ಇಲ್ಲಿಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲ್ಲಿಗ ಬುಡಕಟ್ತು ಪದವನ್ನು ಒಂದು ಸಾಮಾಜಿಕ ಮೊದಲು ಅಸ್ತಿತ್ವದಲ್ಲಿರುವ ಗುಂಪು, ಅಥವಾ ರಾಜ್ಯಗಳ ಹೊರಗೆ ಐತಿಹಾಸಿಕವಾಗಿ ಬೆಳೆಯುವ ಗುಂಪು ಎಂದು ನೋಡಲಾಗುತ್ತದೆ. ಅನೇಕ ಜನರು ಸಾಮಾಜಿಕ, ವಿಶೇಷವಾಗಿ ಕಾರ್ಪೊರೇಟ್, ಮೂಲದ ಗುಂಪುಗಳ ಆಧಾರದ ಮೇಲೆ ಹೆಚ್ಚಾಗಿ ಸಂಘಟಿತ ಸಮಾಜಗಳು ಈ ಪದವನ್ನು ಬುಡಕಟ್ಟು ಸಮಾಜದ ಎಂದು ಬಳಸಲಾಗುತ್ತದೆ. ಬುಡಕಟ್ಟು ಈಗ ಖಂಡಾತ್ಮಕ ಸಮಾಜದ ಎಂದು ಕರೆಸಿಕೊಳ್ಳಲಾಗುತ್ತಿದೆ. ಖಂಡಾತ್ಮಕ ಸಮಾಜದ ಬೇಟೆಗಾರರ ಗುಂಪು ದೊಡ್ಡದಾಗಿರುತ್ತದೆ, ಆದರೆ ರಾಜತ್ವ ಚಿಕ್ಕದಾಗಿರುತ್ತದೆ.ವಿಶಿಷ್ಟ ಗಾತ್ರ ಕೆಲವು ನೂರುಕು ಹೆಚ್ಚು ಇರುತ್ತದೆ ಆದರೆ ಸಾವಿರಕ್ಕಿಂತ ಹೆಚ್ಚು ಇರದು. ಇಲ್ಲಿಗರು ಬೇಟೆಯನ್ನು ಮೂಲ ವೃತ್ತಿಯನ್ನಾಗಿ ಅವಲಂಬಿಸಿರುವ ಒಂದು ಬುಡಕಟ್ಟು ಸಮುದಾಯ . ಇರುಳಿಗ ಎಂಬ ಪದ ಇಲ್ಲಿಗರು ಎಂದು ವಿರೂಪಗೊಂಡಿದೆ . ಇವರಿಗೆ ಕಾಡು ಪೂಜಾರಿಗಳು ಎಂದು ಸಹ ಕರೆಯುತ್ತಾರೆ . ಹೆಚ್ಚಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯ ಬೆಟ್ಟಗುಡ್ಡ ಕಣಿವೆಗಳಿಂದ ಕೂಡಿದ ಪ್ರದೇಶಗಳಲ್ಲಿ ಇವರು ಕಂಡು ಬರುತ್ತಾರೆ . ಇಲ್ಲಿಗ ಎಂದರೆ ಇಲಿಯನ್ನು ಕೊಂದು ತಿನ್ನುವವನು ಎಂದು ‌ಅರ್ಥೈಸಬಹುದಾದರೂ, ಇಲಿಯನ್ನು ತಿನ್ನುವುದರಿಂದಲೇ ಇವರಿಗೆ ಈ ಹೆಸರು ಬಂದಿರುವ ಸಾಧ್ಯತೆಗಳು ಬಹಳ ಕಡಿಮೆ . ಕಾಡು ಪೂಜಾರಿಗಳುನ್ನು ಇಲ್ಲಿಗರು ಎಂದರೆ ನಿಂದನೆ ಮಾಡಿದಂತೆ ಎಂದು ಇವರ ಭಾವನೆ . ಕಾಡು ಪೂಜಾರಿ ಎನ್ನುವುದೇ ತಮ್ಮ ಜಾತಿ ಎಂದು ಹೆಸರು ಹೆಚ್ಚು ಬಳಕೆಯಲ್ಲಿದೆ. ಇಲ್ಲಿಗರಲ್ಲಿ ನಾಡಗೌಡ , ಕಟ್ಟಿಗೌಡ, ಕೋಲಕಾರ ಎಂಬ ಶ್ರೇಣೀಕೃತ ಗುಂಪುಗಳಿವೆ . ಈ ಮೂವರಳಗೆ ನಾಡ ಗೌಡನೇ ಹೆಚ್ಚು ಗೌರವಾಧಿಕಾರಗಳನ್ನು ಹೊಂದಿರುತ್ತಾನೆ. ನಾಡಗೌಡನಿಗೆ ಕಟ್ಟಿಗೌಡ ವಿಧೇಯ ನಾಗಿರುತ್ತಾನೆ. ಕೋಲಕಾರ ಇಬ್ಬರಿಗೂ ಸೇವಕನಂತೆ ಕೆಲಸ ಮಾಡುತ್ತಾನೆ. ಇವರಲ್ಲಿ ಮುಖ್ಯವಾಗಿ ಎರಡು ಕುಲಗಳಿವೆ. ಅವೆಂದರೆ ಮುಳ್ಳು ಕುಲದವರು ಹಾಗು ದೇಶ ಭಾಗದ ಕುಲ . ಇಲ್ಲಿಗರು ತಮ್ಮ ಪ್ರದೇಶದ ಲಿಂಗಾಯುತ, ದಾಸಪ್ಪ ಅಥವಾ ಶ್ರೀವೈಷ್ಣವರನ್ನೂ ಧಾರ್ಮಿಕ ವಿಧಿ ಆಚರಣೆಗೆ ಅಹ್ವಾನಿಸುತ್ತಾರೆ . ಕ್ರಮವಾಗಿ ಮುಳ್ಳು ಕುಲದವರಿಗೆ ಲಿಂಗಾಯುತ ಗುರುಗಳು ,ದೇಶಭಾಗದವರಿಗೆ ದಾಸಪ್ಪ ಗುರು. ವಿಧವಾ ವಿವಾಹ ,ಕೂಡಿಕೆ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡು ಬರುತ್ತವೆ . ಇವರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದೆ . ಇವರು ಕೃಷಿ ಕೂಲಿಗಳಾಗಿ , ಜೊತೆಗೆ ಅರಣ್ಯ ಇಲಾಖೆಯ ಕಾಮಗಾರಿಗಳ ದಿನಗೂಲಿಗಳಾಗಿ ಕೆಲಸ ಮಾಡುತ್ತಾರೆ . ಇವರಿಗೆ ಆಧುನಿಕ ವಿಧ್ಯೆ ಹಾಗೂ ಇತರೆ ಆಧುನಿಕ ಸಾಮಾಜಿಕ ಸಂಸ್ಥೆಗಳ ಸೌಲಭ್ಯಗಳು ಇನ್ನು ದೊರೆಯಬೇಕಾಗಿದೆ. ಕೇವಲ ಇಲ್ಲಿಗರು ಸಮುದಾಯ ಮಾತ್ರವಲ್ಲ ಅನೇಕ ಇತರ ಸಮುದಾಯಗಳು ಸಹ ಸರಿಯಾದ ಸೌಲಭ್ಯವಿಲ್ಲದೆ ನೋವನ್ನು ಅನುಭವಿಸುತ್ತಿದ್ದಾರೆ. ಸಿದ್ಧಿಗಳು ಭಾರತದಲ್ಲಿ ವಾಸಿಸುತ್ತಿರುವ ಒಂದು ಜನಾಂಗೀಯ ಗುಂಪಾಗಿದೆ. ಸದಸ್ಯರು ಪೋರ್ಚುಗೀಸ್ ವ್ಯಾಪಾರಿಗಳಿಂದ ಗುಲಾಮರನ್ನಾಗಿ ಭಾರತೀಯ ಉಪಖಂಡದ ಕರೆತರಲಾಯಿತು ಎಂದು ಆಗ್ನೇಯ ಆಫ್ರಿಕಾ ಬಂಟು ಜನರ ವಂಶಸ್ಥರು ನಂಬಿದಾರೆ. ಇಲ್ಲಿ ೫0,000 ಬಲವಾದ ಸಿದ್ಧಿ ಜನಸಂಖ್ಯೆ ಭಾರತದಾದ್ಯಂತ ಆಗಿದೆ, ಕರ್ನಾಟಕದಲ್ಲಿ ಮೂರನೇ ನೇರ ಹೆಚ್ಚು ಇದ್ದು.ಕರ್ನಾಟಕದಲ್ಲಿ , ಅವರು ಯಲ್ಲಾಪುರ, ಹಲಿಯಲ, ಅಂಕೋಲಾ, ಜೊಯದ, ಮುನ್ದ್ಗೊಡ ಮತ್ತು ಉತ್ತರ ಕನ್ನಡ ಸಿರ್ಸಿ ತಾಲ್ಲೂಕುಗಳಲ್ಲಿ , ಬೆಳಗಾವಿ ಹಾಗು ಧಾರವಾಡ ಜಿಲ್ಲೆಯ ಖಾನಾಪುರದ ಖಲ್ಘಟ್ಟಿಯು ಕೇಂದ್ರೀಕೃತವಾಗಿವೆ. ಸ್ವಾತಂತ್ರ್ಯ ನಂತರ ಸಿದ್ಧಿ ಜಗತ್ತಿನ ಹಲವಾರು ಮಂದಿ ಪಾಕಿಸ್ತಾನಕ್ಕೆ ವಲಸೆ ಹೋದರು. ಸೊಲ್ಲಿಗ ಭಾರತದ ಜನಾಂಗೀಯ ಗುಂಪಾಗಿದೆ.ಇವರ ಸದಸ್ಯರು ದಕ್ಷಿಣ ಕರ್ನಾಟಕದ ಬಿಳಿಗಿರಿರಂಗನ ಬೆಟ್ಟ ಸಂಬಂಧಿಸಿದ ವ್ಯಾಪ್ತಿಯಲ್ಲಿ, ಹೆಚ್ಚಾಗಿ ಚಾಮರಾಜನಗರದಲ್ಲಿ ಮತ್ತು ತಮಿಳುನಾಡಿನ ಜಿಲ್ಲೆಯಾದ ಈರೋಡೆನಲ್ಲಿ ವಾಸಿಸುತ್ತಾರೆ. ಅನೇಕರು ಯೆಲನ್ದುರ ಬಿಳಿಗಿರಿರಂಗನ ಬೆಟ್ಟ ಮತ್ತು ಚಾಮರಾಜನಗರ ಜಿಲ್ಲೆ, ಕರ್ನಾಟಕ ಕೊಳ್ಳೇಗಾಲ ತಾಲ್ಲೂಕುಗಳು ಕೇಂದ್ರೀಕೃತವಾಗಿವೆ. ಸೊಲ್ಲಿಗ ದ್ರಾವಿಡ ಕುಟುಂಬಕ್ಕೆ ಸೇರುತ್ತದೆ. ಇವರು ಶೊಲಗ ಎಂಬ ನುಡಿ ಮಾತನಾಡುತ್ತಾರೆ. ಇವರದು ಒಂದು ಪರಿಶಿಷ್ಟ ಪಂಗಡ, ಅವರು ಸುಮಾರು ೨0,000 ವ್ಯಕ್ತಿಗಳು ಜನಸಂಖ್ಯೆಯನ್ನು ಹೊಂದಿವೆ. ಸೊಲ್ಲಿಗ ಬುಡಕಟ್ಟು ಕರಾಯ್ಯ ಮೂಲದವರು. ಸ್ಥಳೀಯ ಕೋಟಾ ಬುಡಕಟ್ಟು ಜನರು ಟೋಡ ನಂತರ ನೀಲಗಿರಿ ತೆರಳಿದರು ಎಂದು ನಂಬಲಾಗಿದೆ. ಅವರ ಹಿಂದಿನವರು ಕೊಲ್ಲಿಮಲಾಯದಲ್ಲಿ ವಾಸವಾಗಿದ್ದರು.