ಕೆದಂಬಾಡಿ ಜತ್ತಪ್ಪ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆದಂಬಾಡಿ ಜತ್ತಪ್ಪ ರೈಇವರು ಕನ್ನಡದ ಲೇಖಕರಲ್ಲಿ ಇವರು ಒಬ್ಬರು, ಇವರು ಬೇಟೆ ಸಾಹಿತ್ಯದಕುರಿತು ಅನೇಕ ಬರಹಗಳನ್ನುಪ್ರಕಟಿಸಿದ್ದಾರೆ ಇವರ ಹುಟ್ಟೂರು ಪುತ್ತೂರು ಆಗಿದ್ದು. ಜನನ ೧೧/೨/೧೯೧೬.

ಪರಿಚಯ[ಬದಲಾಯಿಸಿ]

ಇವರು ಕನ್ನಡದ ಪ್ರಪ್ರಥಮ ಮೃಗಯಾ ಸಾಹಿತಿ. ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಕಾರವನ್ನು ಹುಟ್ಟುಹಾಕಿದವರು.ಇವರು ಓದಿದ್ದು ಆರನೇ ತರಗತಿ.ವೃತ್ತಿಯಿಂದ ಬೇಸಾಯಗಾರನಾಗಿದ್ದರೂ ಪ್ರವೃತ್ತಿಯಿಂದ ನಿಪುಣ ಬೇಟೆಗಾರ ಹಾಗೂ ಪ್ರವಚನಗಾರ ಹಾಗೂ ತುಳುಬಾಷೆಯಲ್ಲಿ ಪ್ರಮುಖ ಅನುವಾದಕಾರ.

ಕೃತಿಗಳು[ಬದಲಾಯಿಸಿ]

  • ಬೇಟೆಯ ನೆನಪುಗಳು.
  • ಈಡೊಂದು ಹುಲಿ[೧].
  • ಬೇಟೆಯ ಉರುಲು.
  • ಬೆಟ್ಟದ ತಪ್ಪಲಿಂದ ಕಡಲತಡಿಗೆ.

ಕನ್ನಡದಿಂದ ತುಳುವಿಗೆ ಅನುವಾದ[ಬದಲಾಯಿಸಿ]

  1. ಶಿವರಾಮ ಕಾರಂತರ ಚೋಮನ ದುಡಿ.
  2. ಕುವೆಂಪುರವರ 'ಬೆರಳ್ಗೆ ಕೊರಳ್' ನಾಟಕವನ್ನು 'ಶೂದ್ರ ಏಕಲವ್ಯೆ'ಎಂಬುದಾಗಿ.
  3. ಉಮರನ ಒಸಗೆಯನ್ನು 'ಕುಜಿಲ್ ಪೂಜೆ' ಎಂಬುದಾಗಿ.

ಪ್ರಶಸ್ತಿ[ಬದಲಾಯಿಸಿ]

  • ಕರ್ನಾಟಕ ಸಾಹಿತ್ಯ ಅಕಾಡೆಮಿ.[೨]

ಉಲ್ಲೇಖ[ಬದಲಾಯಿಸಿ]

  1. http://kanaja.in/archives/124311[ಶಾಶ್ವತವಾಗಿ ಮಡಿದ ಕೊಂಡಿ]
  2. https://web.archive.org/web/20151212062001/http://archive.deccanherald.com/deccanherald/july11/spt4.asp