ಆನೆಗುಡ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನೆಗುಡ್ಡೆ
ಆನೆಗುಡ್ಡೆ
ಹಳ್ಳಿ

ಆನೆಗುಡ್ಡೆ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯದ ಒಂದು ಸಣ್ಣ ಹಳ್ಳಿ.. ಇದನ್ನು ಕುಂಭಾಶಿ ಎಂದು ಕೂಡ ಕರೆಯುತ್ತಾರೆ. ಆನೆಗುಡ್ಡೆ ಅಂದರೆ ಆನೆ+ಗುಡ್ಡ.

ಇಲ್ಲಿಗೆ ತಲುಪುವುದು ಹೇಗೆ?[ಬದಲಾಯಿಸಿ]

ಈ ಹಳ್ಳಿಯು ಉಡುಪಿ ಮತ್ತು ಕುಂದಾಪುರದ ಮಧ್ಯ ರಾ.ಹೆ.೬೬(ರಾ.ಹೆ.೧೭)ರಲ್ಲಿ ಬರುತ್ತದೆ. ಮಂಗಳೂರು, ಉಡುಪಿ ಮತ್ತು ಕುಂದಾಪುರದಿಂದ ಖಾಸಗಿ ಸಾರಿಗೆ ವವ್ಯಸ್ಥೆಯು ಇದೆ.

  • ಮಂಗಳೂರು: ೯೬ ಕಿ.ಮೀ;
  • ಉಡುಪಿ: ೩೦ ಕಿ.ಮೀ;
  • ಕುಂದಾಪುರ: ೯ ಕಿ.ಮೀ;
  • ಬೆಂಗಳೂರು (ರಾಜ್ಯ ರಾಜಧಾನಿ): ೪೦೦ ೯ ಕಿ.ಮೀ;
  • ಹತ್ತಿರದ ರೈಲ್ವೆ ನಿಲ್ದಾಣ: ಕುಂಭಾಶಿಗೆ ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಬಾರಕೂರು ರೈಲ್ವೆ ನಿಲ್ದಾಣ ಸಮೀಪವಿರುತ್ತಾದೆ.
  • ಹತ್ತಿರದ ವಿಮಾನ ನಿಲ್ದಾಣ: ೮೮ ಕಿ.ಮೀ ದೂರದ ಬಜಪೆ ವಿಮಾನ ನಿಲ್ದಾಣ, ಮಂಗಳೂರು.

ದೇವಸ್ಥಾನಗಳು[ಬದಲಾಯಿಸಿ]

ವಿನಾಯಕ ದೇವಾಲಯ
  • ಶ್ರೀ ವಿನಾಯಕ ದೇವಸ್ಥಾನ, ಆನೆಗುಡ್ಡೆ ಗುಡ್ಡದ ಮೇಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆರ್ಕಷಿಸುತ್ತಿದೆ
  • ಶ್ರೀ ಹರಿಹರ ದೇವಸ್ಥಾನ,
  • ಶ್ರೀ ಸೂರ್ಯ ನಾರಯಣ ದೇವಸ್ಥಾನ ಮತ್ತು
  • ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