ಈ ಕಾರಣದಿಂದ ಅವರು ನಿರ್ಮಿಸಿದ್ದ ಮೊದಲ ಹಳ್ಳಿಗೆ ಕೊಲ್ಲಿಮಲಾಯಂದು ಹೆಸರಿಸಲಾಗಿದೆ.ಈ ಪ್ರದೇಶವನ್ನು ನಿಲಿಗಿರಿಯಲ್ಲಿ ಕಾಣಬಹುದು. ಹಾಗು ಬೆಂಗಳೂರಿನಿಂದ ೨೫೦ಕೀ.ಮಿ ದೂರದಲ್ಲಿ ಮರವನ್ನು ತಮ್ಮ ಮನೆಗಳನ್ನಾಗಿ ಮಾಡಿ ಕೊಂಡು ವಾಸಿಸುವವರು ಭೂಮಿ ಮೇಲೆ ಇನ್ನೂ ಜೀವಂತವಾಗಿದ್ದಾರೆ. ಇವರು ಸುಮಾರು ಆರು ದಶಕಗಳಿಂದ ಹೀಗೆ ಮಾಡುತಾ ಬಂದಿದ್ದಾರೆ. ಜೇನುಕುರುಬ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಮತ್ತು ಕೇರಳದ ಗಡಿ ಪ್ರದೇಶಗಳಲ್ಲಿ ಒಳಗೊಂಡಿರುವ ಕಂಡುಬರುವ ಬುಡಕಟ್ಟು ಸಮುದಾಯದವರು. ಅವರು ಹಡಿ ಅಥವಾ ಹಟ್ಟಿ ಎಂಬ ಸಣ್ಣ ವಸಾಹತುಗಳಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಹಲವಾರು ಬುಡಕಟ್ಟು ಜನರು ನಮ್ಮ ಮಧ್ಯೆ ವಾಸಿಸುತ್ತಿದರು ಅವರ ಬಗ್ಗೆ ಕಾಳಜಿ ತೊರುವುದಾಗಲಿ ಅಥವ ರಕ್ಷಣೆ ಕೊಡುವವರಾಗಲಿ ಯಾರು ಇಲ್ಲ ಎನ್ನುವುದು ವಿಪನ್ಯಾಸ. ನಾವು ನಮ್ಮ ಬುಡಕಟ್ಟು ಜನರನ್ನು ಸಮಾಜದ ಶೋಷಣೆಯಿಂದ ಉಳಿಸಲು ಅಗತ್ಯ. ಇಂದು ನಾವು ಎಚ್ಚರಿಕೆಯನ್ನು ವಹಿಸದ್ದಿದರೆ ಭವಿಷ್ಯದಲ್ಲಿ ನಾವು ಬುಡಕಟ್ಟು ಜನರ ಬಗ್ಗೆ ನೋಡಲು ಅಥವ ಕೇಳಲು ಸಾಧ್ಯವಿಲ್ಲ. ಸರ್ಕಾರ ನೀಡುವಂತಹ ಅನೇಕ ಯೋಜನೆಗಳ ಬಗ್ಗೆ ಇವರಿಗೆ ತಿಳಿಸಬೇಕಾಗಿದೆ.

"https://kn.wikipedia.org/w/index.php?title=ಇಲ್ಲಿಗ&oldid=1157501" ಇಂದ ಪಡೆಯಲ್ಪಟ್ಟಿದೆ