ಹದಿಮೂರನೇ ವಿಧಾನಸಭೆಯ ಚುನಾವಣೆ 13 ಏಪ್ರಿಲ್ 2011 ರಂದು ನಡೆಯಿತು. ಅದು ಕೇರಳದ 140 ಕ್ಷೇತ್ರಗಳಲ್ಲಿ ಸದಸ್ಯರನ್ನು ಚುನಾಯಿಸುವ ಕ್ರಿಯೆ. ಚುನಾವಣಾ ಫಲಿತಾಂಶಗಳು 13 ಮೇ 2011 ರಂದು ಪ್ರಕಟವಾಯಿತು. ಫಲಿತಾಂಶವನ್ನು ನೋಡಿದಾಗ ಯುಡಿಎಫ್ 4 ಸ್ಥಾನಗಳ ಅಂತರದಿಂದ ಎಲ್ಡಿಎಫ್’ನ್ನು ಪರಾಭವಗೊಳಿಸಿತು, ಕೇರಳದ ಚುನಾವಣೆಗಳ ಇತಿಹಾಸದಲ್ಲಿ ಇದು ಅತಿ ಕಠಿಣ ಸ್ಪರ್ದೆ ಎಂದು ಸಾಬೀತಾಯಿತು.
ಕೇರಳದಲ್ಲಿ 2 ಪ್ರಮುಖ ರಾಜಕೀಯ ಒಕ್ಕೂಟಗಳು ಇವೆ. ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ (ಯುಡಿಎಫ್) . ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಪಕ್ಷಗಳ ಒಕ್ಕೂಟವಾಗಿದೆ. ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಮುಖ್ಯವಾಗಿ ಎಡಪಂಥೀಯ ಪಕ್ಷಗಳ ಸಮ್ಮಿಶ್ರ ಕೂಟವಾಗಿದೆ. ಇದರಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಎಂ) ನೇತೃತ್ವ, . ಭಾರತೀಯ ಜನತಾ ಪಕ್ಷ (ಬಿಜೆಪಿ) ಕೂಡ ರಾಜ್ಯದಲ್ಲಿ ಸ್ಪರ್ಧಿಸಲು ಹಾಗು ತಮ್ಮ ಎನ್ಡಿಎ ಮೈತ್ರಿ ಪಕ್ಷವಾದ ಜನತಾ ದಳ (ಸಂಯುಕ್ತ) ದ ಜೊತೆ ಸೇರಿ, ಒಂದು ಸ್ಥಾನವನ್ನು ಅದಕ್ಕೆ ನೀಡಿ, 139 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಚುನಾವಣಾ ಸ್ಥಾನಿಕ ಎಲ್.ಡಿ.ಎಫ್ 68 ಸ್ಥಾನಗಳನ್ನು ಪಡೆದರೆ, ಯುಡಿಎಫ್ ಸಮ್ಮಿಶ್ರ ಒಕ್ಕೂಟ 72 ಸ್ಥಾನಗಳಲ್ಲಿ ವಿಜೇತ ವಾಯಿತು. ಇದು 140 ವಿಧಾನಸಭಾ ಸ್ಥಾನಗಳ ಪೈಕಿ ಒಂದು ದುರ್ಬಲ/ತೆಳು ಗೆಲುವು. ಯುಡಿಎಫ್ ಪ್ರಮುಖ ಮತ್ತಷ್ಟು ಉಪಚುನಾವಣೆ ನಂತರದ ನೆಯ್ಯತ್ತಿಂಕರ ಕ್ಷೇತ್ರದ ಸ್ಥಾನಿಕ ಶಾಸಕ ಆರ್ ಸೆಲ್ವರಾಜ್ ಯುಡಿಎಫ್'ಗೆ ಸೇರಲು ಎಲ್ಡಿಎಫ್'ಗೆ ರಾಜಿನಾಮೆ ನೀಡಿ ಮರು ಆಯ್ಕೆ ಪಡೆದರು; ಈ ಮೂಲಕ ಯುಡಿಎಫ್' 73 ಕ್ಕೆ ಬಲ ವಿಸ್ತರಿಸಿತು.
ಯುಡಿಎಫ್ ನಾಯಕ ಕಾಂಗ್ರೆಸ್'ನ ಉಮ್ಮನ್ ಚಾಂಡಿ ಅವರು ತನ್ನ ಇತರ ಆರು ಮಂತ್ರಿಗಳ ಜೊತೆ ಮೇ 18, 2011 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಇತರ ಹದಿಮೂರು ಸಚಿವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು.
೪. MJ Akbar (2011-04-01). "Assembly Elections 2011: Jaya Nadu and Mamata Bengal : The Big Story: India Today". Indiatoday.intoday.in. Retrieved 2011-05-16.