ಕುಮಾರ ವೆಂಕಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಮಾರ ವೆಂಕಣ್ಣ ಇವರು ೧೯೧೬ ನವಂಬರ ೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಕ್ಯೂಲ ಎನ್ನುವ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವಾಸುದೇವಯ್ಯ.ಎಪ್ಪತ್ತು ವಯಸ್ಸಿನ ಶ್ರೀ ವೆಂಕಟರಾವ್‌ ಕೋಯಿಲೂರ್ ಕರೆ (ಕಾವ್ಯನಾಮ ಕುಮಾರ ವೆಂಕಣ್ಣ) ಯಕ್ಷಗಾನ ಮತ್ತು ಮದ್ದಳೆ ತಯಾರಕರ ಪರಂಪರೆಗೆ ಸೇರಿದವರು. ಡಾ|| ಶಿವರಾಮ ಕಾರಂತರಿಂದ ಸ್ಪೂರ್ತಿ ಪಡೆದು ಯಕ್ಷಗಾನವನ್ನು ಕಲಿತರು. ನಂತರ ಗುರು ಕಲಾ ಮಂಡಳಂ ಕುಟ್ಟನ್‌ ನಾಯರ್ ಅವರಿಂದ ಕಥಕ್ಕಳಿ ಹಾಗೂ ಮೋಹಿನಿ ಅಟ್ಟಂ ಅನ್ನು ಕಲಿತರು. ಜಟ್ಟಿತಾಯಮ್ಮನವರಿಂದ ಮೈಸೂರು ಸಂಪ್ರದಾಯದ ಭರತನಾಟ್ಯವನ್ನು ಕಲಿತರು. ಕೊಲೊಂಬೋದಲ್ಲಿ ಸಿಂಹಳ ದ್ವೀಪದ ಕ್ಯಾಂಡಿಯನ್‌ ಹೋರಾಟ ಕ್ಷೇತ್ರಕ್ಕೆ ಆಕರ್ಷಿತರಾಗಿ ಪತ್ರಿಕೋದ್ಯಮಿಯಾದರು. ೧೯೩೬ ರಿಂದ ಈ ಕ್ಷೇತ್ರದಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ, ಸಂಪಾದಕರಾಗಿ, ಕಲಾ ವಿಮರ್ಶಕರಾಗಿ, ದುಡಿದರು. ೧೯೫೪ ರಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿಯ ಸ್ಥಾಪಕ ಸದಸ್ಯರಾಗಿ ವಿವಿಧ ಮುಖ ಸೇವೆ ಸಲ್ಲಿಸಿದರು. ಯಕ್ಷಗಾನದ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಹಿಂದೆ ಇದ್ದ ಕರ್ನಾಟಕ ನೃತ್ಯ ಕಲಾ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜಾನಪದ ನೃತ್ಯದ ಬಗ್ಗೆ ಇವರು ಬರೆದಿರುವ ಪ್ರಬಂಧ, ಪುಸ್ತಕ ರೂಪಕದಲ್ಲಿ ಪ್ರಕಟವಾಗಿದೆ. ಭಾರತದ ಜಾನಪದ ನೃತ್ಯ ಪ್ರಕಾರಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲವರು.

ಪತ್ರಿಕೋದ್ಯಮ[ಬದಲಾಯಿಸಿ]

ಕುಮಾರ ವೆಂಕಣ್ಣನವರು ಸೇವೆ ಸಲ್ಲಿಸಿರುವ ಪತ್ರಿಕೆಗಳು ಇಂತಿವೆ:

ಸಾಹಿತ್ಯ[ಬದಲಾಯಿಸಿ]

ಕುಮಾರ ವೆಂಕಣ್ಣನವರು ೧೨ ಕಾದಂಬರಿಗಳನ್ನು, ೨೦ ಮಕ್ಕಳ ಪುಸ್ತಕಗಳನ್ನು ಹಾಗು ೪೦ ಇತರ ಗ್ರಂಥಗಳನ್ನು ರಚಿಸಿದ್ದಾರೆ. ಇವರು ಮಕ್ಕಳಿಗಾಗಿ ರಚಿಸಿದ ಕಥೆಗಳು ೧೦೦೦ಕ್ಕೂ ಹೆಚ್ಚಿವೆ.

ವ್ಯಕ್ತಿತ್ವ[ಬದಲಾಯಿಸಿ]

ಪತ್ರಕರ್ತ ಹಾಗು ಸಾಹಿತಿ ಅಲ್ಲದೆ, ಕುಮಾರ ವೆಂಕಣ್ಣನವರು ನೃತ್ಯ ಕಲಾವಿದರು, ಕಲಾ ವಿಮರ್ಶಕರು, ಕಾರ್ಮಿಕ ಸಂಘಟನಾಕಾರರು ಹಾಗು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.

ಇವುಗಳನ್ನೂ ನೋಡಿ[ಬದಲಾಯಿಸಿ]