ಅರ್ಥಶಾಸ್ತ್ರ (ಶಾಸ್ತ್ರಗ್ರಂಥ)
ಅರ್ಥಶಾಸ್ತ್ರ ರಾಜ್ಯತಂತ್ರ, ಆರ್ಥಿಕ ಕಾರ್ಯನೀತಿ ಮತ್ತು ಸೇನಾ ಕಾರ್ಯತಂತ್ರದ ಮೇಲಿನ ಒಂದು ಪ್ರಾಚೀನ ಭಾರತೀಯ ಶಾಸ್ತ್ರಗ್ರಂಥ ಮತ್ತು ಇದರ ಲೇಖಕ ತನ್ನನ್ನು ಕೌಟಲ್ಯ ಹಾಗು ವಿಷ್ಣುಗುಪ್ತ ಎಂಬ ಹೆಸರುಗಳಿಂದ ಕರೆದುಕೊಳ್ಳುತ್ತಾನೆ; ಇವೆರಡೂ ಹೆಸರುಗಳು ಸಾಂಪ್ರದಾಯಿಕವಾಗಿ, ತಕ್ಷಶಿಲೆಯಲ್ಲಿ ವಿದ್ವಾಂಸನಾಗಿದ್ದ ಮತ್ತು ಮೌರ್ಯ ಸಾಮ್ರಾಜ್ಯದ ಸ್ಥಾಪಕ ಸಾಮ್ರಾಟ್ ಚಂದ್ರಗುಪ್ತ ಮೌರ್ಯನ ಆಚಾರ್ಯ ಹಾಗು ಪೋಷಕನಾಗಿದ್ದ, ಚಾಣಕ್ಯನೊಂದಿಗೆ ಗುರುತಿಸಲಾಗಿದೆ. ಅರ್ಥಶಾಸ್ತ್ರದ ಲೇಖಕ ತನ್ನನ್ನು ಕೌಟಲ್ಯನೆಂದು ನಿರ್ದೇಶಿಸಿಕೊಳ್ಳುತ್ತಾನೆ, ಕೊನೆಯ ಪದ್ಯವು ವಿಷ್ಣುಗುಪ್ತ ಹೆಸರನ್ನು ಉಲ್ಲೇಖಿಸುತ್ತದೆ. ಮೊದಲಿನದು ಲೇಖಕನ ಗೋತ್ರ, ಮತ್ತು ನಂತರದ್ದು ಅವನ ವೈಯಕ್ತಿಕ ಹೆಸರು ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ರಾಜ್ಯಾಡಳಿತ, ಆರ್ಥಿಕ ನೀತಿ, ಸೇನಾ ವ್ಯೆಹ ರಜ಼್ಚನೆಯ ಕುರಿತ ನಾಲ್ಕನೇ ಶತಮಾನದ ಶಾಸ್ತ್ರಗ್ರಂಥ ಕೌಟಲ್ಯನ ಅರ್ಥಶಾಸ್ತ್ರ. ಶೀರ್ಷಿಕೆ "ಅರ್ಥಶಾಸ್ತ್ರ" ಸಾಮಾನ್ಯವಾಗಿ "ರಾಜಕೀಯ ವಿಜ್ಞಾನ" ಗೆ ಅನುವಾದಿಸಿದ್ದಾರೆ. ಇದರಲ್ಲಿ ಕೃಷಿ, ಮಿನರಾಲಜಿ, ಗಣಿಗಾರಿಕೆ ಮತ್ತು ಲೋಹಗಳ, ಪಶುಸಂಗೋಪನೆ, ಔಷಧ, ಅರಣ್ಯ ಹಾಗೂ ವನ್ಯಜೀವಿಗಳ ಪ್ರಾಚೀನ ಆರ್ಥಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಒಳಗೊಂಡಿದೆ.