ಪಿ.ಸುಬ್ರಹ್ಮಣ್ಯ ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸಿಕ ಪುತ್ತಿಗೆ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ.

ಶಿಕ್ಷಣ ಹಾಗು ವೃತ್ತಿ[ಬದಲಾಯಿಸಿ]

ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದಿ ಶಿಕ್ಷಕರಾದ ಆಚಾರ್ಯರು,ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಪದವಿ ಹಾಗು ಭಾಷಾ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದರು.

ಸಾಹಿತ್ಯ ಸೇವೆ[ಬದಲಾಯಿಸಿ]

‘ರಸಿಕ ಪುತ್ತಿಗೆ’ ಹೆಸರಿನಲ್ಲಿ ಆಚಾರ್ಯರು ಮಕ್ಕಳಿಗಾಗಿ ಅನೇಕ ಕಥೆ, ಕಾದಂಬರಿ, ನಾಟಕ ಹಾಗು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ. ಆಕಾಶವಾಣಿಯಲ್ಲಿ ಕಥೆ ಹಾಗು ಕವನಗಳನ್ನು ಓದಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಕೊಂಬಿನ ಕಂಬಯ್ಯ
  • ಇಲಿಗೆ ಅಂಜಿದ ಹುಲಿ
  • ನೀತಿ ಕಥೆಗಳು
  • ತುಂಟಾಟದ ಕಥೆಗಳು
  • ಸುಕ್ಕಿನುಂಡೆ ಸುಬ್ಬ ಮತ್ತು ಇತರ ಕಥೆಗಳು
  • ತಪೋವನದ ಸಾಹಸಿಗಳು

ನಾಟಕ[ಬದಲಾಯಿಸಿ]

  • ಸತಿ ಅನುಸೂಯಾ
  • ತಿಲೋತ್ತಮೆ
  • ವೀರ ಜಟಾಯು
  • ಮರೆವೊ ಮರೆವು
  • ಸುಂದೋಪಸುಂದ
  • ಅಗ್ನಿಪರೀಕ್ಷೆ

ಕಾದಂಬರಿ[ಬದಲಾಯಿಸಿ]

  • ಪಿತ್ರಾರ್ಜಿತ

ಮಕ್ಕಳ ಕಾದಂಬರಿ[ಬದಲಾಯಿಸಿ]

  • ಕೆಂಪು ಕಾದಂಬರಿ
  • ಮಾರುತಿ ಶಾಲೆ ಹುಡುಗರು
  • ಮೂವರು ಮಾಣಿಗಳು

ಜೀವನಚರಿತ್ರೆ[ಬದಲಾಯಿಸಿ]

  • ಸೂರದಾಸ
  • ತುಳಸಿದಾಸ
  • ಸುಭದ್ರಾಕುಮಾರಿ ಚೌಹಾಣ
  • ಟಿ.ಎಲ್.ವಾಸ್ವಾನಿ
  • ಕುರಿಯ ವಿಠ್ಠಲಶಾಸ್ತ್ರಿ
  • ಕೋಟಿ ಚನ್ನಯ್ಯ

ಪರಿಚಯ ಕೃತಿ[ಬದಲಾಯಿಸಿ]

  • ಕಂಬಳ-ಕೊಳಿ ಅಂಕ

ಪುರಸ್ಕಾರ[ಬದಲಾಯಿಸಿ]

  • ಇವರ ‘ಕೆಂಪು ಕಾರು’ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ (NCERT) ಲಭಿಸಿದೆ.