ಎನ್.ಎಸ್.ಸುಬ್ಬರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಕಾರ್ಯ ಪ್ರವೀಣ ಎನ್.ಎಸ್.ಸುಬ್ಬರಾವ್ ಇವರು ನಂಜನಗೂಡಿನಲ್ಲಿ ೧೮೮೫ರಲ್ಲಿ ಜನಿಸಿದರು. ಎನ್.ಎಸ್.ಸುಬ್ಬರಾಯರು ಶಿಕ್ಷಕರೂ, ಶಿಕ್ಷಣ ತಜ್ಞರೂ, ಅರ್ಥಶಾಸ್ತ್ರ ವಿಶಾರದರೂ ಆಗಿದ್ದರು. ಇವರು ೧೯೩೫ರಲ್ಲಿ ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಎನ್.ಎಸ್.ಸುಬ್ಬರಾವ್ ೧೯೪೩ರಲ್ಲಿ ನಿಧನರಾದರು.