ಆರ್.ತಾತಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್.ತಾತಾಚಾರ್ಯರು ೧೮೭೬ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಮದ್ರಾಸಿನ ( ಚೆನ್ನೈ ) ರಾಜಮಹೇಂದ್ರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಆನಂತರ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದರು.

ಗೌರವಗಳು[ಬದಲಾಯಿಸಿ]

೧೯೨೭ರಲ್ಲಿ ಮಂಗಳೂರಿನಲ್ಲಿ ನಡೆದ ೧೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಅಧ್ಯಕ್ಷರಾಗಿದ್ದರು.

ಇವರ ಕೃತಿಗಳು[ಬದಲಾಯಿಸಿ]

  • ಗುರುದತ್ತರಾಯನ ಚರಿತ್ರೆ (ನಯಸೇನನ ‘ಧರ್ಮಾಮೃತ’ ಆಧಾರಿತ ಕೃತಿ).
  • ಗಿರಿಮಲ್ಲಿಕಾರ್ಜುನ ಶತಕ
  • ಮರುರ್ನಂದನ ಶತಕ

ನಿಧನ[ಬದಲಾಯಿಸಿ]

ಆರ್.ತಾತಾಚಾರ್ಯರು ೧೯೩೨ರಲ್ಲಿ ನಿಧನರಾದರು.