ಎಲ್. ಬಸವರಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ| ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ಗುರು ಕುವೆಂಪು.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವಸಾಹಿತ್ಯಸಿದ್ಧಾಂತಗಳಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಪ್ರಮುಖ ಕೃತಿಗಳು[ಬದಲಾಯಿಸಿ]

  • ಸೌಂದರನಂದ.
  • ಶೂನ್ಯ ಸಂಪಾದನೆ.
  • ಕನ್ನಡ ಛಂದಸ್ಸು ಸಂಪುಟ
  • ಶಿವದಾಸ ಗೀತಾಂಜಲಿ
  • ಭಾಸನ ಭಾರತ ರೂಪಕ
  • ನಾಟಕಾಮೃತ ಬಿಂದುಗಳು
  • ಅಲ್ಲಮನ ವಚನಚಂದ್ರಿಕೆ.
  • ದೇವರ ದಾಸೀಮಯ್ಯನ ವಚನಗಳು * ರಾಮಾಯಣ ನಾಟಕ ತ್ರಿವೇಣಿ.

ಪ್ರಶಸ್ತಿಗಳು[ಬದಲಾಯಿಸಿ]

'ಪಂಪ ಪ್ರಶಸ್ತಿ' 'ಬಸವ ಪುರಸ್ಕಾರ' ೧೯೯೪ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್'

Ullekha[ಬದಲಾಯಿಸಿ]