ಎಚ್.ನಾಗವೇಣಿ
Jump to navigation
Jump to search
ನಾಗವೇಣಿ ಎಚ್. ಇವರು ೧೯೬೨ರಲ್ಲಿ ಮಂಗಳೂರಿನ ಹೊನ್ನಕಟ್ಟೆಯಲ್ಲಿ ಜನಿಸಿದರು. ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಬಳಿಕ ಕೆಲವು ವರ್ಷ ಕೋಲ್ಕತಾದ ರಾಷ್ಟ್ರೀಯ ಗ್ರಂಥಾಲಯದ ಕೇಂದ್ರೀಯ ಪರಾಮರ್ಶನ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿದರು. ಈಗ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೊಸ ಕಥನ ಶೈಲಿಯನ್ನು ರೂಢಿಸಿಕೊ೦ಡಿರುವ ನಾಗವೇಣಿಯವರು ಕರಾವಳಿಯ ಪರಿಸರವನ್ನು ತಮ್ಮ ಕಥನಗಳನ್ನು ಆಪ್ತವಾಗಿ ಚಿತ್ರಿಸಿದ್ದಾರೆ.[೧]
ಕಥಾ ಸಂಕಲನಗಳು[ಬದಲಾಯಿಸಿ]
- ಗಾಂಧಿ ಬಂದ-ಕಾದಂಬರಿ
- ನಾಕನೇ ನೀರು
- ಮೀಯುವ ಆಟ
ಕೃತಿಗಳು[ಬದಲಾಯಿಸಿ]
- ನವೋದಯದ ಕಥೆಗಾರ್ತಿ ಗೌರಮ್ಮ
- ರ೦ಗಸ೦ಪನ್ನ ಕ೦ಬಾರ
- ಸಾರ–ವಿಸ್ತಾರ
- ತಿರುಳು ತೋರಣ
ಪ್ರಬಂಧ ಸಂಕಲನ[ಬದಲಾಯಿಸಿ]
- ವಸುಂಧರೆಯ ಗ್ಯಾನ
ಅಂಕಣ ಬರಹ ಸಂಗ್ರಹ[ಬದಲಾಯಿಸಿ]
- ಸೂರ್ಯನಿಗೊ೦ದು ವೀಳ್ಯ
ಇವರ ಕಥಾಸಂಕಲನ ನಾಕನೇ ನೀರು ಈ ಕೃತಿಗೆ ೧೯೯೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಕಥಾ ಪ್ರಶಸ್ತಿ ಹಾಗೂ ಆರ್ಯಭಟ ಪ್ರಸಸ್ತಿ , ಚದುರ೦ಗ ಪ್ರಶಸ್ತಿ ಹಾಗೂ ಗೀತಾ ದೇಸಾಯಿ ಪ್ರಶಸ್ತಿಗಳು ಲಭಿಸಿವೆ.