ಋಷಿ
Jump to navigation
Jump to search
ಋಷಿ ಎಂಬುವುದು ಭಾರತದ ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು ಋಷಿ ಎನ್ನುತ್ತಾರೆ. ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. ರಾಜರ್ಷಿ(ರಾಜ+ಋಷಿ), ಮಹರ್ಷಿ(ಮಹಾ + ಋಷಿ),ಬ್ರಹ್ಮರ್ಷಿ(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ.
ಸಪ್ತರ್ಷಿಗಳು[ಬದಲಾಯಿಸಿ]
- ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
- ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.
ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.