಫಾನಿಕವಾಗಿ, ವೈಚಾರಿಕವಾಗಿ ನೀಡುವುದು. ೪. ರಕ್ಷಣಾ ವೆಚ್ಚಗಳನ್ನು ಮಿತಗೊಳಿಸುವುದು. ೫. ಬ್ಯಾಂಕು ಸಾಲಗಳ ಮೇಲೆ ನಿಯಂತ್ರಣ ಹಾಕುವುದು. ೬. ಸಾವ೯ಜನಿಕ ಉದ್ದಿಮೆಗಳ ಉತ್ಪಾದನೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು. ೭. ಖಾಸಗಿ ರಂಗದಲ್ಲಿ ಉತ್ಪಾದನೆಯನ್ನು ವೃದ್ದಿಸಲು ಉತ್ತೇಜನಗಳನ್ನು ನೀಡುವುದು. ೮. ಅನುಭೋಗಿ ಸರಕುಗಳು ಅದರಲ್ಲೂ ವಿಶೇಶವಾಗಿ ಅಹಾರಧಾನ್ಯಗಳು, ಕಚ್ಚಾ ಪದಾಥ೯ಗಳ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಉತ್ತೇಜನ ಮತ್ತು ಕ್ರಮಗಳನ್ನು ಕೈಗೊಳ್ಳುವುದು. ೯. ಬಡತನ ನಿವಾರಣೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡುವುದು. ೧೦. ಕೊರತೆ ಹಣಕಾಸಿನ ಪ್ರಮಾಣವನ್ನು ಕನಿಷ್ಠಗೊಳಿಸಲು ಪ್ರಯತ್ನಿಸುವುದು. ೧೧. ರಾಜ್ಯ ಸಕಾ೯ರಗಳು ಪಡೆಯುವ ಓವರ್ ಡ್ರಾಫ಼್ಟಗಳನ್ನು ನಿಯಂತ್ರಿಸುವುದು. ೧೨. ಅನುತ್ಪಾದಕ ಚಟುವಟಿಕೆಗಳನ್ನು ಕಡಿತಗೊಳಿಸುವುದು. ೧೩. ಹೂಡಿಕೆಯ ಅಗತ್ಯತೆಗೆ ಅನುಗುಣವಾಗಿ ಉಳಿತಾಯವನ್ನು ಹೆಚ್ಚಿಸುವುದು. ೧೪. ಕೇಂದ್ರ ಮತ್ತು ರಾಜ್ಯ ಸಕಾ೯ರಗಳಲ್ಲಿನ ಸಚಿವರು, ಜನಪ್ರತಿನಿಧಿಗಳು ಜನಪ್ರಿಯ ಯೋಜನೆಗಳನ್ನು ಅಗ್ಗದ ಪ್ರಚಾರಕ್ಕಾಗಿ, ಭರವಸೆ, ಆಶ್ವಾಸನೆಗಳನ್ನು ನೀಡವುದನ್ನು ಎಲ್ಲಾ ಹಂತಗಳಲ್ಲಿಯೂ ನಿಯಂತ್ರಿಸುವುದು. ೧೫. ಕೇಂದ್ರ ಮತ್ತು ರಾಜ್ಯ ಸಕಾ೯ರಗಳು ಮಿತವ್ಯಯ ನೀತಿಯನ್ನು ಅನಿಸರಿಸುವುದರ ಮೂಲಕ ಆಥಿ೯ಕ ಶಿಸ್ತನ್ನು ಕಾಪಾಡಿಕೊಳ್ಳುವುದು.

ಉಲ್ಲೇಕಗಳು[ಬದಲಾಯಿಸಿ]

  1. http://www.yourarticlelibrary.com/india-2/deficit-financing-in-india-its-purpose-advantages-and-defects/23410/
  2. ಭಾರತದ ಅಥ೯ಶಾಸ್ತ್ರ
  3. http://www.britannica.com/topic/deficit-financing

[೧]

  1. http://iscexamnotes-content.blogspot.in/2010/04/deficit-financing.htm